
ದೀಪಾವಳಿ ಹಬ್ಬಕ್ಕೆ ನಾವು ಮನೆಯನ್ನು ಸ್ವಚ್ಛ ಮಾಡುವಾಗ ಕೆಲವೊಂದ ಷ್ಟು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೀಪಾವಳಿಯ ಉತ್ಸವವು 5 ದಿನಗಳವರೆಗೆ ಇರುತ್ತದೆ. ಇದು ದಂತೆರಸ್ ನಿಂದ ಪ್ರಾರಂಭವಾಗುತ್ತದೆ ಮತ್ತು ಬಾಯಭುಜೇನ್ ನಲ್ಲಿ ಕೊನೆಗೊಳ್ಳುತ್ತದೆ. ದಂತೆರಸ್ ಅಥವಾ ಧನ ತ್ರಯೋದಶಿ ಎಂದು ನೀವು ಚಿನ್ನ ಹಾಗೂ ಬೆಳ್ಳಿ ನಾಣ್ಯಗಳು ಪಾತ್ರೆಗಳು ಇತ್ಯಾದಿಗಳನ್ನು ಖರೀದಿಸಬಹುದು.
ಈ ಹಬ್ಬವನ್ನು ಶುಚಿತ್ವದ ಹಬ್ಬ ಎಂದು ಪರಿಗಣಿಸಲಾಗುತ್ತದೆ. ನಮ್ಮೆಲ್ಲರ ನೆನಪುಗಳಲ್ಲಿ ದೀಪಾವಳಿ ಎಂದರೆ ಮನೆಯ ಮೂಲೆ ಮೂಲೆಗಳನ್ನು ಸ್ವಚ್ಛವಾಗಿ ಶುಚಿಗೊಳಿಸುವುದು. ದೀಪಾವಳಿಗೆ ಒಂದು ತಿಂಗಳು ಅಥವಾ 15 ದಿನಗಳ ಮುಂಚೆ ತಮ್ಮ ಮನೆಗಳನ್ನು ಸ್ವಚ್ಛ ಮಾಡುವುದಕ್ಕೆ ಮುಂದಾಗುತ್ತಾರೆ. ಮನೆಗಳಿಗೆ ಬಣ್ಣ ಬಳಿಯಲಾಗುತ್ತದೆ ಮತ್ತು ಅಲಂಕಾರಗಳಿಗೆ ವಿಶೇಷವಾದ ಗಮನ ನೀಡಲಾಗುತ್ತದೆ.
ಕೆಲವರು ತಮ್ಮ ಮನೆಗಳಿಗೆ ಬಣ್ಣ ಬಳಿಸುತ್ತಾರೆ ಇನ್ನು ಕೆಲವರು ಹೊಸ ಹೊಸ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಮತ್ತೆ ಕೆಲವರು ಮನೆಗೆ ಹೊಸ ಟಿವಿಯನ್ನು ಖರೀದಿಸುತ್ತಾರೆ. ಮತ್ತು ದೀಪಾವಳಿಯಲ್ಲಿ ರಿಯಾ ಯಿತಿ ದರದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಇಡೀ ವರ್ಷ ಕಾಯುತ್ತಾರೆ.
ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಅವರ ಜೇಬಿಗೆ ತಕ್ಕಂತೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸು ತ್ತಾರೆ. ಯಾರ ಮನೆಯಲ್ಲಿ ಹೆಚ್ಚು ಹೊಳಪು ಶುಚಿತ್ವ ಸೌಂದರ್ಯ ಮತ್ತು ಸಾಕಷ್ಟು ಬೆಳಕು ಇರುತ್ತದೆಯೋ ಅಲ್ಲಿಗೆ ಲಕ್ಷ್ಮಿ ದೇವಿಯು ಬಂದು ನೆಲೆಸುತ್ತಾಳೆ. ಯಾವ ಭಕ್ತರ ಮನೆಯು ಹೆಚ್ಚು ಸ್ವಚ್ಛವಾಗಿ ಇರುತ್ತದೆಯೋ ಅವನು ಲಕ್ಷ್ಮಿ ದೇವಿಗೆ ಇಷ್ಟವಾಗುತ್ತಾನೆ ಮತ್ತು ಆ ಮನೆಯಲ್ಲಿ ಸದಾ ಕಾಲ ಲಕ್ಷ್ಮೀದೇವಿಯು ನೆಲೆಗೊಳ್ಳುತ್ತಾಳೆ. ಈ ವಸ್ತುಗಳನ್ನು ದೀಪಾವಳಿಗೂ ಮುನ್ನವೇ ಮನೆಯಿಂದ ತಕ್ಷಣವೇ ತೆಗೆದು ಹಾಕಿ ಎಂದಾಗ ಮಾತ್ರ ಮಾತೆ ಮಹಾಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ.
ಮೊದಲನೆಯದು ಒಡೆದ ಕನ್ನಡಿ :- ವಾಸ್ತು ಪ್ರಕಾರ ಇದನ್ನು ದೊಡ್ಡ ದೋಷ ಎಂದು ಪರಿಗಣಿಸಲಾಗುತ್ತದೆ. ಮತ್ತು ಈ ದೋಷದಿಂದಾಗಿ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಸಕ್ರಿಯವಾಗಿರುತ್ತದೆ. ಕುಟುಂಬದ ಸದಸ್ಯರಲ್ಲಿ ಮಾನಸಿಕ ಒತ್ತಡ ಇರುತ್ತದೆ. ಮತ್ತು ಇಡೀ ದಿನ ಇದೇ ಕಾರಣಕ್ಕಾಗಿ ಜಗಳಗಳು ಘರ್ಷಣೆಗಳು ಇತ್ಯಾದಿ ನಡೆಯುತ್ತಲೇ ಇರುತ್ತದೆ.
ಆದ್ದರಿಂದ ನಿಮ್ಮ ಮನೆಯಲ್ಲಿ ಯಾವುದಾದರೂ ಕನ್ನಡಿ ಇದ್ದರೂ ಅದರ ಸಣ್ಣ ಮೂಲೆ ಮುರಿದಿದ್ದರೂ ಸಹ ಅದನ್ನು ತಕ್ಷಣವೇ ಮನೆಯಿಂದ ಎಸೆದುಬಿಡಿ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬಹಳ ಮುಖ್ಯ. ಮಲಗುವ ಮಂಚ ಮುರಿದಿದ್ದರೆ ಗಂಡ ಹೆಂಡತಿ ನಡುವೆ ಜಗಳಗಳು ಹೆಚ್ಚಾಗುತ್ತದೆ.
ಕೆಲವರು ಮಂಚ ಸದ್ದಾಗುತ್ತಿದ್ದರೂ ಕೂಡ ಗಮನಹರಿಸುವುದಿಲ್ಲ. ಮದುವೆಯಾದ ದಂಪತಿಗಳ ಮಂಚ ಸರಿ ಇಲ್ಲದಿದ್ದರೆ ಅವರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ. ಕ್ರಮೇಣವಾಗಿ ಅವರ ಸಂಬಂಧ ಮುರಿದು ಬೀಳುತ್ತದೆ.
ಚಿಕ್ಕ ಚಿಕ್ಕ ವಿಷಯಗಳಿಗೂ ಕೂಡ ಜಗಳ ಮಾಡಿಕೊಂಡು ಸಿಟ್ಟು ಮಾಡಿಕೊಳ್ಳುವುದನ್ನು ನೀವು ಆಗಾಗ ನೋಡಿರಬಹುದು. ಅದನ್ನು ನಿರ್ಲಕ್ಷಿಸುವುದಕ್ಕೆ ಸಾಕಷ್ಟು ಪ್ರಯತ್ನವನ್ನು ಸಹ ಪಡುತ್ತೀರಿ. ಆದರೂ ಅಂತಹ ವಾತಾವರಣ ನಿರ್ಮಾಣವಾದರೆ ನೀವು ನಿಮ್ಮ ಮಂಚವನ್ನು ಬದಲಾಯಿಸಿ ಅಥವಾ ಅದನ್ನು ಸರಿಪಡಿಸಿ ನಂತರ ಉಪಯೋಗಿಸುವುದು ಉತ್ತಮ.
ಗಡಿಯಾರವು ಬಹಳ ಮುಖ್ಯ ನಿಂತ ಗಡಿಯಾರವು ನಮಗೆ ಕೆಟ್ಟ ಸಮಯವನ್ನು ತರುತ್ತದೆ. ಗಡಿಯಾರವು ನಮ್ಮ ಕುಟುಂಬದ ಪ್ರಗತಿ ಯನ್ನು ನಿರ್ಧರಿಸುತ್ತದೆ ಅಂತ ನಂಬಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.