Home Useful Information ಈ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಗುವ ಎಲೆ ಸೇವಿಸಿದರೆ ಮೂಳೆಗಳ ಸಮಸ್ಯೆ ತಕ್ಷಣ ನಿವಾರಣೆ.!

ಈ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಗುವ ಎಲೆ ಸೇವಿಸಿದರೆ ಮೂಳೆಗಳ ಸಮಸ್ಯೆ ತಕ್ಷಣ ನಿವಾರಣೆ.!

0
ಈ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಗುವ ಎಲೆ ಸೇವಿಸಿದರೆ ಮೂಳೆಗಳ ಸಮಸ್ಯೆ ತಕ್ಷಣ ನಿವಾರಣೆ.!

 

ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸುವಂತಹ ಹನುಮಂತನ ದೇವಸ್ಥಾನ ಒಂದಿದೆ. ಸ್ವತಹ ವೈದ್ಯರೇ ಹೇಳುತ್ತಾರೆ ಈ ದೇವಸ್ಥಾನಕ್ಕೆ ಹೋಗಿ ದೇಹದಲ್ಲಿ ಯಾವುದೇ ಮೂಳೆಯ ಸಮಸ್ಯೆ ಇದ್ದರೂ ಅದು ಅತಿ ವೇಗವಾಗಿ ಗುಣವಾಗುತ್ತದೆ ಎಂದು ಈ ವಿಚಾರ ನಂಬಲು ನಿಮಗೆ ಕಷ್ಟವಾಗುತ್ತದೆ ಆದರೆ ಇದು ಖಂಡಿತವಾಗಿಯೂ ನೂರಕ್ಕೆ ನೂರು ಸತ್ಯವಾದ ಸಂಗತಿ.

ಈ ಹನುಮಂತ ದೇವರ ದೇವಾಲಯದ ಒಳಗಡೆ ಒಂದು ವಿಸ್ಮಯಕಾರಿ ಎಲೆ ಬೆಳೆಯುತ್ತದೆ. ಈ ಒಂದು ಎಲೆ ತಿಂದರೆ ಸಾಕು ದೇಹದ ಯಾವುದೇ ಮೂಳೆಯ ಸಮಸ್ಯೆಯಾಗಿರಲಿ ಅದು ತಕ್ಷಣವೇ ಗುಣವಾಗುತ್ತದೆ. ವಿಜ್ಞಾನಿಗಳು ಈಗಲೂ ಹೇಳುತ್ತಾ ಇದ್ದಾರೆ ಈ ದೇವಸ್ಥಾನದಲ್ಲಿ ಸಿಗುವ ಎಲೆಯೇ ಸಂಜೀವಿನಿ ಎಲೆ ಎಂದು.

ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪುರೋಹಿತರು ಸಂಜೀವಿನಿ ಎಲೆ ಯನ್ನು ತಿನ್ನಿಸುವಂತಹ ಏಕೈಕ ಹನುಮಂತ ದೇವರ ದೇವಸ್ಥಾನವೇ ಸಂಕಷ್ಟ ಮೋಚಾನ್ ಹನುಮಾನ್ ಮಂದಿರ. ಈ ದೇವಸ್ಥಾನ ಇರೋದು ನಮ್ಮ ಭಾರತ ದೇಶದ ಮಧ್ಯಪ್ರದೇಶ ರಾಜ್ಯದ ಕತಿನಿ ಎಂಬ ನಗರದಲ್ಲಿ. ಕಳೆದ ಐದು ವರ್ಷದಲ್ಲಿ ಈ ದೇವಸ್ಥಾನ ವಿಶ್ವ ಪ್ರಸಿದ್ಧಿಯನ್ನು ಪಡೆಯಿತು.

ಸರಿ ಸುಮಾರು ಪ್ರತಿನಿತ್ಯ 30,000 ದಿಂದ 40,000 ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಹಾಗೂ ಪ್ರತಿ ಬಾರಿ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಇದಕ್ಕೆ ಕಾರಣ ಹನುಮಂತ ದೇವರ ಶಕ್ತಿ ಮತ್ತು ದೇವಸ್ಥಾನದಲ್ಲಿ ಸಿಗುತ್ತಿರುವಂತಹ ಸಂಜೀವಿನಿ ಎಲೆ. 2018 ರ ತನಕ ಈ ದೇವಸ್ಥಾನದ ಬಗ್ಗೆ ಯಾರಿಗೂ ಯಾವುದೇ ಮಾಹಿತಿಯು ಸಹ ಇರಲಿಲ್ಲ.

ಆದರೆ ಇದ್ದಕ್ಕಿದ್ದ ಹಾಗೆ ಸಂಕಷ್ಟ ಮೋಚಾನ್ ಹನುಮಾನ್ ಮಂದಿರ ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ವರ್ಷದ 365 ದಿನವೂ ಈ ದೇವಸ್ಥಾನದ ಬಾಗಿಲು ತೆಗೆದಿರುತ್ತದೆ. ನಿಮ್ಮಲ್ಲಿ ಯಾವುದೇ ರೀತಿಯ ಮೂಳೆಯ ಸಮಸ್ಯೆ ಇದ್ದು ವೈದ್ಯರು ಕೂಡ ಅದನ್ನು ಗುಣಪಡಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಮೆಡಿಕಲ್ ರಿಪೋರ್ಟ್ ಜೊತೆ ನೀವು ಈ ದೇವಸ್ಥಾನಕ್ಕೆ ಬರಬೇಕು.

ನೀವು ಸಂಜೀವಿನಿ ಎಲೆಯನ್ನು ಸೇವಿಸಬೇಕು ಎಂದರೆ ಮೆಡಿಕಲ್ ರಿಪೋರ್ಟ್ ಕಡ್ಡಾಯವಾಗಿ ಬೇಕೇ ಬೇಕು. ಎಲ್ಲರಿಗೂ ಕೂಡ ಸಂಜೀವಿನಿ ಎಲೆಯನ್ನು ತಿನ್ನಿಸುವುದಿಲ್ಲ ಅವಶ್ಯಕತೆ ಇದ್ದವರಿಗೆ ಮಾತ್ರ. ಪ್ರತಿಯೊಬ್ಬರಿಗೂ ಕೂಡ ಸಂಜೀವಿನಿ ಎಲೆ ಸಿಕ್ಕರೆ ಉಪಯೋಗವಾಗುತ್ತದೆ ಆದರೆ ಎಲ್ಲರಿಗೂ ಯಾಕೆ ಕೊಡುವುದಿಲ್ಲ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.

ಇದಕ್ಕೆ ಕಾರಣ ಏನು ಎಂದು ತಿಳಿಯೋಣ. ದೇವಸ್ಥಾನದ ಹಿಂಬದಿಯಲ್ಲಿ ಒಂದು ತೋಟ ಇದೆ ಈ ತೋಟದಲ್ಲಿ ಕಡಿಮೆ ಪ್ರಮಾಣದಲ್ಲಿ ಮಾತ್ರ ಸಂಜೀವಿನಿ ಎಲೆ ಇದೆ. ಸರಿ ಸುಮಾರು 5 ರಿಂದ 6 ಗಿಡ ಅಂದರೆ ಕನಿಷ್ಠ ಪಕ್ಷ 100 ಎಲೆಗಳು ಸಿಗಬಹುದು. ಈ ರೀತಿಯ ಪರಿಸ್ಥಿತಿ ಇರುವುದ ರಿಂದ ಎಲ್ಲಾ ಭಕ್ತರಿಗೂ ಕೂಡ ಸಂಜೀವಿನಿ ಎಲೆಯನ್ನು ಕೊಡಲು ಸಾಧ್ಯವಾಗುವುದಿಲ್ಲ.

ಈ ದೇವಸ್ಥಾನದ ಮುಖ್ಯ ಅರ್ಚಕರು ಸಂಜೀವಿನಿ ಎಲೆಯನ್ನು ಅವಶ್ಯಕತೆ ಇದ್ದವರಿಗೆ ತಿನ್ನಿಸುತ್ತಾರೆ. ಮತ್ತೊಂದು ಬಹಳ ಪ್ರಮುಖವಾದ ವಿಷಯ ಏನು ಎಂದರೆ ಸಂಜೀವಿನಿ ಎಲೆಯನ್ನು ಸೇವಿಸುವುದಕ್ಕೆ ನೀವು ಯಾವುದೇ ರೀತಿಯ ಹಣಕಾಸನ್ನು ಕೊಡುವ ಅವಶ್ಯಕತೆ ಇಲ್ಲ ನೀವು ಕಾಣಿಕೆ ರೂಪದಲ್ಲಿ ದುಡ್ಡನ್ನು ಅರ್ಚಕರಿಗೆ ಕೊಟ್ಟರು ಕೂಡ ಅವರು ಪಡೆದುಕೊಳ್ಳುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

LEAVE A REPLY

Please enter your comment!
Please enter your name here