Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಣ್ಣಾವ್ರ ಬಭ್ರುವಾಹನ ಹಾಡಿಗೆ ವೇದಿಕೆಯ ಮೇಲೆ ನೃತ್ಯ ಮಾಡಿದ ಅಪ್ಪು ಮತ್ತು ದಚ್ಚು ಈ ಜುಂಗಲ್ಬಂದಿ ನೋಡಲು ಎರಡು ಕಣ್ಣು ಸಾಲದು, ಕೊನೆಯಲ್ಲಿ ಗೆದ್ದವರು ಯಾರು ನೋಡಿ

Posted on October 18, 2022 By Kannada Trend News No Comments on ಅಣ್ಣಾವ್ರ ಬಭ್ರುವಾಹನ ಹಾಡಿಗೆ ವೇದಿಕೆಯ ಮೇಲೆ ನೃತ್ಯ ಮಾಡಿದ ಅಪ್ಪು ಮತ್ತು ದಚ್ಚು ಈ ಜುಂಗಲ್ಬಂದಿ ನೋಡಲು ಎರಡು ಕಣ್ಣು ಸಾಲದು, ಕೊನೆಯಲ್ಲಿ ಗೆದ್ದವರು ಯಾರು ನೋಡಿ

ಕರ್ನಾಟಕದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳು ಸೋಲುವುದೇ ಇಲ್ಲ ತಮ್ಮ ನೆಚ್ಚಿನ ಎಲ್ಲಾ ತಾರೆಗಳನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಬಹಳ ಆಸೆ ಪಡುತ್ತಾರೆ. ಈಗಾಗಲೇ ಕನ್ನಡದಲ್ಲಿ ಹಲವಾರು ಮಲ್ಟಿಸ್ಟಾರ್ ಮೂವಿಗಳು ಬಂದಿವೆ. ಕೆಲವು ಸೂಪರ್ ಸ್ಟಾರ್ಗಳ ಕಾಂಬಿನೇಷನ್ ಗಳು ತೆರೆ ಮೇಲೆ ಅದ್ಭುತವಾಗಿ ವರ್ಕ್ ಮಾಡಿದೆ. ಅದರಲ್ಲಿ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ಜೋಡಿ, ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಜೋಡಿ, ರಾಜಕುಮಾರ್ ಹಾಗೂ ಅಂಬರೀಶ್ ಜೋಡಿ ಮತ್ತು ಇತ್ತೀಚಿನ ನಟರುಗಳಾದ ಸುದೀಪ್ ಮತ್ತು ಉಪೇಂದ್ರ ಜೋಡಿ ಸುದೀಪ್ ಹಾಗೂ ಶಿವಣ್ಣ ಜೋಡಿ ಉಪೇಂದ್ರ ಹಾಗೂ ರವಿಚಂದ್ರನ್ ಜೋಡಿ ಈ ರೀತಿ ಹಲವುಗಳನ್ನು ಹೆಸರಿಸಬಹುದು.

ಇಂತಹ ಸಿನಿಮಾಗಳು ಸೋತ ಇತಿಹಾಸವೇ ಇಲ್ಲ. ಇನ್ನೂ ಅನೇಕ ಇದೇ ರೀತಿಯ ಸ್ಟಾರ್ ಕಾಂಬಿನೇಷನ್ ಸಿನಿಮಾಗಳನ್ನು ನೋಡಲು ಕನ್ನಡಿಗರು ಕಾತುರರಾಗಿದ್ದಾರೆ. ಅದರಲ್ಲೂ ಕನ್ನಡಿಗರಿಗೆ ಎರಡು ಕಣ್ಣು ಎಂದು ಹೇಳಬಹುದಾದ ದರ್ಶನ್ ಮತ್ತು ಸುದೀಪ್ ಇಬ್ಬರು ಒಂದೇ ಸಿನಿಮಾದಲ್ಲಿ ಅಭಿನಯಿಸಬೇಕು. ಅದನ್ನು ನಾವು ನೋಡಿ ಆನಂದಿಸಬೇಕು ಎಂದು ಕನ್ನಡಿಗರು ಕಾದಿದ್ದಾರೆ, ಆದರೆ ಇವರಿಬ್ಬರ ನಡುವೆ ಇದ್ದ ಸ್ನೇಹ ಬಾಂಧವ್ಯಕ್ಕೆ ಈಗ ಬಿರುಕು ಮೂಡಿರುವುದರಿಂದ ಸದ್ಯಕ್ಕೆ ಕನ್ನಡಿಗರ ಆಸೆ ನೆರವೇರುವ ಲಕ್ಷಣಗಳು ಕಾಣುತ್ತಿಲ್ಲ ಮುಂದೆ ಇದು ಸಾಧ್ಯವಾದರೂ ಆಗಬಹುದು.

ಆದರೆ ಕನ್ನಡಿಗರು ಇದೇ ರೀತಿ ಆಸೆ ಪಟ್ಟ ಮುಂದೆಂದೂ ಸಾಧ್ಯವಾಗದ ಇನ್ನೊಂದು ಜೋಡಿ ಎಂದರೆ ಅಪ್ಪು ಹಾಗೂ ದರ್ಶನ್ ಅವರ ಜೋಡಿಯ ಸಿನಿಮಾ ಮತ್ತು ಅಪ್ಪು ಹಾಗೂ ಸುದೀಪ್ ಅವರ ಜೋಡಿಯ ಸಿನಿಮಾ. ಅಪ್ಪು ಅವರ ಸಿನಿಮಾದಲ್ಲಿ ಅಭಿನಯಿಸಬೇಕು ಎಂದರೆ ಕನ್ನಡ ಮಾತ್ರವಲ್ಲದೆ ಉಳಿದ ಭಾಷೆಯ ಸಿನಿಮಾ ನಾಯಕರು ಕೂಡ ತಯಾರಾಗಿರುತ್ತಿದ್ದರು. ಇವರ ಸಿನಿಮಾದಲ್ಲಿ ಪಾತ್ರ ಮಾಡಲು ಸಣ್ಣ ಅವಕಾಶ ಸಿಕ್ಕರು ಸಂತಸ ಪಡುತ್ತಿದ್ದರು.

ಈ ರೀತಿ ಅಪ್ಪು ಎಲ್ಲಾ ಸೆಲೆಬ್ರಿಟಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರು ಆಗಿದ್ದರು. ಪುನೀತ್ ರಾಜಕುಮಾರ್ ಅವರು ಕನ್ನಡದಲ್ಲಿ ಅತಿ ಹೆಚ್ಚು ಸಂಭವನ ಪಡೆಯುತ್ತಿದ್ದ ನಾಯಕ ಹಾಗೂ ದರ್ಶನ್ ಅವರು ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ನಾಯಕ ಇವರಿಬ್ಬರ ಕಾಂಬಿನೇಷನ್ ಅಲ್ಲಿ ಸಿನಿಮಾ ಮೂಡಿ ಬರಬೇಕು ಅದನ್ನು ನೋಡಬೇಕು ಎಂದು ಅಭಿಮಾನಿಗಳು ಆಸೆ ಪಟ್ಟಿದ್ದರು.

ಹಲವಾರು ಕಾರ್ಯಕ್ರಮಗಳಲ್ಲಿ ಇವರು ಒಟ್ಟಿಗೆ ಕಾಣಿಸಿಕೊಂಡಿದ್ದರೂ ಕೂಡ ಸಿನಿಮಾಗಳ ವಿಚಾರವಾಗಿ ಅಪ್ಪು ಅವರ ಅಭಿನಯದ ಅರಸು ಸಿನಿಮಾದಲ್ಲಿ ಮಾತ್ರ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ಕೊನೆಯಲ್ಲಿ ಕಾಣಿಸಿಕೊಂಡಿದ್ದರು ಮತ್ತೆ ಯಾವ ಸಿನಿಮಾದಲ್ಲೂ ಅದು ಸಾಧ್ಯವಾಗಲಿಲ್ಲ. ಆದರೆ ಉದಯ ತಾರೋತ್ಸವ ಎನ್ನುವ ಕಾರ್ಯಕ್ರಮವು ಕಳೆದ ದಶಕದಲ್ಲಿ ನಡೆದಿತ್ತು. ಅದ್ದೂರಿಯಾಗಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಕನ್ನಡದ ಎಲ್ಲಾ ಸ್ಟಾರ್ಗಳು ಕೂಡ ಭಾಗವಹಿಸಿ ಪರ್ಫಾರ್ಮೆನ್ಸ್ ಕೂಡ ನೀಡಿದ್ದರು.

ಅಂದಿನ ಕಾರ್ಯಕ್ರಮದಲ್ಲಿ ಅಪ್ಪು ಹಾಗೂ ದಚ್ಚು ಬಬ್ರುವಾಹನ ಮತ್ತು ಅರ್ಜುನನಾಗಿ ವೇದಿಕೆ ಮೇಲೆ ಕಾಣಿಸಿಕೊಂಡು ತಮ್ಮ ಜುಗಲ್ ಬಂದಿ ಡೈಲಾಗ್ ಯಿಂದ ಎಲ್ಲರ ಶಿಲ್ಲೆ ಚಪ್ಪಾಳೆ ಗಿಟ್ಟಿಸಿದ್ದರು. ಕನ್ನಡದ ಹೆಮ್ಮೆಯ ಸಿನಿಮಾ ಬಬ್ರುವಾಹನದ ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಈ ಹಾಡಿಗೆ ಬಬ್ರುವಾಹನನಾಗಿ ಪುನೀತ್ ರಾಜಕುಮಾರ್ ಅವರು ಮತ್ತು ಅಜುನನಾಗಿ ದರ್ಶನ್ ಅವರು ಕಾಣಿಸಿಕೊಂಡು ತಮ್ಮ ಎಕ್ಷ್ಪ್ರೆಶನ್ ಹಾವಭಾವಗಳಿಂದ ಅಲ್ಲಿದ್ದವರೆಲ್ಲರ ಗಮನ ಸೆಳೆದಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಯಾರ ಅಭಿನಯ ಇಷ್ಟ ಆಯಿತು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡಿ.

Entertainment Tags:Appu, Darshan dacchu
WhatsApp Group Join Now
Telegram Group Join Now

Post navigation

Previous Post: ಮೊನ್ನೆ ದರ್ಶನ್, ನೆನ್ನೆ ಸುದೀಪ್ ಇಂದು ಯಶ್ ರವಿಚಂದ್ರನ್ ಮನೆಗೆ ಬಂದು ಮಾಡಿದ ಸಹಾಯವೇನು ಗೊತ್ತಾ.? ಸೋತು ಕಂಗಾಲಾಗಿ ಕುಳಿತಿರುವ ರವಿಚಂದ್ರನ್ ಗೆ ಬೆನ್ನೆಲುಬಾಗಿ ನಿಂತಿದೆ ಇಡೀ ಚಿತ್ರರಂಗ.
Next Post: ಕಾಂತಾರ ಸಿನಿಮಾದಲ್ಲಿ ನಟಿಸಲು ರಿಷಬ್ ಶೆಟ್ಟಿಗೆ ಹೊಂಬಾಳೆ ಸಂಸ್ಥೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ.? ಸಿನಿಮಾ ಕೋಟಿ ಕೋಟಿ ಲಾಭದಲ್ಲಿದೆ ಹಾಗಾದ್ರೆ ರಿಷಬ್ ಪಡೆದದ್ದು ಎಷ್ಟು ನೋಡಿ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore