ಬಿಗ್ ಬಾಸ್ ಇದು ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿಯೇ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಹೇಳಬಹುದು ಪ್ರಾರಂಭದಲ್ಲಿ ಪಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಬಿಗ್ ಬಾಸ್ ಅನ್ನು ಆಯೋಜಿಸಲಾಗುತ್ತಿತ್ತು. ಆದರೆ ದಿನ ಕಳೆದಂತೆ ಈ ಒಂದು ಬಿಗ್ ಬಾಸ್ ಕಾರ್ಯಕ್ರಮ ಎಂಬುದು ಭಾರತಕ್ಕೂ ಕೂಡ ಲಗ್ಗೆ ಇಟ್ಟಿತು ಮೊದಲ ಬಾರಿಗೆ ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಒಂದು ಕಾರ್ಯಕ್ರಮವನ್ನು ಬಾಲಿವುಡ್ ನ ಫೇಮಸ್ ನಟ ಆದಂತಹ ಸಲ್ಮಾನ್ ಖಾನ್ ಅವರು ನಿರೂಪಿಸಿದ್ದರು ಮೊದಲ ಸೀಸನ್ ನಿಂದ ಹಿಡಿದು 15ನೇ ಸೀಸನ್ ವರೆಗೂ ಕೂಡ ಸಲ್ಮಾನ್ ಖಾನ್ ಅವರೇ ಈ ಒಂದು ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ 16ನೇ ಸೀಸನ್ ಕೂಡ ಪ್ರಾರಂಭವಾಗಲಿದೆ ಹಿಂದಿಯಲ್ಲಿ ಬಿಗ್ ಬಾಸ್ ಪ್ರಾರಂಭವಾದ ನಂತರ ಇದರ ಕ್ರೇಜ್ ದಕ್ಷಿಣ ಭಾರತದಲ್ಲಿಯೂ ಕೂಡ ಆವರಿಸಿಕೊಂಡಿತು. ತದನಂತರ ಕನ್ನಡದಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಯಿತು ಈ ಒಂದು ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಚಾಲನೆಯನ್ನು ನೀಡಿದರು ಅಷ್ಟೇ ಅಲ್ಲದೆ ಈ ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯ ಕೆಲಸವನ್ನು ಅವರೇ ವಹಿಸಿಕೊಂಡರು ಈಗಾಗಲೇ ಎಂಟು ಸೀಸನ್ಗಳನ್ನು ಯಶಸ್ವಿ ಪೂರ್ಣವಾಗಿ ಮುಗಿಸಿದ ಕಿಚ್ಚ ಸುದೀಪ್ ಅವರು 9ನೇ ಸೀಸನ್ ಅನ್ನು ಕೂಡ ಪ್ರಾರಂಭಿಸಿದ್ದಾರೆ. ಬಿಗ್ ಬಾಸ್ ಪ್ರಾರಂಭವಾಗಿ ಒಂದು ವಾರವಾಗಿದ್ದು ಈ ಮನೆಯಲ್ಲಿ ಹೆಚ್ಚು ಸದ್ದು ಕೇಳಿ ಬರುತ್ತಿದೆ ಅಂದ ಹಾಗೆ ಬಿಗ್ ಬಾಸ್ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂನಲ್ಲಿಯೂ ಕೂಡ ಪ್ರಾರಂಭವಾಗಿದೆ.
ಕನ್ನಡದ ನಂತರ ಬಿಗ್ ಬಾಸ್ ತೆಲುಗು ನಲ್ಲಿಯೂ ಕೂಡ ಪ್ರಾರಂಭವಾಯಿತು ಈಗಾಗಲೇ ಐದು ಸೀಸನ್ ಮುಗಿದಿದ್ದು 6ನೇ ಸೀಸನ್ ಪ್ರಾರಂಭವಾಗಿದೆ ಈ ಒಂದು ಕಾರ್ಯಕ್ರಮವನ್ನು ತೆಲುಗಿನ ಖ್ಯಾತ ನಟ ಆದಂತಹ ನಾಗರ್ಜುನ್ ಅವರು ನಡೆಸಿಕೊಡುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ಏರಳಿತಗಳು ಕಂಡು ಬಂದಿದೆ ಅದರಲ್ಲಿಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ಕೂಡ ಜಗಳ ಮನಸ್ತಾಪ ಹಠ ವೈಮನಸೆ ಕಂಡು ಬಂದಿದೆ. ಆದರೆ ಕಳೆದ ಕೆಲವು ದಿನಗಳಿಂದಲೂ ಕೂಡ ಬಿಗ್ ಬಾಸ್ ಮನೆಯಲ್ಲಿ ಕೇವಲ ಗಲಾಟೆಗಳು ಕಂಡು ಬಂದಿದ್ದರು ನೆನ್ನೆಯ ಎಪಿಸೋಡ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಇದ್ದಂತಹ ಮನೆ ಮಂದಿ ಎಲ್ಲಾ ಒಂದು ಕ್ಷಣ ಭಾವುಕರಾಗಿದ್ದಾರೆ.
ಹೌದು ಬಿಗ್ ಬಾಸ್ ಮನೆಗೆ ಕಾಲಿಟ್ಟರೆ ಬಿಗ್ ಬಾಸ್ ಮನೆಯಿಂದ ಹೊರ ಬರುವ ತನಕ ಸ್ನೇಹಿತರಾಗಿರಲಿ ಆತ್ಮೀಯರಾಗಿರಲಿ ಮನೆಯ ಮಂದಿ ಆಗಿರಲಿ ಅಥವಾ ಪ್ರೀತಿ ಪಾತ್ರರಾಗಿರಲಿ ಯಾರನ್ನು ಕೂಡ ನೋಡಲು ಮಾತನಾಡಿಸಲು ಸಾಧ್ಯವಾಗುವುದಿಲ್ಲ. ಅದೆಂತಹ ಪರಿಸ್ಥಿತಿಯಲ್ಲೂ ಕೂಡ ಅವರನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ ಹಾಗಾಗಿ ತುಂಬಾ ಸಂತೋಷದ ಕ್ಷಣದಲ್ಲಿ ಹಾಗೂ ದುಃಖದ ಕ್ಷಣದಲ್ಲಿ ತಾವು ಪ್ರೀತಿಸಿದಂತಹ ವ್ಯಕ್ತಿಯನ್ನು ಮಿಸ್ ಮಾಡಿಕೊಳ್ಳುತ್ತಾರೆ. ಈ ಬಾರಿಯ ತೆಲುಗು ಬಿಗ್ ಬಾಸ್ ನಲ್ಲಿಯೂ ಕೂಡ ಇಂತಹದ್ದೇ ಒಂದು ಮನ ಕಲಕುವಂತಹ ಘಟನೆ ಕಂಡುಬಂದಿದೆ
ತೆಲುಗು ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಆಟ ಆಡುವ ವಿಷಯದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಸ್ಪರ್ಧಿ ಎಂದರೆ ಗಾಯಕ ರೇವಂತ್ ಇವರು ತನ್ನದೇ ಆದ ಶೈಲಿಯಲ್ಲಿ ಆಟ ಆಡುತ್ತಾ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ರೇವಂತ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಸಮಯದಲ್ಲಿ ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ ನಂತರವೂ ರೇವಂತ್ ಅವರು ಹಲವು ಬಾರಿ ಗರ್ಭಿಣಿಯಾಗಿರುವ ತಮ್ಮ ಪತ್ನಿಯನ್ನು ನೆನಪಿಸಿಕೊಂಡು ಭಾವುಕರಾಗಿದ್ದರು. ಇತ್ತೀಚಿಗಷ್ಟೇ ರೇವಂತ್ ಅವರ ಪತ್ನಿಯ ಸೀಮಂತ ಕಾರ್ಯಕ್ರಮ ನಡೆದಿರುವ ವಿಚಾರವನ್ನು ತಿಳಿಸಲಾಗಿದ್ದು ಅವರಿಗೆ ಪತ್ನಿಯ ಸೀಮಂತ ಕಾರ್ಯಕ್ರಮದ ಆ ಸಂತೋಷ ಮತ್ತು ಸಂಭ್ರಮದ ದೃಶ್ಯಗಳನ್ನು ಸಹಾ ತೋರಿಸಲಾಗಿದೆ.
ಬಿಗ್ ಬಾಸ್ ಮಾತನಾಡುತ್ತಾ ಕಳೆದ ವಾರ ನಿಮ್ಮ ಪತ್ನಿಯ ಸೀಮಂತ ಕಾರ್ಯಕ್ರಮ ನಡೆದಿದೆ. ನೀವು ಅದರಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಆ ಮಧುರವಾದ ಕ್ಷಣಗಳನ್ನು ನಿಮಗೆ ತೋರಿಸಬೇಕೆಂದುಕೊಂಡಿದ್ದೇವೆ ಎಂದು ಸೀಮಂತ ಕಾರ್ಯಕ್ರಮದ ವಿಡಿಯೋ ತೋರಿಸಿದ್ದಾರೆ. ಪತ್ನಿ ಅನ್ವಿತಾ ಸೀಮಂತ ಕಾರ್ಯಕ್ರಮವನ್ನು ನೋಡಿದ ರೇವಂತ್ ಅವರು ಮತ್ತೊಮ್ಮೆ ಎಮೋಷನಲ್ ಆಗಿದ್ದಾರೆ ಭಾವನೆಗಳನ್ನು ತಡೆಯಲಾಗದೇ ಕಣ್ಣೀರು ಹಾಕಿದ್ದಾರೆ. ನಂತರ ಅವರು ಮನೆಯ ಸದಸ್ಯರೆಲ್ಲರನ್ನು ಕರೆದಿದ್ದಾರೆ ಮನೆಯ ಸದಸ್ಯರು ರೇವಂತ್ ಅವರನ್ನು ಅಪ್ಪಿಕೊಂಡು ಶುಭಾಶಯ ಹೇಳಿದ್ದಾರೆ. ಇನ್ನು ರೇವಂತ್ ವಿಡಿಯೋದಲ್ಲಿ ಕಾಣುತ್ತಿದ್ದ ಪತ್ನಿಯ ಹಣೆಗೆ ಕುಂಕುಮ ಇಟ್ಟು ಗಂಧವನ್ನು ಸವರಿ, ಅಕ್ಷತೆಯನ್ನು ಹಾಕಿ ಬಿಗ್ ಬಾಸ್ ಮನೆಯಿಂದಲೇ ಪತ್ನಿಯನ್ನು ಆಶೀರ್ವದಿಸಿದ್ದಾರೆ.
ಸದ್ಯಕ್ಕೆ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಒಂದು ಕ್ಷಣ ಎಲ್ಲರೂ ಕೂಡ ಮೂಕವಿಸ್ಮಿತರಾಗಿದ್ದಾರೆ. ಇನ್ನು ಕೆಲವು ನೆಟ್ಟಿಗರು ಈ ವಿಡಿಯೋ ನೋಡಿ ಹೆಂಡತಿ ಗರ್ಭಿಣಿಯಾಗಿರುವಂತಹ ಸಂದರ್ಭದಲ್ಲಿ ಗಂಡ ಪಕ್ಕದಲ್ಲಿ ಇದ್ದು ಆಕೆಯ ಹಾರೈಕೆ ಮಾಡಬೇಕು. ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವಂತಹ ಸಂದರ್ಭದಲ್ಲಿ ಈ ರೀತಿ ಹೆಂಡತಿಯನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿದ್ದು ನಿಜಕ್ಕೂ ಕೂಡ ವಿಷಾದಕರ ವಿಚಾರವೇ. ಬಿಗ್ ಬಾಸ್ ಗೆ ಅವಕಾಶ ಯಾವಾಗ ಬೇಕಾದರೂ ಕೂಡ ದೊರೆಯುತ್ತದೆ ಆದರೆ ಜೀವನದಲ್ಲಿ ಒಂದು ಬಾರಿ ಮಾತ್ರ ಇಂತಹ ಸುಂದರ ಕ್ಷಣವನ್ನು ಸವಿಯುವಂತಹ ಅವಕಾಶ ದೊರೆಯುವುದು ಎಂದು ರೇವಂತ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಚೀಮಾರಿ ಹಾಕಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.