ಮಲಬದ್ಧತೆ ಅಜೀರ್ಣ ಎನ್ನುವುದು ಇತ್ತೀಚಿನಕ್ಕೆ ಸಾಮಾನ್ಯವಾಗಿ ಎಲ್ಲರಲ್ಲೂ ಕೇಳಿ ಬರುವ ಒಂದು ಸಾಮಾನ್ಯ ಕಾಯಿದೆ. ಈ ರೀತಿ ಆಗುವುದಕ್ಕೆ ಕಾರಣ ಸಾಕಷ್ಟಿದೆ, ನಾವು ಇಂದು ಅಳವಡಿಸಿಕೊಳ್ಳದಿರುವ ತಪ್ಪಾದ ಜೀವನ ಶೈಲಿ ಹಾಗೂ ನಾವು ತಿನ್ನುತ್ತಿರುವ ಆಹಾರ, ತಡವಾಗಿ ಮಲಗುವುದು, ತಡವಾಗಿ ಏಳುವುದು, ತಡವಾಗಿ ಆಹಾರ ಸೇವನೆ ಮಾಡುವುದು ಅಜೀರ್ಣವಾಗದಂತ ಆಹಾರ ಪದಾರ್ಥ ತಿನ್ನುವುದು ಇನ್ನು ಇತ್ಯಾದಿ ಕಾರಣಗಳಿಂದಾಗಿ ಮಲಬದ್ಧತೆ ಉಂಟಾಗುತ್ತದೆ.
ಈ ಮಲಬದ್ಧತೆ ಸರ್ವ ರೋಗಗಳಿಗೂ ಮೂಲ ಏಕೆಂದರೆ, ಮಲಬದ್ಧತೆ ಇದ್ದವರಿಗೆ ಹೃದಯದ ಸಮಸ್ಯೆ, ರಕ್ತದೊತ್ತಡ, ಅಲರ್ಜಿ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು, ಅಜೀರ್ಣ, ನೆನಪಿನ ಶಕ್ತಿ ಕುಂದುವುದು, ತಲೆ ಕೂದಲು ಉದುರುವುದು ಹಾಗೂ ಕಡಿಮೆ ವಯಸಿಗೆ ತಲೆ ಕೂದಲು ಬೆಳ್ಳಗಾಗುವುದು ಇತ್ಯಾದಿ ಕಾಯಿಲೆಗಳಿಗೆ ಮಲಬದ್ಧತೆಗೆ ಕಾರಣ.
ಮಲಬದ್ಧತೆಯಿಂದ ವಾತ ಪಿತ್ತ ಕಫ ವಿಕಾರಗಳು ಉಂಟಾಗಿ ಆ ಮೂಲಕ ಅಂಗಾಂಗಗಳ ಆರೋಗ್ಯವನ್ನು ಕೆಡಿಸುತ್ತವೆ. ಮಲಬದ್ಧತೆ ಇದ್ದವರಿಗೆ ಮಾನಸಿಕ ಒತ್ತಡಗಳು ಕೂಡ ಇರುತ್ತದೆ ಅವರು ಯಾವುದರಲ್ಲೂ ಆಸಕ್ತಿ ಹೊಂದಿರುವುದಿಲ್ಲ, ಅವರಲ್ಲಿ ಲವಲವಿಕೆ ಇರುವುದಿಲ್ಲ, ಮಲಬದ್ಧತೆ ಉಂಟಾದರೆ ಕರುಳು ಕಟ್ಟುವುದರಿಂದ ಕರುಳು ಕಲುಷಿತಕೊಂಡರೆ ಮೆದುಳಿನ ನ್ಯೂರಾಣುಗಳು ಕೂಡ ಆಕ್ಟಿವ್ ಆಗಿರುವುದಿಲ್ಲ ಹೀಗಾಗಿ ಇಂತಹ ಸಮಸ್ಯೆಗಳು ಬರುತ್ತವೆ.
ನಾವು ದಿನಪೂರ್ತಿ ಆಕ್ಟಿವ್ ಆಗಿ ಸಂತೋಷವಾಗಿ ಆರೋಗ್ಯವಾಗಿರಬೇಕು ಎಂದರೆ ಆ ದಿನದ ನಿತ್ಯ ಕರ್ಮಗಳು ಸರಿಯಾಗಿ ಆಗಿರಬೇಕು. ಈ ರೀತಿ ಯಾವುದೇ ಕಾರಣದಿಂದಾಗಿ ನಿಮಗೆ ಮಲಬದ್ಧತೆ ಉಂಟಾಗಿದ್ದರೆ ಅದನ್ನು ಸುಲಭವಾಗಿ ಮನೆಯಲ್ಲೇ ಇರುವಂತಹ ಅದ್ಭುತವಾದ ಔಷಧಿಯಿಂದ ಗುಣ ಮಾಡಿಕೊಳ್ಳುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
ಪ್ರತಿದಿನ ರಾತ್ರಿ ಊಟ ಆದಮೇಲೆ ಎರಡು ಗಂಟೆಗಳ ನಂತರ ಕುದಿಸಿ ಕುದಿಸಿ ಆರಿಸಿದ ಬೆಚ್ಚಗಿನ ಹಾಲಿಗೆ ಎರಡರಿಂದ ಮೂರು ಚಮಚ ಶುದ್ಧವಾದ ಹರಳೆಣ್ಣೆ ಮಿಕ್ಸ್ ಮಾಡಿ ಕುಡಿಯಬೇಕು, ಒಂದು ವೇಳೆ ರಾತ್ರಿ ಕುಡಿಯಲು ಸಾಧ್ಯವಾಗದೆ ಇದ್ದವರು ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ಊಟ ತಿನ್ನುವ ಎರಡು ಗಂಟೆಗಳ ಮುನ್ನ ಅಂದರೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರಿಗೆ ಎರಡರಿಂದ ಮೂರು ಚಮಚ ಈ ಶುದ್ಧ ಹರಳೆಣ್ಣೆಯನ್ನು ಹಾಕಿಕೊಂಡು ಕುಡಿಯಬಹುದು.
ಈ ರೀತಿ ಕುಡಿದ ಮೇಲೆ 15 ರಿಂದ 20 ನಿಮಿಷಗಳಿಗೆ ಆಗಾಗ ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಕರುಳಲ್ಲಿ ಶೇಖರಣೆಯಾಗಿರುವ ಕಲ್ಮಶಗಳು ಕೂಡ ಆಚೆ ಬರುತ್ತದೆ. ಮೂರು ತಿಂಗಳವರೆಗೆ ಪ್ರತಿದಿನವೂ ತಪ್ಪದೇ ಮನೆ ಮದ್ದು ಮಾಡಿ ನೋಡಿ ನಿಮ್ಮ ಆರೋಗ್ಯ ಹೇಗೆ ಬದಲಾಗುತ್ತದೆ ಆಶ್ಚರ್ಯ ಪಡುತ್ತೀರಿ.
ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವುದು ಕೂಡ ಟಾಕ್ಸಿನ್ ಅಂಶಗಳನ್ನು ಹೊರಹಾಕಿ ಜಠರಾಗ್ನಿಯನ್ನು ಕ್ರಿಯಾಶೀಲಗೊಳಿಸುತ್ತದೆ. ಇದರಿಂದ ಜೀರ್ಣ ಶಕ್ತಿ ವೃದ್ಧಿಯಾಗಿ ಚಯಾಪಚಯ ಕ್ರಿಯೆಗಳು ಸರಾಗವಾಗಿ ಸಾಗುತ್ತದೆ. ಆದ್ದರಿಂದ ತಪ್ಪದೇ ಇವುಗಳನ್ನು ಪಾಲಿಸಿ ಮತ್ತು ಆದಷ್ಟು ಸರಾಗವಾಗಿ ಜೀರ್ಣವಾಗುವ ಆಹಾರ ಪದಾರ್ಥಗಳನ್ನು ಸೇವಿಸಿ.
ನಾರಿನಾಂಶ ಹೆಚ್ಚಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ, ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ, ಆಹಾರದಲ್ಲಿ ತುಪ್ಪದ ಬಳಕೆ ಮಾಡುವುದು ಕೂಡ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಇದರೊಂದಿಗೆ ರಾತ್ರಿ ಹೊತ್ತು ತಡವಾಗಿ ಮಲಗುತ್ತಿದ್ದರೆ ಆ ಅಭ್ಯಾಸವನ್ನು ತಪ್ಪಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳಿ.