Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಾನು & ದರ್ಶನ್ ಸೂರ್ಯ ಚಂದ್ರ ಇದ್ದ ಹಾಗೆ, ನಾವಿಬ್ಬರು ಒಟ್ಟಿಗೆ ಕಾಣಲು ಸಾಧ್ಯವಿಲ್ಲ ಆದರೆ ನಾವಿಲ್ಲದೆ ಜಗವಿಲ್ಲ ಎಂದ ಕಿಚ್ಚ ಸುದೀಪ್ ವಿಡಿಯೋ ವೈರಲ್.

Posted on January 21, 2023 By Kannada Trend News No Comments on ನಾನು & ದರ್ಶನ್ ಸೂರ್ಯ ಚಂದ್ರ ಇದ್ದ ಹಾಗೆ, ನಾವಿಬ್ಬರು ಒಟ್ಟಿಗೆ ಕಾಣಲು ಸಾಧ್ಯವಿಲ್ಲ ಆದರೆ ನಾವಿಲ್ಲದೆ ಜಗವಿಲ್ಲ ಎಂದ ಕಿಚ್ಚ ಸುದೀಪ್ ವಿಡಿಯೋ ವೈರಲ್.

 

ಸ್ಯಾಂಡಲ್ ವುಡ್ ಅಲ್ಲಿ ಜೂನಿಯರ್ ದಿಗ್ಗಜರುಗಳು ಎಂದು ಕರೆಸಿಕೊಂಡ ದರ್ಶನ್ ಹಾಗೂ ಸುದೀಪ್ ಅವರು ಈಗ ಬೇರೆ ಬೇರೆ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಆತ್ಮಮಿತ್ರರಂತೆ ಇದ್ದ ದೋಸ್ತಿಗಳ ನಡುವೆ ಬಿರುಕು ನೋಡಿ ವರ್ಷಗಳೇ ಕಳೆದಿವೆ. ಇಬ್ಬರು ಒಟ್ಟಿಗೆ ಸಿನಿ ಕೆರಿಯರ್ ಆರಂಭಿಸಿದರೂ ಆರಂಭದ ದಿನಗಳಲ್ಲಿ ಇಬ್ಬರೂ ಅಷ್ಟಕಷ್ಟೇ. ಆದರೆ ಒಮ್ಮೆಲೇ ದರ್ಶನ್ ಮತ್ತು ಸುದೀಪ್ ಅವರು ಒಟ್ಟಿಗೆ ಕಾಣಿಸಿಕೊಳ್ಳಲು ಶುರು ಮಾಡಿದ ಮೇಲೆ ಎಲ್ಲರೂ ಇವರನ್ನು ಚಡ್ಡಿ ದೋಸ್ತ್ ಗಳಂತೆ ಇದ್ದರಲ್ಲ ಎಂದುಕೊಂಡು ಆಶ್ಚರ್ಯ ಪಡುತ್ತಿದ್ದರು.

ಅಷ್ಟರ ಮಟ್ಟಿಗೆ ಇಬ್ಬರ ನಡುವೆ ಸ್ನೇಹ ಪ್ರೀತಿ ಭಾಂದವ್ಯ ಎಲ್ಲವೂ ಇತ್ತು. ಆದರೆ ಮತ್ತೆ ಈಗ ಇಬ್ಬರ ನಡುವೆ ಕಾಣದ ಕೈಗಳ ಆಟದಿಂದ ಮುನಿಸಾಗಿದೆ, ಅಭಿಮಾನಿಗಳು ಮಾತ್ರ ಮತ್ತೆ ಇಬ್ಬರೂ ಒಂದಾಗುವುದನ್ನು ಕಾಣಲು ಕಾತುರರಾಗಿದ್ದಾರೆ. ಸುದೀಪ್ ಹಾಗೂ ದರ್ಶನ್ ಅವರಿಗೆ ಎಲ್ಲೇ ಹೋದರೂ ಕೂಡ ಇಬ್ಬರಿಗೂ ಪರಸ್ಪರರ ಕುರಿತು ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ ಹಲವು ಬಾರಿ ಉತ್ತರಿಸುವ ಪ್ರಯತ್ನ ಮಾಡಿದರೆ ಕೆಲವೊಂದು ಬಾರಿ ಸುಮ್ಮನೆ ಯಾಕೆ ವಿವಾದ ಮಾಡಬೇಕು ಎಂದು ನಿರಾಕರಿಸಿರುವುದು ಇದೆ.

ಇದೀಗ ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡಿ ಎಂದು ಕಿಚ್ಚನ ಮನೆ ಬಳಿ ದಚ್ಚು ಅಭಿಮಾನಿ ಹೋಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇದಾದ ಬಳಿಕ ಮತ್ತೊಮ್ಮೆ ಸುದೀಪ್ ಅವರಿಗೆ ದರ್ಶನ್ ಅವರ ಕುರಿತು ಪ್ರಶ್ನೆ ಎದುರಾಗಿದೆ. ಕಾರ್ಯಕ್ರಮ ಒಂದರಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳು ಸೇರಿರುತ್ತಾರೆ ಅಭಿಮಾನಿಗಳ ಮಧ್ಯೆ ಎದ್ದ ಒಬ್ಬಾತ ಸುದೀಪ್ ಅವರನ್ನು ಮಾತನಾಡಿಸಿ ಮೈಕ್ ಕೈಯಲ್ಲೇ ಹಿಡಿದು ಎಲ್ಲರೆದುರು ಪ್ರಶ್ನೆ ಕೇಳಿ ಬಿಡುತ್ತಾನೆ.

ನಿಮ್ಮನ್ನು ಹಾಗೂ ದರ್ಶನ್ ಸರ್ ಅವರನ್ನು ಒಟ್ಟಿಗೆ ತೆರ ಮೇಲೆ ನೋಡುವ ಆಸೆ ಕೋಟ್ಯಾಂತರ ಅಭಿಮಾನಿಗಳಿಗೆ ಇದೆ ಅದು ಯಾವಾಗ ಸಾಧ್ಯವಾಗುತ್ತದೆ ಎಂದು. ಈ ಪ್ರಶ್ನೆಗೆ ಸುದೀಪ್ ಅವರು ಬಹಳ ಉತ್ತಮವಾಗಿ ಉತ್ತರ ನೀಡಿದ್ದಾರೆ ಅವರು ಕೊಟ್ಟ ಉತ್ತರ ಈ ರೀತಿ ಇತ್ತು ನಾನು ಚಿಕ್ಕ ವಯಸ್ಸಿಂದಲೂ ಒಂದು ಅನುಮಾನದ ಬಗ್ಗೆ ಅಮ್ಮನ ಬಳಿ ಪ್ರಶ್ನೆ ಕೇಳುತ್ತಲೇ ಇದ್ದೆ, ಅದೇನೆಂದರೆ ಅಮ್ಮ ಸೂರ್ಯ ಬೆಳಗ್ಗೆ ಬರುತ್ತಾರೆ ಚಂದ್ರ ರಾತ್ರಿ ಬರುತ್ತಾರೆ ಇಬ್ಬರು ಯಾಕೆ ಒಟ್ಟಿಗೆ ಬರುವುದಿಲ್ಲ ಎಂದು.

ಅದಕ್ಕೆ ನನ್ನ ಅಮ್ಮ ಹೇಳುತ್ತಿದ್ದರು ಸೂರ್ಯನಿಗೆ ಹಗಲಿನಲ್ಲಿ ಬೆಳಗುವ ಕೆಲಸ ಬೆಳಕಿದ್ದಾಗ ಅವರು ಬರುತ್ತಾರೆ. ರಾತ್ರಿ ಚಂದ್ರ ಬಂದಾಗ ಕತ್ತಲಾಗುತ್ತದೆ ಎರಡು ಕೂಡ ಮುಖ್ಯ. ಅವರವರು ಅಲ್ಲಲ್ಲಿ ಇದ್ದರೆ ಮಾತ್ರ ಚೆಂದ ಎಂದು ಹೇಳುತ್ತಿದ್ದರು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಇದರ ಒಳ ಅರ್ಥವು ಸುದೀಪ್ ಹಾಗೂ ದರ್ಶನ್ ಅವರು ಸೂರ್ಯ ಚಂದ್ರ ಇದ್ದಹಾಗೆ ಇಬ್ಬರು ಸಹ ಒಟ್ಟಿಗೆ ಸೇರಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟೀ ಕರಿಸಿದಂತಿದೆ.

ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲಾಗುತ್ತಿದೆ. ಇದನ್ನು ನೋಡಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡಲು ಸಾಧ್ಯವಿಲ್ಲವಾ ಎಂದು ಬೇಸರಿಸಿಕೊಳ್ಳುವ ಅಗತ್ಯ ಇಲ್ಲ. ಯಾಕೆಂದರೆ ಅಭಿಮಾನಿಗಳ ಒತ್ತಾಯಕ್ಕೆ ಯಾರೇ ಆದರೂ ಮಣಿಯಲೇ ಬೇಕು. ಈಗ ಇಬ್ಬರ ನಡುವೆ ಮನಸ್ತಾಪ ಇದ್ದರೂ ಒಂದು ದಿನ ಅದು ಸರಿಹೋದರೆ ಇಬ್ಬರು ಮತ್ತೆ ಒಟ್ಟಿಗೆ ಒಂದೇ ಸಿನಿಮಾದಲ್ಲಾದರೂ ನಟಿಸುವ ದಿನ ಬಂದೆ ಇರುತ್ತದೆ. ಆ ದಿನಕ್ಕಾಗಿ ಎಲ್ಲರೂ ಸಹ ಎದುರು ನೋಡುತ್ತಿದ್ದಾರೆ.

https://fb.watch/ib2-vgBP9J/

 

Entertainment Tags:Darshan, Sudeep
WhatsApp Group Join Now
Telegram Group Join Now

Post navigation

Previous Post: ಬದುಕು ಕಟ್ಟಿ ಕೊಟ್ಟಿದ್ದೆ ರಿಷಬ್ ಹಾಗೂ ರಕ್ಷಿತ್ ಶೆಟ್ಟಿ ಎಂದ ರಶ್ಮಿಕ ಮಂದಣ್ಣ. ಕೊನೆಗೂ ತಪ್ಪಿನ ಅರಿವು ಮಾಡಿಕೊಂಡ ನ್ಯಾಷನಲ್ ಕ್ರಶ್
Next Post: ಕಿಚ್ಚ ಸುದೀಪ್ ಗೆ ಏನು ನಾಲೆಡ್ಜ್ ಇಲ್ಲ. ಹಾಗಾಗಿ ಅವ್ರು ಬರದೆ ಇರೋದೆ ಒಳ್ಳೆಯದು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore