Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಗಂಡಂದಿರು ಈ ವಿಚಾರದಲ್ಲಿ ಅಡ್ಜಸ್ಟ್ ಮಾಡ್ಕೋಳ್ದೆ ಹೋದ್ರೆ ತುಂಬಾ ಕಷ್ಟ ಆಗುತ್ತೆ ಎಂದ ನಟಿ ಚಿತ್ಕಲಾ ಬಿರಾದರ್.

Posted on February 17, 2023 By Kannada Trend News No Comments on ಗಂಡಂದಿರು ಈ ವಿಚಾರದಲ್ಲಿ ಅಡ್ಜಸ್ಟ್ ಮಾಡ್ಕೋಳ್ದೆ ಹೋದ್ರೆ ತುಂಬಾ ಕಷ್ಟ ಆಗುತ್ತೆ ಎಂದ ನಟಿ ಚಿತ್ಕಲಾ ಬಿರಾದರ್.

 

ಚಿತ್ಕಲಾ ಬಿರಾದರ್ (Chithkala biradar) ಅವರು ಇತ್ತೀಚೆಗೆ ಕಿರುತರೆ (serial actress) ಹಾಗೂ ಹಿರಿತೆರೆ ಎರಡರಲ್ಲೂ ಪೋಷಕ ಪಾತ್ರದಾರಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ. ಬಂದೇ ಬರುತ್ತಾವೆ ಕಾಲ ಎನ್ನುವ ಧಾರವಾಹಿ ಮೂಲಕ ಕಿರುತೆರೆ ಪ್ರಪಂಚಕ್ಕೆ ಕಾಲಿಟ್ಟ ಇವರು ಆನಂತರ ಅವನು ಮತ್ತೆ ಶ್ರಾವಣಿ ಅಯ್ಯಂಗಾರ್ ಪುಷ್ಪವತಿ ಪಾತ್ರ ಮತ್ತು ಅಗ್ನಿಸಾಕ್ಷಿ ಸುಮತಿ ಪಾತ್ರಗಳ ಮೂಲಕ ಹೆಸರು ಮಾಡಿದರು. ನಂತರ ಇವರ ಕೆರಿಯರ್ ಗೆ ಹೆಚ್ಚು ಬ್ರೇಕ್ ನೀಡಿದ್ದು ಕನ್ನಡತಿ (Kannadathi) ಧಾರವಾಹಿಯ ಅಮ್ಮಮ್ಮ (Ammamma) ಪಾತ್ರ.

ಕಾಫಿ ಶಾಪ್ ಓನರ್ ಮತ್ತು ರತ್ನಮಾಲ ಶಿಕ್ಷಣ ಸಂಸ್ಥೆಗಳ ಎಂಡಿ ಆಗಿ ಕಾಣಿಸಿಕೊಂಡಿದ್ದ ರತ್ನಮಾಲ ಅವರ ಪಾತ್ರ ಪ್ರೇಕ್ಷಕರಿಗೆಲ್ಲಾ ಬಹಳ ಇಷ್ಟ ಆಗಿತ್ತು. ಸಿನಿಮಾ ಕಡೆ ಕೂಡ ಮುಖ ಮಾಡಿದ ಇವರು ಈವರೆಗೆ ಸುಮಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಮನೆ ಫ್ಯಾಂಟಮ್ , ನಿನ್ನಸನಿಹಕ್ಕೆ, ಇಂದ ಹಿಡಿದು ಈಗಿನ ದಿಲ್ ಪಸಂದ್ ಸಿನಿಮಾ ತನಕ ಹತ್ತಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡು ಮನೋ ರಂಜಿಸಿದ್ದಾರೆ.

ಇಷ್ಟೆಲ್ಲಾ ಬಿಜಿ ಶೆಡ್ಯೂಲ್ ನಡುವೆಯೂ ಕಿರುತೆರೆಯ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಸುವರ್ಣ ವಾಹಿನಿಯಲ್ಲಿ (Suvarna channel) ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ (Suvarna super star program) ಭಾಗವಹಿಸಿದ ಚಿತ್ಕಲಾ ಬಿರಾದರ್ ಅವರು ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದ ನಿರೂಪಕಿ ಆದ ಶಾಲಿನಿ ಸತ್ಯನಾರಾಯಣ್ (Anchor Shalini) ಅವರು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಸಾಮಾನ್ಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಕೂಡ ನಿಮ್ಮ ಜೀವನ ಸೂಪರ್ ಸ್ಟಾರ್ (real life superstar) ಯಾರು ಎನ್ನುವ ಪ್ರಶ್ನೆ ಕೇಳಲಾಗುತ್ತದೆ, ಇದೇ ಪ್ರಶ್ನೆಯನ್ನು ಚಿತ್ಖಲಾ ಬಿರಾದರ್ ಅವರಿಗೂ ಕೇಳಿದಾಗ ಅವರು ಇದುವರೆಗೆ ಎಷ್ಟೋ ಬಾರಿ ನನ್ನ ತಂದೆ ತಾಯಿ ನನಗೆ ಸೂಪರ್ ಎಂದು ಹೇಳಿಕೊಂಡಿದ್ದೇನೆ. ಆದರೆ ಈ ಬಾರಿ ಹೇಳುತ್ತಿದ್ದೇನೆ ನನ್ನ ಪಾಲಿಗೆ ನನ್ನ ಪತಿಯೇ ಸೂಪರ್ ಸ್ಟಾರ್ .

ಯಾಕೆಂದರೆ ಕಲಾವಿದರಿಗೆ ಆ ಕಷ್ಟ ಗೊತ್ತಿರುತ್ತದೆ. ನಾನು ಈ ಚಿತ್ರ ರಂಗದಲ್ಲಿ ಇದ್ದವಳಲ್ಲ ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗಲೂ ಬದುಕು ಚೆನ್ನಾಗಿತ್ತು. ನಮ್ಮ ಕುಟುಂಬದವರು ಮೊದಲಿಗೆ ಚಿತ್ರರಂಗಕ್ಕೆ ಹೋಗುತ್ತೇನೆ ಎಂದಾಗ ಬೇಡ ಎಂದು ವಿರೋಧಿಸಿದರು ಹಾಗೆ ಎಲ್ಲ ಕೋಲ್ಡ್ ವಾರ್ ನಡುವೆ ಪತಿ ನನಗೆ ಬೆಂಬಲ ನೀಡಿದ್ದರು. ಈಗಲೂ ಶೂಟಿಂಗ್ ತರಗತಿವರೆಗೆ ಇದ್ದಾಗ ನಿದ್ರೆ ಮಾಡಲು ಆಗುವುದಿಲ್ಲ, ಅಡುಗೆ ಮಾಡಲು ಸಮಯ ಇರುವುದಿಲ್ಲ, ಮನೆ ಅಸ್ತವ್ಯಸ್ತ ಆಗಿರುತ್ತದೆ ಆಗೆಲ್ಲಾ ಅಡ್ಜಸ್ಟ್ ಮಾಡಿಕೊಂಡು ಅರ್ಥ ಮಾಡಿಕೊಳ್ಳುತ್ತಾರೆ.

ಈಗ ನನ್ನ ಪತಿಯನ್ನು ನೋಡಿ ನನ್ನ ಮಕ್ಕಳು ಕೂಡ ಅದೇ ರೀತಿ ಕಲಿಯುತ್ತಿದ್ದಾರೆ. ಮುಂದೆ ಅದು ಅವರ ಪತ್ನಿಯರ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಶಿಕ್ಷಣವು ಆಗಬಹುದು. ಹಾಗಾಗಿ ನನ್ನ ಪತಿ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರ ಪತಿಯಾದ ಜಗದೀಶ್ ಕುಮಾರ್ ಅವರನ್ನು ಹೊಗಳಿದ್ದಾರೆ. ನಂತರ ಅಲ್ಲೇ ಇದ್ದ ಜಗದೀಶ್ ಕುಮಾರ್ ಅವರನ್ನು ಉದ್ದೇಶಿಸಿ ಶಾಲಿನಿ ಅವರು ಸಹ ಮಾತನಾಡಿದ್ದಾರೆ. ಸರ್ ನೀವು ಇದೇ ತರ ಅವರಿಗೆ ಸಪೋರ್ಟ್ ಮಾಡುತ್ತಾ ಇರಿ ಅವರು ಒಳ್ಳೆಯ ಪಾತ್ರಗಳನ್ನು ಆರಿಸಿಕೊಂಡು ಹೆಸರು ಮಾಡಲಿ ಎಂದು ರಿಕ್ವೆಸ್ಟ್ ಮಾಡಿದ್ದಾರೆ.

Entertainment Tags:Chithkala Biradar
WhatsApp Group Join Now
Telegram Group Join Now

Post navigation

Previous Post: ದರ್ಶನ್ ಹುಟ್ಟುಹಬ್ಬಕ್ಕೆ ಖರ್ಚು ಆಗಿದ್ದು ಬರೊಬ್ಬರಿ ಎಷ್ಟು ಕೋಟಿ ಗೊತ್ತ.? ಇಷ್ಟು ಹಣವನ್ನು ಖರ್ಚು ಮಾಡಿದ ಪುಣ್ಯತ್ಮ ಯಾರು ಅಂತ ಗೊತ್ತದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.
Next Post: ಕೋಟಿ ಕೋಟಿ ಹಣ ಕಳೆದುಕೊಂಡು ಕಣ್ಣಿರಿಡುತ್ತಿರುವ ನಟ ಜಗಪತಿ ಬಾಬು, ಇವರ ಈ ಪರಿಸ್ಥಿತಿಗೆ ಕಾರಣವೇನು ಗೊತ್ತ.? ಯಾವ ಶತ್ರುಗಳು ಇಂಥ ಕಷ್ಟ ಬರದಿರಲಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore