Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕೆಲಸ ಬಿಟ್ಟು ಬಿಡಿ ವರ್ಷಕ್ಕೆ 5 ಸಿನಿಮಾ ಕೊಡ್ತೀನಿ ಅಂತ S.ನಾರಯಣ್ ಹೇಳಿದ್ರು ಆದ್ರೆ ಮುಂದೆ ಆಗಿದ್ದೆ ಬೇರೆ. ಸೂರ್ಯವಂಶ ಸಿನಿಮಾ ಚಿತ್ರೀಕರಣದಲ್ಲಿ ಆದ ಅನುಭವ ಬಿಚ್ಚಿಟ್ಟ ನಟ ಸುರೇಶ್

Posted on April 12, 2023 By Kannada Trend News No Comments on ಕೆಲಸ ಬಿಟ್ಟು ಬಿಡಿ ವರ್ಷಕ್ಕೆ 5 ಸಿನಿಮಾ ಕೊಡ್ತೀನಿ ಅಂತ S.ನಾರಯಣ್ ಹೇಳಿದ್ರು ಆದ್ರೆ ಮುಂದೆ ಆಗಿದ್ದೆ ಬೇರೆ. ಸೂರ್ಯವಂಶ ಸಿನಿಮಾ ಚಿತ್ರೀಕರಣದಲ್ಲಿ ಆದ ಅನುಭವ ಬಿಚ್ಚಿಟ್ಟ ನಟ ಸುರೇಶ್

 

ಎಂ.ಎನ್ ಸುರೇಶ್ ಎನ್ನುವ ಕನ್ನಡ ಚಿತ್ರರಂಗದ ಕಲಾವಿದ ಎಂದರೆ ತಿಳಿಯದೆ ಹೋಗಬಹುದು ಆದರೆ ಮೂಗು ಸುರೇಶ್ ಎಂದು ಇವರ ಹೆಸರು ಹೇಳಿದ ತಕ್ಷಣ ಇವರ ಉದ್ದನೆಯ ಮೂಗಿನ ಮುಖ ನೆನಪಾಗುತ್ತದೆ. ಮೂಗು ಸುರೇಶ್ ಎಂದೇ ಕನ್ನಡ ಚಲನಚಿತ್ರದಲ್ಲಿ ಹೆಸರು ಮಾಡಿರುವ ಇವರು ಪೋಷಕ ಪಾತ್ರಧಾರಿಯಾಗಿ, ಹಾಸ್ಯ ಕಲಾವಿದನಾಗಿ, ಕಿರುತೆರೆ ಧಾರಾವಾಹಿಗಳ ಪಾತ್ರದಾರಿಯಾಗಿ ಕನ್ನಡಿಗರ ಮನೆ ಮಾತಾಗಿದ್ದಾರೆ.

ಇವರು ಹಾಗೂ ದೊಡ್ಡಣ್ಣ ಅವರ ಕಾಂಬಿನೇಷನ್ನ ಸೂರ್ಯವಂಶ ಚಿತ್ರದ ಸೀನ್ ಗಳನ್ನು ಕನ್ನಡಿಗರು ಎಂದು ಸಹ ಮರೆಯಲು ಸಾಧ್ಯವಿಲ್ಲ. ಪದ್ದು ಇದು ಮೇಕೆ ಮ್ಯಾ ಎನ್ನುತ್ತದೆ ಡೈಲಾಗ್ ಕೇಳಿದ ತಕ್ಷಣ ಹೊಟ್ಟೆ ಹಿಡಿದು ನಗುವ ಮಂದಿ ಇವರನ್ನು ಇನ್ನು ಹಲವು ಸಿನಿಮಾಗಳಲ್ಲಿ ದೊಡ್ಡಣ್ಣ ಅವರ ಜೊತೆ ಕಂಡಿದ್ದಾರೆ. ಹೇಗೆ ಸಾಧು ಹಾಗೂ ಬುಲೆಟ್ ಅವರು ಕಾಂಬಿನೇಷನ್ ಆಗಿದ್ದರು ಹಾಗೆ ದೊಡ್ಡಣ್ಣ ಮತ್ತು ಸುರೇಶ್ ಅವರಿಬ್ಬರದು ಇನ್ನೊಂದು ಕಾಂಬಿನೇಷನ್ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ಇವರಿಬ್ಬರ ಹಾಸ್ಯ ಪಂಚ್ ಆಗುತ್ತಿತ್ತು.

ರಂಗಭೂಮಿ ಕಲಾವಿದರಾದ ಮೂಗು ಸುರೇಶ್ ಅವರು ಸಿನಿಮಾ ರಂಗಕ್ಕೆ ಬಹಳ ತಯಾರಿ ನಂತರ ತಡವಾಗಿ ಕಾಲಿಟ್ಟವರು ಎಂದು ಹೇಳಬಹುದು. ರಂಗಭೂಮಿಯಲ್ಲಿ ಹವ್ಯಾಸಿ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದ ಇವರ ನಟನ ಚಾತುರ್ಯ ಅವರಿಗೆ ಸಿನಿಮಾದಲ್ಲಿ ಅವಕಾಶ ಗಿಟ್ಟುವಂತೆ ಮಾಡಿತು. ಅದರಲ್ಲೂ ಸೂರ್ಯವಂಶ ಸಿನಿಮಾ ಸಮಯದಲ್ಲಂತೂ ಎಸ್ ನಾರಾಯಣ್ ಅವರೇ ಅವರನ್ನು ಕರೆದು ನೀವು ಮಾಡುತ್ತಿರುವ ಕೆಲಸ ಬಿಟ್ಟು ಬಿಡಿ ನಿಮಗೆ ವರ್ಷಕ್ಕೆ ಐದು ಸಿನಿಮಾ ಕೊಡುತ್ತೇನೆ ಎಂದು ಹೇಳಿದ್ದರಂತೆ.

ಆ ಸಮಯದಲ್ಲಿ ಮೂಗು ಸುರೇಶ್ ಅವರಿಗೆ ನಾರಾಯಣ್ ಅವರ ಮೇಲೆ ನಂಬಿಕೆ ಇದ್ದರೂ ಮನದಲ್ಲಿ ಬಂದ ಗೊಂದಲ ಹಾಗೂ ಕುಟುಂಬದವರ ಒತ್ತಡ ಅವರನ್ನು ಕೆಲಸ ಬಿಡದಂತೆ ಮಾಡಿತ್ತು. ಕುಟುಂಬದವರ ನಿರ್ಧಾರದಂತೆ ಕೆಲಸ ಬಿಡದೆ ಅವರು ಅವಕಾಶ ಆದಾಗಲೆಲ್ಲ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಎಸ್ ನಾರಾಯಣ್ ಅವರು ವರ್ಷಕ್ಕೆ ಐದು ಸಿನಿಮಾ ನೀಡುವ ಜವಾಬ್ದಾರಿ ನನ್ನದು ಎನ್ನುವ ಭರವಸೆ ನೀಡಿದಾಗಲೂ ಕೂಡ ಅವರು ಕೆಲಸ ತೊರೆದವರಲ್ಲ.

ಹೇಳಿದ ಮಾತಿನಂತೆ ಎಸ್ ನಾರಾಯಣ್ ಅವರ ತಮ್ಮ ನಟನೆ ನಿರ್ದೇಶನದ ನನ್ನವಳು ನನ್ನವಳು, ಭಾಮ ಸತ್ಯಭಾಮ ಮುಂತಾದ ಸಿನಿಮಾಗಳಲ್ಲಿ ಅವಕಾಶ ಕೊಟ್ಟಿದ್ದರು. ಇದಾದ ಮೇಲು ಕೋಟಿಗೊಬ್ಬ, ರಕ್ತ ಕಣ್ಣೀರು ಮುಂತಾದ ಸಿನಿಮಾಗಳಲ್ಲಿ ಕನ್ನಡಿಗರು ಎಂದು ಮರೆಯದ ಪಾತ್ರಗಳಲ್ಲಿ ಕಾಣಿಸಿಕೊಡಿವರು ಮೂಗು ಸುರೇಶ್ ಅವರು. ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಸೂರ್ಯವಂಶ ಸಿನಿಮಾದಲ್ಲಿ ತೆಗೆದುಕೊಂಡ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.

ಸೂರ್ಯವಂಶ ಪಾತ್ರ ನನಗೆ ಬಹಳ ಜನಪ್ರಿಯತೆ ತಂದುಕೊಟ್ಟಿತ್ತು. ಆದರೆ ಸೂರ್ಯವಂಶ ಸಿನಿಮಾಗೆ ನಾನು 27 ದಿನಗಳ ತನಕ ಕೆಲಸ ಮಾಡಿದ್ದೆ ನನಗೆ ಸಿಕ್ಕದ್ದು ಮಾತ್ರ 4,000 ಅಷ್ಟೇ. ನಿರ್ಮಾಪಕರು ಹೆಚ್ಚಾಗಿ ಕೊಟ್ಟಿದ್ದರೂ ಕೊಡುವವರು ಹಿಡಿದುಕೊಂಡು ನನಗೆ ಮುಂದಿನ ದಿನದಲ್ಲಿ ಕೊಡ್ತೀನಿ ಎಂದು ಹೇಳಿ 4000 ಮಾತ್ರ ಕೊಟ್ಟಿದ್ದರು. ನಾನು ಅವರನ್ನು ಎಸ್ ನಾರಾಯಣ್ ಅವರ ಮುಂದೆ ಹೇಳಿಬಿಟ್ಟೆ ಎಸ್ ನಾರಾಯಣ್ ಅವರು ಅವರನ್ನು ಕರೆಸಿ ಕುಮಾರಸ್ವಾಮಿ ಅವರ ಮುಂದೆಯೇ ಬೈದು ಅಂದೇ ಕೆಲಸದಿಂದ ಕಿತ್ತು ಹಾಕಿದ್ದರು.

ಯಾರು ನಂಬೋದಿಲ್ಲ 27 ದಿನದ ಕೆಲಸಕ್ಕೆ ನಾನು 4,000 ಅಷ್ಟೇ ತೆಗೆದುಕೊಂಡೆ ಎನ್ನುವುದನ್ನು ಎಂದು ಹೇಳಿಕೊಂಡಿದ್ದಾರೆ. ಅಂದು ನಾನು ಕೆಲಸ ಬಿಡದೆ ಇದ್ದಿದ್ದೇ ಒಳ್ಳೆಯದಾಯಿತು. ಅಂದು ನಾನು ಕೆಲಸ ಬಿಟ್ಟಿದ್ದರೆ ನಾನು ಮನೆ ಕಟ್ಟಲು ಆಗುತ್ತಿರಲ್ಲ, ಕಾರು ಕೊಳ್ಳಲು ಆಗುತ್ತಿರಲಿಲ್ಲ. ಈಗ ಎಲ್ಲೆಲ್ಲೋ ಅಲೆಯಬೇಕಾಗುತ್ತಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

 

Entertainment Tags:MN Suresh
WhatsApp Group Join Now
Telegram Group Join Now

Post navigation

Previous Post: ಸುಧಾರಾಣಿ ಶಿವಣ್ಣನ ಜೊತೆ ಮೊದಲ ಸಿನಿಮಾದಲ್ಲಿ ನಟನೆ ಮಾಡೋಕೆ ಅಂದು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತಿರಾ
Next Post: ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ.? ಅವನೇನು ಕದ್ದು ಬಸುರಿ ಮಾಡಿ ಮದ್ವೆ ಆಗಿಲ್ಲ ಎಂದ ಲೀಲಾವತಿ ಈ ವಿಡಿಯೋ ನೋಡಿ ಒಮ್ಮೆ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore