ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕರ್ನಾಟಕದ ಬಹುತೇಕ ಹೆಣ್ಣು ಮಕ್ಕಳಿಗೆ ಶಕ್ತಿಯಾಗುವ ಸಲುವಾಗಿ ಶಕ್ತಿಧಾಮ ನಿರ್ಮಿಸಿದವರು. ರಾಜ್ಯದ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಆರೋಗ್ಯ ವಿಷಯಗಳಿಗೂ ಸಹಾಯ ಮಾಡುತ್ತಾ ಬಂದವರು. ಇಂತಹ ದೊಡ್ಮನೆ ದೊಡ್ಡ ಮನಸ್ಸಿನ ವ್ಯಕ್ತಿಯ ಇಬ್ಬರು ಹೆಣ್ಣು ಮಕ್ಕಳು ಕೂಡ ಬಹಳ ಚೆನ್ನಾಗಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿದ್ದಾರೆ. ಈ ಬಗ್ಗೆ ಅಪ್ಪು ಅವರು ಯಾವಾಗಲೂ ಹೆಮ್ಮೆ ಪಡುತ್ತಿದ್ದರು. ತಮ್ಮ ಮಕ್ಕಳನ್ನು ಸ್ನೇಹಿತೆಯರ ರೀತಿ ನೋಡುತ್ತಿದ್ದ ಅಪ್ಪು ಅವರು ಅವರನ್ನು ಅವರ ತಾಯಿಯ ಹಾಗೆ ಸ್ಟ್ರಾಂಗ್ ವುಮೆನ್ ಗಳಾಗಿ ನೋಡಲು ಆಸೆ ಪಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದರು. ಈ ವರ್ಷ ದ್ವಿತೀಯ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಅಪ್ಪು ಅವರ ಕಿರಿಯ ಮಗಳು ವಂದಿತ ಅವರ ಫಲಿತಾಂಶ ಹೊರ ಬಿದ್ದಿತ್ತು ಅತ್ಯುತ್ತಮವಾದ ಅಂಕಗಳನ್ನು ಗಳಿಸಿ ವಂದಿತಾ ಭೇಷ್ ಎನಿಸಿಕೊಂಡಿದ್ದರು.
ಅವರ ಮೊದಲ ಮಗಳು ಧೃತಿ ಬಗ್ಗೆ ಹೇಳುವುದಾದರೆ ಇಡೀ ಕುಟುಂಬವೇ ಹೆಮ್ಮೆಪಡುವಂತೆ ಆಕೆ ವಿದೇಶದಲ್ಲಿ ಸ್ಕಾಲರ್ಶಿಪ್ ಪಡೆದು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ದೇಶದಲ್ಲಿ ಸ್ಕಾಲರ್ಶಿಪ್ ಪಡೆಯುವುದು ಎನ್ನುವುದು ತುಂಬಾ ದೊಡ್ಡ ವಿಷಯ ಯಾಕೆಂದರೆ ಅಲ್ಲಿ ಅವರು ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳ ಜೊತೆ ಅದು 85ರಿಂದ 90 ಪರ್ಸೆಂಟ್ ಇದ್ದರೂ ಕೂಡ ಮತ್ತೊಂದು ಪರೀಕ್ಷೆ ನಡೆಸಿ ಅದರಲ್ಲಿ 95% ಗಿಂತ ಅಧಿಕ ಇದ್ದರೆ ಮಾತ್ರ ಸ್ಕಾಲರ್ಶಿಪ್ ನೀಡುತ್ತಾರೆ. ಹೀಗೆ ಲಕ್ಷಾಂತರ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗಾಗಿ ಪರಿಕ್ಷೆ ಬರೆದರು ಅದರಲ್ಲಿ 500 ವಿದ್ಯಾರ್ಥಿಗಳಿಗೆ ಮಾತ್ರ ಸ್ಕಾಲರ್ಶಿಪ್ ಪಡೆದುಕೊಳ್ಳುವ ಯೋಗ ಇರುತ್ತದೆ. ಕರ್ನಾಟಕಕ್ಕೆ ದೊಡ್ಮನೆ ಎಂದು ಕರೆಸಿಕೊಂಡಿರುವ ಕನ್ನಡ ಸಿನಿಮಾ ರಂಗದ ಬಹುತೇಕ ಪಾಲು ಜನರಿಗೆ ಅನ್ನದಾತರಾಗಿದ್ದ ರಾಜಕುಮಾರ್ ಕುಟುಂಬದ ಮಗಳು ತಾವು ಪಡೆದ ವಿದ್ಯಾಭ್ಯಾಸದ ಅಂಕಗಳ ಮೂಲಕ ತಮ್ಮ ಜ್ಞಾನದ ಮೂಲಕ ಸ್ಕಾಲರ್ಶಿಪ್ ಪಡೆದು ಓದುತ್ತಿದ್ದಾರೆ ಎನ್ನುವುದು ತುಂಬಾ ಹೆಮ್ಮೆಯ ವಿಷಯವೇ ಸರಿ.
ಸದ್ಯಕ್ಕೆ ಜರ್ಮನಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಧೃತಿ ಅವರು ಅಪ್ಪ ಅಗಲಿದ ಸಮಯದಲ್ಲಿ ಬಂದು 15 ದಿನ ಇದ್ದು ಹೋಗಿದ್ದರು ನಂತರ ಅವರ ಹುಟ್ಟುಹಬ್ಬಕ್ಕೆ ಬಂದಿದ್ದ ಇವರು ಎರಡು ತಿಂಗಳ ಕಾಲ ಅವರ ಅಮ್ಮನ ಜೊತೆ ಇದ್ದರು. ನಂತರ ಇತ್ತೀಚಿಗಷ್ಟೇ ವೇದ ಸಿನಿಮಾದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಧೃತಿ ಅವರ ವಾರ್ಷಿಕ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ಈ ಬಾರಿ ಅವರು ದೇಶಕ್ಕೆ ಮೂರನೇ ರಾಂಕ್ ಪಡೆಯುವ ಮೂಲಕ ಮತ್ತೊಮ್ಮೆ ಸಾಧನೆ ಗೈದಿದ್ದಾರೆ. ಈ ವಿಷಯ ತಿಳಿದ ಕೂಡಲೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಗಳಿಗೆ ವಿಡಿಯೋ ಕಾಲ್ ಮಾಡಿ ವಿಶ್ ಮಾಡಿದ್ದಾರೆ ಮತ್ತು ಸಂತಸದ ಕಂಬನಿ ಮಿಡಿದಿದ್ದಾರೆ.
ಅಪ್ಪು ಅವರು ಇದ್ದಿದ್ದರೆ ಈಗ ಅವರ ಮಕ್ಕಳ ಬಗ್ಗೆ ಇನ್ನಷ್ಟು ಹೆಮ್ಮೆಪಡುತ್ತಿದ್ದರು. ಮಕ್ಕಳು ಅಷ್ಟೇ ನನ್ನ ಅಪ್ಪ ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಬಂದು ಭಾಗಿ ಆಗುತ್ತಿದ್ದರೂ ಶಾಲಾ ಕಾಲೇಜಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನಾವು ಅವರೊಂದಿಗೆ ಹಂಚಿಕೊಳ್ಳುತ್ತಿದ್ದೆವು. ಆದರೆ ಈಗ ನಾವು ನಮ್ಮ ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ. ಅಪ್ಪು ಅವರ ಆಸೆಯಂತೆ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮುಗಿಸಿ ಭಾರತ ದೇಶದ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸುವ ರೀತಿ ಸಾಧನೆ ಮಾಡಲಿ ಎಂದು ನಾವು ಕೂಡ ಹರಸೋಣ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ಈ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ.