ರೆಬಲ್ ಸ್ಟಾರ್ ಎಂದರೆ ಇಡೀ ಕರ್ನಾಟಕಕ್ಕೆ ಪ್ರೀತಿ, ಏನೇ ಇದ್ದರೂ ಡೈರೆಕ್ಟಾಗಿ ಮುಖದ ಮೇಲೆ ಹೇಳಿಬಿಡುವ ಇವರ ಈ ರೆಬಲ್ ಗುಣವೇ ಕನ್ನಡಿಗರು ಇವರನ್ನು ಇಷ್ಟು ಪ್ರೀತಿಸಲು ಪ್ರಮುಖ ಕಾರಣ. ಅಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಕರ್ಣ ಆಗಿರುವ ಇವರು ನೋಡಲು ಒರಟಾಗಿ ಕಂಡರು ಮಾತು ನೇರ ನುಡಿಯಾಗಿದ್ದರು ಮನಸ್ಸು ಮಾತ್ರ ಹೂವಿಗಿಂತ ಮೃದು.
ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ಈಗ ಜೂನಿಯರ್ ರೆಬಲ್ ಸ್ಟಾರ್ ಕೂಡ ಅದೇ ರೀತಿ ಕಾಣುತ್ತಾರೆ. ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರು ಅಪ್ಪನ ಹಾದಿಯಲ್ಲಿ ಸಿನಿಮಾ ರಂಗ ಹಾಗೂ ರಾಜಕೀಯದಲ್ಲಿ ಸಕ್ರಿಯ ಆಗಿದ್ದಾರೆ. ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಅಮರ್ ಎನ್ನುವ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಅದೃಷ್ಟ ಪರೀಕ್ಷಿಸಿ ಕೊಂಡಿರುವ ಇವರು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಸಿನಿಮಾಗಳಲ್ಲಿ ಬರುವ ತಯಾರಿಯಲ್ಲಿ ಇದ್ದಾರೆ.
ಈ ನಡುವೆ ಜೀ ಕನ್ನಡ ವಾಹಿನಿಯು ಏರ್ಪಡಿಸಿದ್ದ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮಕ್ಕೂ ಕೂಡ ಅತಿಥಿಯಾಗಿ ಅಭಿಷೇಕ್ ಅಂಬರೀಶ್ ಅವರು ಬಂದಿದ್ದರು. ಈ ಸಮಯದಲ್ಲಿ ಜೀ ಕನ್ನಡದ ಜನಪ್ರಿಯ ನಿರೂಪಕಿಯಾದ ಅನುಶ್ರೀ ಅವರು ಆನಂದ್ ಅವರು ರವಿಚಂದ್ರನ್ ಎಲ್ಲರೂ ಸೇರಿ ಅಭಿಷೇಕ್ ಅಂಬರೀಶ್ ಅವರನ್ನು ಕಾಲೆಳೆದಿದ್ದಾರೆ.
ಅನುಶ್ರೀ ಅವರನ್ನು ಮದುವೆ ಆಗುವಂತೆ ಅಭಿಷೇಕ್ ಅವರನ್ನು ಇವರೆಲ್ಲಾ ಕೇಳಿದ್ದಾರೆ ಹಾಗೂ ಅನುಶ್ರೀ ಅವರನ್ನು ಹುಡುಗಿ ನೋಡಲು ಬರುವಂತೆ ಹೇಳಿದ್ದಾರೆ. ಇದಕ್ಕೆ ಜೊತೆ ಜೊತೆಯಲಿ ಖ್ಯಾತಿಯ ಜೇಂಡೆ ಸರ್ ಹಾಗೂ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಅವರ ಅಮ್ಮ ಪರಿಮಳ ಅಭಿಷೇಕ್ ಅಂಬರೀಶ್ ಅವರಿಗೆ ಅಪ್ಪ ಅಮ್ಮ ಆಗಿ ಸಾತ್ ನೀಡಿದ್ದಾರೆ.
ಇತ್ತ ಕಡೆ ಅನುಶ್ರೀ ಅವರಿಗೆ ರವಿಚಂದ್ರನ್ ಸರ್ ಅಣ್ಣನಾಗಿ ನಿಂತು ಹುಡುಗಿ ನೋಡುವ ಕಾರ್ಯಕ್ರಮವನ್ನು ನಡೆಸಿದ್ದಾರೆ. ವೇದಿಕೆ ಮೇಲೆ ಆಸೀನರಾದ ಅಭಿಷೇಕ್ ಜೇಂಡೆ ಹಾಗೂ ಪರಿಮಳ ಅವರಿಗೆ ಅನುಶ್ರೀ ಅವರು ಕಾಫಿ ಕೊಡುವಂತೆ ರವಿಚಂದ್ರನ್ ಸರ್ ಸಲಹೆ ನೀಡುತ್ತಾರೆ. ಮತ್ತು ಕಾಫಿ ಕೊಡುವಾಗ ಸರಾಗವಾಗಿ ನಡೆದು ಬಂದ ಅನುಶ್ರೀಗೆ ಈಗಾಗಲೇ ನಿನಗೆ ಯೂಟ್ಯೂಬಲ್ಲಿ ಮೂರು ಮದುವೆ ಆಗಿದೆ ಅದನ್ನೆಲ್ಲ ಮರೆತು ಬಿಡು.
ಇದೇ ಮೊದಲ ಬಾರಿಗೆ ಹೆಣ್ಣು ನೋಡುವ ಶಾಸ್ತ್ರ ದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವಂತೆ ನಯ ನಾಚಿಕೆಯಿಂದ ಬಾ ಎಂದು ಸಜೆಷನ್ ಕೊಟ್ಟಿದ್ದಾರೆ. ಹೀಗೆ ನಾಚುತ್ತಾ ವೈಯಾರದಿಂದ ಬಂದ ಇವರು ಅಭಿಷೇಕ್ ಗೆ ಕಾಫಿ ಕೊಟ್ಟು ಅವರ ಪಕ್ಕದಲ್ಲಿ ಕೂರುತ್ತಾರೆ. ರವಿ ಮೇಷ್ಟು ಮತ್ತು ಆನಂದ್ ಅವರು ನಮ್ಮ ಹುಡುಗಿ ಹಾಡು ಹಾಡಲು ಕೂಡ ಬರುತ್ತದೆ ಎಂದು ಹೇಳಿ ಅನುಶ್ರೀ ಗೆ ಹಾಡಲು ಹೇಳುತ್ತಾರೆ.
ಮೊದಮೊದಲಿಗೆ ಮೂರೆ ಮೂರು ಪೆಗ್ಗಿಗೆ ತಲೆ ಗಿರ ಗಿರ ಗಿರ ಎಂದಿದೆ ಎಂದ ಅನುಶ್ರೀಯನ್ನು ಗದರಿದ ರವಿಮಾಮ ಅಂಬರೀಷ್ ಹಾಡು ಹೇಳು ಎಂದು ಹೇಳುತ್ತಾರೆ. ಅದಕ್ಕೆ ಅನುಶ್ರೀ ಸೆಲೆಕ್ಟ್ ಮಾಡಿಕೊಂಡ ಹಾಡು ಚಳಿ ಚಳಿ ತಾಳೆನು ಈ ಚಳಿಯ ಹಾಡು ಇಷ್ಟೆಲ್ಲ ನಡೆಯುತ್ತಿದ್ದ ವೇಳೆ ನಾಚಿ ನೀರಾದ ಅಭಿಷೇಕ್ ಅಂಬರೀಶ್ ಅವರು ನಗು ನಗುತ್ತಲೆ ಎಲ್ಲವನ್ನು ನೋಡುತ್ತಿದ್ದರು.
https://www.instagram.com/reel/CkAQsmspA0d/?igshid=MDJmNzVkMjY=
ಕೊನೆಯಲ್ಲಿ ಇವರಿಗಾಗಿ ಅಪರಂಜಿ ಚಿನ್ನವೋ ಹಾಡನ್ನು ಹಾಕಲಾಯಿತು ಅನುಶ್ರೀ ಹಾಗೂ ಜೂನಿಯರ್ ರೆಬಲ್ ಸ್ಟಾರ್ ಇಬ್ಬರು ವೇದಿಕೆ ಮೇಲೆ ಆ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ರಂಜಿಸಿದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದ್ದು ಮುದ್ದಾದ ಈ ವಿಡಿಯೋವನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.