6 ವರ್ಷಗಳ ಕಿಚ್ಚ-ದಚ್ಚು ಮನಸ್ತಾಪಕ್ಕೆ ತೆರೆ ಎಳೆದರಾ ಸುಮಲತಾ ಅಂಬರೀಶ್.! ಕೊನೆಗೂ ಒಂದಾದ್ರು ಕುಚಿಕೋ ಗೆಳೆಯರು.!

ಸುಮಲತಾ ಅಂಬರೀಶ್ (Sumalatha Ambarish birthday) ಅವರು ತಮ್ಮ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದರ ಪ್ರಯುಕ್ತ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ಪಾರ್ಟಿ (Party) ಕೂಡ ಅರೆಂಜ್ ಮಾಡಲಾಗಿತ್ತು. ಸ್ಯಾಂಡಲ್ ವುಡ್ ಸ್ಟಾರ್ ನಟರು ಸೇರಿದಂತೆ ಅನೇಕ ಗಣ್ಯರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಶನಿವಾರ ನಡೆದ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಇದರಲ್ಲಿ ಎಲ್ಲರ ಗಮನ ಸೆಳೆದಿರುವುದು ಕಿಚ್ಚ ಸುದೀಪ್ (Kichcha Sudeep) ಹಾಗೂ ದಾಸ ದರ್ಶನ್ (Darshan) ಇಬ್ಬರು ವೇದಿಕೆ ಮೇಲೆ ಕಾಣಿಸಿಕೊಂಡಿರುವುದು. ಇದು ಇಬ್ಬರ ನಿಜವಾದ ಅಭಿಮಾನಿಗಳ ಮನದಲ್ಲಿ ಬಹಳ ಸಂತೋಷವನ್ನುಂಟು ಮಾಡಿದೆ.

ಕೇಂದ್ರ ಸರ್ಕಾರದಿಂದ ಪುರುಷರಿಗೆ ಬಂಪರ್ ಯೋಜನೆ ಘೋಷಣೆ.!

ಯಾಕೆಂದರೆ, ಬರೋಬ್ಬರಿ ಆರು ವರ್ಷಗಳ ಬಳಿಕ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಮುಖಿಮುಖಿಯಾಗಿ ಸುದೀಪ್ ಹಾಗೂ ದರ್ಶನ್ ಎದುರು ಬದುರಾಗಿದ್ದಾರೆ ಇದಕ್ಕೆಲ್ಲ ಸುಮಲತಾ ಅವರೇ ಕಾರಣ ಎಂದು ಹೇಳಲಾಗುತ್ತಿದೆ ದರ್ಶನ್ ಹಾಗೂ ಸುದೀಪ್ ಅವರು ಸಮಕಾಲೀನರು, ಒಂದೇ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟವರು.

ದರ್ಶನ್ ಅವರ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಹಾಗೂ ಸಾರಥಿ ಸಿನಿಮಾ ರಿಲೀಸ್ ವೇಳೆ ವರೆಗೂ ಕೂಡ ಇವರಿಬ್ಬರು ಒಬ್ಬರ ಬಗ್ಗೆ ಮತ್ತೊಬ್ಬರು ಎಂದು ಕೂಡ ಮಾತನಾಡಿದವರಲ್ಲ, ಹಲವು ಸಮಯಗಳಲ್ಲಿ ಇವರಿಬ್ಬರ ಸಿನಿಮಾಗಳು ಒಂದೇ ದಿನ ರಿಲೀಸ್ ಆದರೂ ಕೂಡ ವಿರುದ್ಧವಾಗಿಯೂ ಮಾತಾಡಿರಲಿಲ್ಲ.

ಶ್ರೀ ಲಕ್ಷ್ಮೀನಾರಾಯಣ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

ಆದರೆ ದರ್ಶನ್ ಅವರ ಸಾರಥಿ ಸಿನಿಮಾ ರಿಲೀಸ್ ವೇಳೆ ಆದ ಅವರ ವೈಯಕ್ತಿಕ ಜೀವನದ ಗ’ಲಾ’ಟೆ ಸಮಯದಲ್ಲಿ ಸುದೀಪ್ ಮತ್ತು ದರ್ಶನ್ ಅವರ ಬಾಂಧವ್ಯ ಗಟ್ಟಿಯಾಯಿತು. ಆ ಬಳಿಕ ಇಬ್ಬರು ಒಂದೇ ತಾಯಿಯ ಮಕ್ಕಳಂತೆ ಕೆಲವು ವರ್ಷಗಳ ಕಾಲ ಒಟ್ಟಿಗೆ ಕಳೆದಿದ್ದರು. ಇಡೀ ಕರುನಾಡು ಇವರಿಬ್ಬರ ಸ್ನೇಹವನ್ನು ಕಂಡು ಅಂಬರೀಶ್ ಹಾಗೂ ವಿಷ್ಣುವರ್ಧನ್ ಬಳಿಕ ಕನ್ನಡ ಸಿನಿಮಾ ಇಂಡಸ್ಟ್ರಿಯ ದಿಗ್ಗಜರು ಕಿಚ್ಚ ಮತ್ತು ದರ್ಶನ್ ಮಾತ್ರ ಆಗಬಲ್ಲರು ಎಂದು ಭವಿಷ್ಯ ಕೂಡ ನುಡಿದಿದ್ದರು.

ಒಂದೇ ತಟ್ಟೆಯಲ್ಲಿ ತಿನ್ನುತ್ತಾ, ಒಂದೇ ಕಾರಿನಲ್ಲಿ ಓಡಾಡಿಕೊಂಡಿದ್ದ ಇವರಿಬ್ಬರ ಸ್ನೇಹದ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಏನೋ ಇಬ್ಬರ ನಡುವೆ ಉಂಟಾದ ಬಿ’ರು’ಕು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಹಾಕಿಕೊಂಡು ವಿರೋಧಿಸುವವರೆಗೂ ಮುಂದುವರೆಯಿತು. ಇದ್ದಕ್ಕಿದ್ದಂತೆ ದರ್ಶನ್ ಒಂದು ದಿನ ಸುದೀಪ್ ನನ್ನ ಸ್ನೇಹಿತನಲ್ಲ ಇಬ್ಬರು ಒಂದೇ ಇಂಡಸ್ಟ್ರಿ ನಟರು ಅಷ್ಟೇ ಎಂದು ಬಿಟ್ಟರು.

ಜಿಲ್ಲಾ ಪಂಚಾಯತ್ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.! ವೇತನ 24,000/-

ಸುದೀಪ್ ಪ್ರತಿಕ್ರಿಯಿಸಿ ನನ್ನ ಜೀವನದಲ್ಲಿ ಕೊಟ್ಟ ಸ್ಥಾನವನ್ನು ಕೊನೆ ತನಕ ಉಳಿಸಿಕೊಳ್ಳುತ್ತೇನೆ ಎಂದು ಸುಮ್ಮನಾಗಿದ್ದರು. ಇದಾದ ಬಳಿಕ ಇಬ್ಬರೂ ಕೂಡ ಯಾವಾಗ ಒಂದಾಗುತ್ತಾರೆ ಇವರಿಬ್ಬರ ಕಾಂಬಿನೇಷನಲ್ಲಿ ಸಿನಿಮಾ ನೋಡಬೇಕು ಎಂದು ಇಬ್ಬರ ಅಭಿಮಾನಿಗಳು ಕೂಡ ಕಾಯುತ್ತಿದ್ದರು ಆದರೆ ಇವರಿಬ್ಬರ ಕಡೆಯಿಂದ ಆ ಸುಳಿವೇ ಇರಲಿಲ್ಲ. ಅಂಬರೀಶ್ (Ambarish) ಅವರು ಇದ್ದಿದ್ದರೆ ಇವರಿಬ್ಬರನ್ನು ಈ ವೇಳೆಗೆ ಒಂದು ಮಾಡಿರುತ್ತಿದ್ದರು ಎಂದು ಅಭಿಪ್ರಾಯ ಪಟ್ಟಿದ್ದರು.

ಅಂಬರೀಶ್ ಅವರು ದರ್ಶನ್ ಅವರನ್ನು ಸ್ವಂತ ಮಗ ಎಂದುಕೊಂಡಿದ್ದರು. ಸುದೀಪ್ ಅವರ ಮೇಲೂ ಸಮನಾದ ಪ್ರೀತಿ ಇತ್ತು. ಇಬ್ಬರು ನಟರು ಅಂಬರೀಶ್ ಅವರ ಮಾತಿಗೆ ಎದುರು ಮಾತು ಹೇಳುತ್ತಿರಲಿಲ್ಲ. ಈಗ ಅಂಬರೀಶ್ ಅವರ ಅನುಪಸ್ಥಿತಿಯಲ್ಲಿ ಸುಮಲತಾ ಅಂಬರೀಶ್ ಅವರು ಆ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಉಪ್ಪಿನ ಜಾರಿನಲ್ಲಿ ಈ 3 ವಸ್ತುಗಳನ್ನು ಇಟ್ಟು ನೋಡಿ ಸಾಕು, ಬೇಡ ಅನ್ನುವಷ್ಟು ಹಣ ಬರುತ್ತಲೇ ಇರುತ್ತದೆ.!

ತಡರಾತ್ರಿ ಮೂರು ಗಂಟೆವರೆಗೂ ನಡೆದ ಬರ್ತಡೇ ಪಾರ್ಟಿಯಲ್ಲಿ ಇವರಿಬ್ಬರನ್ನು ಒಂದು ಮಾಡುವ ಪ್ರಯತ್ನ ನಡೆದಿದೆ ಎಂದು ಕೆಲವೆಡೆ ಮಾತು ಕೇಳಿಬರುತ್ತದೆ. ಮತ್ತೆ ಕೆಲವರು ಇಬ್ಬರು ನಟರು ಮುಖಾಮುಖಿಯಾದಾಗ ಮುಗುಳ್ನಕ್ಕು ಮುನ್ನಡೆದಿದ್ದಾರೆ ಅಷ್ಟೇ ಎಂದು ಸಹ ಹೇಳುತ್ತಿದ್ದಾರೆ. ಆದಷ್ಟು ಬೇಗ ಇವರಿಬ್ಬರ ನಡುವಿನ ಮ’ನ’ಸ್ತಾ’ಪ’ಕ್ಕೆ ತೆರೆ ಬೀಳಲಿ ಎಂದು ನಾವು ಬಯಸೋಣ.

Leave a Comment

WhatsApp Group Join Now
Telegram Group Join Now