Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಿಮ್ಮ ಮನೆ ಅಕ್ಕ ಪಕ್ಕ ಯಾವ ರೀತಿಯ ಗಿಡ ಇದ್ದರೆ ಏನು ಫಲ ತಿಳಿದುಕೊಳ್ಳಿ.!

Posted on March 18, 2024 By Kannada Trend News No Comments on ನಿಮ್ಮ ಮನೆ ಅಕ್ಕ ಪಕ್ಕ ಯಾವ ರೀತಿಯ ಗಿಡ ಇದ್ದರೆ ಏನು ಫಲ ತಿಳಿದುಕೊಳ್ಳಿ.!

 

ನಮ್ಮ ಮನೆಯ ಸುತ್ತಮುತ್ತ ನಮಗೆ ಗೊತ್ತಿಲ್ಲದೆ ಅನೇಕ ಮರಗಳು ಬೆಳೆದಿರುತ್ತವೆ. ಇನ್ನು ಕೆಲವು ಮರಗಳನ್ನು ನಾವೇ ಬೆಳೆಸಿರುತ್ತೇವೆ. ಈ ರೀತಿ ಮರಗಳಲ್ಲಿ ಕೆಲವು ಮರಗಳಿಗೆ ವಿಶೇಷ ಶಕ್ತಿಯಿದ್ದು ಅವುಗಳು ಮನೆ ಸುತ್ತಮುತ್ತ ಇರುವುದರಿಂದ ಆ ಮನೆಗೆ ಬಹಳ ಒಳ್ಳೆಯದಾಗುತ್ತಿರುತ್ತದೆ. ಆ ಪ್ರಕಾರವಾಗಿ ಯಾವ ರೀತಿ ಮರಗಳು ಇಂತಹ ದೈವಿ ಗುಣವನ್ನು ಹೊಂದಿವೆ ಹಾಗೂ ಇದರಿಂದ ಯಾವ ರೀತಿಯ ಫಲಗಳು ಸಿಗುತ್ತಿದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ.

* ಮನೆಯ ಮುಂದೆ ತೆಂಗಿನ ಕಾಯಿ ಮರವಿದ್ದರೆ ಮನಸ್ಸಿಗೆ ಬಹಳ ನೆಮ್ಮದಿ ದೊರೆಯುತ್ತದೆ ಕಲ್ಪವೃಕ್ಷವೆಂದು ಕರೆಯಲ್ಪಡುವ ಈ ವೃಕ್ಷವನ್ನು ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ದರ್ಶನ ಮಾಡುವುದು ನಮ್ಮ ಸಂಸ್ಕೃತಿ. ಹೀಗೆ ಮನೆ ಅಕ್ಕಪಕ್ಕ ಇರುವ ತೆಂಗಿನ ಮರದ ಪ್ರಭಾವದಿಂದಾಗಿ ಆ ಕುಟುಂಬಕ್ಕೆ ಬಹಳ ಒಳ್ಳೆಯದಾಗುತ್ತದೆ ಸಮಾಜದಲ್ಲಿ ಒಳ್ಳೆಯ ಗೌರವ ಸ್ಥಾನಮಾನ ಕೂಡ ದೊರೆಯುತ್ತದೆ. ಹೀಗಾಗಿ ತೆಂಗಿನ ಮರವನ್ನು ಯಾರು ಯಾವುದೇ ಸಂದರ್ಭದಲ್ಲೂ ಕಡಿಸಿ ಹಾಕಲು ಇಷ್ಟಪಡುವುದಿಲ್ಲ.

ಈ ಸುದ್ದಿ ಓದಿ:- 18 ವರ್ಷಗಳ ನಂತರ ರಾಹು ಮತ್ತು ಬುಧ ಸಂಯೋಗ, ಸಿಂಹ ರಾಶಿಯವರ ಮನೆ ಬಾಗಿಲಿಗೆ ಬರುತ್ತಿದೆ ಅದೃಷ್ಟ…

* ಮನೆಯ ಮುಂದೆ ಪಾರಿಜಾತ ವೃಕ್ಷವಿದ್ದರೆ ಆ ಮನೆ ಮೇಲೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇರುತ್ತದೆ ಎಂದು ಹೇಳಲಾಗುತ್ತದೆ. ಇದು ಬಹಳ ಶುಭದ ಸಂಕೇತವಾಗಿದೆ, ಆ ಮನೆ ಮೇಲೆ ಬಹಳ ಸಕರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ, ಹಣಕಾಸಿನ ಏಳಿಗೆಯನ್ನು ತಂದುಕೊಡುತ್ತದೆ.

* ಮನೆಯ ಮುಂದೆ ಮಲ್ಲಿಗೆ ಗಿಡವಿದ್ದರೂ ಕೂಡ ಆ ಮನೆಗೆ ಬಹಳ ಒಳ್ಳೆಯದಾಗುತ್ತದೆ. ಮಲ್ಲಿಗೆ ಹೇಗೆ ಸುಗಂಧ ತರುವುದು ಹಾಗೆ ಆ ಮನೆಯ ಮಕ್ಕಳು ಕೀರ್ತಿವಂತರಾಗುತ್ತಾರೆ ಸದ್ಗುಣಿಗಳಾಗುತ್ತಾರೆ ಎಂದು ಹೇಳಲಾಗುತ್ತದೆ

* ಮನೆಯ ಪೂರ್ವ ದಿಕ್ಕಿಗೆ ಅಥವಾ ಈಶಾನ್ಯ ಮೂಲೆಯಲ್ಲಿ ಬಾಳೆ ಮರ ಬೆಳೆಸಿದರೆ ಬಹಳ ಒಳ್ಳೆಯದು, ಇದು ಆ ಮನೆಗೆ ಸುಖ ಸಮೃದ್ಧಿ ತರುತ್ತದೆ ಎಂದು ಹೇಳಲಾಗುತ್ತದೆ. ಬಾಳೆ ವೃಕ್ಷವನ್ನು ಭಗವಾನ್ ವಿಷ್ಣುವಿನ ನಿವಾಸ ಎಂದು ಕರೆಯಲಾಗುತ್ತದೆ.

ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಹೊಸ ಅಪ್ಡೇಟ್.!

* ಮನೆ ಮುಂದೆ ಕೇದಿಗೆ ಸಸ್ಯ ಇದ್ದರೆ ನಿಮ್ಮ ಮನೆ ಮೇಲೆ ಶತ್ರುಗಳು ಯಾವುದೇ ರೀತಿ ಕೆಡಕುಂಟು ಮಾಡಲು ಪ್ರಯತ್ನಿಸಿದರು ಅದು ನಡೆಯುವುದಿಲ್ಲ ಇದೆಲ್ಲದರಿಂದ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ

* ಮುತ್ತಲ ಗಿಡವು ಮನೆ ಸುತ್ತಮುತ್ತ ಇದ್ದರೆ ಆ ಮನೆಗೆ ಬ್ರಹ್ಮ ಶಕ್ತಿಯನ್ನು ಕೊಡುತ್ತದೆ
* ಮನೆ ಮುಂದೆ ಶ್ರೀಗಂಧ ಹಾಗೂ ಹಲಸಿನ ಮರವನ್ನು ಬೆಳೆಸಿದರೆ ದುಃ’ಖ ದಾರಿದ್ರ್ಯಗಳು ನಿವಾರಣೆ ಆಗುತ್ತದೆ ಎಂದು ಹೇಳಲಾಗಿದೆ
* ಮನೆ ಮುಂದೆ ಬಿದುರಿನ ಗಿಡ ಬೆಳೆಸುವುದರಿಂದ ಕಳ್ಳ ಕಾಕರ ಭ’ಯ ನಿವಾರಣೆಯಾಗುತ್ತದೆ

* ಕಗ್ಗಲಿ ಮರವನ್ನು ಮನೆ ಸುತ್ತಮುತ್ತ ಬೆಳೆಸಿದರೆ ಕುಟುಂಬದವರ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ
* ಮನೆಯ ಸುತ್ತಮುತ್ತ ದಾಳಿಂಬೆ ಗಿಡಗಳನ್ನು ಹಾಕಿ ಬೆಳೆಸಿದರೆ ಅವಿವಾಹಿತ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಶೀಘ್ರವೇ ಕಂಕಣ ಭಾಗ್ಯ ಕೂಡಿ ಬರುತ್ತದೆ ಅವರ ಜೀವನ ಸಂತೋಷಕರವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:-ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!

* ಮನೆಯ ಮುಂದೆ ಅಶೋಕ ಮರವಿದ್ದರೆ ಸುಖ ಶಾಂತಿ ನೆಲೆಸುತ್ತದೆ
* ಮನೆ ಮುಂದೆ ಬಸರಿಮರ ಇರುವುದು ಬಹಳ ಪುಣ್ಯ. ಮನೆ ಸುತ್ತಾ ಎಲ್ಲೇ ಬಸರಿಮರ ಬೆಳೆದಿದ್ದರು ಅದನ್ನು ಪೋಷಿಸಿ ಯಾಕೆಂದರೆ ಬಸರಿಮರ ಬೆಳೆಸಿದರೆ ಯಜ್ಞ ಮಾಡಿದಷ್ಟು ಫಲ ಎಂದು ಹೇಳಲಾಗಿದೆ
* ನೇರಳೆ ಹಣ್ಣಿನ ಗಿಡದಿಂದ ಕುಲದ ಗೌರವ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ

* ಮನೆಯ ಹತ್ತಿರ ಬಿಲ್ವಪತ್ರ ಮರ ಬೆಳೆಸಿದರೆ ಅ’ಪ’ಮೃ’ತ್ಯು ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ.
* ಮನೆಯ ಹತ್ತಿರದಲ್ಲಿ ಅರಳಿಮರ ಇದ್ದರೆ ಅದನ್ನು ಪ್ರತಿದಿನವೂ ಪೂಜಿಸಬೇಕು ಇದರಿಂದ ಎಲ್ಲ ರೀತಿಯ ಪಾಪ ಕರ್ಮಗಳು ಕಳೆಯುತ್ತವೆ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ.

Useful Information
WhatsApp Group Join Now
Telegram Group Join Now

Post navigation

Previous Post: ಸಿವಿಲ್ ಇಂಜಿನಿಯರ್ ಕೆಲಸ ಬಿಟ್ಟು ಈಗ ಮನೆಯಲ್ಲಿ ತಿಂಗಳಿಗೆ ಒಂದು ಲಕ್ಷ ದುಡಿಯುತ್ತಿರುವ ಮಹಿಳೆ.!
Next Post: ಮದುವೆ ಪ್ರಮಾಣ ಪತ್ರಕ್ಕೆ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಹೇಗೆ ಗೊತ್ತಾ.?.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore