Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕನ್ಯಾ ರಾಶಿಯವರಿಗೆ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಕನ್ಯಾ ರಾಶಿಯವರಿಗೆ ಯಾವಾಗಲೂ ಈ ರೀತಿ ಆಗುವುದೇಕೆ.?

Posted on March 31, 2024 By Kannada Trend News No Comments on ಕನ್ಯಾ ರಾಶಿಯವರಿಗೆ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಕನ್ಯಾ ರಾಶಿಯವರಿಗೆ ಯಾವಾಗಲೂ ಈ ರೀತಿ ಆಗುವುದೇಕೆ.?

 

ಕನ್ಯಾ ರಾಶಿಗೆ ಏಪ್ರಿಲ್ ಆರಂಭದಿಂದಲೇ ಬಹಳ ಕೆಟ್ಟ ಪರಿಣಾಮಗಳು ಇರುತ್ತವೆ ಎಂದು ಹೇಳಲು ಆಗುವುದಿಲ್ಲ ಅದೇ ರೀತಿ ಈ ತಿಂಗಳಲ್ಲಿ ನಿಮಗೆ ಪೂರ್ತಿ ಶುಭ ಫಲಗಳು ಇದೆ ಎಂದು ಕೂಡ ಭರವಸೆ ಕೊಡಲು ಆಗುವುದಿಲ್ಲ. ನೇರವಾಗಿ ಹೇಳಬೇಕು ಎಂದರೆ ನೀವು ಯಾವುದೇ ಯೋಜನೆ ಹಾಕಿಕೊಂಡರೂ ಕೂಡ ಅದರಲ್ಲಿ ಅರ್ಧದಷ್ಟು ಖಂಡಿತ ನೆರವೇರುತ್ತದೆ.

ಹಾಗಾಗಿ ನೀವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದೀರಿ ಎಂದು ಊಹಿಸಿಕೊಳ್ಳುವುದು ಸೂಕ್ತವೋ ಅಥವಾ ಪೂರ್ತಿ ಯಶಸ್ಸು ಸಿಗುತ್ತಿಲ್ಲ ಎಂದು ಇದನ್ನು ಸೋಲು ಎಂದು ಕೊಳ್ಳಬೇಕು ತಿಳಿಯದು ಎನ್ನುವ ಗೊಂದಲದಲ್ಲಿಯೇ ಈ ತಿಂಗಳನ್ನು ಕಳೆಯುತ್ತೀರಿ. ಕೆಲವೊಂದು ವಿಷಯಗಳು ಖಂಡಿತವಾಗಿ ನೆರವೇರಿ ಸಂತಸ ನೀಡುತ್ತದೆ. ಯಾವುದಾದರೂ ಬಗೆಹರಿಯದ ಸಮಸ್ಯೆಗಳು, ಕೋರ್ಟು ಕಚೇರಿ ವ್ಯಾಜ್ಯಗಳು ಅಥವಾ ಹಣಕಾಸಿನ ಋಣಗಳು ಇತ್ಯಾದಿಗಳು ಅಂತ್ಯ ಕಾಣುತ್ತವೆ.

ಈ ಸುದ್ದಿ ಓದಿ:- ಸ್ವಂತ ಮನೆ ಇಲ್ಲ ಎಂದು ದುಃಖ ಪಡುವವರು ಅರಿಶಿನದಿಂದ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ.!

ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಕೆಲಸದ ಒತ್ತಡ ಕಡಿಮೆ ಆಗುವುದು ಈ ಶುಭಫಲಗಳು ಕೂಡ ಇರುತ್ತವೆ ಮತ್ತು ಈ ಸಮಯದಲ್ಲಿ
ನೀವು ಯಾವುದೇ ಹೊಸ ಕೆಲಸ ಆರಂಭಿಸಿದರು ಕೂಡ ಪೂರ್ತಿ ನೆಲಕಚ್ಚುವುದಿಲ್ಲ ಅದು ಇಂದಲ್ಲ ನಾಳೆ ಖಂಡಿತ ಫಲ ಕೊಡುತ್ತದೆ ಎನ್ನುವ ಭರವಸೆಯನ್ನು ಖಂಡಿತ ನೀಡುತ್ತದೆ.

ಸಂಬಂಧಗಳು ಕೂಡ ಉತ್ತಮವಾಗಿರುತ್ತದೆ ಆರೋಗ್ಯವೂ ಕೂಡ ಸುಧಾರಣೆಯಲ್ಲಿ ಇರುತ್ತದೆ. ಆದರೆ ನಂತರ ಉಂಟಾಗುವ ಗ್ರಹಗತಿಗಳ ಪರಿಣಾಮವು ಜೀವನವನ್ನು ಉಲ್ಟಾ ಪಲ್ಟ ಮಾಡುತ್ತದೆ ಎಂದರು ಕೂಡ ತಪ್ಪಾಗಲಾರದು. ಯಾಕೆಂದರೆ ಏಪ್ರಿಲ್ 14ರ ನಂತರ ಸೂರ್ಯನು ಕುಂಭ ರಾಶಿಯಿಂದ ಮೀನ ರಾಶಿಗೆ ಹೋಗುತ್ತಿದ್ದಾರೆ, ಇದೇ ಸಮಯದಲ್ಲಿ ರವಿ ಕಳತ್ರ ಯೋಗ ಎಂದು ಕೂಡ ಇರುತ್ತದೆ. ಇವುಗಳ ಪರಿಣಾಮವು ನಿಮ್ಮ ರಾಶಿ ಮೇಲೆ ಸ್ವಲ್ಪ ನಕಾರಾತ್ಮಕವಾದ ಪರಿಣಾಮಗಳನ್ನು ಬೀರುತ್ತದೆ.

ಹೇಗೆಂದರೆ ಏಪ್ರಿಲ್ ಮಧ್ಯದಿಂದ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಸಿಗುತ್ತವೆ ಮತ್ತು ಇದು ಏಪ್ರಿಲ್ ಅಂತ್ಯದವರೆಗೂ ಕೂಡ ಮುಂದುವರೆಯುತ್ತದೆ. ಇದರಿಂದ ಅನವಶ್ಯಕ ಖರ್ಚು ವೆಚ್ಚಗಳು ಮತ್ತು ಸಮಯದ ಹಾನಿಯೂ ಕೂಡ ಆಗುತ್ತದೆ. ಇದೇ ಸಮಸ್ಯೆ ಕಾರಣದಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೂ ಅಡೆತಡೆ ಆಗುತ್ತದೆ.

ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!

ಹಣಕಾಸಿನ ಪರಿಸ್ಥಿತಿ ಸುಧಾರಣೆಯಲ್ಲಿದ್ದರೂ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಭಾದಿಸುವುದರಿಂದ ಸಂತೋಷ ಕಳೆದುಕೊಳ್ಳುತ್ತೀರಿ ಮತ್ತು ರವಿ ಕಳತ್ರ ಯೋಗದ ಪ್ರಭಾವದಿಂದ ಸಂಗಾತಿಯೊಡನೆ ಸ್ವಲ್ಪ ಮ’ನ’ಸ್ತಾ’ಪ ಕೂಡ ಬರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಮೊದಲಿನ ಉತ್ಸಾಹವನ್ನು ಪೂರ್ತಿಯಾಗಿ ಕಳೆದುಕೊಂಡಿರುತ್ತೀರಿ ಎನ್ನಬಹುದು ಅದು ಕೂಡ ನಿಮ್ಮ ಕೆಲಸ ಕಾರ್ಯಗಳು ಹಿನ್ನಡೆ ಹೊಂದುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ.

ಆದರೆ ಕನ್ಯಾ ರಾಶಿಯವರಿಗೆ ಸದಾ ಕಾಲ ಇದೇ ರೀತಿಯ ಪರಿಸ್ಥಿತಿ ಇರುತ್ತದೆ. ಅವರು ಇತ್ತ ನೀರಿನ ಮೇಲೂ ಅಲ್ಲ ಅತ್ತ ದಡದ ಮೇಲೂ ಅಲ್ಲ ಎನ್ನುವ ಗೊಂದಲದ ಪರಿಸ್ಥಿತಿಯಲ್ಲಿ ಬದುಕುತ್ತಿರುತ್ತಾರೆ ಆದರೆ ಇದ್ಯಾವುದು ಶಾಶ್ವತವಲ್ಲ ಇನ್ನು ಕೆಲವೇ ದಿನಗಳಲ್ಲಿ ಅತ್ಯಂತ ಶುಭಯೋಗವು ನಿಮ್ಮ ರಾಶಿಗೆ ಬರಲಿದೆ.

ಆದರೆ ಸದ್ಯಕ್ಕೆ ಏಪ್ರಿಲ್ ತಿಂಗಳ ಮಟ್ಟಿಗೆ ನೀವು 50-50 ಲಾಭ ಹಾಗೂ ನ’ಷ್ಟಗಳನ್ನು ಕಾಣುತ್ತಿದ್ದೀರಿ ಎಂದು ಸ್ಪಷ್ಟವಾಗಿ ಹೇಳಬಹುದು. ಆರೋಗ್ಯದ ಕಡೆ ಹೆಚ್ಚಿನ ಗಮನ ಇರಲಿ ಹಣಕಾಸಿನ ವಿಚಾರದಲ್ಲಿ ಮತ್ತು ಯಾರಿಗಾದರೂ ವಚನ ನೀಡುವ ಮುನ್ನ ಜಾಗೃತೆಯಿಂದ ಇರಿ ಇಷ್ಟ ದೇವರ ದರ್ಶನ ಮಾಡಿ ಎಲ್ಲವೂ ಶುಭವಾಗುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಈ ಒಂಬತ್ತು ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವು ಸಾಮಾನ್ಯರಲ್ಲ ಎಂದು ಅರ್ಥ.!
Next Post: ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore