Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

Posted on March 10, 2024 By Kannada Trend News No Comments on ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

 

ಪೈಲ್ಸ್ ಬಹಳ ಜನರು ಭಯ ಬೀಳುವ ಒಂದು ಶಬ್ದ. ಅಲ್ಲದೆ ಇದನ್ನು ಮುಜುಗರದ ಸಂಗತಿ ಎಂದುಕೊಂಡಿದ್ದಾರೆ. ಹಾಗಾಗಿ ಆರಂಭಿಕ ಹಂತದಲ್ಲಿಯೇ ಇದರ ಬಗ್ಗೆ ತಿಳಿದುಕೊಂಡು ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವ ಬದಲು ಕಾಯಿಲೆಯನ್ನು ಉಲ್ಬಣ ಮಾಡಿಕೊಂಡು ಸರ್ಜರಿ ಎಂದು ಹೇಳಿದಾಗ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ.

ಇಂಥಹ ತಪ್ಪನ್ನು ಮಾಡಬಾರದು ಎನ್ನುವ ಉದ್ದೇಶದಿಂದ ಈ ಅಂಕಣದಲ್ಲಿ ಫೈಲ್ಸ್ ಕುರಿತಂತೆ ತಜ್ಞ ವೈದ್ಯರೊಬ್ಬರು ಸಂದರ್ಶನವೊಂದರಲ್ಲಿ ತಿಳಿಸಿದ ಕೆಲವು ಸಂಗತಿಯನ್ನು ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇವೆ. ಮೊದಲಿಗೆ ಅವರು ಕೊಡುವ ಸಲಹೆ ಏನೆಂದರೆ ಪೈಲ್ಸ್ ನಲ್ಲಿ ಹಲವು ಹಂತಗಳು ಇವೆ ನೀವು ಆರಂಭದಲ್ಲಿಯೇ ಗುರುತಿಸಿ ವೈದ್ಯರ ಬಳಿ ಸರಿಯಾಗಿ ಸಲಹೆ ಪಡೆದರೆ ಚಿಕಿತ್ಸೆ ಇಲ್ಲದೆ ಗುಣಪಡಿಸಿಕೊಳ್ಳಬಹುದು.

ಹಾಗಾಗಿ ವ್ಯಾಧಿಯನ್ನು ಗುಟ್ಟು ಮಾಡದೆ ನಿಮ್ಮ ಕುಟುಂಬದವರೊಡನೆ ಅಥವಾ ವೈದ್ಯರೊಡನೆ ಮುಕ್ತವಾಗಿ ಹಂಚಿಕೊಳ್ಳಿ ಎನ್ನುತ್ತಾರೆ ವೈದ್ಯರು. ಪೈಲ್ಸ್ ಆದಾಗ ಮೊದಲಿಗೆ ತೊಂದರೆ ಆಗುವುದೇ ಮಲವಿಸರ್ಜನೆ ಮಾಡಲು. ನಿತ್ಯ ಕರ್ಮಗಳು ಸರಿಯಾಗಿ ಆಗದೆ ಇದ್ದಾಗ ಮೂರ್ನಾಲ್ಕು ದಿನಗಳಿಗೊಮ್ಮೆ ಮಲ ವಿಸರ್ಜನೆ ಮಾಡುವುದು, ನಂತರ ಒಂದೆರಡು ಹನಿ ರಕ್ತ ಕಾಣಿಸಿಕೊಳ್ಳುವುದು ಈ ರೀತಿ ಆದಾಗಲೇ ಇದನ್ನು ಗುರುತಿಸಬೇಕು.

ಈ ಸುದ್ದಿ ಓದಿ:- ಸಿಂಹ ರಾಶಿ ಮೇಲೆ ಗುರು ಪರಿವರ್ತನೆ ಯಾವ ರೀತಿ ಪರಿಣಾಮ ಬೀರಲಿದೆ ಗೊತ್ತಾ.?

ಆಗಲೂ ತಿಳಿಯದೆ ಇದ್ದಾಗ ಗುದದ್ವಾರದಲ್ಲಿ ಮೊಳಕೆ ಬಂದ ರೀತಿಯ ಅನುಭವ ಆಗುತ್ತದೆ ಮತ್ತು ವಿಪರೀತ ನೋವು ಉರಿ ಇರುತ್ತದೆ, ನಾಲ್ಕು ದಿನ ಆದ ಬಳಿಕ ಒಳಗೆ ಹೋಗುತ್ತದೆ. ಆದರೆ ಕೆಲ ದಿನ ಬಿಟ್ಟು ಮತ್ತೆ ಇದೇ ರೀತಿ ಆಗುತ್ತದೆ ಈ ಬಾರಿ ಅದು ಒಳಗೆ ಹೋಗುವುದಿಲ್ಲ ಹೀಗೆ ಇದು ಬೆಳೆಯುತ್ತಾ ಹಂತವನ್ನು ಮೀರುತ್ತಾ ಹೋಗುತ್ತದೆ.

ಇದನ್ನು ಆರಂಭದಲ್ಲಿಯೇ ಗುರುತಿಸಿದರೆ ನೀವು ನೋವು ತಿನ್ನುವುದು ತಪ್ಪುತ್ತದೆ, ಕಾಯಿಲೆ ಕಡಿಮೆ ಆಗುತ್ತದೆ ಮತ್ತು ಇದು ಬೆಳೆಯದಂತೆ ತಡೆಯಬಹುದು. ಪೈಲ್ಸ್ ಆಗಲು ಮುಖ್ಯ ಕಾರಣ ಏನು ಎನ್ನುವುದನ್ನು ತಿಳಿದುಕೊಂಡು ಸರಿಪಡಿಸಿಕೊಂಡು ಬಿಟ್ಟರೆ ಅದು ಎಲ್ಲಕ್ಕಿಂತ ಉತ್ತಮ. ಈಗಿನ ಕಾಲದಲ್ಲಿ ಹಳ್ಳಿಯವರಿಗೂ, ಪಟ್ಟಣದವರಿಗೂ ಈ ಕಾಯಿಲೆ ಬರುತ್ತಿದೆ.

ನಮ್ಮ ಜೀರ್ಣಶಕ್ತಿ ಕುಂದು ಹೋಗುವುದು, ಜೀರ್ಣಾಂಗ ವ್ಯೂಹ ಸರಿಯಾಗಿ ಕಾರ್ಯನಿರ್ವಹಿಸದೇ ಮಲವಿಸರ್ಜನೆಗೆ ತೊಂದರೆಯಾಗುವುದು ಈ ರೀತಿ ಆರೋಗ್ಯ ಕೆಡಲು ಕಾರಣ. ಸರಿಯಾಗಿ ದೇಹಕ್ಕೆ ಅವಶ್ಯಕತೆ ಇರುವಷ್ಟು ಪ್ರಮಾಣದಲ್ಲಿ ನೀರು ಕುಡಿಯದೆ ಇರುವುದು ಮುಖ್ಯ ಕಾರಣ.

ಈ ಸುದ್ದಿ ಓದಿ:-ಮಕ್ಕಳು ಯಾವ ತಿಂಗಳಲ್ಲಿ ಜನಿಸಿದರೆ ಏನು ಫಲ ನೋಡಿ.!

ಅದರಲ್ಲೂ ಕೆಲಸಕ್ಕೆ ಹೋಗುವವರು ಪದೇ ಪದೇ ನೀರು ಕುಡಿಯುವುದರಿಂದ ವಾಶ್ ರೂಂ ಗೆ ಹೋಗಬೇಕಾಗುತ್ತದೆ, ಮುಜುಗರ ಆಗುತ್ತದೆ ಎಂದು ಸರಿಯಾಗಿ ನೀರು ಕುಡಿಯುವುದಿಲ್ಲ, ಪೋಷಕಾಂಶಯುಕ್ತ ಆಹಾರ ಪದಾರ್ಥಗಳ ಸೇವನೆ ಅಂತೂ ಮರೆತುಬಿಟ್ಟಿದ್ದಾರೆ ಆಹಾರಗಳಲ್ಲಿ ನಾರಿನಂಶ ಹೆಚ್ಚಿಗಿರುವ ಸೊಪ್ಪು ತರಕಾರಿ ಹಣ್ಣುಗಳ ಸೇವನೆ.

ಫೈಬರ್ ಅಂಶ ಇರುವ ಪದಾರ್ಥಗಳ ಸೇವನೆಯ ಬದಲು ಸಂಸ್ಕರಿಸಿದ ಅತಿಯಾದ ಮಸಾಲೆ ಉಪಯೋಗಿಸಿದ ಉತ್ಪನ್ನಗಳನ್ನು ಸೇವಿಸುವುದು . ಈ ರೀತಿ ತೊಂದರೆ ಉಂಟು ಮಾಡುತ್ತಿದೆ. ಕೆಲವರು ವೈದ್ಯರ ಸಲಹೆಯನ್ನು ಕೇಳದೆ ತಮಗೆ ಬೇಕಾದ ರೀತಿಯಲ್ಲಿ ಔಷಧಿಗಳನ್ನು ಸೇವಿಸಿ ಬಿಡುತ್ತಾರೆ ಇದು ಕೂಡ ಅವರಿಗೆ ತೊಂದರೆ ತರುತ್ತದೆ.

ನಾವು ತಿಂದ ಆಹಾರವು ಸರಳವಾಗಿ ಜೀರ್ಣವಾಗಿ ಸಾರ ದೇಹಕ್ಕೆ ಸೇರಿ ಬೇಡವಾದ ಅಂಶ ಮಲವಿಸರ್ಜನೆ ಮೂಲಕ ದೇಹದಿಂದ ಹೊರ ಹೋಗಬೇಕು. ಈ ಕ್ರಿಯೆ ಸರಿಯಾಗಿ ನಡೆದೆ ಇದ್ದಾಗ ಮುಖ್ಯವಾಗಿ ಪೈಲ್ಸ್ ಹಾಗೂ ಇದೇ ರೀತಿ ಮುಂದುವರಿದು ಇನ್ನು ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಈ ಸುದ್ದಿ ಓದಿ:-ಯಾವ ವಾರ ಜನಿಸಿದ ಮಕ್ಕಳು ಅದೃಷ್ಟವಂತರು ನೋಡಿ.!

ಹಾಗಾಗಿ ಇವುಗಳ ಬಗ್ಗೆ ಗಮನ ಇರಬೇಕು ಮತ್ತು ಈ ರೀತಿ ಆರೋಗ್ಯ ಸಮಸ್ಯೆಗಳು ಆದಾಗ ಆರಂಭದಲ್ಲಿಯೇ ಪರಿಹಾರ ಪಡಿಸಿಕೊಳ್ಳಲು ಆಯುರ್ವೇದದ ಔಷಧಿಯ ಅಂಶಗಳುಳ್ಳ ಪದಾರ್ಥಗಳಾದ ಅಶ್ವಗಂಧ, ಔಡಲ ಇತ್ಯಾದಿ ಪದಾರ್ಥಗಳಿಂದ ತಯಾರಿಸಿರುವ BBETER PiloUjra ಎನ್ನುವ ಔಷಧಿಯನ್ನು ಸೇವಿಸಿ. ಆನ್ಲೈನ್ನಲ್ಲಿ ಕೂಡ ಇದನ್ನು ಆರ್ಡರ್ ಮಾಡಿ ಮನೆಗೆ ಪಡೆದುಕೊಳ್ಳಬಹುದು. ಈ ಔಷಧಿಗಾಗಿ ಕರೆ ಮಾಡುವುದಾದರೆ ಈ ಸಂಖ್ಯೆಯನ್ನು ಸಂಪರ್ಕಿಸಿ.
9392350161

Health Tips
WhatsApp Group Join Now
Telegram Group Join Now

Post navigation

Previous Post: ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಮಾರ್ಚ್ ತಿಂಗಳು ಈ 5 ರಾಶಿಯವರಿಗೆ ತುಂಬಾ ಲಕ್ಕಿ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು, ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ.!
Next Post: LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore