Home Entertainment ಮದ್ವೆ ಆದ್ಮೇಲೆ ಅಮೂಲ್ಯ ತುಂಬಾ ಬದಲಾಗಿದ್ದಾರೆ ಅಂತ ಪತ್ನಿ ಮೇಲೆ ಆರೋಪ ಹೊರಿಸಿದ ಪತಿ ಜಗದೀಶ್ ಅಷ್ಟಕ್ಕೂ ಅಮೂಲ್ಯ ಮಾಡಿದ್ದೇನು ಗೊತ್ತ.?

ಮದ್ವೆ ಆದ್ಮೇಲೆ ಅಮೂಲ್ಯ ತುಂಬಾ ಬದಲಾಗಿದ್ದಾರೆ ಅಂತ ಪತ್ನಿ ಮೇಲೆ ಆರೋಪ ಹೊರಿಸಿದ ಪತಿ ಜಗದೀಶ್ ಅಷ್ಟಕ್ಕೂ ಅಮೂಲ್ಯ ಮಾಡಿದ್ದೇನು ಗೊತ್ತ.?

0
ಮದ್ವೆ ಆದ್ಮೇಲೆ ಅಮೂಲ್ಯ ತುಂಬಾ ಬದಲಾಗಿದ್ದಾರೆ ಅಂತ ಪತ್ನಿ ಮೇಲೆ ಆರೋಪ ಹೊರಿಸಿದ ಪತಿ ಜಗದೀಶ್ ಅಷ್ಟಕ್ಕೂ ಅಮೂಲ್ಯ ಮಾಡಿದ್ದೇನು ಗೊತ್ತ.?

 

ಚಂದನವನದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಇದೀಗ ಎರಡು ಮುದ್ದು ಮಕ್ಕಳ ತಾಯಿ. ಆದರೂ ಕೂಡ ನಟಿ ಅಮೂಲ್ಯ ಅವರ ಮುದ್ದು ಮುಖ ಮತ್ತು ಮುಗ್ದತೆ ನೋಡಿದರೆ ಹೈಸ್ಕೂಲು ಹುಡುಗಿ ಎನಿಸುತ್ತಾರೆ. ಕರ್ನಾಟಕದ ಪಡ್ಡೆ ಹೈಕಳಿಗೆ ಇನ್ನು ಐಶು ಹಾಗೇ ಉಳಿದಿರುವ ಅಮೂಲ್ಯ ನೋಡು ನೋಡುತ್ತಾ ಇದ್ದಂತೆ ಬಾಲನಟಿಯಿಂದ ನಾಯಕ ನಟಿಗೆ ಹಾಗೂ ನಾಯಕಿ ನಟಿಯಿಂದ ಎರಡು ಮಕ್ಕಳಿಗೆ ತಾಯಿ ಆಗುವ ತನಕ ಬೆಳೆದು ಬಿಟ್ಟಿದ್ದಾರೆ.

ಇತ್ತೀಚಿಗೆ ರಾಜಕೀಯದಲ್ಲಿ ಕೂಡ ಸಂಚಲ ಮೂಡಿಸುತ್ತಿರುವ ನಟಿ ಅಮೂಲ್ಯ ಅವರು ತಮ್ಮ ವೃತ್ತಿ ಜೀವದ ಉತ್ತುಂಗದಲ್ಲಿ ಇದ್ದಾಗಲೇ ಕೆರಿಯರ್ಗೆ ಗುಡ್ ಬೈ ಹೇಳಿ ರಾಜಕೀಯ ಹಿನ್ನೆಲೆ ಉಳ್ಳ ಕುಟುಂಬಕ್ಕೆ ಸೊಸೆಯಾಗಿ, ಉದ್ಯಮಿ ಜಗದೀಶ್ ರಾಮಚಂದ್ರ ಅವರ ಮಡದಿ ಆಗಿದ್ದಾರೆ. 2017ರಲ್ಲಿ ಮದುವೆ ಆದ ಈ ದಂಪತಿ ಪಾಲಿಗೆ ಕಳೆದ ವರ್ಷ ಡಬಲ್ ಧಮಾಕ. 2022ರ ಮಾರ್ಚ್ 1 ನೇ ತಾರೀಕಿನಂದು ಮಹಾಶಿವರಾತ್ರಿ ದಿನ ಅಮೂಲ್ಯ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಅಂದಿನಿಂದ ಮಕ್ಕಳ ಲಾಲನೆ ಪಾಲನೆ ಪೋಷಣೆಯಲ್ಲಿ ಬಹಳ ಬಿಜಿ ಆಗಿದ್ದ ಇವರು ಅದ್ದೂರಿಯಾಗಿ ಮಕ್ಕಳ ನಾಮಕರಣ ಕಾರ್ಯಕ್ರಮ ಮತ್ತು ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಕೂಡ ಆಚರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ನಟಿ ಅಮೂಲ್ಯ ಅವರು ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೋಟೋ ಶೂಟ್ಗಳು ಹಾಗೂ ಅವರ ಫೋಟೋ ಶೂಟ್ ಗಳನ್ನು ಹಂಚಿಕೊಳ್ಳುವ ಮೂಲಕ, ಟ್ರೆಂಡಿಂಗ್ ಹಾಡುಗಳಿಗೆ ರೀಲ್ಸ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

ಕಿರುತೆರೆ ಕಾರ್ಯಕ್ರಮಗಳಲ್ಲೂ ಕೂಡ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದ ಅಮೂಲ್ಯ ಅವರು ಮಕ್ಕಳಾದ ಬಳಿಕ ಮೊದಲ ಬಾರಿಗೆ ಕಿರುತೆರೆ ವೇದಿಕೆಯಲ್ಲಿ ಪತಿಯ ಜೊತೆ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯ ಯುಗಾದಿ ಸಂಭ್ರಮ ಎನ್ನುವ ಕಾರ್ಯಕ್ರಮದಲ್ಲಿ ಪತಿ ಜೊತೆಗೆ ಮಾಸ್ತಿಗುಡಿ ಸಿನಿಮಾದ ಹಾಡಿಗೆ ಹೆಜ್ಜೆ ಇಡುತ್ತ ಬಂದ ನಟಿ ಅಮೂಲ್ಯ ಆ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದ್ದಾರೆ. ಜೊತೆಗೆ ನಿರೂಪಕರು ಕೇಳಿದ ದಂಪತಿಗಳ ಕುರಿತ ಪ್ರಶ್ನೆಗಳಿಗೂ ಕೂಡ ಇಬ್ಬರು ಉತ್ತರಿಸಿ ಪರಸ್ಪರ ಕೆಲವೊಂದು ಆರೋಪಗಳನ್ನು ಕೂಡ ಮಾಡಿಕೊಂಡಿದ್ದಾರೆ.

ನಟಿ ಅಮೂಲ್ಯ ಅವರ ಬಗ್ಗೆ ಪತಿ ಜಗದೀಶ್ ಅವರು ಸಾಕಷ್ಟು ದೂರು ಹೇಳಿದ್ದಾರೆ ಮೊದಲೆಲ್ಲ ನನ್ನ ಪತ್ನಿ ನನ್ನ ಹೇರ್ ಸ್ಟೈಲ್ ಬಗ್ಗೆ ಹಾಗೂ ಡ್ರೆಸ್ ಸೆನ್ಸ್ ಬಗ್ಗೆ ಬಹಳ ತಲೆಕೆಡಿಸಿಕೊಳ್ಳುತ್ತಿದ್ದರು, ಅದರಲ್ಲೆಲ್ಲಾ ನನಗೆ ಸಜೆಷನ್ ಕೊಡುತ್ತಿದ್ದರು, ಈಗ ಅವರಿಗೆ ನನ್ನ ಮೇಲೆ ಗಮನವೇ ಇಲ್ಲ, ಕೇಳಿದರೆ ಎರಡು ಮಕ್ಕಳನ್ನು ನೋಡಿಕೊಳ್ಳಬೇಕು ಅವರಿಗೆ ಮೊದಲ ಆದ್ಯತೆ ಎನ್ನುತ್ತಾರೆ ಎಂದು ಆರೋಪ ಮಾಡಿದ್ದಾರೆ. ನಟಿ ಅಮೂಲ್ಯ ಕೂಡ ಅಮ್ಮನ ಮನೆಯಲ್ಲಿದ್ದಾಗ ಮಕ್ಕಳಿಗಾಗಿ ಮಾತ್ರ ವಿಡಿಯೋ ಕಾಲ್ ಮಾಡುತ್ತಿದ್ದರು ಮಕ್ಕಳ ಜೊತೆ ಮಾತ್ರ ಮಾತನಾಡುತ್ತಿದ್ದರು ಎಂದು ಅದಕ್ಕೆ ಪ್ರತ್ಯಾರೋಪ ಮಾಡಿದ್ದಾರೆ.

ಇದಕ್ಕೆ ಸಮಜಾಯಿಷಿ ಕೊಟ್ಟ ಜಗದೀಶ್ ಅವರು ನಾನು ಬ್ಯುಸಿ ಇದ್ದೇನೆ ಎಂದು ಒಂದು ವಾರ ಹೋಗುವುದು ಲೇಟ್ ಮಾಡಿದರೆ ಮಕ್ಕಳು ನನ್ನನ್ನು ಮರೆತುಬಿಡುತ್ತಾರೆ ಗುರುತು ಹಿಡಿಯುವುದಿಲ್ಲ ಎನ್ನುವ ಭಯ ಕಾಡುತ್ತಿತ್ತು ಅದಕ್ಕೆ ಪ್ರತಿದಿನ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದೆ, ಮಕ್ಕಳ ಮುಖ ನೋಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅಮೂಲ್ಯ ಅವರ ಸಿನಿಮಾಗಳ ಕುರಿತು ಕೇಳಿದ ಬಹುತೇಕ ಎಲ್ಲಾ ಪ್ರಶ್ನೆಗಳಿಗೂ ಜಗದೀಶ್ ಅವರು ನೆನಪಿಟ್ಟುಕೊಂಡು ಸರಿಯಾದ ಉತ್ತರ ಕೊಟ್ಟ ಮತ್ತೊಮ್ಮೆ ಮಡದಿಯ ಮನ ಗೆದ್ದಿದ್ದಾರೆ. ಈ ವಿಡಿಯೋಗಳು ಜೀ ವಾಹಿನಿಯ ಅಫಿಶಿಯಲ್ ಪೇಜಲ್ಲಿ ಹರಡುದಾಡುತ್ತಿದ್ದು ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

LEAVE A REPLY

Please enter your comment!
Please enter your name here