Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಾರಣ ಇಲ್ದೆ ಇದ್ರು, ಸುಮ್ ಸುಮ್ನೆ ನಗ್ತಾರೆ, ನಾನು ಸುದೀಪ್ ಲೆವೆಲ್ ಗೆ ದುಡಿತೀನಿ ನಾನು ಬಿಗ್ ಬಾಸ್ ಗೆ ಹೋಗಿದ್ದೇ ದೊಡ್ಡ ಲಾಸ್ ಎಂದು ಓಪನ್ ಆಗಿ ಮಾತನಾಡಿದ ಆರ್ಯವರ್ಧನ್ ಗುರೂಜಿ.

Posted on November 12, 2023 By Kannada Trend News No Comments on ಕಾರಣ ಇಲ್ದೆ ಇದ್ರು, ಸುಮ್ ಸುಮ್ನೆ ನಗ್ತಾರೆ, ನಾನು ಸುದೀಪ್ ಲೆವೆಲ್ ಗೆ ದುಡಿತೀನಿ ನಾನು ಬಿಗ್ ಬಾಸ್ ಗೆ ಹೋಗಿದ್ದೇ ದೊಡ್ಡ ಲಾಸ್ ಎಂದು ಓಪನ್ ಆಗಿ ಮಾತನಾಡಿದ ಆರ್ಯವರ್ಧನ್ ಗುರೂಜಿ.

 

ಯಾವಾಗಲೂ ಸಿನಿಮಾ, ರಾಜಕೀಯ ಹಾಗೂ ಕ್ರಿಕೆಟ್ ಬಗ್ಗೆ ಭವಿಷ್ಯ ನುಡಿದು ಸುದ್ದಿಯಲ್ಲಿರುವ ಖ್ಯಾತ ಸಂಖ್ಯಾಶಾಸ್ತ್ರಜ್ಞ ಕರ್ನಾಟಕದಲ್ಲಿ ನಂಬರ್ ಗುರೂಜಿ ಎಂದು ಹೆಸರಾಗಿರುವ ಆರ್ಯವರ್ಧನ್ (numerologist Aryavardhan) ಅವರು ಕಳೆದ ಬಿಗ್ ಬಾಸ್ ಸೀಸನ್ 9ರ ಕಂಟೆಸ್ಟೆಂಟ್ (Bigboss S9 Contestent) ಕೂಡ ಆಗಿದ್ದರು.

ಬಿಗ್ ಬಾಸ್ OTT ಸೀಸನ್ ಮುಗಿಸಿ ಬಿಗ್ ಬಾಸ್ ಸೀಸನ್ 9ರಲ್ಲಿ ಕಡೆಯವರೆಗೆ ಬಿಗ್ ಬಾಸ್ ಮನೆಯಲ್ಲಿದ್ದ ಇವರು ಬಿಗ್ ಬಾಸ್ ಇಂದ ಆಚೆ ಬರುತ್ತಿದ್ದಂತೆ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಓಪನ್ ಆಗಿ ಮಾತನಾಡಲು ಶುರು ಮಾಡಿದರು ಈಗ ಬಿಗ್ ಬಾಸ್ ಸೀಸನ್ 10 ಆರಂಭವಾಗಿ 30 ದಿನಗಳು ಕಳೆದಿವೆ.

ಮತ್ತೊಮ್ಮೆ ಮೀಡಿಯಾ ಮುಂದೆ ಕಾಣಿಸಿಕೊಂಡಿರುವ ಆರ್ಯವರ್ಧನ್ ಅವರು ಪ್ರತಿಯೊಂದು ಚಾನೆಲ್ ನಲ್ಲೂ ಕೂಡ ಬಿಗ್ ಬಾಸ್ ಹಾಗೂ ಸುದೀಪ್ ಅವರ ಬಗ್ಗೆ ಓಪನ್ ಆಗಿ ಮಾತನಾಡುತ್ತಿದ್ದಾರೆ. ಅದೇ ರೀತಿ youtube ಚಾನಲ್ ಒಂದಕ್ಕೆ ಸಂದರ್ಶನ ಕೊಟ್ಟ ಅವರು ನಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿದ್ದೆ ಲಾಸ್ ಆಯ್ತು, 2013 ರಿಂದಲೂ ನನ್ನನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರೆಯುತ್ತಿದ್ದರು.

ಆದರೆ ನನ್ನ ಬಜೆಟ್ ಅವರಿಗೆ ಒಪ್ಪಿಗೆ ಆಗುತ್ತಿರಲಿಲ್ಲ ಹೀಗಾಗಿ ನಾನು ಹೋಗುತ್ತಿರಲಿಲ್ಲ. ಯಾಕೆಂದರೆ ನಾನು ಸುದೀಪ್ (Sudeep) ಅವರಿಗೆ ಸಮನಾಗಿ ದುಡಿಯುತ್ತೇನೆ. ನನಗೆ ಕೊನೆಗೂ ಅಷ್ಟು ದುಡ್ಡು ಕೊಡಲಿಲ್ಲ ನಾನು ಕೊನೆಯಲ್ಲಿ ಒಪ್ಪಿಕೊಂಡು ಹೋಗಿದ್ದು ಪರಂ ಅವರಿಗಾಗಿ ಇದು ಕಡೆಯ ಬಾರಿ ಬನ್ನಿ ಎಂದು ಅವರು ಕೇಳಿದ್ದರು.

ನಾನು ಬಿಗ್ ಬಾಸ್ ಕಾರ್ಯಕ್ರಮದಲ್ಲಿದ್ದಾಗಕ್ಕಿಂತ ಆಚೆಬಂದ ಮೇಲೆ ಅರಿತುಕೊಂಡಿದ್ದು ಹೆಚ್ಚು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಮಗೆ ಮಾತ್ರವಲ್ಲ ನಮಗೆ ವೋಟ್ ಮಾಡುವ ನಮ್ಮ ಅಭಿಮಾನಿಗಳಿಗೂ ಕೂಡ ಮೋಸ ಆಗಿದೆ. ಸದ್ಯಕ್ಕೆ ಈ ಸೀಸನ್ ನಲ್ಲಿ ಹೇಗಾಗಿದೆ ಎಂದು ಹೇಳುವುದಾದರೆ 12,13 ವಾರಗಳ ಜರ್ನಿಯನ್ನು5 ವಾರಕ್ಕೆ ನಿರ್ಧರಿಸಿ ಬಿಟ್ಟಿರುವ ರೀತಿ ಆಗಿದೆ.

ಯಾಕೆಂದರೆ ವಾಸ್ತು ಸರಿ ಇಲ್ಲ ಹೀಗಾಗಿ ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ 8ನೇ ತಾರೀಕು ಪುಷ್ಯ ನಕ್ಷತ್ರ ದಿನದಂದು ಬಿಗ್ ಬಾಸ್ ಕಾರ್ಯಕ್ರಮ ಆರಂಭಿಸಿದ್ದಾರೆ ಈ ವರ್ಷ 8 ಹಾಗೂ 2 ಈ ಎರಡೂ ತಾರೀಕುಗಳು ಸರಿ ಇಲ್ಲ ಹಾಗಾಗಿ ಹಲವಾರು ಕಾಂಟ್ರವರ್ಸಿ ಆಯಿತು. ಹೀಗಾಗುತ್ತದೆ ಎಂದು ನಾನು ಮೊದಲೇ ಹೇಳಿದ್ದೆ.

ಕಾರ್ಯಕ್ರಮ ಕಮರ್ಷಿಯಲ್ ಆಗಿ ಹಣ ಮಾಡಿದರು ಕೂಡ ಸಕ್ಸಸ್ ಆಗುವುದಿಲ್ಲ ಸಕ್ಸಸ್ ವಿಚಾರ ಕೂಡ ಅಷ್ಟೇ ಮುಖ್ಯ ಆಗುತ್ತದೆ ಅಲ್ಲವೇ ಎಂದಿದ್ದಾರೆ. ಯಾವ MLA, MP ಎಲೆಕ್ಷನ್ ಗೂ ಕಡಿಮೆ ಇಲ್ಲದಂತೆ ಖರ್ಚು ಮಾಡಿ ಶಾಲಾ-ಕಾಲೇಜು, ಪಬ್ಲಿಕ್ ನಲ್ಲಿ ಪಬ್ಲಿಸಿಟಿ ಮಾಡಿ ಕಂಟೆಸ್ಟ್ ಗಳ ಕಡೆಯವರು ವೋಟ್ ಹಾಕಿಸುತ್ತಾರೆ.

ಮೂರನೇ ವಾರ ಸೇವ್ ಆದರೂ ಹಬ್ಬ ಹರಿದಿನ ಬಂದರು ಅವರ ವಿಡಿಯೋ ಇಲ್ಲಿ ವೈರಲಾಗುತ್ತಿದೆ ಎಂದರೆ ಅಷ್ಟರಮಟ್ಟಿಗೆ ಇವರು ಎಲ್ಲ ರೆಡಿ ಆಗಿದ್ದಾರೆ. ಸಿನಿಮಾ ಹಾಗೂ ಸೀರಿಯಲ್ ಅವರಿಗೆ ಟ್ರೋಲ್ ಪೇಜ್ ಗಳ ಪರಿಚಯ ಇರುತ್ತದೆ, ಹಾಗಾಗಿ ಕೊಂಡುಕೊಂಡು ಹೋಗಿದ್ದಾರೆ ಈ ಸೀಸನ್ ಕಂಟೆಸ್ಟೆಂಟ್ಗಳು ಒಂದೊಂದು ದಿನವನ್ನು ಇದೇ ಫೈನಲ್ ಎನ್ನುವ ರೀತಿ ವರ್ತಿಸುತ್ತಿದ್ದಾರೆ.

ಸದ್ಯಕ್ಕೆ ಕಾರ್ಯಕ್ರಮದಲ್ಲಿ ಭಾವನೆಗಳೇ ಇಲ್ಲ ಎನ್ನುವ ರೀತಿ ಆಗಿದೆ. ಸುದೀಪ್ ಅವರನ್ನು ಬೇಕಾದರೆ ನೋಡಿ ಕಾರಣವಿಲ್ಲದೆ ನಗುತ್ತಿರುತ್ತಾರೆ ಆ ರೀತಿ ಆಗಿ ಹೋಗಿದೆ ಎಂದು ಕಾಂಟ್ರವರ್ಸಿ ಹೇಳಿಕೆಯನ್ನು ಕೊಟ್ಟು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಆರ್ಯವರ್ಧನ್ ಗುರೂಜಿ.

Viral News
WhatsApp Group Join Now
Telegram Group Join Now

Post navigation

Previous Post: ಕಾಮ ಕಸ್ತೂರಿ ಇದನ್ನು ಒಂದು ಚಮಚ ತಿನ್ನಿ 60 ರೋಗಗಳಿಗೆ ಇದು ಸಂಜೀವಿನಿ.
Next Post: ಮೂರು ರೂಪಾಯಿ ಹರಕೆ ಕಟ್ಟಿದ್ರೆ ಸಮಸ್ಯೆಗಳು ಕ್ಷಣದಲ್ಲಿ ಪರಿಹಾರವಾಗುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore