ಡೆ-ತ್ ನೋಟ್ ಬರೆದಿಟ್ಟು ಜಗತ್ತಿಗೆ ವಿಧಾಯ ಹೇಳಲು ನಿರ್ಧರಿಸಿದ ಕಿರಿಕ್ ಕೀರ್ತಿ. ಕಿರಿಕ್ ಕೀರ್ತಿ ( Kirik keerthi) ಇವರ ಮೂಲ ಹೆಸರು ಏನು ಗೊತ್ತಿಲ್ಲ ಆದರೆ ಕರ್ನಾಟಕದಾದ್ಯಂತ ಇವರು ಇದೇ ಹೆಸರಿನಿಂದ ಫೇಮಸ್. ರೇಡಿಯೋ ಜಾಕಿಯಾಗಿ (Radio jockey) ನ್ಯೂಸ್ ಚಾನೆಲ್ ನ ಆಂಕರ್ (News channel anchor) ಆಗಿ ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದ ಆಗುಹೋಗುಗಳ ಬಗ್ಗೆ ಮುಂದೆ ನಿಂತು ಪ್ರಶ್ನಿಸುವ ಹಲವು ಹೋರಾಟಗಳಿಗೆ ಇಳಿದು ನಾಯ್ಯದ ಪರ ನಿಲ್ಲುತ್ತಿದ್ದ ಸಾಮಾಜಿಕ ಹೋರಾಟಗಾರ (Social worker) ಎನಿಸಿಕೊಂಡಿದ್ದವರು.
ಬಿಗ್ ಬಾಸ್ ಸೀಸನ್ 4ರಲ್ಲಿ (BBK4) ಪಾಲ್ಗೊಂಡ ಬಳಿಕ ಇನ್ನು ಹೆಚ್ಚಿನ ಫೇಮಸ್ ಆದರೂ. ಆಬಳಿಕ ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗೊಂಡ ಇವರು ನಂತರ ಕಿರುತೆರೆಯ ಕಡೆಗೆ ಮರಳಿ ಬಂದು ಹಲವಾರು ರಿಯಾಲಿಟಿ ಶೋಗಳಲ್ಲಿ (Reality show) ಕಂಟೆಸ್ಟೆಂಟ್ ಆಗಿ ಮತ್ತು ಕೆಲವು ರಿಯಾಲಿಟಿ ಶೋಗಳ ನಿರೂಪಕನಾಗಿ ಕೂಡ ಕಾಣಿಸಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಮೊದಲಿನಿಂದಲೂ ಸದಾ ಆಕ್ಟಿವ್ ಆಗಿ ಇರುತ್ತಿದ್ದ ಇವರು ನಂತರ ಡಿ’ಪ್ರೆ’ಶ’ನ್ (Depression) ಗೆ ಒಳಗಾಗಿದ್ದರು.
ಎಲ್ಲದರಿಂದಲೂ ಕೊಂಚ ಅಂತರ ಕಾಯ್ದುಕೊಂಡು ಎಲ್ಲೋ ಕಣ್ಮರೆಯಾಗಿದ್ದ ಕಿರಿಕ್ ಕೀರ್ತಿಯವರು ಈಗಷ್ಟೇ ತಮ್ಮ ಸೋಶಿಯಲ್ ಮೀಡಿಯಾ (Social media) ಖಾತೆಯಲ್ಲಿ ಡೆ’ತ್ ನೋಟ್ (Death note) ಬಗ್ಗೆ ಪೋಸ್ಟ್ (post) ಒಂದನ್ನು ಹಾಕುವುದರ ಜೊತೆಗೆ ಎಲ್ಲರಿಗೂ ಶಾ’ಕ್ ನೀಡಿದ್ದಾರೆ. ಈ ಬಗ್ಗೆ ಸವಿರವವಾಗಿ ಸಾಕಷ್ಟು ಸಾಲುಗಳಲ್ಲಿ ತಮ್ಮ ಸಮಸ್ಯೆ ಬಗ್ಗೆ ಬರೆದ ಕೀರ್ತಿ ಅವರು ಇದಕ್ಕೆಲ ಕಾರಣ ಏನು ಎನ್ನುವುದನ್ನು ತಮ್ಮ ಫಾಲವರ್ಸ್ ಜೊತೆ ಹಂಚಿಕೊಂಡಿದ್ದಾರೆ.
ಈಗಷ್ಟೇ ಇವರು ಮಾಡಿರುವ ಈ ಪೋಸ್ಟ್ ಅಲ್ಲಿ ಬರೆದಿರುವ ಬರಹದ ಅರ್ಥ ಈ ರೀತಿ ಇದೆ. ಅವರು ನಿರ್ಧಾರ ಮಾಡಿದ್ದಾರಂತೆ ಈ ಜಗತ್ತನ್ನೇ ಬಿಟ್ಟು ಹೋಗಿ ಬಿಡಬೇಕು ಎಂದು. ಇದಕ್ಕೆ ಹಲವಾರು ಕಾರಣಗಳು ಇವೆ. ವೈಯಕ್ತಿಕ ಜೀವನದಲ್ಲಿ ಆದ ಕೆಲವು ಕಹಿ ಘಟನೆಗಳು ನನ್ನನ್ನು ಇನ್ನಿಲ್ಲವಾದಂತೆ ಕುಗ್ಗಿಸಿದೆ ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದೇನೆ. ಜೊತೆಗೆ ನನ್ನ ಯಾವ ಪ್ರಯತ್ನಗಳು ಕೂಡ ಕೈಗೂಡದೆ ಇರುವುದರಿಂದ ಬದುಕಿನ ಬಗ್ಗೆ ಒಂದು ರೀತಿಯ ಬೇಸರ ಮೂಡಿದೆ.
ಹಾಗಾಗಿ ಯಾವುದರಲ್ಲೂ ಆಸಕ್ತಿಗೆ ಇಲ್ಲದೆ ಹೋಗಿದ್ದೇನೆ. ಜಿಹಾದಿಗಳಿಂದ ಕೂಡ ಕುಟುಂಬಕ್ಕೆ ಬೆ’ದ’ರಿ’ಕೆ ಕರೆಗಳು ಬರುತ್ತಿದ್ದು ಇದು ಇನ್ನಷ್ಟು ಕುಟುಂಬದ ಪರಿಸ್ಥಿತಿಯನ್ನು ಹದಗೆಡಿಸಿದೆ. ಈ ಎಲ್ಲ ಸಮಸ್ಯೆಯಿಂದ ಮಾನಸಿಕವಾಗಿ ಖಿ’ನ್ನ’ತೆ’ಗೆ ಜಾರಿ ಸೋಶಿಯಲ್ ಮೀಡಿಯದಿಂದಲೂ ಸಹ ದೂರ ಉಳಿದುಕೊಂಡಿದ್ದೆ. ಆದರೆ ಈಗ ಅನಿಸುತ್ತಿದೆ ನಾನು ಈ ರೀತಿ ಹೆದರಿ ಎಲ್ಲೋ ಅಡಗಿ ಕುಳಿತುಕೊಂಡು ಬಿಟ್ಟರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಹೇಳುವವರು ಯಾರು ಎಂದು.
ನನ್ನನ್ನು ನಂಬಿ ನನ್ನ ಮೇಲೆ ಇನ್ವೆಸ್ಟ್ ಮಾಡಿರುವವರಿಗೆಲ್ಲ ನ್ಯಾಯ ಕೊಡುವವರು ಯಾರು ಎಂದು, ಜೊತೆಗೆ ನನ್ನ ಮಗನ ಭವಿಷ್ಯವನ್ನು ನಿರ್ವಹಿಸುವವರು ಯಾರು ಎಂದು ನನಗೆ ಪ್ರಶ್ನೆ ಮೂಡುತ್ತಿದೆ. ಹಾಗಾಗಿ ಇದೆಲ್ಲವನ್ನು ಯೋಚಿಸುತ್ತಾ 10 ನಿಮಿಷ ಧ್ಯಾನ ಮಾಡುತ್ತಾ ಕುಳಿತು ಬಿಟ್ಟೆ. ತಡವಾದರೂ ಪರವಾಗಿಲ್ಲ ನನ್ನ ಮೇಲೆ ನಂಬಿಕೆ ಇಟ್ಟಿರುವವರ ನಂಬಿಕೆ ಉಳಿಸಿಕೊಳ್ಳಬೇಕು ಎನಿಸುತ್ತಿದೆ. ಅದಕ್ಕಾಗಿ ಆದರೂ ಏನಾದರೂ ಸಾಧನೆ ಮಾಡಲೇಬೇಕು ಎನಿಸುತ್ತಿದೆ.
ಟೈಪ್ ಮಾಡಿದ್ದ ಆ ಡೆ’ತ್ ನೋಟ್ ಅನ್ನು ಡಿಲೀಟ್ ಮಾಡಿದೆ ಜೀವನದಲ್ಲಿ ಎಲ್ಲವನ್ನು ಸರಿ ಮಾಡಲು ಆಗದಿದ್ದರೂ ಕೆಲವನ್ನಾದರೂ ಮತ್ತೆ ಟ್ರ್ಯಾಕಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನಿಮ್ಮ ಬೆಂಬಲ ನನಗಿರಲಿ ಡಿ’ಪ್ರೆ’ಷ’ನಿಂದ ಹೊರಬಂದು ಮತ್ತೆ ನನ್ನ ಮುಖದಲ್ಲಿ ಮೊದಲ ನಗು ಬರುವ ತನಕ ನನಗೆ ಸಹಕರಿಸಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲಾಗುತ್ತಿದ್ದಂತೆ ಸಾಕಷ್ಟು ಜನ ಕಮೆಂಟ್ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಏನಾದರೂ ಧೈರ್ಯದಿಂದ ಇರಿ ಎಂದು ಸಪೋರ್ಟ್ ಮಾಡುತ್ತಿದ್ದಾರೆ. ಕೀರ್ತಿ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ನಿಮ್ಮ ನಿಲುವೇನು ತಪ್ಪದೇ ಕಮೆಂಟ್ ಮಾಡಿ.