ಈ ಭೂಮಿಯ ಮೇಲೆ ಏಳು ನೂರು ಕೋಟಿಗಿಂತಲೂ ಹೆಚ್ಚು ಮನುಷ್ಯರು ಇದ್ದರೂ ಕೂಡ ಇಲ್ಲಿ ಎಲ್ಲರೂ ಅವರ ಜೀವನ ಮಾಡಿದ ಮೌಲ್ಯವನ್ನು ಅರಿತಿಲ್ಲ ಎನ್ನುವುದು ಅಷ್ಟೇ ಸತ್ಯ. ಈ ಜೀವ ಹಾಗೂ ಜೀವನ ಎನ್ನುವುದು ಎಷ್ಟು ಮುಖ್ಯವಾಗಿದೆ ಎಂದರೆ ಇದನ್ನು ಪುರಾಣದ ಪ್ರಕಾರ ಹೇಳುವುದಾದರೆ 84 ಲಕ್ಷ ಜೀವ ರಾಶಿಗಳಾಗಿ ನಾವು ಜನ್ಮ ತಾಳಿದ ಮೇಲೆ ಮಾತ್ರವೇ ನಮಗೆ ಮನುಷ್ಯನಾಗಿ ಹುಟ್ಟುವ ಭಾಗ್ಯ ದೊರೆತಿದೆ.
ಹಾಗಂದ ಮೇಲೆ ನಾವು ಎಷ್ಟು ಶ್ರೇಷ್ಠರು ಎನ್ನುವುದನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ಈಗಷ್ಟೇ ಹುಟ್ಟುವ ಮಗುವ ಮುಖವನ್ನು ನೋಡಿ ಎಷ್ಟು ನಿರಾಳತೆಯಿಂದ ಈ ಪ್ರಪಂಚವನ್ನು ಕಾಣುತ್ತದೆ, ಎಲ್ಲ ಮಕ್ಕಳು ಕೂಡ ಹೀಗೆ ಹುಟ್ಟುತ್ತಾರೆ. ಆದರೆ ಬೆಳೆಯುತ್ತಾ ಹೋದಂತೆ ಅವರ ಬದುಕಿನಲ್ಲಿ ಆಗುವ ಘಟನೆಗಳು ಅವರ ಮೇಲೆ ಬಿಡುವ ಒತ್ತಡಗಳು ಅವರು ಅನುಭವಿಸಿದ ಸಂಧಿಗ್ಬದ್ಧತೆಗಳು ಅವರ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ.
ಹೀಗಾಗಿ ಬದುಕಿನ ಇಂತಹ ಪರಿಸ್ಥಿತಿಗಳ ನಡುವೆ ಸಿಕ್ಕಿ, ಕೆಲವೊಮ್ಮೆ ಈ ಜೀವನವೇ ಬೇಡ ಎನ್ನುವಷ್ಟು ಬದುಕು ಬೇಸರವಾಗಿ ಕೆ’ಟ್ಟ ಆಲೋಚನೆಗಳು ಬರುತ್ತವೆ ಅಥವಾ ನಮಗೆ ನಾವೇ ಶಿ’ಕ್ಷೆ ಕೊಡುತ ಯಾವಾಗಲೂ ದುಃಖದಲ್ಲಿ ಇರುತ್ತೇವೆ. ಆದರೆ ಈ ರೀತಿ ಬದುಕುವುದಕ್ಕಾಗಿ ನಾವು ಹುಟ್ಟಿಲ್ಲ ಅದರಲ್ಲೂ ಕೆಲವೊಮ್ಮೆ ಹತ್ತು ವರ್ಷಗಳ ಹಿಂದೆ ಐದು ವರ್ಷಗಳ ಹಿಂದೆ ಯಾರೋ ಒಬ್ಬ ವ್ಯಕ್ತಿ ಹೇಳಿದ ಒಂದು ಮಾತು ಅಥವಾ ಒಂದು ಘಟನೆ ಸುತ್ತ ಸುತ್ತುತ್ತಾ ಇಷ್ಟು ದಿನಗಳಾದರೂ ನಾವು ಗುಣಪಡಿಸಿಕೊಳ್ಳಲಾಗದ ನೋವನ್ನು ಮನಸ್ಸಿನೊಳಗೆ ಮಾಡಿಕೊಂಡಿರುತ್ತೇವೆ.
ಇದು ಅಕ್ಷರಶಃ ತಪ್ಪು, ದೇಹ ಆರೋಗ್ಯ ತಪ್ಪಿದಾಗ ಹೇಗೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತೇವೋ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಪ್ರತಿನಿತ್ಯ ವ್ಯಾಯಾಮ ಸ್ನಾನ ಉತ್ತಮ ಆಹಾರ ಸೇವನೆಯಿಂದ ಹಿಡಿದು ಮನೆ ಸ್ವಚ್ಛ ಮಾಡುವವರೆಗೆ ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಹಾಗೆಯೇ ಮನಸ್ಸು ಕೆಟ್ಟಾಗ ಕೂಡ ಮನಸ್ಸಿನ ಆರೋಗ್ಯಕ್ಕೆ ಗಮನ ಕೊಡಬೇಕು ಅದಕ್ಕಾಗಿ ಮೊದಲು ಮನಸ್ಸನ್ನು ಕ್ಲೀನ್ ಮಾಡಬೇಕು.
ಎಂದೋ ಆದ ಘಟನೆಗೆ ಇನ್ನು ಕೊರಗುವುದರಲ್ಲಿ ಅರ್ಥವಿಲ್ಲ. ಆಗಿದ್ದು ಆಗಿ ಹೋಗಿದೆ ಅದು ಅವರ ತಪ್ಪಾಗಿದ್ದರೆ ನೀವು ಕ್ಷಮಿಸಿ ಮುನ್ನಡೆಯುವುದೇ ಉತ್ತಮ, ಒಂದು ವೇಳೆ ನಿಮ್ಮ ತಪ್ಪಾಗಿದ್ದರೆ ಅದಕ್ಕೆ ಪಶ್ಚಾತಾಪಟ್ಟಿದ್ದು ಸಾಕು ಇನ್ನು ಮುಂದೆ ಆ ರೀತಿ ಮಾಡುವುದಿಲ್ಲ ಎಂದು ದೃಢ ಮನಸ್ಸು ಮಾಡಿಕೊಂಡು ಮುಂದೆ ಸಾಗಿ, ನಿಮ್ಮಿಂದಾದ ಅನಾಹುತವನ್ನು ಸರಿಪಡಿಸಿರಿ.
ಹೆಚ್ಚಿನ ಸಮಯದಲ್ಲಿ ನಾವು ಬೇರೆಯವರು ನಮಗೆ ಮಾಡಿದ ಮೋ’ಸ ಅ’ನ್ಯಾ’ಯ ಅಥವಾ ಕೊಟ್ಟ ನೋ’ವಿನಿಂದಲೇ ಈ ರೀತಿ ಮಾನಸಿಕವಾಗಿ ಕುಗ್ಗಿ ಹೋಗಿ ಕೊರಗುತ್ತಿರುತ್ತೇವೆ ಇದನ್ನು ಮಾಡಿದವರೇ ಆರಾಮಾಗಿರುತ್ತಾನೆ. ಅದರಿಂದ ಮೊದಲು ಆಚೆ ಬನ್ನಿ ಅವರೇ ಪ್ರಪಂಚವಲ್ಲ, ಅವರನ್ನು ಹೊರತುಪಡಿಸಿ ಇಡೀ ಪ್ರಪಂಚವನ್ನು ನೋಡಿ ಎಷ್ಟು ಸುಂದರವಾಗಿದೆ.
ಹೇಗೆ ಒಂದು ಜೋಕಿಗೆ ಪದೇಪದೇ ನಾವು ನಗುವುದಿಲ್ಲವೋ ಅದೇ ರೀತಿ ಒಂದೇ ಒಂದು ಕೆಟ್ಟ ಘಟನೆಗೆ ಪದೇಪದೇ ಕಣ್ಣೀರು ಹಾಕುವುದರಲ್ಲೂ ಅರ್ಥವಿಲ್ಲ ನಾಳೆ ನಾವು ಇರುತ್ತೇವೆ ಎನ್ನುವ ಯಾವ ಭರವಸೆಯೂ ಇಲ್ಲ ನಾಳೆ ಎನ್ನುವುದು ಇದೆಯೋ ಇಲ್ಲವೋ ಎನ್ನುವ ಖಚಿತತೆ ಇಲ್ಲದಿದ್ದಾಗ ಇವತ್ತಿನ ದಿನವನ್ನು ಉತ್ತಮವಾಗಿ ಕಳೆಯುವುದು ಮುಖ್ಯ.
ಈ ರೀತಿ ದುಃ’ಖ ಪಡುತ್ತಾ ಜೀವನ ಮುಗಿಸುವುದಕ್ಕಾಗಿ ನಾವು ಹುಟ್ಟಿಲ್ಲ. ಹಾಗಾಗಿ ಇಂದೇ ದೊಡ್ಡ ಮನಸ್ಸು ಮಾಡಿಕೊಂಡು ಬದಲಾಗಿ ಉಳಿದಿರುವ ಪ್ರತಿ ದಿನವನ್ನು ಪ್ರತಿಕ್ಷಣವನ್ನು ನಿಮಗೆ ಸಂತೋಷವಾಗುವ ರೀತಿ ಮತ್ತು ಆ ಹಾದಿಯಲ್ಲಿ ಯಾರಿಗೂ ತೊಂದರೆ ಆಗದ ರೀತಿ ಬದುಕಿ. ನಿಮ್ಮ ದುಃಖವನ್ನು ಆತ್ಮೀಯರ ಬಳಿ ಹೇಳಿಕೊಳ್ಳಿ ಅಥವಾ ನಿಮಗೆ ನಂಬಿಕೆ ಇರುವವರ ಬಳಿ ಹೇಳಿಕೊಳ್ಳಿ, ಯಾರೊಂದಿಗೂ ಹೇಳಿಕೊಳ್ಳಲಾಗದ ಕ’ಷ್ಟಗಳು ಯಾರಿಗೂ ಇರುವುದಿಲ್ಲ.
ಎಲ್ಲವೂ ಪ್ರಪಂಚದಲ್ಲಿ ನಡೆದಿರುವುದೇ ಆಗಲಿಲ್ಲ ಎಂದರೆ ಅದನ್ನೆಲ್ಲ ಬರೆದು ಸುಟ್ಟುಬಿಡಿ. ಆಮನಸ್ಸು ಹೀಗೆ ಕುಗ್ಗಿದಾಗಲೆಲ್ಲಾ ನಿಮ್ಮ ಆಸಕ್ತಿಕರ ವಿಷಯಗಳಲ್ಲಿ ತೊಡಗಿಕೊಳ್ಳಿ. ವಾಕಿಂಗ್ ಮಾಡಿ, ಶಾಪಿಂಗ್ ಮಾಡಿ, ಸಂಗೀತ ಕೇಳಿ, ಸಿನಿಮಾ ನೋಡಿ, ಆರಾಮಾಗಿ ನಿದ್ದೆ ಮಾಡಿ, ಫ್ರೆಂಡ್ಸ್ ಜೊತೆ ಔಟಿಂಗ್ ಹೋಗಿ ಹೀಗೆ ಯಾವುದನ್ನೇ ಮಾಡಿದರು ಪೂರ್ತಿ ಮನಸ್ಸಿಟ್ಟು ಮಾಡಿ.
ನೀವು ಎಲ್ಲೇ ಹೋದರು ಮತ್ತೆ ಆ ಜಾಗದಲ್ಲಿ ಇದ್ದು ಅದೇ ಕೆ’ಟ್ಟ ಘಟನೆ ಬಗ್ಗೆ ಯೋಚನೆ ಮಾಡಿದರೆ ಏನು ಪ್ರಯೋಜನವಿಲ್ಲ. ನೆಮ್ಮದಿ ಎನ್ನುವುದು ಜಗತ್ತಿನ ಅತಿ ದುಬಾರಿ ವಸ್ತು ಆದರೆ ಅದನ್ನು ಕೊಂಡುಕೊಳ್ಳದೆ ನಿಮ್ಮೊಳಗೆ ನೀವೇ ಕಂಡುಕೊಳ್ಳಬೇಕು.