Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದರ್ಶನ್ ಮತ್ತು ಸುದೀಪ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾ ಯಾವುದು ಗೊತ್ತಾ.?

Posted on August 13, 2022 By Kannada Trend News No Comments on ದರ್ಶನ್ ಮತ್ತು ಸುದೀಪ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾ ಯಾವುದು ಗೊತ್ತಾ.?

ಕಿಚ್ಚ ಸುದೀಪ್ ಮತ್ರು ದರ್ಶನ್ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು ಸ್ನೇಹಿತರು ಅಂದರೆ ಹೀಗಿರಬೇಕು ಅಂತ ಚಿತ್ರರಂಗದವರು ಮಾತನಾಡಿಕೊಳ್ಳುತ್ತಿದ್ದರು. ಒಂದು ಕಾಲಘಟ್ಟದಲ್ಲಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರನ್ನು ಸ್ನೇಹಕ್ಕೆ ಉದಾಹರಣೆಯನ್ನಾಗಿ ನೀಡುತ್ತಿದ್ದರು. ಅದೇ ರೀತಿಯಾಗಿ 2000ನೇ ಇಸ್ವಿಯ ಕಾಲಘಟ್ಟದಲ್ಲಿ ಸ್ನೇಹಿತರು ಅಂದರೆ ಸುದೀಪ್ ಮತ್ತು ದರ್ಶನ್ ಅವರ ಮಾದರಿಯಲ್ಲಿ ಇರಬೇಕು ಅಂತ ಗಾಂಧಿನಗರದವರು ಮಾತನಾಡಿಕೊಳ್ಳುತ್ತಿದ್ದರು. ಇಷ್ಟು ಅಚ್ಚುಕಟ್ಟಾಗಿ ಇದ್ದಂತಹ ಸ್ನೇಹ ಸಂಬಂಧದಲ್ಲಿ ಅದ್ಯಾರೋ ಹುಳಿ ಹಿಂಡಿದರು ಏನೋ ಗೊತ್ತಿಲ್ಲ ಈ ಬಾಂಧವ್ಯ ನಂಟು ಎಂಬುವುದು ಹೆಚ್ಚು ಕಾಲ ಉಳಿಯಲಿಲ್ಲ. ಸದ್ಯಕ್ಕೆ ಕಿಚ್ಚ ಸುದೀಪ್ ಮತ್ತು ದರ್ಶನ್ ಇಬ್ಬರೂ ಕೂಡ ಬೇರೆಯಾಗಿರುವ ವಿಚಾರ ನಿಮ್ಮೆಲ್ಲರಿಗೂ ಕೂಡ ತಿಳಿದೇ ಇದೆ ಆದರೂ ಕೂಡ ಒಬ್ಬರ ಚಿತ್ರಕ್ಕೆ ಮತ್ತೊಬ್ಬರ ಸಪೋರ್ಟ್ ಮಾಡುತ್ತಾರೆ.

ವೈ ಮನಸು ಎಂಬುದು ಮನಸ್ಸಿನಲ್ಲಿ ಇದೆಯ ಹೊರತು ವೃತ್ತಿ ಜೀವನದಲ್ಲಿ ಈ ಇಬ್ಬರು ನಟರು ಕೂಡ ಹೊಂದಿಲ್ಲ ಈ ಕಾರಣಕ್ಕಾಗಿ ಕುರುಕ್ಷೇತ್ರ ಸಿನಿಮಾಗೆ ಕಿಚ್ಚ ಸುದೀಪ್ ಅವರು ಶುಭಾಶಯ ಸಲ್ಲಿಸಿದರು ಅದೇ ರೀತಿ ಪೈಲ್ವಾನ್ ಸಿನಿಮಾಗಳು ಕೂಡ ದರ್ಶನ್ ಅವರ ಶುಭಾಶಯ ಸಲ್ಲಿಸಿದರು. ಒಬ್ಬರನ್ನೊಬ್ಬರು ಮಾತನಾಡದೆ ಇದ್ದರೂ ಕೂಡ ಇಬ್ಬರ ಸಿನಿಮಾಗೆ ಶುಭವನ್ನು ಹಾರೈಸಿದನ್ನು ನೋಡಿದಂತಹ ಅಭಿಮಾನಿಗಳು ಆದಷ್ಟು ಶೀಘ್ರ ಇವರಿಬ್ಬರು ಒಂದಾಗಲಿ ಎಂದು ಮಾತನಾಡಿಕೊಳ್ಳುತ್ತಿದ್ದರು. ಇದೆಲ್ಲ ಒಂದು ವಿಚಾರವಾದರೆ ಈಗ ಮತ್ತೊಂದು ರೋಚಕ ಸುದ್ದಿ ಎಂದು ಹೊರ ಬಂದಿದೆ ಹೌದು ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಈಗ ಒಬ್ಬ ಸ್ಟಾರ್ ನಟರ ಸಿನಿಮಾ ಬಿಡುಗಡೆಯಾಗಬೇಕಾದರೆ ಮತ್ತೊಬ್ಬ ಸ್ಟಾರ್ ನಟ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಹಿಂದೆಟು ಹಾಕುತ್ತಾನೆ, ಇದಕ್ಕೆ ಮುಖ್ಯ ಕಾರಣ ಅಭಿಮಾನಿಗಳ ಬಳಗ ಯಾರಿಗೆ ಎಷ್ಟು ಇದೆ ಎಂಬುದನ್ನು ಲೆಕ್ಕಾಚಾರ ಹಾಕುತ್ತಾರೆ. ಈ ಕಾರಣಕ್ಕಾಗಿ ಸ್ಟಾರ್ ನಟರ ಸಿನಿಮಾವನ್ನು ಒಟ್ಟಿಗೆ ಒಂದೇ ದಿನ ಬಿಡುಗಡೆ ಮಾಡುವುದಿಲ್ಲ.

ಏಕೆಂದರೆ ಒಬ್ಬ ಸ್ಟಾರ್ ಗೆದ್ದರೆ ಮತ್ತೊಬ್ಬ ಸ್ಟಾರ್ ಅಭಿಮಾನಿಗಳಿಗೆ ಬೇಸರವಾಗುತ್ತದೆ ಸಿನಿಮಾಗೂ ನಷ್ಟ ಆಗುತ್ತದೆ ಎಂಬ ಕಾರಣದಿಂದ. ಇತ್ತೀಚಿನ ದಿನದಲ್ಲಿ ಅದರಲ್ಲಿಯೂ ಕನ್ನಡ ಸಿನಿಮಾಗಳಿಗೆ ಸಂಬಂಧಪಟ್ಟ ಹಾಗೆ ದೊಡ್ಡ ಸ್ಟಾರ್ ನಟರ ಸಿನಿಮಾವನ್ನು ಏಕಕಾಲಕ್ಕೆ ಬಿಡುಗಡೆ ಮಾಡುವುದಿಲ್ಲ. ಆದರೆ ಹಿಂದಿನ ಕಾಲದಲ್ಲಿ ಈ ರೀತಿಯಾದಂತಹ ಯಾವ ನಿಯಮ ಕೂಡ ಇರಲಿಲ್ಲ ಯಾವ ಸ್ಟಾರ್ ನಟ ಆದರೂ ಸರಿಯ ಸಾಮಾನ್ಯ ನಟ ಆದರೂ ಸರಿ ಒಂದೇ ದಿನಕ್ಕೆ ಸಿನಿಮಾ ಬಿಡುಗಡೆ ಮಾಡುತ್ತಿದ್ದರು. ಆ ಪೈಕಿ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿನಯದ ಸಿನಿಮಾವನ್ನು ಒಂದೇ ದಿನ ಬಿಡುಗಡೆ ಮಾಡಿದ್ದರು. ಹೌದು ದರ್ಶನ್ ಅವರು ಅಭಿನಯಿಸಿದಂತಹ ಸುಂಟರಗಾಳಿ ಹಾಗೂ ಕಿಚ್ಚ ಸುದೀಪ್ ಅವರು ಅಭಿನಯಿಸಿದಂತಹ ಮೈ ಆಟೋಗ್ರಾಫ್ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು

ಈ ಎರಡು ಸಿನಿಮಾಗಳಲ್ಲಿ ಗೆದ್ದ ಸಿನಿಮಾ ಯಾವುದು ಸೋತ ಸಿನಿಮಾ ಯಾವುದು ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲ ಸಾಕಷ್ಟ ಅಭಿಮಾನಿಗಳಿಗೆ ಇತ್ತು. ಆದರೆ ದರ್ಶನ್ ಅವರ ಸುಂಟರಗಾಳಿ ಸಿನಿಮಾ ಬಿಡುಗಡೆಯಾದ ನಂತರ ದರ್ಶನ್ ಚಿಂತೆ ಮಾಡುವುದಿಲ್ಲ ಏಕೆಂದರೆ ಇದಾಗಲೇ ದರ್ಶನವರು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದರು. ಅಷ್ಟೇ ಅಲ್ಲದೆ ಆ ಕಾಲದಲ್ಲಿಯೇ ಪಾನ್ ಫಾಲ್ಲೋರ್ಸ್ ಗಿಟ್ಟಿಸಿಕೊಂಡು ಸ್ಯಾಂಡಲ್ವುಡ್ ನಲ್ಲಿ ಆಳುತ್ತಿದ್ದಂತಹ ನಟನಾಗಿದ್ದರು ಜೊತೆಗೆ ಸುಂಟರಗಾಳಿ ಸಿನಿಮಾ 50 ದಿನ ಯಶಸ್ವಿ ಪೂರ್ಣವಾಗಿ 100ನೇ ದಿನದತ್ತ ಕಾಲು ಹಾಕಿತ್ತು. ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಎಷ್ಟೇ ಶ್ರಮವಹಿಸಿ ಕೆಲಸ ಮಾಡಿದರು ಕೂಡ ಒಳ್ಳೆಯ ಸಿನಿಮಾ ನೀಡಿದರು ಕೂಡ ಅಂದಿನ ಕಾಲದಲ್ಲಿ ಕಿಚ್ಚ ಸುದೀಪ್ ಅವರ ಸಿನಿಮಾ ಹೆಚ್ಚು ಸದ್ದು ಮಾಡುತ್ತಿರಲಿಲ್ಲ ಹಾಗಾಗಿ ಕಿಚ್ಚ ಸುದೀಪ್ ಒಂದು ನಿರ್ಧಾರಕ್ಕೆ ಬರುತ್ತಾರೆ.

ನಾನೇ ಒಂದು ಸಿನಿಮಾವನ್ನು ನಿರ್ದೇಶನ ಮಾಡಬೇಕು ಅಂತ ಈ ಕಾರಣಕ್ಕಾಗಿ ಕಿಚ್ಚ ಸುದೀಪ್ ಅವರು ಮೈ ಆಟೋಗ್ರಾಫ್ ಎಂಬ ಸಿನಿಮಾವನ್ನು ಸ್ವತಃ ತಾವೇ ನಿರ್ದೇಶನ ಮಾಡಿ ಅದರಲ್ಲಿ ತಾವೇ ನಟನಾಗಿ ಅಭಿನಯಿಸುತ್ತಾರೆ. ಬಾಲ್ಯ ಯೌವನ ವೃತ್ತಿ ಜೀವನ ಹೀಗೆ ಹಲವಾರು ಕಥೆಯನ್ನು ಒಳಗೊಂಡಿದ್ದಂತಹ ಮೈ ಆಟೋಗ್ರಾಫ್ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಗಮನ ಸೆಳೆಯುತ್ತದೆ. ಸಾಲು ಸಾಲು ಸಿನಿಮ ಗಳಿಂದ ಸೋತಂತಹ ಸುದೀಪ್ ಅವರಿಗೆ ಇದೊಂದು ಸಿನಿಮಾ ಮೈಲುಗಲ್ಲು ಆಗುತ್ತದೆ. ಅಷ್ಟೇ ಅಲ್ಲದೆ ನಟನಾಗಿ ನಿರ್ದೇಶಕನಾಗಿ ಅಭಿನಯಿಸಿದ ಸುದೀಪ್ ಅವರ ಈ ಸಿನಿಮಾ ದೊಡ್ಡಮಟ್ಟದಲ್ಲಿಯೇ ಹಿಟ್ ಆಗುತ್ತದೆ ಅಷ್ಟೇ ಅಲ್ಲದೆ ಈ ಸಿನಿಮಾಗೆ ಹೂಡಿಕೆ ಮಾಡಿದಂತಹ ಬಂಡವಾಳ ದುಪ್ಪಟ್ಟು ದೊರೆಯುತ್ತದೆ‌. ನಿಮ್ಮ ಪ್ರಕಾರ ಈ ಎರಡು ಸಿನಿಮಾದಲ್ಲಿ ಯಾವ ಸಿನಿಮಾ ಉತ್ತಮ.? ಸುಂಟರಗಾಳಿನ ಅಥವಾ ಮೈ ಆಟೋಗ್ರಾಫ್ ಆ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

Entertainment Tags:Challenging star darshan, Kiccha sudeep, My Autograph, Suntaragali
WhatsApp Group Join Now
Telegram Group Join Now

Post navigation

Previous Post: ಪ್ರೀತಿಯ ನಾಯಿಗೆ ಸಂಗೀತ ಕಲಿಸಿಕೊಟ್ಟ ನವರಸ ನಾಯಕ ಜಗ್ಗೇಶ್ ಈ ಫನ್ನಿ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ.
Next Post: ಇವತ್ತು ಓಪನ್ ಆಗಿ ಮಾತಾಡ್ತಿನಿ ನಟ ಯಶ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore