Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು

Posted on January 6, 2023 By Kannada Trend News No Comments on ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು

 

ದರ್ಶನ್ ಅವರಿಗೆ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಅಭಿಮಾನಿ ಬಳಗ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹಾಗೆ ಸುದೀಪ್ ಕೂಡ ಕನ್ನಡದ ಹೆಮ್ಮೆಯ ಸ್ಟಾರ್ ನಟ ಕನ್ನಡ ಚಿತ್ರರಂಗ ಮಾತ್ರವಲ್ಲದೇ ತಮಿಳು ತೆಲುಗು ಹಿಂದಿ ಹೀಗೆ ಪರಭಾಷೆಗಳಲ್ಲೂ ಕೂಡ ನಟಿಸಿರುವ ಇವರು ಕರ್ನಾಟಕದ ಆಸ್ತಿ. ಇಬ್ಬರು ಸಹ ಒಂದೇ ಕಾಲಘಟ್ಟದಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು ಇಬ್ಬರು ಎಂದಿಗೂ ಹಲವು ವರ್ಷಗಳವರೆಗೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.

ನಂತರ ದರ್ಶನ್ ಅವರ ಸಾರಥಿ ಸಿನಿಮಾ ಸಂದರ್ಭದಲ್ಲಿ ಅವರ ಸಿನಿಮಾ ಪ್ರಚಾರಕ್ಕೆ ದರ್ಶನ್ ಜೊತೆಗೆ ಸುದೀಪ್ ಕೈ ಜೋಡಿಸಿದರು. ಚಡ್ಡಿ ದೋಸ್ತ್ ಗಳ ಹಾಗೆ ಜೊತೆ ಜೊತೆಗೆ ಓಡಾಡಲು ಶುರು ಮಾಡಿದರು. ಆ ಸಂದರ್ಭದಲ್ಲಿ ಇದು ಇಬ್ಬರ ಅಭಿಮಾನಿಗಳು ಎಷ್ಟು ಸಂತಸ ನೀಡಿತ್ತು ಎಂದರೆ ಅಂಬಿ ಹಾಗೂ ವಿಷ್ಣು ಸ್ನೇಹವನ್ನು ಇವರಿಬ್ಬರ ಸ್ನೇಹಕ್ಕೆ ಹೋಲಿಸಿದರು.

ಆದರೆ ಈ ಸ್ನೇಹದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತಿತ್ತೋ ಏನೋ, ಒಟ್ಟಿಗೆ ಕೂತು ಊಟ ಮಾಡುತ್ತಿದ್ದ ಒಂದೇ ಕಾರಿನಲ್ಲಿ ಓಡಾಡುತ್ತಿದ್ದ ಒಬ್ಬರಿಗಾಗಿ ಒಬ್ಬರು ಜೀವ ಬೇಕಾದರೂ ಕೊಡುವಷ್ಟು ಆತ್ಮೀಯರಾಗಿದ್ದ ಇವರ ನಡುವೆ ಮೂರನೇ ವ್ಯಕ್ತಿಗಳಿಂದ ಮನಸ್ತಾಪವಾಗಿ ಅದು ನಾನಾ ತಿರುವು ಪಡೆದುಕೊಂಡು ಕೊನೆಗೆ ದರ್ಶನ್ ಅವರೇ ನಾವಿಬ್ಬರು ಸ್ನೇಹಿತರಲ್ಲ ಒಂದೇ ಇಂಡಸ್ಟ್ರಿಯ ನಟರು ಎಂದು ಹೇಳಿ ಇದಕ್ಕೆಲ್ಲ ಅಂತ್ಯ ಬರೆದು ಬಿಟ್ಟರು.

ಆದರೆ ಸುದೀಪ್ ಅವರು ಮಾತ್ರ ಎಲ್ಲೂ ಬಹಿರಂಗವಾಗಿ ಹೇಳಿಕೆ ಕೊಡದಿದ್ದರೂ ಇವರ ನಡುವೆ ಸಂಬಂಧ ಸರಿಬರುತ್ತಿಲ್ಲ ಎಂದು ತಿಳಿದ ಮೇಲೆ ಸುಮ್ಮನಾಗಿದ್ದರು. ಇವರಿಬ್ಬರು ಬೇರೆಯಾಗಿದ್ದಾರೆ ಎನ್ನುವ ಸತ್ಯ ತಿಳಿಯುತ್ತಿದ್ದಂತೆ ಇವರಿಬ್ಬರಿಗೆ ಎಲ್ಲೇ ಹೋದರು ಕೂಡ ಮತ್ತೆ ಯಾವಾಗು ಒಂದಾಗುತ್ತೀರಿ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು.

ಅಭಿಮಾನಿಗಳು ಕೂಡ ಸಾಕಷ್ಟು ಬಾರಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿ ಎಂದು ರಿಕ್ವೆಸ್ಟ್ ಸಹ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಒಡೆದ ಹೃದಯಗಳು ಎರಡು ಒಂದಾಗುವ ಮುನ್ಸೂಚನೆ ಕಂಡುಬರುತ್ತದೆ. ಅದೇನೆಂದರೆ ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ಹೊಸಪೇಟೆಗೆ ಹೋಗಿದ್ದ ಸಮಯದಲ್ಲಿ ದರ್ಶನ್ ಅವರಿಗೆ ಕೆಲ ಕಿಡಿಗೇಡಿಗಳು ಅವಮಾನ ಮಾಡಿದ್ದರು. ಈ ಘಟನೆ ವಿರುದ್ಧ ಸ್ಯಾಂಡಲ್ ವುಡ್ ನ ಹಲವು ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದರು.

ಈ ಘಟನೆ ಬಗ್ಗೆ ಸುದೀಪ್ ಅವರು ಸಹ ಟ್ವೀಟ್ ಮಾಡಿ ದರ್ಶನವರ ವ್ಯಕ್ತಿತ್ವ ಮತ್ತು ಘನತೆ ಹಾಗೂ ಅವರಿಗೆ ಕೊಡಬೇಕಾದ ಗೌರವ ಏನು ಎನ್ನುವುದರ ಬಗ್ಗೆ ಸವಿಸ್ತಾರವಾಗಿ ಬರೆದಿದ್ದರು. ಇದನ್ನು ನೋಡಿದ ದರ್ಶನ್ ಅವರು ಅವರ ಬರಹವನ್ನು ಮೆಚ್ಚಿ ಧನ್ಯವಾದಗಳು ತಿಳಿಸಿದರು ಮತ್ತು ತಮಗೆ ಸಪೋರ್ಟ್ ಮಾಡಿದ್ದಕ್ಕಾಗಿ ಥ್ಯಾಂಕ್ಸ್ ಸಹ ಹೇಳಿದ್ದರು ಇದನ್ನು ನೋಡಿ ಇಬ್ಬರ ಅಭಿಮಾನಿಗಳು ಸಹ ದಿಲ್ ಖುಷ್ ಆಗಿದ್ದಾರೆ.

View this post on Instagram

A post shared by ❤️Sudeep & Darshan 🥰 (@kiccha_dacchu_fans_club)

ಮತ್ತೊಮ್ಮೆ ಕುಚುಕುಗಳು ಒಂದಾಗುತ್ತಿದ್ದಾರೆ ಎಂದು ಖುಷಿ ಪಟ್ಟಿದ್ದಾರೆ. ಈಗ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ದರ್ಶನ್ ಅಭಿಮಾನಿಗಳಲ್ಲಿ ಕೆಲವರು ಇದರ ಬಗ್ಗೆ ಮಾತನಾಡಿಸುತ್ತಿರುವ ವಿಡಿಯೋ ವೈರಲ್ಲಾಗಿದೆ. ಈ ವಿಡಿಯೋದಲ್ಲಿ ದರ್ಶನ್ ಅವರ ಅಭಿಮಾನಿಗಳು ದರ್ಶನವರು ಅಂಬಿ ಮಗನು ಇದ್ದ ಹಾಗೆ ಸುದೀಪ್ ಅವರು ವಿಷ್ಣುವರ್ಧನ್ ಅವರ ಮಗನಿದ್ದ ಹಾಗೆ ಇವರಿಬ್ಬರು ಮತ್ತೆ ಒಂದಾಗಬೇಕು ಆ ದಿಗ್ಗಜರು ಸ್ಥಾನವನ್ನು ಇವರಿಬ್ಬರನ್ನು ಬಿಟ್ಟು ಬೇರೆ ಯಾರಿಂದಲೂ ತುಂಬಿಸಲು ಸಾಧ್ಯವಿಲ್ಲ. ಅಭಿಮಾನಿಗಳಿಗೋಸ್ಕರ ಆದರೂ ಇವರು ಒಂದಾಗಲೇಬೇಕು ದಿಗ್ಗಜರು 2 ಇವರಿಬ್ಬರ ಕಾಂತಿ ನೇಷನ್ ನಲ್ಲಿ ಮೂಡಿ ಬರಬೇಕು ಎಂದು ಮಾತನಾಡಿ ಗಾಂಧಿ ಸಿನಿಮಾಗೆ ಹಾಗೂ ದರ್ಶನ್ ಅವರಿಗೆ ಜೈಕಾರ ಕೂಗಿದ್ದಾರೆ.

Entertainment Tags:Ambareesh, Darshan, Diggajaru 2, Kiccha Sudeepa, Vishnu vardhan
WhatsApp Group Join Now
Telegram Group Join Now

Post navigation

Previous Post: ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.
Next Post: ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore