Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಗರ್ಭಿಣಿ, ಬಾಣಂತಿ ಹಾಗೂ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಸುಲಭ ಹೆಲ್ತ್ ಟಿಪ್ಸ್ ಗಳು.!

Posted on November 25, 2023 By Kannada Trend News No Comments on ಗರ್ಭಿಣಿ, ಬಾಣಂತಿ ಹಾಗೂ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಸುಲಭ ಹೆಲ್ತ್ ಟಿಪ್ಸ್ ಗಳು.!

 

ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳ ಮುಟ್ಟು, ಗರ್ಭಿಣಿಯಾದ ಸಮಯ ಹಾಗೂ ಬಾಣಂತನ ಬಹಳ ಸೂಕ್ಷ್ಮವಾದ ದಿನಗಳು. ಆ ಸಮಯದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅವರ ದೇಹದಲ್ಲಿ ಹಲವಾರು ವ್ಯತ್ಯಾಸಗಳು ಆಗುತ್ತಿರುತ್ತವೆ. ಈ ಸಮಯದಲ್ಲಿ ಕೆಲವು ಮನೆಮದ್ದುಗಳ ಮೂಲಕ ಅವರ ಆರೋಗ್ಯದ ವ್ಯತ್ಯಾಸಗಳನ್ನು ಸರಿಪಡಿಸಬಹುದು ಅದಕ್ಕೆ ಉಪಯುಕ್ತವಾಗುವ ಟಿಪ್ ಗಳು ಹೀಗಿವೆ…

* ಮುಟ್ಟಿನ ದಿನಗಳಲ್ಲಿ ದಿನಕ್ಕೆ ಮೂರು ಬಾರಿ ನಿಂಬೆಹಣ್ಣಿನ ರಸ ಸೇವಿಸಿದರೆ ಹೆಚ್ಚು ಋತುಸ್ತ್ರಾವವಾಗುವುದಿಲ್ಲ.
* ಗರ್ಭಿಣಿ ಹೆಂಗಸರು ಅತಿ ಹೆಚ್ಚು ಬಾಳೆಹಣ್ಣನ್ನು ಸೇವಿಸಿದರೆ ಒಳ್ಳೆಯದು ಇದರಿಂದ ರಕ್ತಪುಷ್ಟಿಯಾಗುತ್ತದೆ ಹಾಗೂ ಹೆರಿಗೆ ಸರಾಗವಾಗಿ ಆಗುತ್ತದೆ.

* ಗರ್ಭಿಣಿ ಸ್ತ್ರೀಯರಿಗೆ ಬರುವ ಅನೇಕ ಸಮಸ್ಯೆಗಳಲ್ಲಿ ಉರಿಮೂತ್ರ ಸಮಸ್ಯೆ ಕೂಡ ಒಂದು. ಬಾರ್ಲಿ ನೀರು ಹಾಗೂ ಎಳನೀರನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಇದು ಪರಿಹಾರವಾಗುತ್ತದೆ.
* ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಬೆನ್ನಿಗೆ ಚೆನ್ನಾಗಿ ಮಸಾಜ್ ಮಾಡಿ ಬಿಸಿನೀರು ಸ್ನಾನ ಮಾಡಿದರೆ ಬೆನ್ನು ನೋವು ಗುಣವಾಗುತ್ತದೆ.

* ಕಿತ್ತಳೆ ಹಣ್ಣಿನ ರಸವನ್ನು ಗರ್ಭಿಣಿಯರು ಸೇವಿಸುವುದರಿಂದ ಹೆರಿಗೆ ಸರಾಗವಾಗಿ ಆಗುತ್ತದೆ.
* ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ದಂಟಿನ ಸೊಪ್ಪಿನ ಆಹಾರ ಪದಾರ್ಥಗಳನ್ನು ಸೇವಿಸಿ ಇದರಿಂದ ಸಮಸ್ಯೆ ಪರಿಹಾರವಾಗುತ್ತದೆ.
* ಹಾಲು ತುಂಬಿದ ರಾಗಿ ತೆನೆಗಳನ್ನು ಬಿಸಿ ಮಾಡಿ ಉಜ್ಜಿ ಕಾಳುಗಳನ್ನು ಉದುರಿಸಿ ಕೊಬ್ಬರಿ ಹಾಗೂ ಬೆಲ್ಲದ ಜೊತೆ ಮಿಕ್ಸ್ ಮಾಡಿ ಸೇವಿಸುತ್ತಾ ಬಂದರೆ ಬಾಣಂತಿಯರಿಗೆ ಎದೆ ಹಾಲು ಹೆಚ್ಚುತ್ತದೆ.

* ಅವಿವಾಹಿತ ಹೆಣ್ಣು ಮಕ್ಕಳಿಗೆ ಹೆಚ್ಚು ಹೊಟ್ಟೆ ನೋವು ಮುಟ್ಟಿನ ಸಮಯದಲ್ಲಿ ಬರುತ್ತಿದ್ದರೆ ಕರಿ ಎಳ್ಳಿನ ಪುಡಿಯನ್ನು ಬಿಸಿ ನೀರಿನ ಜೊತೆ ಮಿಕ್ಸ್ ಮಾಡಿ ಕುಡಿಯಬೇಕು.
* ಹೆರಿಗೆ ನಂತರ ಸಬ್ಬಸಿಗೆ ಸೊಪ್ಪನ್ನು ಹೆಚ್ಚು ಸೇವಿಸುತ್ತಿದ್ದರೆ ಎದೆ ಹಾಲು ಉತ್ಪತ್ತಿ ಆಗುತ್ತದೆ.
* ಹಾಲು, ಜೇನುತುಪ್ಪ ಮತ್ತು ಪರಂಗಿ ಹಣ್ಣನ್ನು ಸೇವಿಸಿದರೆ ನರಗಳ ದುರ್ಬಲತೆ ಹೋಗುತ್ತದೆ. ಗರ್ಭಿಣಿಯರಿಗೆ ಇದು ಅತ್ಯುತ್ತಮ ಆಹಾರ.

* ಹುರುಳಿಕಾಳು ಮೊಳಕೆ ಕಟ್ಟಿ ಸಾರು ಮಾಡಿ ಕೊಡುವುದರಿಂದ ಬಾಣಂತಿಯರಿಗೆ ಗರ್ಭಾಶಯದ ನೋವು ಶಮನವಾಗುತ್ತದೆ.
* ಮುಟ್ಟಿನ ನಂತರ ಗರ್ಭಾಶಯದಲ್ಲಿ ವಿಪರೀತ ನೋವು ಕಾಣಿಸಿಕೊಂಡರೆ, ಬೆಳ್ಳುಳ್ಳಿಯನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಆ ನೀರನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿದರೆ ನೋವು ಶಮನವಾಗುತ್ತದೆ.

* ಒಂದು ಟೀ ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನುಣ್ಣಗೆ ಅರೆದು ಒಂದು ಬಟ್ಟಲು ಅಕ್ಕಿ ತೊಳೆದ ನೀರಿನಲ್ಲಿ ಕದಡಿ ಕಲ್ಲುಸಕ್ಕರೆ ಬೆರೆಸಿ ಸೇರಿಸುವುದರಿಂದ ಗರ್ಭಿಣಿಯರಿಗೆ ವಾಂತಿ ಕಡಿಮೆ ಆಗುತ್ತದೆ. ದಿನದಲ್ಲಿ ಎರಡರಿಂದ ಮೂರು ಬಾರಿ ಈ ನೀರನ್ನು ಸೇವಿಸಬೇಕು.
* ಮುಟ್ಟಿನ ನಂತರ ಹೊಟ್ಟೆ ನೋವಿದ್ದರೆ ಹಸಿ ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರು ಆರಿದ ಮೇಲೆ ಅದಕ್ಕೆ ಕಲ್ಲು ಸಕ್ಕರೆ ಅಥವಾ ಸಕ್ಕರೆ ಬೆರೆಸಿ ಪ್ರತಿ ಬಾರಿ ಊಟ ಆದನಂತರ ಮೂರು ಹೊತ್ತು ಕೂಡ ಕುಡಿಯಬೇಕು ಆಗ ಹೊಟ್ಟೆ ನೋವು ಕಡಿಮೆ ಆಗುತ್ತದೆ.

* ಹೊಟ್ಟೆ ನೋವಿಗೆ ಎಳ್ಳಿನ ಪುಡಿ ಸೇವಿಸುವುದು ಒಳ್ಳೆಯದು ಹಾಗೆ ಕೆಲವರಿಗೆ ಈ ಸಮಯದಲ್ಲಿ ಸೊಂಟ ನೋವು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ ಅವರು ಕೂಡ ಎಳ್ಳನ್ನು ನೀರಿನಲ್ಲಿ ಬಿಸಿ ಮಾಡಿ ಆ ನಿರಿನಿಂದ ಮಸಾಜ್ ಮಾಡಿಸಿಕೊಳ್ಳಬೇಕು.

* ಆ’ತಂ’ಕ, ಭ’ಯ ಇತ್ಯಾದಿ ಕಾರಣಗಳಿಂದ ಮುಟ್ಟು ನಿಂತು ಹೋಗಿದ್ದರೆ ಅಥವಾ ಅಸಹಜವಾಗಿದ್ದರೆ ಪರಂಗಿ ಹಣ್ಣಿನ ಸೇವನೆ ಉತ್ತಮ, ಇದು ಗರ್ಭಕೋಶವನ್ನು ಸಂಕೋಚನಗೊಳ್ಳುವಂತೆ ಮಾಡಿ ಮುಟ್ಟಿನ ಹರಿವು ಸರಿಯಾಗಿ ಆಗಲು ಸಹಾಯ ಮಾಡುತ್ತದೆ.
* ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಬೆಚ್ಚಗಾದ ಮೇಲೆ ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ಮುಟ್ಟಿನ ಸಮಯದಲ್ಲಿ ಆಗುವ ಅಧಿಕ ರಕ್ತಸ್ರಾವ ನಿಯಂತ್ರಣಕ್ಕೆ ಬರುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಗೃಹಿಣಿಯರಿಗೆ ಉಪಯುಕ್ತವಾಗುವ ಅಡುಗೆ ಮನೆಯ ಕೆಲ ಟಿಪ್ಸ್ ಗಳು.!
Next Post: ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರಲು ಈ ಟಿಪ್ಸ್ ಫಾಲೋ ಮಾಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore