Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಿಚ್ಚ ಸುದೀಪ್ ಗೆ ಏನು ನಾಲೆಡ್ಜ್ ಇಲ್ಲ. ಹಾಗಾಗಿ ಅವ್ರು ಬರದೆ ಇರೋದೆ ಒಳ್ಳೆಯದು.

Posted on January 21, 2023 By Kannada Trend News No Comments on ಕಿಚ್ಚ ಸುದೀಪ್ ಗೆ ಏನು ನಾಲೆಡ್ಜ್ ಇಲ್ಲ. ಹಾಗಾಗಿ ಅವ್ರು ಬರದೆ ಇರೋದೆ ಒಳ್ಳೆಯದು.

 

ಇದುವರೆಗೆ ಸಿನಿಮಾ ವಿಷಯಗಳ ಬಗ್ಗೆ ಹಾಗೂ ಸಿಸಿಎಲ್ ವಿಚಾರವಾಗಿ ಸುದ್ದಿಯಾಗುತ್ತಿದ್ದ ಕಿಚ್ಚ ಸುದೀಪ್ ಅವರ ಬಗ್ಗೆ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿ ಒಂದು ಹರಿದಾಡುತ್ತಿದೆ. ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ರಮ್ಯಾ ಅವರಿಂದ ಕಿಚ್ಚ ಸುದೀಪ್ ಅವರಿಗೆ ಗಾಳ ಹಾಕಿಸಲಾಗಿದೆ, ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡು ಸುದೀಪ್ ಎಲೆಕ್ಷನ್ ಗೆ ಧುಮುಕುವ ಸಾಧ್ಯತೆ ಇದೆ ಎನ್ನುವ ಇತ್ಯಾದಿ ಸುದ್ದಿಗಳು ಕಳೆದ ಒಂದು ವಾರದಿಂದ ವರದಿಯಾಗುತ್ತಿದೆ.

ಈ ಬಗ್ಗೆ ಜನಸಾಮಾನ್ಯರಿಗೆ ಹೇಗೆ ಅನಿಸುತ್ತದೆ ಎಂದು ಅಭಿಪ್ರಾಯ ಕೇಳಿದಾಗ ಸುದೀಪ್ ಅವರ ಅಭಿಮಾನಿ ಆದ ಒಬ್ಬ ವ್ಯಕ್ತಿ ಬಹಳ ಅದ್ಭುತವಾಗಿ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಅವರು ಮಾತನಾಡಿರುವ ಆ ವಿಡಿಯೋ ಆಗುತ್ತಿದ್ದು ಕಿಚ್ಚನ ಬಗ್ಗೆ ಆತ ಇಟ್ಟಿರುವ ಅಭಿಮಾನಕ್ಕೆ ಎಲ್ಲರೂ ವಾವ್ ಎಂದಿದ್ದಾರೆ.

ನಾನು ಕಿಚ್ಚ ಸುದೀಪ್ ಅವರ ಡೈ ಹಾರ್ಟ್ ಅಭಿಮಾನಿ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಇಂದು ಇವರು ಇಲ್ಲಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎನ್ನುವ ಕಾರಣಕ್ಕೆ ಇಷ್ಟು ದೂರ ಬಂದು ನೋಡಿಕೊಂಡು ಹೋಗುತ್ತಿದ್ದೇನೆ. ನಾನು ಅವರನ್ನು ಅಷ್ಟು ಪ್ರೀತಿಸುವವನಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತಿದ್ದೇನೆ ನನಗೆ ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಬರುವುದು ಇಷ್ಟ ಇಲ್ಲ.

ಯಾವುದೇ ಪಕ್ಷದವರಾದರೂ ಆಫರ್ ಮಾಡಿದರೂ ಕೂಡ ಅವರು ರಾಜಕೀಯಕ್ಕೆ ಬರಬಾರದು ಮತ್ತು ಅವರೇ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ ನನಗೆ ರಾಜಕೀಯದಲ್ಲಿ ನಾಲೆಡ್ಜ್ ಇಲ್ಲ ಎಂದು ಹಾಗಾಗಿ ಇದುವರೆಗೂ ಅವರನ್ನು ಹೀರೋ ಆಗಿ ನೋಡಿದ್ದೇನೆ ರಾಜಕೀಯಕ್ಕೆ ಬಂದರೆ ಅವರನ್ನು ಹೊಗಳುವವರಿಗಿಂತ ತೆಗಳುವವರೇ ಹೆಚ್ಚು.

ಹಾಗಾಗಿ ಸುದೀಪ್ ಅಂತಹ ಸ್ಟಾರ್ ಯಾಗಲಿ ಅಥವಾ ಮತ್ಯಾವುದೇ ಸ್ಟಾರ್ ಗೆ ಆಗಲಿ ನಾವು ಹೀರೋ ಎಂದು ನೋಡಿದವರನ್ನು ಜನ ಬಯ್ಯುವುದನ್ನು ಕೇಳಲು ನಮಗೆ ಆಗುವುದಿಲ್ಲ. ಎಷ್ಟೋ ಜನ ರಾಜಕೀಯಕ್ಕೆ ಬರೆದ ಜನಸೇವೆ ಮಾಡಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಜನರಿಗೆ ಗೊತ್ತಾದ ಮೇಲೆ ಅವರು ಸಹ ಅದನ್ನು ಆದರ್ಶವಾಗಿಟ್ಟುಕೊಂಡು ರಸ್ತೆ ರಸ್ತೆಯನ್ನು ಕೂಡ ಅವರ ಹೆಸರು ಹೇಳಿಕೊಂಡು ಎಲ್ಲರಿಗೂ ಸಹಾಯ ಮಾಡಿದ್ದಾರೆ.

ಅದೇ ರೀತಿ ಯಾವುದೇ ಕಾರಣಕ್ಕೂ ಹೀರೋಗಳು ತಾವು ಮಾಡುವ ಒಳ್ಳೆ ಕೆಲಸಗಳನ್ನು ಮುಚ್ಚಿಡಬಾರದು. ಬಲಗೈ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎನ್ನುವ ಕಾಲ ಹೋಯ್ತು ಈಗ ಅವರು ಮಾಡುವ ಸಹಾಯ ಒಂದಷ್ಟು ಜನಕ್ಕೆ ಗೊತ್ತಾದರೆ ಅವರ ಅಭಿಮಾನಿಗಳು ಹಾಗೂ ಅವರನ್ನು ಅನುಸರಿಸುವವರು ಆದರ್ಶವಾಗಿ ಇದ್ದುಕೊಂಡು ಅವರು ಅದೇ ಒಳ್ಳೆಯ ದಾರಿಯಲ್ಲಿ ಹೋಗುತ್ತಾರೆ.

ಹೀಗಾಗಿ ರಾಜಕೀಯಕ್ಕೆ ಬರದೆ ಸಮಾಜಸೇವೆ ಮಾಡಲಿ. ಸಿನಿಮಾ ಮೇಲೆ ನಾನು ಇರುವವರೆಗೂ ಅವರನ್ನು ಹೀರೋ ಆಗಲೇ ನೋಡಲು ಇಷ್ಟಪಡುತ್ತೇನೆ ಅವರು ಕೊನೆಯವರೆಗೂ ಸಹ ಹೀರೊ ಆಗಿಯೇ ಇರಬೇಕು ಎಂದು ನನ್ನ ಆಸೆ ಎಂದಿದ್ದಾರೆ. ಸುದೀಪ್ ಅವರ ಮುಂದಿನ ಚಿತ್ರ ಕಬ್ಜದ ಬಗ್ಗೆ ಬಹಳ ನಿರೀಕ್ಷೆ ಇದೆ ಸುದೀಪ್ ಅವರಷ್ಟೇ ಉಪೇಂದ್ರ ಅವರನ್ನು ನಾನು ಇಷ್ಟ ಪಡುತ್ತೇನೆ ಇವರಿಬ್ಬರ ಕಾಂಬಿನೇಷನ್ನ ಕಬ್ಜಾ ಸಿನಿಮಾ ನೋಡಲು ಕಾಯುತ್ತಿದ್ದೇನೆ.

ಈಗಾಗಲೇ ಸಿನಿಮಾ ಶೂಟಿಂಗ್ ಮುಗಿದು ಪ್ರಿ ಪ್ರೊಡಕ್ಷನ್ ಕೆಲಸ ಇದೆ ಎನ್ನುವ ಮಾಹಿತಿಗಳು ನಮಗೆ ಸಿಕ್ಕಿವೆ. ಆದಷ್ಟು ಬೇಗ ಬಂದು ಹಿಟ್ ಆಗಲಿ ಆ ದಿನಕ್ಕಾಗಿ ಕಾಯುತ್ತಿದ್ದೇವೆ. ರಾಜಕೀಯ ಬಿಟ್ಟು ಸುದೀಪ್ ಅವರು ಏನನ್ನೇ ಮಾಡಿದರು ನಮ್ಮ ಸಪೋರ್ಟ್ ಇದೆ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.

https://youtu.be/Yjj9iNkiZFg

Entertainment Tags:Kiccha sudeep
WhatsApp Group Join Now
Telegram Group Join Now

Post navigation

Previous Post: ನಾನು & ದರ್ಶನ್ ಸೂರ್ಯ ಚಂದ್ರ ಇದ್ದ ಹಾಗೆ, ನಾವಿಬ್ಬರು ಒಟ್ಟಿಗೆ ಕಾಣಲು ಸಾಧ್ಯವಿಲ್ಲ ಆದರೆ ನಾವಿಲ್ಲದೆ ಜಗವಿಲ್ಲ ಎಂದ ಕಿಚ್ಚ ಸುದೀಪ್ ವಿಡಿಯೋ ವೈರಲ್.
Next Post: ನಿವೇದಿತ ಹಾಗೂ ವೈಷ್ಣವಿ ನಡುವೆ ಮುದ್ದೆ ತಿನ್ನುವ ಸ್ಪರ್ಧೆ ಇವರಿಬ್ಬರು ಮುದ್ದೆ ತಿನ್ನುವ ಸ್ಟೈಲ್ ನೋಡಿದ್ರೆ ನಿಜಕ್ಕೂ ನಕ್ಕು ನಕ್ಕು ಸುಸ್ತಾಗುತ್ತಿರ. ಈ ವೈರಲ್ ವಿಡಿಯೋ ನೋಡಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore