Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮಂಡಿ ನೋವು / ವಾತದ ರೋಗಗಳು/ ಸಂಧಿ ವಾತ ರೋಗಗಳಿಗೆ ಐದು ಮನೆಮದ್ದುಗಳು.!|

Posted on November 4, 2023 By Kannada Trend News No Comments on ಮಂಡಿ ನೋವು / ವಾತದ ರೋಗಗಳು/ ಸಂಧಿ ವಾತ ರೋಗಗಳಿಗೆ ಐದು ಮನೆಮದ್ದುಗಳು.!|

 

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಮಂಡಿ ನೋವು ಅಂದರೆ ಜಾಯಿಂಟ್ ಪೈಂಟ್ ಗಳು ಕಾಣಿಸಿಕೊಳ್ಳುವುದು ಸಹಜವಾಗಿದೆ ವಯಸ್ಸಾದ ಮೇಲೆ ಕಾಣಿಸಿಕೊಳ್ಳುವಂತಹ ಈ ಸಮಸ್ಯೆ ಇತ್ತೀಚಿನ ದಿನ ದಲ್ಲಿ ಚಿಕ್ಕಪುಟ್ಟ ವಯಸ್ಸಿನವರೆಗೂ ಕೂಡ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ವಾತವಿಕಾರ ಇದು ವಾತ ಜನ್ಯ ವಾಗಿ ಬರುವಂತಹ ಕಾಯಿಲೆ.

ಹಾಗೂ ಕೆಲವೊಮ್ಮೆ ಪಿತ್ತ ಜನ್ಯವಾಗಿ ಯೂ ಸಹ ಬರುತ್ತದೆ. ಹಾಗೂ ಸ್ವಲ್ಪ ಪ್ರಮಾಣದ ಕಫ ವಿಕಾರಗಳಿಂದ ಸಹ ಈ ಸಮಸ್ಯೆ ಬರುತ್ತದೆ. ಬಹಳ ಮುಖ್ಯವಾಗಿ ವಾತಜನ್ಯವಾಗಿ ಕಾಣಿಸಿ ಕೊಳ್ಳುವಂತಹ ಈ ಸಂಧಿವಾತ ಸಮಸ್ಯೆ ಸಂಪೂರ್ಣವಾಗಿ ದೂರವಾಗಬೇಕು ಎಂದರೆ ವಾತಜನ್ಯವಾಗಿ ಯಾವ ಆಹಾರದಿಂದ ಈ ಸಮಸ್ಯೆ ಬರುತ್ತದೆಯೋ ಅದನ್ನು ನಾವು ಸಂಪೂರ್ಣವಾಗಿ ಬಿಡಬೇಕು.

ಉದಾಹರಣೆಗೆ:-
* ಚಹಾ, ಕಾಫಿ, ಆಲೂಗಡ್ಡೆ, ಬದನೆಕಾಯಿ, ಬೇಕರಿ ಪದಾರ್ಥ, ಎಣ್ಣೆ ಯಲ್ಲಿ ಕರಿದ ಆಹಾರ ಪದಾರ್ಥ, ಇವೆಲ್ಲವನ್ನೂ ಸಹ ಸಂಪೂರ್ಣವಾಗಿ ಬಿಡಬೇಕು ಹಾಗೂ ಬಹಳ ಮುಖ್ಯವಾಗಿ ಆಹಾರವನ್ನು ತಡವಾಗಿ ಸೇವಿಸುವು ದನ್ನು ನಿಲ್ಲಿಸಬೇಕು ಸಮಯಕ್ಕೆ ಸರಿಯಾಗಿ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಹಾಗೂ ಸಮಯಕ್ಕೆ ಸರಿಯಾಗಿ ಮಲಗಬೇಕು ಬೆಳಗಿನ ಸಮಯ ಬೇಗ ಏಳಬೇಕು. ಈ ರೀತಿಯ ಎಲ್ಲ ವಿಧಾನಗಳನ್ನು ಅನುಸರಿಸುವುದರಿಂದ ಇದನ್ನು ದೂರ ಮಾಡಿಕೊಳ್ಳಬಹುದು.

ಮೇಲೆ ಹೇಳಿದಂತೆ ನಾವು ತಡವಾಗಿ ಆಹಾರ ಸೇವನೆ ಮಾಡಿದರೆ ಆ ಸಮಯದಲ್ಲಿ ನಮ್ಮ ದೇಹದಲ್ಲಿ ಗ್ಯಾಸ್ ಹೆಚ್ಚಾಗುತ್ತದೆ ಇದು ನಮ್ಮ ದೇಹದಲ್ಲಿ ಸಂಗ್ರಹಣೆ ಯಾಗುತ್ತಾ ಹೋದರೆ ಅದು ಆಮವಾತವಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ.

* ಬೆಳಗಿನ ಸಮಯ 7 ಗಂಟೆಗೆ ತಿಂಡಿ ತಿನ್ನುವುದು ಹಾಗೂ ಮಧ್ಯಾಹ್ನ 1 ಗಂಟೆಗೆ ಊಟ 6 ರಿಂದ 7 ಗಂಟೆಗೆ ರಾತ್ರಿ ಊಟ ಈ ರೀತಿ ಆಹಾರವನ್ನು ಸೇವನೆ ಮಾಡಿದ್ದೆ ಆದರೆ ನಮ್ಮ ಕರುಳು ಶುದ್ದಿಯಾಗುತ್ತದೆ ಇದರಿಂದ ನಮ್ಮ ರಕ್ತ ಶುದ್ಧೀಕರಣವಾಗುತ್ತದೆ ಇದರಿಂದ ಯಾವುದೇ ರೀತಿಯ ಆಮವಾತದ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಹಾಗಾದರೆ ಈ ಎಲ್ಲಾ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿ ಕೊಳ್ಳಬೇಕು ಎಂದರೆ ಯಾವ ಮನೆ ಮದ್ದನ್ನು ಉಪಯೋಗಿಸಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

* 100 ಗ್ರಾಂ ಹೊಂಗೆ ಮರದ ಎಲೆ
* ತುಳಸಿ ಎಲೆ
* ಬೇವಿನ ಎಲೆ
* ಬಿಲ್ವಪತ್ರೆಯ ಎಲೆ
* ಅಮೃತಬಳ್ಳಿ ಎಲೆ
ಇಷ್ಟನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನೆರಳಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು.

ನಂತರ ಒಂದು ಲೀಟರ್ ನೀರಿಗೆ ಇದರ ಒಂದು ಚಮಚ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಒಂದು ಲೀಟರ್ ನೀರು 100ML ಇಳಿಯಬೇಕು ಅಲ್ಲಿಯತನಕ ಇದನ್ನು ಚೆನ್ನಾಗಿ ಕುದಿಸಿ ಈ ಕಷಾಯ ವನ್ನು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು.
* ಹಾಗೂ ಮಧ್ಯಾಹ್ನ ಊಟಕ್ಕೂ ಅರ್ಧ ಗಂಟೆಯ ಮೊದಲು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಅನ್ನು ಸೇವನೆ ಮಾಡಬೇಕು.

* ಹಾಗೂ ರಾತ್ರಿ ಸಮಯ ಪಾರಿಜಾತ ಗಿಡದ ಎಲೆಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಒಂದು ಚಮಚ ಇದನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದು 100ML ಗೆ ಇಳಿಯಬೇಕು ಅಲ್ಲಿ ತನಕ ಅದನ್ನು ಚೆನ್ನಾಗಿ ಕುದಿಸಿಕೊಂಡು ಆ ನೀರನ್ನು ರಾತ್ರಿ ಸಮಯ ಕಷಾಯದ ರೂಪವಾಗಿ ಸೇವನೆ ಮಾಡಬೇಕು ಹೀಗೆ ಈ ಎಲ್ಲಾ ವಿಧಾನಗಳನ್ನು ಅನುಸರಿಸುವುದರ ಮೂಲಕ ಮೇಲೆ ಹೇಳಿದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

Useful Information
WhatsApp Group Join Now
Telegram Group Join Now

Post navigation

Previous Post: ಇದೊಂದು ವಸ್ತುವನ್ನು ಮನೆ ಬಾಗಿಲಿಗೆ ಕಟ್ಟಿದರೆ ಹಣಕಾಸಿನ ಸಮಸ್ಯೆ ಮೂರೇ ದಿನದಲ್ಲಿ ಕಳೆಯುತ್ತದೆ.!
Next Post: ಪೂಜೆ ಮಾಡುವಾಗ ಕಣ್ಣೀರು ಆಕಳಿಕೆ ನಿದ್ರೆ ಕೆಟ್ಟ ಆಲೋಚನೆಗಳು ಬಂದರೆ ಏನು ಸಂಕೇತ? ಪರಿಹಾರ ಏನು?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore