Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟಿ ಮೇಘ ಮಾಡಿದ ಎಡವಟ್ಟಿನಿಂದಾಗಿ ದರ್ಶನ್ & ವಿಜಯಲಕ್ಷ್ಮಿ ಸಂಸಾರದಲ್ಲಿ ಬಿರುಕು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ ವಿಜಯಲಕ್ಷ್ಮಿ.

Posted on February 18, 2023February 18, 2023 By Kannada Trend News No Comments on ನಟಿ ಮೇಘ ಮಾಡಿದ ಎಡವಟ್ಟಿನಿಂದಾಗಿ ದರ್ಶನ್ & ವಿಜಯಲಕ್ಷ್ಮಿ ಸಂಸಾರದಲ್ಲಿ ಬಿರುಕು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ ವಿಜಯಲಕ್ಷ್ಮಿ.

ನೆನ್ನೆಯಷ್ಟೇ ನಟ ದರ್ಶನ್ ಅವರ ಹುಟ್ಟು ಹಬ್ಬವಿತ್ತು ಈ ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ಕಳೆದ ಒಂದು ವಾರದಿಂದಲೂ ಕೂಡ ದರ್ಶನ್ ಅವರ ಮನೆ ಮುಂದೆ ಹುಟ್ಟು ಹಬ್ಬಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿತ್ತು. ಸುಮಾರು 30,000 ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಿದ್ದರು ದರ್ಶನ್ ಅವರು ಹುಟ್ಟು ಹಬ್ಬದ ಹಿಂದಿನ ದಿನದಿಂದ ಹಿಡಿದು ಹುಟ್ಟು ಹಬ್ಬದ ಸಂಜೆಯವರೆಗೂ ಕೂಡ ತಮ್ಮ ಮನೆಯ ಮುಂದೆಯೇ ನಿಂತು ಎಲ್ಲಾ ದರ್ಶನ ಕೊಟ್ಟರು.

ಎಲ್ಲರಿಗೂ ಶೇಕ್ ಹ್ಯಾಂಡ್ ಮಾಡುವ ಮೂಲಕ ಹಾಗೂ ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುವ ಮೂಲಕ ಅಭಿಮಾನಿಗಳಿಗೆ ಸಂತಸ ನೀಡಿದರು. ಮತ್ತೊಂದು ಕಡೆ ತಮ್ಮ ಅಭಿಮಾನಿಗಳಿಗೆ ಯಾವುದೇ ಕಾರಣಕ್ಕೂ ಕೂಡ ಹೂವು ಅಥವಾ ಕೇಕ್ ತರಬಾರದು ಬದಲಿಗೆ ದಿನಸಿ ಸಾಮಗ್ರಿಗಳನ್ನು ತೆಗೆದುಕೊಂಡು ಬನ್ನಿ ಅದನ್ನು ನಾನು ಅನಾಥಾಶ್ರಮ ಮತ್ತು ಮಟಗಳಿಗೆ ನೀಡುತ್ತೇನೆ ಎಂದು ಹೇಳಿದರು.

ಅದರಂತೆ ಎಲ್ಲಾ ಅಭಿಮಾನಿಗಳು ಕೂಡ ದಿನಸಿ ಸಾಮಗ್ರಿಗಳನ್ನು ತಂದು ಕೊಟ್ಟರು ಒಂದು ರೀತಿಯಲ್ಲಿ ಹೇಳಬೇಕೆಂದರೆ ದರ್ಶನ್ ಅವರು ಅರ್ಥ ಪೂರ್ಣವಾಗಿ ಹುಟ್ಟು ಹಬ್ಬ ಮಾಡಿಕೊಂಡರು. ಆದರೆ ಮತ್ತೊಂದು ಕಡೆ ವಿಜಯಲಕ್ಷ್ಮಿ ಅವರು ದರ್ಶನ್ ಹುಟ್ಟು ಹಬ್ಬದ ದಿನವೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಹೌದು. ಅದೇನೆಂದರೆ ದರ್ಶನ್ ಅಭಿಮಾನಿಗಳೆಲ್ಲರಿಗೂ ಕೂಡ ದರ್ಶನ ಕೊಟ್ಟ ನಂತರ ತಮ್ಮ ಪ್ರೀತಿ ಪಾತ್ರರ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಕ್ಕೆ ಖಾಸಗಿ ಹೋಟೆಲ್ ಒಂದಕ್ಕೆ ಹೋಗುತ್ತಾರೆ.

ಹೌದು ನಟಿ ಮೇಘ ಶೆಟ್ಟಿ ಹಾಗೂ ಪವಿತ್ರ ಗೌಡ ಮತ್ತಿತರ ಸ್ನೇಹಿತರೆಲ್ಲರೂ ಕೂಡ ದರ್ಶನ್ ಅವರಿಗೆ ಸರ್ಪ್ರೈಸ್ ನೀಡುವುದಕ್ಕಾಗಿ ಖಾಸಗಿ ಹೋಟೆಲ್ ಒಂದರಲ್ಲಿ ಬರ್ತಡೆ ಅರೇಂಜ್ಮೆಂಟ್ ಮಾಡಿರುತ್ತಾರೆ. ಇದನ್ನು ನೋಡಿದಂತಹ ದರ್ಶನ್ ತುಂಬಾನೇ ಖುಷಿಯನ್ನು ವ್ಯಕ್ತಪಡಿಸುತ್ತಾರೆ ಸ್ನೇಹಿತರ ಜೊತೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಈ ವಿಡಿಯೋದ ಕೆಲವು ತುಣುಕುಗಳನ್ನು ನಟಿ ಮೇಘ ಶೆಟ್ಟಿ ಅವರು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಈ ಪೋಸ್ಟ್ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಆದರೆ ಸ್ವತಃ ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಅವರೇ ಈ ವಿಡಿಯೋಗೆ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ. ಹೌದು ನಟಿ ಮೇಘ ಶೆಟ್ಟಿ ಅವರಿಗೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ ಅಷ್ಟಕ್ಕೂ ವಿಜಯಲಕ್ಷ್ಮಿ ಈ ವಿಡಿಯೋವನ್ನು ಹಾಕಿ ಕೊಟ್ಟ ಸಂದೇಶವಾದರೂ ಏನು ಎಂಬುದನ್ನು ನೋಡುವುದಾದರೆ.

“ನನ್ನ ಕುಟುಂಬಕ್ಕೆ ಹಾನಿಯುಂಟುಮಾಡುವ ವೀಡಿಯೊಗಳು, ಚಿತ್ರಗಳು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ಮರುಪೋಸ್ಟ್ ಮಾಡುವ ಜನರಿಗೆ & ಅಭಿಮಾನಿಗಳಿಗೆ ಅದನ್ನು ತಕ್ಷಣವೇ ನಿಲ್ಲಿಸಲು ನನ್ನ ಪ್ರಾಮಾಣಿಕ ವಿನಂತಿ. ಮಹಿಳೆಯಾಗಿ ಈ ಹಿಂದೆ ಎರಡು ಬಾರಿ ಯೋಚಿಸಬೇಕಿತ್ತು ಈ ವೀಡಿಯೊವನ್ನು ಪೋಸ್ಟ್ ಮಾಡಿರುವುದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನುಂಟು ಮಾಡಿದೆ. ನಿಮ್ಮ ಈ ಕೃತ್ಯ ನಿಮ್ಮ ವ್ಯಕ್ತಿತ್ವದ ನೈತಿಕತೆಯನ್ನು ತೋರಿಸುತ್ತದೆ. ಹಾಗೆಯೇ ಗಮನಿಸಿ, ನನ್ನ ಮೌನವು ನಾನು ಅಸಂಬದ್ಧತೆಯನ್ನು ಬಿಡುತ್ತೇನೆ ಎಂದು ಅರ್ಥವಲ್ಲ”. ಎಂದು ಮೇಘ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ವಿಜಯಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/reel/Coyhr0VoLFg/?igshid=MDJmNzVkMjY=

ಇಲ್ಲಿ ನಿಮಗೆ ಅನುಮಾನ ಉಂಟಾಗಬಹುದು ಮೇಘ ಶೆಟ್ಟಿ ಅವರು ಹುಟ್ಟು ಹಬ್ಬವನ್ನು ಆಚರಿಸಿದರಲ್ಲೇನು ತಪ್ಪು ಅಂತ. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ಪವಿತ್ರ ಗೌಡ ಹಾಗೂ ದರ್ಶನ್ ಅವರ ನಡುವೆ ಸಂಬಂಧವಿತ್ತು ಎಂಬ ಅಪಪ್ರಚಾರ ಕೇಳಿ ಬಂದ ವಿಚಾರ ನಿಮಗೆ ತಿಳಿದೇ ಇದೆ. ಈ ಬಾರಿ ದರ್ಶನ್ ಅವರು ವಿಜಯಲಕ್ಷ್ಮಿ ಹಾಗೂ ವಿನಿಶ್ ಜೊತೆ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳದೆ ಮೇಘ ಶೆಟ್ಟಿ ಹಾಗೂ ಪವಿತ್ರ ಗೌಡ ಅವರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಅವರಿಗೆ ಬೇಸರವನ್ನು ಉಂಟುಮಾಡಿದೆ‌.

ಅಷ್ಟೇ ಅಲ್ಲದೆ ಹಿಂದೆ ಆದಂತಹ ಗಾಸಿಪ್ ಅಥವಾ ಕಹಿ ಘಟನೆಗಳು ಮುಂದೆಯೂ ಕೂಡ ಮರು ಕಳಿಸಬಹುದು ಎಂಬ ಆಲೋಚನೆಯಿಂದ ವಿಜಯಲಕ್ಷ್ಮಿ ಅವರು ಈ ರೀತಿಯಾಗಿ ತಮ್ಮ instagram ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಹುಟ್ಟು ಹಬ್ಬದ ದಿನ ಸಂಭ್ರಮ ಆಚರಣೆ ಮಾಡಬೇಕಾದಂತಹ ವಿಜಯಲಕ್ಷ್ಮಿ ಇದೀಗ ಬೇಸರವನ್ನು ವ್ಯಕ್ತಪಡಿಸಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯೇ. ಕೆಲವು ಅಭಿಮಾನಿಗಳು ಕೂಡ ಮೊದಲು ನೀವು ನಿಮ್ಮ ಕುಟುಂಬಕ್ಕೆ ಆದ್ಯತೆಯನ್ನು ನೀಡಬೇಕು, ವಿಜಯಲಕ್ಷ್ಮಿ ಮತ್ತು ನಿಮ್ಮ ಮಗನ ಜೊತೆ ಹುಟ್ಟುಹಬ್ಬದ ಆಚರಿಸಿಕೊಂಡಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

Viral News Tags:Darshan Birthday, Vijayalakshmi
WhatsApp Group Join Now
Telegram Group Join Now

Post navigation

Previous Post: ಅಪ್ಪು ರೀತಿಯೇ ಸಖತ್ ವರ್ಕೌಟ್ ಮಾಡ್ತಿರೋ ಅಶ್ವಿನಿ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ. ಅಶ್ವಿನಿ ಮೇಡಂಗೆ ಇಷ್ಟು ಪವರ್ ಹೇಗೆ ಬಂತು ಅಂತ ಆಶ್ಚರ್ಯ ಪಡ್ತಿರಾ
Next Post: ಸುದೀಪ್ ಕಾಂಗ್ರೆಸ್ ಪಾರ್ಟಿಗೆ ಸೇರ್ತಾರ ಅಂತ ಕೇಳಿದಕ್ಕೆ ಡಿ.ಕೆ. ಶಿವಕುಮಾರ್ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾ-ಕ್.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore