ಡಿಂಪಲ್ ಕ್ವೀನ್ ರಚಿತಾ ರಾಮ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅದರಲ್ಲಿಯೂ ಕೂಡ ಪಡ್ಡೆ ಹುಡುಗರ ಹಾಟ್ ಫೇವರೆಟ್ ಹೀರೋಯಿನ್ ಅಂದರೆ ಅದು ರಚಿತಾ ರಾಮ್ ಅಂತಾನೆ ಹೇಳಬಹುದು. 2013ರಲ್ಲಿ ತೆರೆಕಂಡ ಬುಲ್ ಬುಲ್ ಎಂಬ ಸಿನಿಮಾದಲ್ಲಿ ದರ್ಶನ್ ಅವರ ಜೊತೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಇದಾದ ನಂತರ ಕನ್ನಡದಲ್ಲಿ ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಕನ್ನಡಸಿನಿ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದರೆ.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ದರ್ಶನ್, ಸುದೀಪ್, ಪುನೀತ್ ರಾಜಕುಮಾರ್, ಉಪೇಂದ್ರ, ದುನಿಯಾ ವಿಜಯ್, ಅಜಯ್ ರಾವ್, ಧ್ರುವ ಸರ್ಜಾ, ಡಾಲಿ ಧನಂಜಯ್, ಶ್ರೀ ಮುರುಳಿ ಸೇರಿದಂತೆ ಕನ್ನಡದ ಹಲವು ದಿಗ್ಗಜ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಡಾಲಿ ಧನಂಜಯ್ ಹಾಗೂ ರಚಿತಾರಾಮ್ ಅಭಿನಯದ ಮನ್ಸೂನ್ ರಾಗ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದು ಅಷ್ಟೇ ಅಲ್ಲದೆ 90ರ ದಶಕದಲ್ಲಿ ನಡೆಯುತ್ತಿದ್ದಂತಹ ಕಾಲಮಾನದ ಘಟ್ಟವನ್ನು ಆಧಾರವನ್ನಾಗಿ ಇಟ್ಟುಕೊಂಡು ರಚಿತಾ ರಾಮ್ ಅವರು ಇಲ್ಲಿ ನಟನೆ ಮಾಡಿದ್ದರು.
ರಚಿತಾ ರಾಮ್ ಅವರು ಈ ಸಿನಿಮಾದಲ್ಲಿ ಲೈಂ-ಗಿ-ಕ ಕಾರ್ಯಕರ್ತೆಯ ರೂಪದಲ್ಲಿ ಕಾಣಿಸಿಕೊಂಡಿದ್ದರು ಇವರ ಈ ಬೋಲ್ಡ್ ಮತ್ತು ಹಾಟ್ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ರಚಿತಾ ರಾಮ್ ಮತ್ತು ಡಾಲಿ ಧನಂಜಯ್ ಅಭಿನಯದ ಈ ಸಿನಿಮಾ ಒಳ್ಳೆಯ ಹೆಸರು ಕೊಟ್ಟಿತು. ಇನ್ನು ಈ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ದುನಿಯಾ ವಿಜಯ್ ಡಾಲಿ ಧನಂಜಯ್ ರಚಿತಾರಾಮ್ ಸುಹಾಸಿನಿ ಸೇರಿದಂತೆ ಚಿತ್ರತಂಡದ ಸಾಕಷ್ಟು ಜನ ನೆರದಿದ್ದರೂ.
ಇದೇ ಸಮಯದಲ್ಲಿ ವೇದಿಕೆಯ ಮೇಲೆ ನಿಂತಿದ್ದಂತಹ ದುನಿಯಾ ವಿಜಯ್ ಅವರು ರಚಿತಾರಾಮ್ ಅವರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಒಂದನ್ನು ಹೊರ ಹಾಕಿದ್ದಾರೆ ಹೌದು. ರಚಿತಾ ರಾಮ್ ಅವರು ಚಿತ್ರರಂಗಕ್ಕೆ ಬಂದು ಇನ್ನೇನು 9 ವರ್ಷಗಳೇ ಕಳೆದು ಹೋಗಿದೆ, ಆದರೂ ಕೂಡ ಅವರು ಮೊದಲಿನಿಂದಲೂ ಇಲಿಯವರೆಗೂ ಕೂಡ ಅಷ್ಟೇ ಬೇಡಿಕೆಯನ್ನು ಹಾಗೆ ಉಳಿಸಿಕೊಂಡಿದ್ದಾರೆ ಅಂದರೆ ಅದಕ್ಕೆ ಒಂದೇ ಒಂದು ಕಾರಣ ಅದು ರಚಿತಾ ರಾಮ್ ಅವರ ಮನಸ್ಸಿನಲ್ಲಿ ಯಾವುದೇ ಕಲ್ಮಶವಿಲ್ಲ ಅಷ್ಟೇ ಅಲ್ಲದೆ ರಚಿತಾ ಎದೆಯಲ್ಲಿ ಮೋಸ ಇಲ್ಲ. ಅದಕ್ಕೆ ಅವರು ಇನ್ನೂ ಚಿತ್ರರಂಗದಲ್ಲಿದ್ದಾರೆ’ ಎಂದು ಹೇಳಿದರು. ಅವರ ಕಣ್ಣುಗಳು ಪಳ ಪಳ ಅಂತ ಹೊಳೀತಾ ಇರುತ್ತೆ’ ಎಂದು ಹೇಳಿದ್ದಾರೆ.
ನಟ ದುನಿಯಾ ವಿಜಯ ಅವರ ಈ ಮಾತನ್ನು ಕೇಳುತ್ತಿದ್ದ ಹಾಗೆ ರಚಿತಾ ರಾಮ್ ಅವರು ಭಾವುಕರಾಗಿದ್ದಾರೆ ಅಷ್ಟೇ ಅಲ್ಲದೆ ವೇದಿಕೆಯ ಮೇಲೆ ಧನ್ಯವಾದಗಳು ಸಲ್ಲಿಸಿದ್ದಾರೆ. ಇನ್ನು ಮಾತನ್ನು ಮುಂದುವರಿಸಿದ ದುನಿಯಾ ವಿಜಯ ಅವರು ಸುಹಾಸಿನಿ ಅವರ ಬಗ್ಗೆ ಕೂಡ ಮಾತನಾಡಿದ್ದಾರೆ. ಹೌದು ಅದೇನೆಂದರೆ ಭಗವಂತ ಮತ್ತೆ ನನಗೆ ಜನ್ಮ ಕೊಟ್ರೆ ಸುಹಾಸಿನಿ ಮೇಡಂ ಜೊತೆ ವಿಷ್ಣು ಸರ್ ಬಂಧನ ಪಾತ್ರ ಮಾಡ್ತೀನಿ. ಸುಹಾಸಿನಿ ಮೇಡಂ ಜೊತೆ ಒಂದ್ ಫೋಟೋ ತಗೋಬೇಕು ಅಂತ ದುನಿಯಾ ವಿಜಯ್ ಹೇಳಿದರು.
ಇನ್ನು ನಟ ಧನಂಜಯ್ ಕೂಡ ಮಾತನಾಡಿ ಮಾನ್ಸೂನ್ ರಾಗ ತುಂಬಾ ನೆನಪುಗಳನ್ನ ಕೊಟ್ಟಿದೆ. ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಾರಿಯಾಗಿ ಹೇಳುವುದಾದರೆ ರಚಿತಾ ರಾಮ್ ಅವರು ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ ಅಂತ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.