Home Useful Information ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

0
ಜಾತಕ ಎನ್ನುವುದು ಸತ್ಯವೋ.?  ಸುಳ್ಳೋ,  ಇಲ್ಲಿದೆ ನೋಡಿ ನಿಖರ ಮಾಹಿತಿ.!

 

ಜಾತಕ ಈ ಪದ ಕೇಳಿದ ತಕ್ಷಣವೇ ಜನರು ಬೆಚ್ಚಿಬೀಳುತ್ತಾರೆ. ಯಾಕೆಂದರೆ ಇದರ ಬಗ್ಗೆ ಎಷ್ಟು ಕುತೂಹಲ ಇರುತ್ತದೆಯೋ ಕೇಳಿದ ಮೇಲೆ ಅಷ್ಟೇ ಭ’ಯ ಹುಟ್ಟುತ್ತದೆ. ಹಾಗಾಗಿ ಅನೇಕರು ಜಾತಕ ಬರೆಸುವುದು ಜಾತಕ ವಿಮರ್ಶೆ ಮಾಡಿಸುವುದು ಈ ಘೀಳಿಗೆ ಹೋಗುವುದಿಲ್ಲ.

ಹಿಂದೆ ಮನೆ ತುಂಬಾ ಮಕ್ಕಳಿರುತ್ತಿದ್ದರು ಅಷ್ಟೊಂದು ಯಾರೂ ತೀರ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಈಗ ನಿಧಾನವಾಗಿ ಎಲ್ಲರೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಇತ್ಯಾದಿಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮದುವೆ ವಿಚಾರ ಬಂದಾಗ ಜಾತಕ ಹೊಂದಾಣಿಕೆ ಮಾಡಿಸುವುದಕ್ಕೆ ವಿಪರೀತ ತಲೆ ಕೆಡಿಸಿಕೊಂಡು ಓಡಾಡುತ್ತಾರೆ ಅವರಿಗೆಲ್ಲ ಕಿವಿ ಮಾತನ್ನು ಈ ಲೇಖನದ ಮೂಲಕ ತಿಳಿಸಲು ಬಯಸುತ್ತಿದ್ದೇವೆ.

ಈ ಸುದ್ದಿ ಓದಿ:- ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ವಿಪರೀತವಾಗಿ ಜಾತಕ ಎನ್ನುವುದಕ್ಕೆ ತಲೆ ಕೆಡಿಸಿಕೊಂಡು ದುಃ’ಖ ಪಡುವ ಅವಶ್ಯಕತೆ ಇಲ್ಲ. ಯಾಕೆಂದರೆ ಜಾತಕದಲ್ಲಿ ಗ್ರಹ ಕೃತಿಗಳ ಪ್ರಭಾವ ಇದೆ ಎನ್ನುವುದು ಎಷ್ಟು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದರೆ ಒಂದು ವೇಳೆ ಇದ್ದರೂ ಸರಿಯಾಗಿ ವಿಮರ್ಶೆ ಮಾಡುವಂತಹ ಜ್ಯೋತಿಷ್ಯ ಶಾಸ್ತ್ರಜ್ಞರು ಈಗಿನ ಕಾಲದಲ್ಲಿ ಬಹಳ ವಿರಳ ಸಂಖ್ಯೆಯಲ್ಲಿ ಸಿಗುತ್ತಾರೆ.

ಕಡಿಮೆ ಇದ್ದರೂ ಇದನ್ನು ಕುಲಂಕುಶವಾಗಿ ಅಳೆಯುವುದಕ್ಕೆ ಒಂದು ದಿನ ಸಾಕಾಗುವುದೇ ಇಲ್ಲ ಆದರೆ ನೋಡಿದ 5-10 ನಿಮಿಷದಲ್ಲಿ ನಿಮ್ಮ ಜಾತಕ ನೋಡಿ ಲೆಕ್ಕಾಚಾರ ಹಾಕಿ ಅವರೇನಾದರೂ ಆ ಕಂ’ಠ’ಕ ಇದೆ, ಈ ದೋಷ ಇದೆ, ಅಷ್ಟು ಸಾವಿರ ಖರ್ಚು ಮಾಡಿ ಪರಿಹಾರ ಮಾಡಿಸಬೇಕು ಎಂದೆಲ್ಲಾ ಸಲಹೆ ಕೊಟ್ಟರೆ ಅದನ್ನು ತುಂಬಾ ಲೈಟ್ ಆಗಿ ತೆಗೆದುಕೊಳ್ಳಿ.

ಯಾಕೆಂದರೆ ಜಾತಕ ಹೊಂದಾಣಿಕೆ ಆಗದೆ ಇದ್ದರೂ ಮನಸ್ಸು ಹೊಂದಾಣಿಕೆ ಆಗಿ ಮದುವೆ ಆದವರು ಬಹಳಷ್ಟು ಜನ ಸಂತೋಷವಾಗಿ ಬದುಕುತ್ತಿದ್ದಾರೆ. ಹಾಗೆಯೇ ಜಾತಕ ನೋಡಿಸಿ ಮದುವೆ ಆಗಿದ್ದರು ಮದುವೆಯಾದ ಸ್ವಲ್ಪ ದಿನದಲ್ಲೇ ದು’ರಂ’ತವಾದ ‌ ಉದಾಹರಣೆಯೂ ಸುತ್ತಮುತ್ತಲೇ ಸಿಕ್ಕಿರುತ್ತದೆ ಹಾಗಾಗಿ ಇದರ ಬಗ್ಗೆ ನಂಬಬೇಕೋ ಬೇಡವೋ ಎನ್ನುವ ಕನ್ಫ್ಯೂಷನ್ ಹುಟ್ಟದೆ ಇರದು.

ಈ ಸುದ್ದಿ ಓದಿ:- ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

ನೀವು ಮನಸ್ಸಿಗೆ ಸಮಾಧಾನ ಸಿಗಬೇಕು ಎಂದರೆ ಅಥವಾ ಈಗಾಗಲೇ ಜಾತಕ ತೋರಿಸಿ, ಯಾವುದೋ ಒಂದು ವಿಷಯ ನಿಮ್ಮನ್ನು ಕಾಡುತ್ತಿದ್ದರೆ ಅದು ನೋ’ವುಂ’ಟು ಮಾಡುವ ವಿಷಯ ಆಗಿದ್ದರೆ ಅದನ್ನು ಮನಸ್ಸಿನಿಂದ ತೆಗೆದು ಹಾಕಿ ಎಲ್ಲವನ್ನು ಕೂಡ ಯುನಿವರ್ಸ್ ಗೆ ಬಿಟ್ಟು ಬಿಡಿ ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಸಂಪೂರ್ಣ ಸುಳ್ಳು ಎಂದು ಇಲ್ಲಿ ವಿತಂಡವಾದ ಮಾಡಲು ನಾವು ಸಿದ್ದರಿಲ್ಲ.

ಆದರೆ ಸೂರ್ಯ ಚಂದ್ರ ಶುಕ್ರ ಮಂಗಳ ಪ್ರಭಾವ ಭೂಮಿ ಮೇಲೆ ಎಷ್ಟಿದೆಯೋ ಅದೇ ರೀತಿ ಜಾತಕದಲ್ಲಿ ಹೇಳುವ ಗ್ರಹಗಳ ಪ್ರಭಾವವು ಅಷ್ಟೇ ಇರುತ್ತದೆ ಎನ್ನುವುದು ಸಂಶಯಾಸ್ಪದವಾಗಿ ಮತ್ತು ಕಣ್ಣೆದುರೇ ಪ್ರಾಕ್ಟಿಕಲ್ ಆಗಿ ಅರಿಯಲಾಗದಂತಹ ವಿಷಯ ಆಗಿದೆ ಹಾಗಾಗಿ ಎಲ್ಲರೂ ಇದನ್ನು ಒಪ್ಪಬೇಕು ಎನ್ನುವುದು ತಪ್ಪಾಗುತ್ತದೆ.

ಜಾತಕಕ್ಕಿಂತಲೂ ಮನಸ್ಸು ಶುದ್ದವಾಗಿರುವುದು, ಆತ್ಮವಿಶ್ವಾಸದಂತೆ ಇರುವುದು, ಸದಾ ಪಾಸಿಟಿವ್ ಆಗಿ ಥಿಂಕ್ ಮಾಡಿ ನಗು ನಗುತ್ತ ಬಾಳುವುದು ಬಹಳ ಮುಖ್ಯವಾದದ್ದು ಈ ರೀತಿ ಇದ್ದರೆ ಆಯಸ್ಸು ಆರೋಗ್ಯ ಅದೃಷ್ಟ ಸಂಪತ್ತು ಎಲ್ಲವೂ ಕೂಡ ಒಲಿದು ಬರುತ್ತದೆ.

ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

ಹಾಗಾಗಿ ಜಾತಕ ಬಳಸಿ ವಿಮರ್ಶ ಮಾಡಿಸಿ ಸಂ’ಕ’ಟ ಪಡುವ ಬದಲು ಇವುಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ ನೀವು ಮಾಡುವ ಕೆಲಸ ಕಾರ್ಯ ಕರ್ಮಗಳ ಬಗ್ಗೆ ನಿಗವಹಿಸಿ ಎಚ್ಚರಿಕೆಯಿಂದ ಬದುಕಿ ಒಳ್ಳೆಯದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದು ಕೂಡ ಬಹಳ ಮುಖ್ಯ ಸಂಗತಿಯಾಗಿದ್ದು ತಪ್ಪದೇ ಇದನ್ನು ಕಮೆಂಟ್ ಮೂಲಕ ತಿಳಿಸಿ

LEAVE A REPLY

Please enter your comment!
Please enter your name here