ಮಾರ್ಚ್ 27ರಂದು ಅಂಬರೀಶ್ ಸ್ಮಾರಕ ಉದ್ಘಾಟನೆಗೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿ 1.34 ಗುಂಟೆ ಪ್ರದೇಶದಲ್ಲಿ ಸುಮಾರು 12 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಈ ಸ್ಮಾರಕವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು. ಅಂಬರೀಷ್ ಪತ್ನಿ ಸಂಸದೆ ಸುಮತ ಅಂಬರೀಶ್, ಸುಧಾಕರ್ ಸೇರಿದಂತೆ ಹಲವರು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿ ಅಂಬರೀಶ್ ಅವರನ್ನು ನೆನೆದು ಮಾತನಾಡಿದರು.
ಅದೇ ದಿನ ಸ್ಮಾರಕ ಉದ್ಘಾಟನೆ ಜೊತೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೂ ಕೂಡ ಅಂಬರೀಶ್ ಅವರ ಹೆಸರನ್ನು ಇಡಲಾಗಿದೆ .2017 ನವೆಂಬರ್ 27ರಂದು ಅಂಬರೀಶ್ ಅವರು ಇಹಲೋಕ ಯಾತ್ರೆ ಮುಗಿಸಿದರು, ಆದರೆ ಅವರ ಕೊನೆಯ ದಿನದವರೆಗೂ ಕೂಡ ಅಭಿಮಾನಿಗಳಿಗಾಗಿ ತುಡಿಯುತ್ತಿದ್ದರು ಈ ಬಗ್ಗೆ ಎಲ್ಲವನ್ನು ನೆನೆದುಕೊಂಡು ಅಂಬರೀಶ್ ಅವರ ಬಗ್ಗೆ ಮಾತನಾಡುತ್ತಾ ಸುಮಲತಾ ಅಂಬರೀಶ್ ಅವರು ಭಾವುಕರಾಗಿದ್ದಾರೆ.
ಅಂಬರೀಶ್ ಅವರ ವ್ಯಕ್ತಿತ್ವ ಏನು ಎಂದು ಎಲ್ಲರಿಗೂ ಗೊತ್ತು. ಕರ್ನಾಟಕದಲ್ಲಿ ಕರ್ಣ ಎಂದ ಹೆಸರಾಗಿರುವ ಅಂಬರೀಶ್ ಅವರು ಕೊಡು ಗೈ ದಾನಿ ತನ್ನ ಸಹಾಯ ಅರಸಿ ಬರುವ ಚಿತ್ರರಂಗದ ಚಿತ್ರೋದ್ಯಮಿಗಳಿಗೆ, ರಾಜಕೀಯ ವ್ಯಕ್ತಿಗಳು ಹಾಗೆ ಜನಸಾಮಾನ್ಯರನ್ನೂ ಕೂಡ ಖಾಲಿ ಕೈಯಲ್ಲಿ ಕಳುಹಿಸಿದವರಲ್ಲ. ಮಾತಿನಲ್ಲಿ ಒರಟಾಗಿದ್ದರು ಮಗುವಿಗಿಂತ ಮನಸ್ಸು ಒಂದಿದ್ದ ಇವರು ಎಲ್ಲರನ್ನು ಪ್ರೀತಿಯೆಂದ ಕಾಣುತ್ತಿದ್ದರು. ಇರುವ ತನಕ ಯಾರಿಗೂ ಕೇರ್ ಮಾಡದೆ ಬದುಕಿದ ಅವರ ರೆಬಲ್ ವ್ಯಕ್ತಿತ್ವದ ಬಗ್ಗೆ ಸುಮಲತಾ ಅಂಬರೀಶ್ ಅವರು ಮಾತನಾಡಿದರು.
ಜೀವಮಾನದಲ್ಲಿ ಅಂಬರೀಶ್ ಅವರು ಯಾರ ಬಳಿಯೂ ಎಂದು ಕೂಡ ಕೈಚಾಚಿದವರಲ್ಲ ಎಂದು ಆಕಾಶ ನೋಡದ ಕೈ ಆಗಿದ್ದ ಅಂಬರೀಶ್ ಅವರ ಗುಣವನ್ನು ಗುಣಗಾನ ಮಾಡಿದರು. ಸುಮಲತ ಅವರ ಆ ಮಾತುಗಳನ್ನು ಹೋರಾಟಗಾರ ನಟ ಚೇತನ ಅಹಿಂಸ ಅವರು ಖಂಡಿಸಿದ್ದಾರೆ ಅಂಬರೀಶ್ ಅವರು ಎಂತಹ ವ್ಯಕ್ತಿತ್ವ ಎಂದು ಇಡೀ ಕರ್ನಾಟಕಕ್ಕೆ ಗೊತ್ತು. ಎಂದಿಗೂ ಸಹ ಯಾರ ಬಳಿಯೂ ಅವರು ಏನನ್ನು ಕೇಳಿದವರು ಅಲ್ಲ, ತನಿಂದ ಸಾಧ್ಯವಾದಷ್ಟು ಎಲ್ಲರಿಗೂ ಸಹಾಯ ಮಾಡುತ್ತಾ ದಾನ ಮಾಡುತ್ತಿದ್ದರು.
ಆದರೆ ಸುಮಲತಾ ಅಂಬರೀಶ್ ಅವರು ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಬಳಿ ಕೈ ಚಾಚಿದ್ದಾರೆ. ಸುಮಾರು ಎರಡು ಎಕರೆ ಭೂಮಿ ಮತ್ತು 12 ಕೋಟೆ ಹಣವನ್ನು ಸರ್ಕಾರದಿಂದ ಪಡೆದಿದ್ದಾರೆ. ಅನಗತ್ಯವಾದ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ತೆರಿಗೆ ಹಣ ಬಳಸಿದ್ದಾರೆ. ಅದರ ಬದಲು ಅವರೇ ಅವರು ಗಳಿಕೆ ಮಾಡಿರುವ ಹಣದಲ್ಲಿ 23.4 ಕೋಟಿ ಬಳಕೆ ಮಾಡಿ ಸ್ಮಾರಕ ನಿರ್ಮಾಣ ಮಾಡಬಹುದಾಗಿತ್ತು. ಅಷ್ಟು ಮಾಡಲು ಅವರಿಗೆ ಸಾಧ್ಯವಾಗಲಿಲ್ಲವೇ?
ಎಲ್ಲಾ ಉಳ್ಳವರಿಗೆ ಮತ್ತೆ ಮತ್ತೆ ಸರ್ಕಾರದ ಸವಲತ್ತು ನೀಡುವುದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಹೋರಾಟಗಾರ ನಟ ಚೇತನ್ ಅಹಿಂಸ ಪ್ರಶ್ನೆ ಮಾಡಿದ್ದಾರೆ. ಈ ರೀತಿ ಖರ್ಚುಗಳಿಗೆ ಸರ್ಕಾರದ ಖಜಾನೆ ಖಾಲಿಯಾಗುತ್ತಾ ಹೋದರೆ ಅದು ತಲುಪಬೇಕಾದ ಜನಸಾಮಾನ್ಯರ ಕಷ್ಟಗಳಿಗೆ ತಲುಪುವುದಿಲ್ಲ ಎನ್ನುವುದು ಅವರ ಆತಂಕವಾಗಿದೆ. ಈ ಹಿಂದೆ ಕೂಡ ಅವರು ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆದ ವೇಳೆಯು ತಕರಾರು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಮನಸೋ ಇಚ್ಛೆ ಬರೆದಿದ್ದರು.
ಆಗಲೂ ಸಹ ಅಭಿಮಾನಿಗಳು ರೊಚ್ಚಿಗೆದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ವಾರವು ಕೂಡ ಇಂತಹದೇ ಒಂದು ವಿಚಾರದ ಬಗ್ಗೆ ಮಾತನಾಡಿ ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರು. ಮತ್ತೆ ಮತ್ತೆ ಚೇತನ್ ಅಹಿಂಸಾ ಅವರು ಕರ್ನಾಟಕದ ರಾಜಕೀಯ ಚಟುವಟಿಕೆ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ ಈ ಬಾರಿ ಜನರ ಪ್ರತಿಕ್ರಿಯೆ ಹೇಗಿರುತ್ತದೆ ನೋಡೋಣ.