Skip to content

Kannada Trend News

Just another WordPress site

  • News
  • Cinema Updates
  • Serial Loka
  • Devotional
  • Health Tips
  • Interesting Facts
  • Useful Information
  • Astrology
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಜೊತೆ ನಟಿಸಲು ಅವಕಾಶ ಸಿಕ್ಕರು ಮೇಘಾನ ರಾಜ್ ರಿಜೆಕ್ಟ್ ಮಾಡಿದ್ದು ಯಾಕೆ ಗೊತ್ತ.? ಯಾರಿಗೂ ತಿಳಿಯದ ಅಸಲಿ ವಿಚರ ಇಲ್ಲಿದೆ ನೋಡಿ

Posted on August 26, 2022 By Kannada Trend News No Comments on ಅಪ್ಪು ಜೊತೆ ನಟಿಸಲು ಅವಕಾಶ ಸಿಕ್ಕರು ಮೇಘಾನ ರಾಜ್ ರಿಜೆಕ್ಟ್ ಮಾಡಿದ್ದು ಯಾಕೆ ಗೊತ್ತ.? ಯಾರಿಗೂ ತಿಳಿಯದ ಅಸಲಿ ವಿಚರ ಇಲ್ಲಿದೆ ನೋಡಿ

ನಟಿ ಮೇಘನ ರಾಜ್ ಅವರು ಕನ್ನಡದಲ್ಲಿ ಲೂಸ್ ಮಾದ ಯೋಗಿ ಅವರ ಜೋಡಿಯಾಗಿ “ಪುಂಡ” ಎನ್ನುವ ಸಿನಿಮಾದ ಮೂಲಕ ಮೊದಲು ನಾಯಕಿಯಾಗಿ ಕಾಣಿಸಿಕೊಂಡರು. ಕನ್ನಡ ಸಿನಿಮಾ ರಂಗದ ಕಲಾ ದಂಪತಿಗಳಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಮುದ್ದಿನ ಮಗಳಾಗಿದ್ದ ಮೇಘನ ರಾಜ್ ಅವರು ಕನ್ನಡ ಸಿನಿಮಾ ರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡುವ ಮೊದಲು ತೆಲುಗು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದರು. ಮತ್ತು ಅದಕ್ಕೂ ಮೊದಲು ರಂಗಭೂಮಿ ಕಲಾವಿದೆಯಾಗಿ, ಚೈಲ್ಡ್ ಆರ್ಟಿಸ್ಟ್ ಆಗಿ ಕೂಡ ಅಭಿನಯಿಸಿದ್ದರು.

ಬಾಲ್ಯದಿಂದಲೂ ಅಭಿನಯದಲ್ಲಿ ತೊಡಗಿಸಿಕೊಂಡಿದ್ದ ಮೇಘನಾ ರಾಜ್ ತಾವೊಬ್ಬ ಅದ್ಭುತ ನಟಿ ಎನ್ನುವುದನ್ನು ತಮ್ಮ ಸಿನಿಮಾಗಳ ಮೂಲಕ ನಿರೂಪಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಇವರು ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಮಲಯಾಳಂ ಸಿನಿಮಾಗಳಲ್ಲಿ ಕೂಡ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡದಲ್ಲಿ ಅವರ ಮೊದಲ ಸಿನಿಮಾ ಪುಂಡ ಆಗಿದ್ದರೂ ಕೂಡ ಜನರು ಅವರನ್ನು ಬಹುಮಟ್ಟಿಗೆ ಗುರುತಿಸಿದ್ದು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ರಾಜಾಹುಲಿ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಬಳಿಕ. ಈ ಸಿನಿಮಾದಲ್ಲಿ ಕಾವೇರಿ ಎನ್ನುವ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದ ಮೇಘನಾ ರಾಜ್ ಅವರು ಮೇಕಪ್ ಇಲ್ಲದೆ ಸಿನಿಮಾ ಪೂರ್ತಿ ಕಾಣಿಸಿಕೊಂಡಿದ್ದರು.

WhatsApp Group Join Now
Telegram Group Join Now

ಸೂಪರ್ ಹಿಟ್ ಹಾಡುಗಳು ಅದ್ಭುತವಾದ ಡೈಲಾಗ್ಗಳು ಹಾಗೂ ತೀರ ನೈಜ ಅನಿಸುವ ಸನ್ನಿವೇಶಗಳು ಸಿನಿಮಾವನ್ನು ಗೆಲ್ಲಿಸಿತ್ತು. ಇದಾದ ಬಳಿಕ ಕನ್ನಡದಲ್ಲಿ ಮೇಘನರಾಜ್ ಅವರ ಪಾಲಿಗೆ ಹಲವಾರು ಆಫರ್ ಗಳು ಹುಡುಕಿ ಬಂದಿದ್ದವು. ತಮಗೆ ಬಂದ ಎಲ್ಲ ಅವಕಾಶಗಳ ಆಯ್ಕೆಯಲ್ಲೂ ಕೂಡ ತುಂಬಾ ಪ್ರಬುದ್ಧತೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಇವರು ಅಭಿನಯಿಸಲು ಆರಿಸಿಕೊಂಡ ಸಿನಿಮಾ ಕಥೆಗಳು ಕೂಡ ಅವರ ಗೆಲುವಿಗೆ ಒಂದೊಂದು ಹೆಜ್ಜೆಯಾಯಿತು ಎನ್ನಬಹುದು. ರಾಜಾಹುಲಿ ಸಿನಿಮಾದ ಬಳಿಕ ಮೇಘನಾ ರಾಜ್ ಅವರು ಬಹುಪರಾಕ್ ಆಟಗಾರ ವಂಶೋಧಾರಕ ಭುಜಂಗ ಎಂಎಂಸಿಎಚ್ ಅಲ್ಲಮ್ಮ ಕುರುಕ್ಷೇತ್ರ ಲಕ್ಷ್ಮಣ ಇರುವುದೆಲ್ಲವ ಬಿಟ್ಟು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇದರ ಜೊತೆ ವಿಶೇಷವಾದ ವಿಷಯ ಏನೆಂದರೆ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ತಾವು ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡ ನಟಿಸಬೇಕು ಎಂದು ಆಸೆ ಹೊಂದಿರುತ್ತಾರೆ. ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅಂಬರೀಶ್ ರವಿಚಂದ್ರನ್ ಶಿವರಾಜ್ ಕುಮಾರ್ ಉಪೇಂದ್ರ ದಿನಗಳಿಂದ ಹಿಡಿದು ಈಗಿನ ಕಾಲದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಈ ನಟರುಗಳ ಸಿನಿಮಾಗಳಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲ ಎಲ್ಲಾ ಕಲಾವಿದೆಯರಿಗೂ ಇರುತ್ತದೆ. ಆದರೆ ಮೇಘನ ರಾಜ್ ಅವರಿಗೆ ಪುನೀತ್ ರಾಜಕುಮಾರ್ ಅವರ ಜೊತೆ ನಟಿಸುವ ಅವಕಾಶ ಬಂದಾಗ ಅದನ್ನು ರಿಜೆಕ್ಟ್ ಮಾಡಿದ್ದರಂತೆ ಹೀಗೆಂದು ಮೇಘನಾ ರಾಜ್ ಅವರ ತಂದೆ ಸುಂದರರಾಜ್ ಅವರೇ ಮಾಧ್ಯಮವೊಂದರ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.

ಮೇಘನಾ ರಾಜ್ 9ನೇ ತರಗತಿಯಲ್ಲಿ ಓದುತ್ತಿದ್ದಾಗ ಪುನೀತ್ ರಾಜಕುಮಾರ್ ಅವರೊಂದಿಗೆ ಅಭಿನಯಿಸುವ ಅವಕಾಶ ದೊರಕಿತ್ತು. ಆದರೆ ಆ ಸಮಯದಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿದರೆ ನನ್ನ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ನಿರ್ಧಾರ ಮಾಡಿ ನಾನೇ ಆ ಆಫರ್ ಅನ್ನು ರಿಜೆಕ್ಟ್ ಮಾಡಿದ್ದೆ ಎಂದು ಸ್ವತಃ ಸುಂದರ್ ರಾಜ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ಯಾವ ಸಿನಿಮಾಗಾಗಿ ಪುನೀತ್ ರಾಜಕುಮಾರ್ ಅವರ ಜೊತೆ ಮೇಘನಾ ರಾಜ್ ಅವರಿಗೆ ಅಭಿನಯಿಸುವ ಅದೃಷ್ಟ ಒಲಿದಿತ್ತು ಎನ್ನುವ ಬಗ್ಗೆ ಮಾತ್ರ ರಿವೀಲ್ ಮಾಡಿಲ್ಲ. ಆದರೆ ಈಗ ಮೇಘನ ರಾಜ್ ಅವರು ಪುನೀತ್ ರಾಜಕುಮಾರ್ ಅವರ ಜೊತೆ ಅಭಿನಯಿಸಬೇಕಿತ್ತು ಎಂದು ಪ’ಶ್ಚಾ’ತ್ತಾ’ಪ ಪಡುತ್ತಿದ್ದಾರೆ. ಮೇಘನಾ ರಾಜ್ ಅವರು ಕೂಡ ಒಮ್ಮೆ ಸಂದರ್ಶನದಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿದ್ದರು ಕನ್ನಡದ ಸಿನಿಮಾಗಳಿಗಾಗಿ ನಮ್ಮ ಮನೆಯನ್ನು ಬಾಡಿಗೆಗೆ ಕೊಡುತ್ತಿದ್ದೆವು.

ಆಗ ಒಮ್ಮೆ ಪುನೀತ್ ರಾಜಕುಮಾರ್ ಅವರ ನಮ್ಮ ಬಸವ ಸಿನಿಮಾ ನಮ್ಮ ಮನೆಯಲ್ಲಿ ಶೂಟಿಂಗ್ ಆಗುತ್ತಿತ್ತು ಆಗೆಲ್ಲ ಕ್ಯಾರವಾನ್, ವ್ಯಾನಿಟಿ ಬ್ಯಾಗ್ ಫೆಸಿಲಿಟಿ ಎಲ್ಲಾ ಇರದ ಕಾರಣ ಮನೆಯಲ್ಲಿಯೇ ಎಲ್ಲರಿಗೂ ವ್ಯವಸ್ಥೆ ಮಾಡಬೇಕಿತ್ತು ಪುನೀತ್ ರಾಜ್ ಕುಮಾರ್ ಅವರ ವ್ಯವಸ್ಥೆಗಾಗಿ ನನ್ನ ಕೊಠಡಿಯನ್ನು ನೀಡಿದ್ದರು. ಶಾಲೆಯಿಂದ ಮನೆಗೆ ಬಂದ ನಾನು ಎಂದಿನಂತೆ ನನ್ನ ರೂಮಿಗೆ ಹೋಗಿದ್ದೆ ಅಲ್ಲಿ ಪುನೀತ್ ರಾಜಕುಮಾರ್ ಅವರು ಇರುವುದನ್ನು ನೋಡಿ ನನಗೆ ಶಾ’ಕ್ ಆಗಿತ್ತು. ಆಗಲೇ ಕನ್ನಡದ ಸ್ಟಾರ್ ನಟರಾಗಿದ್ದ ಪುನೀತ್ ರಾಜಕುಮಾರ್ ಅವರು ನನ್ನನ್ನು ನೋಡಿ ನಾನು ಅಷ್ಟು ಚಿಕ್ಕ ಹುಡುಗಿ ಆಗಿದ್ದರೂ ಕೂಡ ನನಗೆ ರೆಸ್ಪೆಕ್ಟ್ ಕೊಟ್ಟು ಇದು ನಿನ್ನ ರೂಮ್ ನಾನು ಇಲ್ಲಿ ಇರಬಹುದಾ ಎಂದು ಕೇಳಿದ್ದರು. ಇದು ಪುನೀತ್ ರಾಜಕುಮಾರ್ ಅವರ ಸರಳತೆ ಹಾಗೂ ಅವರ ವ್ಯಕ್ತಿತ್ವ ಏನು ಎನ್ನುವುದನ್ನು ಹೇಳುತ್ತದೆ ಎಂದು ಮೇಘನಾರಾಜ್ ಅವರು ಹೇಳಿದ್ದಾರೆ. ಇಂದಿಗೂ ಕೂಡ ನನಗೆ ಆ ಘಟನೆ ನೆನಪಿಗೆ ಬರುತ್ತದೆ ಎಂದು ಹೇಳಿದ್ದಾರೆ. ಅಪ್ಪು ಅವರ ಈ ಸರಳತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

WhatsApp Group Join Now
Telegram Group Join Now
Entertainment Tags:Appu, Meghanaraj, puneeth rajkunar

Post navigation

Previous Post: ಸುದೀಪ್ ಇಲ್ಲ ಅಂದಿದ್ದರೆ ಇಂದು ನಾನು ಬದುಕುತ್ತಾನೆ ಇರಲಿಲ್ಲ ಎಂದು ಕಣ್ಣೀರು ಹಾಕಿದ ನಟ ರವಿಶಂಕರ್ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?
Next Post: ಮಗನನ್ನು ಚಿತ್ರರಂಗಕ್ಕೆ ಯಾವಾಗ ಕರೆ ತರುತ್ತಿರ ಎಂದು ಕೇಳಿದ ಪ್ರಶ್ನೆಗೆ ಡಿ ಬಾಸ್ ಕೊಟ್ಟ ಉತ್ತರವೇನು ಗೊತ್ತ‌.?

Leave a Reply Cancel reply

Your email address will not be published. Required fields are marked *

Copyright © 2023 Kannada Trend News.

Powered by PressBook WordPress theme