Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸಂಪತ್ತು & ಆರೋಗ್ಯವೃದ್ಧಿಗಾಗಿ ಈ ಟೆಕ್ನಿಕ್ ಮಾಡಿ ಸಾಕು ಕೇವಲ 3 ದಿನದಲ್ಲಿ ನೀವು ಅಂದುಕೊಂಡಂತೆ ಆಗುತ್ತೆ.!

Posted on December 22, 2023 By Kannada Trend News No Comments on ಸಂಪತ್ತು & ಆರೋಗ್ಯವೃದ್ಧಿಗಾಗಿ ಈ ಟೆಕ್ನಿಕ್ ಮಾಡಿ ಸಾಕು ಕೇವಲ 3 ದಿನದಲ್ಲಿ ನೀವು ಅಂದುಕೊಂಡಂತೆ ಆಗುತ್ತೆ.!

 

ಆಯುರ್ವೇದ, ಯೋಗ ಹಾಗೂ ಪ್ರಾಣಾಯಾಮದಿಂದ ಗುಣವಾಗದ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಹೇಳಬಹುದು. ಅದು ದೈಹಿಕ ಆರೋಗ್ಯವಾಗಲಿ ಅಥವಾ ಮಾನಸಿಕ ಕಾಯಿಲೆಯಾಗಲಿ ಕಟ್ಟುನಿಟ್ಟಾಗಿ ಚಿಕಿತ್ಸೆಯನ್ನು ಪಾಲಿಸಿದ್ದಲ್ಲಿ ಖಂಡಿತವಾಗಿಯೂ ಗುಣವಾಗುತ್ತದೆ.

ಇಂತಹದ್ದೇ ಒಂದು ಗಂಭೀರ ಸಮಸ್ಯೆಗೆ ನಾವು ಇಂದು ಈ ಅಂಕಣದಲ್ಲಿ ಸುಲಭ ಪರಿಹಾರವನ್ನು ತಿಳಿಸುತ್ತೇವೆ. ಪ್ರಾಣಾಯಾಮದ ಈ ಒಂದು ಮುದ್ರೆಯಿಂದಾಗಿ ನಿಮ್ಮ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಮಾತ್ರವಲ್ಲದೆ ಆರ್ಥಿಕ ಸಮಸ್ಯೆಯನ್ನು ಕೂಡ ಪರಿಹರಿಸಿಕೊಳ್ಳಬಹುದು ಎಂದರೆ ನಿಮಗೆ ಆಶ್ಚರ್ಯ ಆಗುತ್ತದೆ. ಇದರ ಬಗ್ಗೆ ತಿಳಿದುಕೊಳ್ಳಲು ಅಂಕಣವನ್ನು ಕೊನೆಯವರೆಗೂ ಓದಿ.

ನಿಮಗೆ ಯಾವಾಗಲು ಸುಸ್ತಾಗುತ್ತಿದ್ದರೆ, ವಿಪರೀತ ಆಯಾಸವಾಗಿ ಯಾವುದರಲ್ಲೂ ಆಸಕ್ತಿ ಇಲ್ಲ ಎಂದರೆ, ತಲೆ ಸುತ್ತು ಬರುತ್ತಿದ್ದರೆ, ನಿಮಗೆ ಇದೇ ಕಾರಣದಿಂದಾಗಿ ಬದುಕು ಬೇಸರವಾಗಿದ್ದರೆ ಈ ಆರೋಗ್ಯ ಸಮಸ್ಯೆ ನಿಮ್ಮ ಮಾನಸಿಕ ಸಮಸ್ಯೆಯಾಗಿಯೂ ಕೂಡ ಕಾಡುತ್ತಿದ್ದರೆ ಈಗ ನಾವು ಹೇಳುವ ಈ ಮುದ್ರೆಯನ್ನು ಮಾಡಿ ನೂರಕ್ಕೆ ನೂರರಷ್ಟು ಫಲಿತಾಂಶ ಕಾಣುತ್ತೀರಿ.

ಈ ಸಮಸ್ಯೆ ಮಾತ್ರ ಅಲ್ಲದೆ ಧೂಮಪಾನ, ಮಧ್ಯಪಾನ ಟೀ ಕಾಫಿ ಕುಡಿಯುವ ಚಟ, ತಂಬಾಕು ಇಂತಹವುಗಳ ದುರಾಭ್ಯಾಸ ಇರುವವರು ತಾವೇ ಮನಸ್ಸು ಮಾಡಿ ಅದರಿಂದ ಆಚೆ ಬರಬೇಕು ಎಂದು ಸಂಕಲ್ಪ ಮಾಡಿದ್ದರೆ ಅವರು ಕೂಡ ಈ ಒಂದು ಮುದ್ರೆಯನ್ನು ಅಭ್ಯಾಸ ಮಾಡಿದರೆ ಬಹಳ ಬೇಗ ಉತ್ತಮವಾದ ರಿಸಲ್ಟ್ ಸಿಗುತ್ತದೆ. ಈ ಒಂದು ಮುದ್ರೆಯನ್ನು ಯಾರು ಬೇಕಾದರೂ ಮಾಡಬಹುದು ಆದರೆ ಯಾವುದೇ ಕಾರಣಕ್ಕೂ ಅಧಿಕ ರಕ್ತದೊತ್ತಡ ಇರುವವರು ಈ ಮುದ್ರೆಯನ್ನು ಮಾಡಬಾರದು.

ಸೂಕ್ತ ಗುರುಗಳ ಅಥವಾ ಇದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಮಾರ್ಗದರ್ಶನದಲ್ಲಿ ನೀವು ಈ ಮುದ್ರೆ ಹಾಕಬಹುದು. ಸುಖಾಸನ, ಪದ್ಮಾಸನ ಸಿದ್ದಾಸನ, ವಜ್ರಾಸನ ಯಾವುದೇ ಆಸನದಲ್ಲಿ ಅಥವಾ ಹಾಸಿಗೆ, ಚೇರ್ ಮೇಲೆ ಕುಳಿತುಕೊಂಡು ಕೂಡ ನೀವು ಈ ಮುದ್ರೆಯನ್ನು ಹಾಕಬಹುದು.

ಈ ಮುದ್ರೆ ಹೆಸರು ವಜ್ರಮುದ್ರೆ ಎಂದು, ಇದನ್ನು ಹಾಕುವುದು ಹೇಗೆಂದರೆ ಯಾವುದಾದರೂ ಒಂದು ಆಸನದಲ್ಲಿ ಕುಳಿತುಕೊಳ್ಳಿ ಅಥವಾ ನೆಲದ ಮೇಲೆ ಚಾಪೆ ಹಾಕಿ ಚಾಪೆಯ ಮೇಲೆ ಕುಳಿತುಕೊಳ್ಳಿ. ನಿಮ್ಮ ಎರಡು ತೋರು ಬೆರಳುಗಳನ್ನು ನೇರ ಮಾಡಿಕೊಳ್ಳಿ ಹೆಬ್ಬರಳಿನ ತುದಿಗೆ ಮಧ್ಯದ ಬೆರಳು ಉಂಗುರದ ಬೆರಳಿನಿಂದ ಪ್ರೆಸ್ ಮಾಡಿ, ಕಿರುಬೆರಳಿನ್ನು ಸೇರಿಸಿ.

ಈಗ ಎರಡು ಕೈಗಳಲ್ಲಿ ಈ ಮುದ್ರೆ ಮಾಡಿ ಮಂಡಿ ಮೇಲೆ ಇಟ್ಟುಕೊಳ್ಳಿ ಮತ್ತು ನಿಮ್ಮ ತೋರು ಬೆರಳು ನೆಲವನ್ನು ತೋರಿಸುತ್ತಿರುವಂತೆ ಇಟ್ಟುಕೊಳ್ಳಿ. ಕಣ್ಣು ಮುಚ್ಚಿ ದೀರ್ಘವಾಗಿ ಉಸಿರು ತೆಗೆದು ಕೊಂಡು ನಿಧಾನವಾಗಿ ಉಸಿರು ಬಿಟ್ಟು ನಂತರ ಓಂಕಾರವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಿ ಅಥವಾ ಬಾಯಿ ಬಿಡದಂತೆ ಓಂಕಾರ ಹೇಳಬೇಕು. ಈ ರೀತಿ ದಿನದಲ್ಲಿ 2-3 ನಿಮಿಷಗಳ ಕಾಲ ಮಾತ್ರ ಬೆಳಗ್ಗೆ ಅಥವಾ ಸಂಜೆ ಈ ಮುದ್ರೆಯನ್ನು ಹಾಕಬೇಕು.

ಈ ರೀತಿ ಮಾಡಿದರೆ ಸಾಕು ಈ ಮೇಲೆ ತಿಳಿಸಿದ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ ಮತ್ತು ಇದು ಹೇಗೆ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದರೆ ಈ ರೀತಿ ಮಾಡುವುದರಿಂದ ನಿಮ್ಮ ದೇಹ ಮತ್ತು ಮನಸಿನಲ್ಲಿರುವ ನ’ಕ’ರಾ’ತ್ಮ’ಕ ಎನರ್ಜಿ ಹೊರ ಹೋಗುತ್ತದೆ ಮನಸ್ಸು ಫ್ರೆಶ್ ಆಗುತ್ತದೆ.

ಇದರಿಂದ ನಿಮ್ಮ ಆಲಸ್ಯ ಎಲ್ಲಾ ಹೋಗಿ ನಿಮಗೆ ಚೈತನ್ಯ ಬರುತ್ತದೆ ಮತ್ತು ದುಡಿಮೆಯಲ್ಲಿ ಓದಿನಲ್ಲಿ ಆಸಕ್ತಿ ಬರುತ್ತದೆ ಹಾಗೂ ನಿಮ್ಮ ಮಾನಸಿಕ ಆರೋಗ್ಯ ಉತ್ತಮವಾಗುವುದರಿಂದ ನಿಮ್ಮ ಎಲ್ಲಾ ಕಾರ್ಯಗಳೂ ಜಯವಾಗಿ ಲಾಭವಾಗುತ್ತದೆ. ಆದ್ದರಿಂದ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

Useful Information

Post navigation

Previous Post: ಕರ್ಕಾಟಕ ರಾಶಿಯವರ ವರ್ಷ ಭವಿಷ್ಯ, 2024ರಲ್ಲಿ ಈ ಘಟನೆಗಳು ಖಂಡಿತಾ ನಡೆಯುತ್ತವೆ.!
Next Post: ರಸ್ತೆಯಲ್ಲಿ ಬೆಳ್ಳಿ ಬಂಗಾರ ಸಿಕ್ಕಿದರೆ ಏನು ಫಲ? ನಂತರ ಅದನ್ನು ಏನು ಮಾಡಬೇಕು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore