Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ.? ಅವನೇನು ಕದ್ದು ಬಸುರಿ ಮಾಡಿ ಮದ್ವೆ ಆಗಿಲ್ಲ ಎಂದ ಲೀಲಾವತಿ ಈ ವಿಡಿಯೋ ನೋಡಿ ಒಮ್ಮೆ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.!

Posted on April 13, 2023 By Kannada Trend News No Comments on ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ.? ಅವನೇನು ಕದ್ದು ಬಸುರಿ ಮಾಡಿ ಮದ್ವೆ ಆಗಿಲ್ಲ ಎಂದ ಲೀಲಾವತಿ ಈ ವಿಡಿಯೋ ನೋಡಿ ಒಮ್ಮೆ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.!

ಕಳೆದ ವಾರ ಕನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಅವರ ವೈಯಕ್ತಿಕ ಜೀವನದ ಕುರಿತಂತೆ ಒಂದು ಸುದ್ದಿ ಹೊರ ಬಿದ್ದಿತ್ತು. ರಾಜಕುಮಾರ್ ಕುಟುಂಬಕ್ಕೆ ಬಹಳ ಆಪ್ತರಾದ, ನಿರ್ದೇಶಕ, ಬರಹಗಾರ, ಪತ್ರಕರ್ತ ಪ್ರಕಾಶ್ ರಾಜ್ ಮೆಹು ಅವರು ಮೂರು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಲೀಲಾವತಿ ಅವರು ಮಹಾಲಿಂಗ ಭಾಗವತರ್ ಅವರ ಪತ್ನಿ ತಮಿಳುನಾಡಿನ ಚೆನ್ನೈ ಆಸ್ತಿ ಫೋಟೋ ಇದು, ಅದೇ ಇದರ ವಿವರ ನೀಡುತ್ತದೆ ನೋಡಿ ಎಂದು ತೋರಿಸಿದ್ದಾರೆ.

ಅಲ್ಲಿ ಮಹಾಲಿಂಗ ಭಾಗವತಾರ್ ಪತ್ನಿ ಲೀಲಾವತಿ ಅಮ್ಮರ್ ಎಂದು ಇದೆ. ಜೊತೆಗೆ ವಿನೋದ್ ರಾಜ್ ಮದುವೆ ಆಗದೆ ತಾಯಿ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದು ಹೇಳಿ ಮತ್ತೊಂದು ಫೋಟೋದಲ್ಲಿ ವಿನೋದ್ ರಾಜ್ ಪತ್ನಿ ಮಗ ಮತ್ತು ಲೀಲಾವತಿ ಅವರು ಒಟ್ಟಿಗೆ ಕುಳಿತಿರುವ ಫೋಟೋ ಮತ್ತು ವಿನೋದ್ ರಾಜ್ ಮಗನ ಮಾರ್ಕ್ಸ್ ಕಾರ್ಡ್ ಫೋಟೋ ಶೇರ್ ಮಾಡಿದ್ದಾರೆ. ಮಾರ್ಕ್ಸ್ ಕಾರ್ಡ್ ಅಲ್ಲಿ ತಂದೆ ಹೆಸರು ಎನ್ನುವ ಜಾಗದಲ್ಲಿ ವಿನೋದ್ ರಾಜ್ ಎಂದು ಇತ್ತು.

ಈ ಬಗ್ಗೆ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಲೀಲಾವತಿಯವರು ಮಾತನಾಡಿ ಇದಕ್ಕೆಲ್ಲ ಸ್ಪಷ್ಟನೆ ಕೊಟ್ಟಿದ್ದಾರೆ. ಮಗನ ಮದುವೆ ಆಗಿರುವ ವಿಷಯವನ್ನು ಯಾಕೆ ಇಷ್ಟು ದಿನ ಮುಚ್ಚಿಟ್ಟಿದ್ದೀರಿ ಅಂತ ಕೇಳಿದ ಪ್ರಶ್ನೆಗೆ ಎಲ್ಲಾ ನೀಟಾಗಿ ಇದೆ ಅಲ್ವಾ, ಸೊಟ್ಟ ಪಟ್ಟ ಇಲ್ದೆ ಅಂಕುಡೊಂಕು ಇಲ್ಲದೆ ಕಳ್ಳರ ಸುಳ್ಳರ ಹಾಗೆ ಇರದೆ ನೀಟಾಗಿ ನೆಮ್ಮದಿಯಾಗಿ ಇದೆ. ಯಾಕೆ ಹೇಳಿಲ್ಲ ಅಂದರೆ ಎಂತೆಂಥವರ ಮದುವೆ ಎಲ್ಲೆಲ್ಲೋ ನಡೆದಿದೆ, ಪ್ಯಾಲೆಸ್ ಅಲ್ಲಿ ಮಾಡಿದ್ದಾರೆ, ನನಗೆ ಆ ಶಕ್ತಿ ಇರಲಿಲ್ಲ.

ಅದಕ್ಕೆ ಅದನ್ನು ರಹಸ್ಯವಾಗಿಡುವುದೇ ಒಳ್ಳೆಯದು ಎನಿಸಿತು. ಅವನೇನು ಹೆಣ್ಣು ಹುಡುಗಿ ಅಲ್ಲ ಅವನ ಕದ್ದು ಬಸುರಾಗಿರುವುದಕ್ಕೆ ಈ ಮದುವೆ ಮಾಡಿಸಿಲ್ಲ, ಒಳ್ಳೆ ಮಗವಾಗಿ ಇದ್ದಾನೆ. ನಾನೇ ಇಷ್ಟಪಟ್ಟು ಮದುವೆ ಮಾಡಿಸಿದೆ ತಿರುಪತಿ ಬೆಟ್ಟದಲ್ಲಿ ನನ್ನ ಮಗನ ಮದುವೆಯನ್ನು ಸರಳವಾಗಿ ಮಾಡಿದೆ. ಅದೇ ಶ್ರೇಷ್ಠ ಜಾಗ ಎನಿಸಿತು.

ಎಲ್ಲರಿಗೂ ಗೊತ್ತಾಗಿ ಮದುವೆ ಬಗ್ಗೆ ಅಂಕುಡೊಂಕು ಮಾತು ಕೇಳುವ ಬದಲು ಅಲ್ಲಿ ಮಾಡುವುದು ಒಳ್ಳೆಯದು ಎನಿಸಿತು. ಏಳು ಜನ ಕನ್ನಡಿಗರು ಈ ಮದುವೆಗೆ ಬಂದಿದ್ದರು ಏನು ಲೀಲಾವತಿ ಅವರೇ ನಿಮ್ಮ ಮಗನ ಮದುವೆಗೆ ಜನ ಸಿಗಲ್ವಾ ಎಂದು ಮಾತನಾಡಿದರು. ಅದಕ್ಕೂ ನಾನು ತಲೆಕೆಡಿಸಿಕೊಳ್ಳಲಿಲ್ಲ, ನನ್ನ ಬಡತನದ ಬಗ್ಗೆ ಹೇಳಿಕೊಳ್ಳಲು ನನಗೆ ನಾಚಿಕೆ ಆಗುತ್ತದೆ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ ಅವರಿಗೆ ಏನು ಕೊರತೆ ಮಾಡಿಲ್ಲ ಬೆರಳು ತೋರಿಸುವ ಹಾಗೆ ನಾನು ಇಟ್ಟಿಲ್ಲ ಅವರು ಬಂಗಲೆಯಲ್ಲಿ ಆರಾಮಾಗಿದ್ದಾರೆ.

600 ಸಿನಿಮಾಗಳನ್ನು ಮಾಡಿದ ನಟಿ ನಾನು ಆದರೂ ಕೂಡ ನನ್ನ ಮಗನ ಮದುವೆಯನ್ನು ವಿಜೃಂಭಣೆಯಿಂದ ಮಾಡಲಾಗಲಿಲ್ಲವಲ್ಲ ಎನ್ನುವ ನೋವಿದೆ. ಅದರ ನಡುವೆ ಈ ರೀತಿ ಬಂದು ನಮ್ಮ ಅಂತರಗದ ವಿಷಯವನ್ನು ಪ್ರಶ್ನೆ ಮಾಡಿದಾಗ ಇನ್ನು ನೋವಾಗುತ್ತದೆ ಎಂದೆಲ್ಲಾ ಮಾತನಾಡಿದ್ದಾರೆ. ವಿನೋದ್ ರಾಜ್ ಅವರು ಮಾತನಾಡಿ ಅಮ್ಮ ನೆಮ್ಮದಿಯಾಗಿ ಇದ್ದಾರೆ, ಇರಲಿ ಬಿಡಿ ಅವರು ಕರ್ನಾಟಕದ ಆಸ್ತಿ ಎಂದಿದ್ದಾರೆ.

ಕನ್ನಡಿಗರಿಗೆ ವಿನೋದ್ ರಾಜ್ ಅವರ ಮದುವೆ ಸರಳವಾಗಿ ನಡೆದಿರುವುದು ಬೇಸರವಿಲ್ಲ. ಮದುವೆ ಆಗಿದ್ದರೂ ಕೂಡ ಎಲ್ಲೂ ಹೇಳಿಕೊಟ್ಟಿಲಿಲ್ಲ ಬೇಕೆಂದೇ ವಿಷಯವನ್ನು ಮುಚ್ಚಿಟ್ಟಿದ್ದರು ಎನ್ನುವ ಬೇಸರ ಅಷ್ಟೇ. ಈ ವಿಷದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Viral News Tags:Leelavathi, Vinod
WhatsApp Group Join Now
Telegram Group Join Now

Post navigation

Previous Post: ಕೆಲಸ ಬಿಟ್ಟು ಬಿಡಿ ವರ್ಷಕ್ಕೆ 5 ಸಿನಿಮಾ ಕೊಡ್ತೀನಿ ಅಂತ S.ನಾರಯಣ್ ಹೇಳಿದ್ರು ಆದ್ರೆ ಮುಂದೆ ಆಗಿದ್ದೆ ಬೇರೆ. ಸೂರ್ಯವಂಶ ಸಿನಿಮಾ ಚಿತ್ರೀಕರಣದಲ್ಲಿ ಆದ ಅನುಭವ ಬಿಚ್ಚಿಟ್ಟ ನಟ ಸುರೇಶ್
Next Post: ಕನ್ನಡ ಇಂಟಸ್ಟ್ರಿಗೆ ಬರದೆ, ತಮಿಳುನಾಡಿನಲ್ಲಿಯೇ ಇದ್ದಿದ್ರೆ ಇಷ್ಟೊತ್ತಿಗೆ ಬ್ಯಾಂಕ್ ಬ್ಯಾಲೆನ್ಸ್ ಎಲ್ಲೋ ಇರುತ್ತಿತ್ತು ಗೊತ್ತ ಎಂದ ರಮೇಶ್ ಅರವಿಂದ್.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore