Home Useful Information ಗೃಹಲಕ್ಷ್ಮಿ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ. ಅರ್ಜಿ ಸಲ್ಲಿಸುವ ವಿಧಾನ & ಬೇಕಾಗುವ ದಾಖಲೆಗಳೇನು ತಪ್ಪದೆ ನೋಡಿ.!

ಗೃಹಲಕ್ಷ್ಮಿ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ. ಅರ್ಜಿ ಸಲ್ಲಿಸುವ ವಿಧಾನ & ಬೇಕಾಗುವ ದಾಖಲೆಗಳೇನು ತಪ್ಪದೆ ನೋಡಿ.!

0
ಗೃಹಲಕ್ಷ್ಮಿ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ. ಅರ್ಜಿ ಸಲ್ಲಿಸುವ ವಿಧಾನ & ಬೇಕಾಗುವ ದಾಖಲೆಗಳೇನು ತಪ್ಪದೆ ನೋಡಿ.!

ಗೃಹಲಕ್ಷ್ಮಿ ಯೋಜನೆ ನೋಂದಣಿ ಫಲಾನುಭವಿಗಳು ಗ್ರಾಮ ಒನ್ , ಕರ್ನಾಟಕ ಒನ್ , ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ “ಉಚಿತವಾಗಿ ನೊಂದಾಯಿಸುವುದು” ಹಾಗೂ ಈ ಯೋಜನೆಯಡಿ ನೋಂದಾಯಿಸುವ ಫಲಾನುಭವಿಯು “ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.

ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಅರ್ಹತೆಗಳು:-

ನೋಂದಣಿ ದಿನಾಂಕ : 20-07-2023ರಿಂದ ಪ್ರಾರಂಭ1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ , ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ.

2. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ GST RETURNS ಸಲ್ಲಿಸುವವರಾಗಿದ್ದಲ್ಲಿ ಆರ್ಹರಾಗುವುದಿಲ್ಲ . ಗೃಹ ಲಕ್ಷ್ಮಿ ಯೋಜನೆ ಸಂಬಂಧ ಯಾವುದೇ ಗೊಂದಲ ಹಾಗೂ ಮಾಹಿತಿಗಾಗಿ 1902 ಕ್ಕೆ ಅಥವಾ 81475 00500 ನ್ನು ಸಂಪರ್ಕಿಸಬಹುದು .

ಗೃಹಲಕ್ಷ್ಮಿ ಯೋಜನೆ ನೋಂದಣಿ ವಿಧಾನ:-

1. ಫಲಾನುಭವಿಗಳು ಗ್ರಾಮ ಒನ್ , ಕರ್ನಾಟಕ ಒನ್ , ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ನೊಂದಾಯಿಸುವುದು.
2. ಫಲಾನುಭವಿಗಳಿಗೆ ನೋಂದಾವಣೆಗೆ ನಿಗಧಿ ಮಾಡಿರುವ ದಿನಾಂಕ , ಸಮಯ , ಸ್ಥಳದ ವಿವರವನ್ನು 1902 ಕ್ಕೆ ಅಥವಾ 8147500500 ಗೆ SMS ಮೂಲಕ ಮಾಹಿತಿ ಪಡೆಯಬಹುದು.
3. ನಿಗಧಿತ ಸಮಯದಲ್ಲಿ ಭೇಟಿ ನೀಡಿ ನೋಂದಾವಣಿ ಮಾಡಿಕೊಳ್ಳಲು ಸಾಧ್ಯವಾಗದೆಯಿದ್ದಲ್ಲಿ ಅದೇ ಕೇಂದ್ರಕ್ಕೆ ಮುಂದಿನ ಯಾವುದೇ ದಿನಗಳಲ್ಲಿ ಸಂಜೆ : 5.00 ಗಂಟೆಯ ನಂತರ ತೆರಳಿ ನೋಂದಾಯಿಸಿಕೊಳ್ಳಬಹುದು.

4. ಅನುಮೋದಿಸಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ನೀಡಲಾಗುವುದು.
5. ಯೋಜನೆಯಡಿ ನೋಂದಾಯಿಸುವ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.
6. ಯೋಜನೆಯಡಿ ನೋಂದಾಯಿಸಲು ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗಧಿ ಪಡಿಸಿರುವುದಿಲ್ಲ .

ಗೃಹಲಕ್ಷ್ಮಿ ಯೋಜನೆಗೆ ಬೇಕಾದ ದಾಖಲಾತಿಗಳು ನೋಂದಣಿ ದಿನಾಂಕ :

20-07-2023ರಿಂದ ಪ್ರಾರಂಭ
1. ಪಡಿತರ ಚೀಟಿಯ ಸಂಖ್ಯೆ
2. ಯಜಮಾನಿ ಹಾಗೂ ಯಜಮಾನಿ ಪತಿಯ ಆಧಾರ್ ಕಾರ್ಡ್ ಸಂಖ್ಯೆ 3. ಯಜಮಾನಿಯ ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್ / ಫಲಾನುಭವಿಯು ಇಚ್ಚಿಸುವ ಪರ್ಯಾಯ ಬ್ಯಾಂಕ್ ಖಾತೆ ವಿವರ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ .

ಆದ್ದರಿಂದ ಇಷ್ಟು ದಾಖಲಾತಿಗಳು ಇರುವುದು ಕಡ್ಡಾಯ. ಜೊತೆಗೆ ಆಧಾರ್ ಕಾರ್ಡ್ ಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಈ ರೀತಿ ಮಾಡಿದ ನಂತರ ಆಗಸ್ಟ್ ನಿಂದಲೇ ನಿಮ್ಮ ಅಕೌಂಟ್ ಗೆ ಪ್ರತಿ ತಿಂಗಳು 2000 ಹಣ ಬಂದು ತಲುಪುತ್ತದೆ ಎಂದು ಹೇಳಿದ್ದಾರೆ.

 

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಹಲವಾರು ದಿನ ಕಳೆದಿದ್ದು ಅವರು ಅಧಿಕಾರಕ್ಕೆ ಬರುವ ಮುಂಚೆ ಕೆಲವೊಂದಷ್ಟು ಗ್ಯಾರಂಟಿಗಳನ್ನು ಘೋಷಿ ಸಿದ್ದರು. ಹೌದು ಅಂದರೆ ಕಾಂಗ್ರೆಸ್ ಪಕ್ಷ ಜನರಿಗೆ ನಾವೇನಾದರೂ ಈ ಬಾರಿ ಅಧಿಕಾರಕ್ಕೆ ಬಂದರೆ ಜನರಿಗೆ 5 ಗ್ಯಾರಂಟಿಯನ್ನು ಉಚಿತವಾಗಿ ಕೊಡುತ್ತೇವೆ ಹಾಗಾಗಿ ನಮಗೆ ಒಮ್ಮೆ ಅವಕಾಶ ಕೊಡಿ ಎಂದು ಹೇಳುವುದರ ಮೂಲಕ ತಮ್ಮ ಗ್ಯಾರಂಟಿಯ ವಿಚಾರವನ್ನು ಹೇಳಿದ್ದರು.

ಅದೇ ರೀತಿಯಾಗಿ ಕಾಂಗ್ರೆಸ್ ಪಕ್ಷ ಈ ಬಾರಿ ಗೆದ್ದು ಅಧಿಕಾರಕ್ಕೆ ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಗೊಂಡಿದ್ದಾರೆ. ಅವರು ಆಯ್ಕೆಯಾದ ಸ್ವಲ್ಪ ದಿನದಲ್ಲಿಯೇ ಮೊದಲನೆಯ ಗ್ಯಾರಂಟಿಯನ್ನು ಈಡೇರಿಸಿದ್ದು ಅದು ಯಾವುದು ಎಂದರೆ ಮಹಿಳೆಯರಿಗೆ ನಮ್ಮ ಕರ್ನಾಟಕ ಸರ್ಕಾರದ ವತಿಯಿಂದ ನಮ್ಮ ರಾಜ್ಯದ ಒಳಗಡೆ.

ಎಲ್ಲಿ ಬೇಕಾದರೂ ಓಡಾಡಬಹುದು ಅಂದರೆ KSRTC ಬಸ್ ಗಳಲ್ಲಿ ಯಾವುದೇ ರೀತಿಯಾದಂತಹ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ ಬದಲಿಗೆ ಉಚಿತವಾಗಿ ಪ್ರಯಾಣಿಸಬಹುದು ಮಹಿಳೆಯರು ಎಂಬ ಆದೇಶವನ್ನು ಹೇಳಿದ್ದರು. ಅದೇ ರೀತಿಯಾಗಿ ಈ ಒಂದು ಯೋಜನೆ ಜಾರಿ ಬಂದು ಹಲವಾರು ದಿನಗಳಾಗಿದ್ದು ಇದರ ಪ್ರಯೋಜನವನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

ಈ ಒಂದು ಯೋಜನೆ ಜಾರಿಗೆ ಬಂದ ಮೇಲೆ ಮಹಿಳೆ ಯರು ಕೆಲವೊಂದಷ್ಟು ಸಂಕಟದ ಮಾತುಗಳನ್ನು ವ್ಯಕ್ತಪಡಿಸಿದ್ದು ಹಾಗೂ ಕೆಲವೊಮ್ಮೆ ಈ ಒಂದು ಯೋಜನೆ ಕೆಲವರಿಗೆ ತೊಂದರೆಯಾಗುತ್ತಿದೆ ಎನ್ನುವಂತಹ ಮಾತುಗಳನ್ನು ಸಹ ಹೇಳುತ್ತಿದ್ದಾರೆ. ಆದರೆ ಒಟ್ಟಾರೆ ಯಾಗಿ ಹೇಳಬೇಕು ಎಂದರೆ ಈ ಒಂದು ಯೋಜನೆ ಕೆಲವೊಂದು ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತಿದೆ ಎಂದೇ ಹೇಳಬಹುದು.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ 5 ಗ್ಯಾರಂಟಿಗಳಲ್ಲಿ ಒಂದಾಗಿರುವಂತಹ ಈ ಒಂದು ಗೃಹಲಕ್ಷ್ಮಿ ಯೋಜನೆ ಇಂದು ಜಾರಿಗೆ ಬರಲಿದ್ದು ಅಂದರೆ 19ನೇ ತಾರೀಖು ಸಂಜೆ ಈ ಒಂದು ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಅವರ ಸಮಕ್ಷಮದಲ್ಲಿ ಈ ಒಂದು ಯೋಜನೆಗೆ ಚಾಲ್ತಿ ಸಿಗಲಿದ್ದು.

ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳ ಬೇಕು ಎನ್ನುವಂತಹ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ, ಡಿಕೆ ಶಿವ ಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್, ಅವರು ತಿಳಿಸಿದ್ದಾರೆ ಹೌದು. ಇಂದಿನಿಂದ ಈ ಒಂದು ಯೋಜನೆಗೆ ಅರ್ಜಿ ಹಾಕುವಂತಹ ಅವಕಾಶವನ್ನು ಕಲ್ಪಿಸಿ ಕೊಟ್ಟಿರುವಂತಹ ಸರ್ಕಾರ ಎಪಿಎಲ್ ಕಾರ್ಡ್, ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಹೀಗೆ ಕೆಲವೊಂದಷ್ಟು ಕಾರ್ಡ್ ಹೊಂದಿರುವ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

LEAVE A REPLY

Please enter your comment!
Please enter your name here