Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಮಲ್ ಹಾಸನ್ ಅವರನ್ನು ನೋಡಬೇಕು ಎಂದು ಸ್ಟುಡಿಯೋಗೆ ಬಂದು ಬಾಗಿಲ ಬಳಿಯೇ ನಿಂತಿದ್ದ ಡಾ.ರಾಜ್ ಕುಮಾರ್, ತನಗಾಗಿ ಕಾದ ಅಣ್ಣಾವ್ರಿಗೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತಾ.?

Posted on February 25, 2023 By Kannada Trend News No Comments on ಕಮಲ್ ಹಾಸನ್ ಅವರನ್ನು ನೋಡಬೇಕು ಎಂದು ಸ್ಟುಡಿಯೋಗೆ ಬಂದು ಬಾಗಿಲ ಬಳಿಯೇ ನಿಂತಿದ್ದ ಡಾ.ರಾಜ್ ಕುಮಾರ್, ತನಗಾಗಿ ಕಾದ ಅಣ್ಣಾವ್ರಿಗೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತಾ.?

 

ಒಮ್ಮೆ ಡಾಕ್ಟರ್ ರಾಜಕುಮಾರ್ ಅವರು ಕಮಲ್ ಹಾಸನ್ ಅವರನ್ನು ನೋಡಲು ಬಂದು ಸ್ಟುಡಿಯೋ ಬಾಗಿಲ ಬಳಿಯೇ ನೋಡುತ್ತಾ ನಿಂತು ಬಿಟ್ಟಿದ್ದರಂತೆ. ಕರ್ನಾಟಕ ಕಂಡ ಮೇರುನಟ, ನಟ ಶ್ರೇಷ್ಠ ಅಣ್ಣಾವ್ರು ಆ ರೀತಿ ಯಾಕೆ ಕಾಯಬೇಕಿತ್ತು ಎಂದು ಎಲ್ಲರಿಗೂ ಅನಿಸಬಹುದು. ಆದರೆ ಅವರು ತುಂಬಿದ ಕೊಡದಂತಿದ್ದ ವ್ಯಕ್ತಿತ್ವದವರು ಅಷ್ಟು ದೊಡ್ಡ ನಟನಾಗಿದ್ದರೂ ಕೂಡ ಅವರಿಗೆ ಕಿಂಚಿತ್ತು ಅಹಂ ಇರಲಿಲ್ಲ, ತೋರಿಕೆ ಅವರಿಗೆ ಗೊತ್ತೇ ಇರಲಿಲ್ಲ.

ಯಾರ ಬಗ್ಗೆ ಯಾವ ಗುಣ ಇಷ್ಟ ಆದರೂ ಎದುರಿಗೆ ತಕ್ಷಣ ಹೇಳು ಬಿಡುತ್ತಿದ್ದರು, ಹಾಗೆ ಇಷ್ಟವಾಗದ ಗುಣದ ಬಗ್ಗೆ ಕೂಡ ಮುಕ್ತವಾಗಿ ಮಾತನಾಡುತ್ತಿದ್ದರು. ಅಣ್ಣಾವ್ರು ಆಗಷ್ಟೇ ಮೊದಲ ಸಿನಿಮಾ ಮಾಡಿ ಗೆದ್ದ ಹೀರೋಗಳನ್ನು ಕೂಡ ಮನೆಗೆ ಕರೆದು ಪ್ರಶಂಸಿಸುತ್ತಿದ್ದರು. ಅಣ್ಣಾವ್ರು ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾ ಮಾಡುತ್ತಿರಲಿಲ್ಲ ಎಂದು ಎಲ್ಲರಿಗೂ ಗೊತ್ತು, ಆದರೆ ಅವರಿಗೆ ಬೇರೆ ಭಾಷೆ ಸಿನಿಮಾಗಳನ್ನು ನೋಡುವ ಅಭ್ಯಾಸ ಇತ್ತು.

ಹೀಗೆ ನೋಡಿದ ಸಿನಿಮಾಗಳಲ್ಲಿ ಹೀರೋ ಮತ್ತು ಹೀರೋಯಿನ್ ನಟನೆ ಇಷ್ಟ ಆದರೆ ಅವರನ್ನು ಕೂಡ ಮುಕ್ತ ಕಂಠದಿಂದ, ಸ್ವಚ್ಛ ಮನಸ್ಸಿನಿಂದ ಅಭಿನಂದಿಸುತ್ತಿದ್ದರು. ಅವರಿಗೆ ಎಲ್ಲಾ ಇಂಡಸ್ಟ್ರಿಯಲ್ಲೂ ಕೂಡ ಸ್ನೇಹಿತರಿದ್ದರು. ಹಿರಿಯ ನಟಿ ಲಕ್ಷ್ಮಿ, ಕಮಲ್ ಹಾಸನ್ ಮುಂತಾದವರು ಈ ರೀತಿ ಅಣ್ಣಾವ್ರಿಂದ ಪ್ರಶಸ್ತಿಗೆ ಒಳಗಾಗಿದ್ದಾರೆ. ಇವರಂತೆ ಹತ್ತಾರು ಕಲಾವಿದರು ಅಣ್ಣಾವ್ರಿಂದ ಹೊಗಳಿಸಿಕೊಂಡಿದ್ದಾರೆ. ರಾಜಕುಮಾರ್ ಅವರ ಹಿರಿಯ ಮಗ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಅವರ ಅತಿ ದೊಡ್ಡ ಫ್ಯಾನ್, ಅವರು ಮಾತ್ರ ಅಲ್ಲದೆ ಅಣ್ಣಾವ್ರು ಸಹ ಕಮಲ್ ಹಾಸನ್ ಅವರ ಸಹಜ ಅಭಿನಯ ನೋಡಿ ಮನಸೋತಿದ್ದರು.

ಯಾವುದೇ ಪಾತ್ರ ಒಪ್ಪಿಕೊಂಡರು ಕೂಡ ಅದಕ್ಕೆ ತಲ್ಲೀನನಾಗಿ ಅಭಿನಯಿಸುತ್ತಿದ್ದ ಅವರ ಟ್ಯಾಲೆಂಟ್ ಗೆ ಮನಸೋತಿದ್ದರು. ಹೀಗಾಗಿ ಒಮ್ಮೆ ಅವರನ್ನು ನೋಡಲು ಸ್ಟುಡಿಯೋಗೆ ಹೋಗಿ ಕಾದು ನಿಂತಿದ್ದ ಪ್ರಸಂಗವೂ ಇದೆ.1982ರಲ್ಲಿ ಕಮಲ್ ಹಾಸನ್ ಅವರ ಅಭಿನಯದ ಮೂಂದ್ರಾಮ್ ಪಿರಾಯ್ ಎನ್ನುವ ಸಿನಿಮಾ ತೆರೆ ಕಾಣುತ್ತದೆ. ಆ ಸಿನಿಮಾ ತುಂಬಾ ದೊಡ್ಡ ಹಿಟ್ ಕೂಡ ಆಗಿ ಭಾರತದಾದ್ಯಂತ ಹೆಸರು ಪಡೆಯುತ್ತದೆ.

ಅಣ್ಣಾವ್ರು ಸಹ ಈ ಸಿನಿಮಾವನ್ನು ನೋಡಿರುತ್ತಾರೆ ಇದು ಮಾತ್ರ ಅಲ್ಲದೆ ಅದುವರೆಗಿನ ಪ್ರತಿಯೊಂದು ಕಮಲ್ ಹಾಸನ್ ಅವರ ಚಿತ್ರವನ್ನು ಕೂಡ ನೋಡಿರುತ್ತಾರೆ. ಈ ಚಿತ್ರದ ನಂತರ ಕಮಲ್ ಹಾಸನ್ ಮತ್ತೊಂದು ಸಿನಿಮಾದಲ್ಲಿ ತೊಡಗಿಕೊಂಡಿರುತ್ತಾರೆ. ಆ ಸಿನಿಮಾದ ಶೂಟಿಂಗ್ ಎಬಿಎಂ ಸ್ಟುಡಿಯೋದಲ್ಲಿ ನಡೆಯುತ್ತಿರುತ್ತದೆ. ಅದೇ ಸ್ಟುಡಿಯೋ ಅಲ್ಲಿ ಅಣ್ಣಾವ್ರ ಸಿನಿಮಾ ಕೂಡ ಚಿತ್ರೀಕರಣವಾಗುತ್ತಿರುತ್ತದೆ. ಕಮಲ್ ಹಾಸನ್ ಕೂಡ ಸಿನಿಮಾ ಕಾರಣವಾಗಿ ಬಂದಿದ್ದಾರೆ ಎನ್ನುವ ಕಾರಣ ತಿಳಿದ ತಕ್ಷಣವೇ ತಮ್ಮ ಸಿನಿಮಾದ ತಮ್ಮ ಭಾಗದ ಅಭಿನಯ ಮುಗಿದ ತಕ್ಷಣ ಕಮಲ್ ಹಾಸನ್ ಅವರನ್ನು ನೋಡಲು ಅವರಿದ್ದಲಿಗೆ ಹೋಗುತ್ತಾರೆ.

ಹೋದವರು ಬಾಗಿಲ ಬಳಿಗೆ ನಿಂತು ಬಿಡುತ್ತಾರೆ ಅದಕ್ಕೆ ಕಾರಣ ಇಷ್ಟೇ ನಾನು ಒಳಗೆ ಹೋದರೆ ಶೂಟಿಂಗ್ ನಿಲ್ಲಿಸ್ಲಿ ನನ್ನನ್ನು ಉಪಚರಿಸುತ್ತಾರೆ ಅಥವಾ ಶೂಟಿಂಗ್ ಮಾಡಿದರೂ ಅವರ ಸಹಜ ಅಭಿನಯ ಬರುವುದಿಲ್ಲ ಹಾಗಾಗಿ ನಾನಂದುಕೊಂಡಿದ್ದನ್ನು ನೋಡುವುದಕ್ಕೆ ಆಗುವುದಿಲ್ಲ ಎಂದು ನಿರ್ಧಾರ ಮಾಡಿ ಅಲ್ಲೇ ಕಮಲ್ ಹಾಸನ್ ಅಭಿನಯ ನೋಡಿ ಆನಂದಿಸುತ್ತಾ ನಿಂತಿರುತ್ತಾರೆ. ಅಷ್ಟರಲ್ಲಿ ಒಮ್ಮೆ ಕಮಲ್ ಹಾಸನ್ ಅವರು ಬಾಗಿಲ ಬಳಿ ನೋಡಿ ಒಮ್ಮೆಲೆ ಶಾ’ಕ್ ಆಗಿ ಬಿಡುತ್ತಾರೆ

ಅಭಿಜಾತ ಕಲಾವಿದರಾದ ಅಣ್ಣಾವ್ರು ಹೀಗೇಕೆ ನಿಂತಿದ್ದಾರೆ ಎಂದು ನಂತರ ಅವರು ತಮ್ಮ ಶೂಟಿಂಗ್ ನೋಡೋದಕ್ಕಾಗಿ ಆ ರೀತಿ ಕಾಯುತ್ತಿದ್ದರು ಎಂದು ತಿಳಿದ ಮೇಲಂತೂ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲವಂತೆ, ಜೊತೆಗೆ ಬಾಗಿಲ ಬಳಿಯೇ ನಿಂತುಬಿಟ್ಟರಲ್ಲ ಎಂದು ಬೇಸರ ಕೂಡ ಆಯಿತಂತೆ. ಇದೇ ವಿಷಯವನ್ನು ಜೂಲಿ ಲಕ್ಷ್ಮಿ ಅವರ ಬಳಿ ಕೇಳಿಕೊಂಡಾಗ ಲಕ್ಷ್ಮಿ ಅವರು ಸಹ ಅಣ್ಣಾವ್ರ ಗುಣದ ಬಗ್ಗೆ ತಮಗಾದ ಅನುಭವವನ್ನು ಹೇಳಿಕೊಂಡಿದ್ದರಂತೆ. ಈಗ ಆ ಮಾತುಗಳನ್ನು ಸ್ವತಃ ಕಮಲ್ ಹಾಸನ್ ಅವರೇ ಸಂದರ್ಶನವೊಂದರಲ್ಲಿ ಮತ್ತೊಮ್ಮೆ ಹೇಳಿದ್ದಾರೆ.

Entertainment Tags:Dr Rajkumar, Kamal Hasan
WhatsApp Group Join Now
Telegram Group Join Now

Post navigation

Previous Post: ಕಬ್ಜಾ ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಎಷ್ಟು ಕೋಟಿ ಗೊತ್ತಾ.? ಇದರ ನಿಖರ ಅಂಕಿ ಅಂಶ ತಿಳಿದರೆ ಶಾ-ಕ್ ಆಗೋದು ಗ್ಯಾರಂಟಿ. ಭಾರತೀಯ ಇತಿಹಾಸದಲ್ಲೇ ಇದು ಮೊದಲು ಇಂಥ ಸಾಧನೆ.
Next Post: KCC ಕ್ರಿಕೇಟ್ ಲೀಗ್ ನಲ್ಲಿ ಕನ್ನಡ ನಟರೊಂದಿಗೆ ಕ್ರಿಕೇಟ್ ಆಡಲು ಬಂದಿರುವ ಕ್ರಿಸ್ ಗೇಲ್ & ಸುರೇಶ್ ರೈನಾ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore