Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಚಿರುನಾ ನೀವು ಮರೆತ್ತಿದ್ದಿರಾ, ನಿಮಗೆ ಚಿರು ಅವರ ಚಿಂತೆಯೇ ಇಲ್ಲ ಎಂದು ಹೇಳಿದ ನಟ್ಟಿಗರಿಗೆ ಮೇಘನಾ ರಾಜ್ ಕೊಟ್ಟ ಖಡಕ್ ಉತ್ತರವೇನು ಗೊತ್ತಾ.?

Posted on August 24, 2022 By Kannada Trend News No Comments on ಚಿರುನಾ ನೀವು ಮರೆತ್ತಿದ್ದಿರಾ, ನಿಮಗೆ ಚಿರು ಅವರ ಚಿಂತೆಯೇ ಇಲ್ಲ ಎಂದು ಹೇಳಿದ ನಟ್ಟಿಗರಿಗೆ ಮೇಘನಾ ರಾಜ್ ಕೊಟ್ಟ ಖಡಕ್ ಉತ್ತರವೇನು ಗೊತ್ತಾ.?

ಮೇಘನಾ ರಾಜ್ ಅವರು ತಮ್ಮ ಜೀವನದಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಯನ್ನು ಮರೆತು ಇದೀಗ ತಮ್ಮ ವೃತ್ತಿ ಜೀವನದ ಕಡೆ ಮುಖವನ್ನು ಮಾಡಿದ್ದಾರೆ. ಹೌದು ಹಲವಾರು ರಿಯಾಲಿಟಿ ಶೋ ಜಾಹೀರಾತು ಸಿನಿಮಾ ಮಾಡಲಿಂಗ್ ಕ್ಷೇತ್ರ ಹೀಗೆ ಇನ್ನೂ ನಾನಾ ರೀತಿಯಾದಂತಹ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದನ್ನು ನೋಡಿದಂತಹ ಕೆಲವು ನೆಟ್ಟಿಗರು ಮತ್ತು ಅಭಿಮಾನಿಗಳು ನೀವು ಚಿರಂಜೀವಿ ಸರ್ಜಾ ಅವರನ್ನು ಸಂಪೂರ್ಣವಾಗಿ ಮರೆತಿದ್ದೀರಾ ಅವರ ಅಗಲಿಕೆಯನ್ನು ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಕೂಡ ಸಂತೋಷವಾಗಿ ಕಾಲ ಕಳೆಯುತ್ತೀರಾ‌. ಪ್ರತಿನಿತ್ಯವೂ ಕೂಡ ಫೋಟೋಸ್ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿರಾ ಇವೆಲ್ಲವನ್ನೂ ನೋಡುತ್ತಿದ್ದರೆ ನೀವು ಚಿರಂಜೀವಿ ಸರ್ಜಾ ಅವರನ್ನು ಮರೆತಿದ್ದೀರಾ ಹೊಸ ಜೀವನವನ್ನು ಪ್ರಾರಂಭ ಮಾಡುತ್ತೀರಾ ಎಂಬುದು ಅರ್ಥವಾಗುತ್ತಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಈ ವಿಚಾರವನ್ನು ಕೇಳಿದಂತಹ ಮೇಘನಾ ರಾಜ್ ಅವರು ಸಂದರ್ಶನ ಒಂದರಲ್ಲಿ ಚಿರುವನ್ನ ಮರೆತಿದ್ದಾರೆ ಎಂದು ಟ್ರೊಲ್ ಮಾಡಿದ ಕೆಲವು ಜನರ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮೇಘನಾ ರಾಜ್ ಅವರು ನಾನು ಚಿರುವನ್ನ ಕಳೆದುಕೊಂಡ ಐದು ತಿಂಗಳಲ್ಲಿ ಜೀವನ ಮತ್ತು ಸಾ.ವು ಎರಡನ್ನೂ ಕೂಡ ನೋಡಿದ್ದೇನೆ ಎಂದು ಹೇಳಿದ್ದಾರೆ. ನನಗೆ ಆದ ಆ ಆ.ಘಾ.ತ ಸ್ವಾಗತಾರ್ಹವಲ್ಲ ಎಂದು ಭಾವಿಸಿದ್ದೇನೆ ಮತ್ತು ಅದನ್ನ ನಿಭಾಯಿಸಿಕೊಳ್ಳಲು ನನಗೆ ಬಹಳ ಸಮಯ ಹಿಡಿಯಿತು. ಈ ಘಟನೆ ನಡೆದಾಗ ನಾನು ಗರ್ಭಿಣಿಯಾಗಿದ್ದು ಚಿರು ಅಗಲಿಕೆಯ ನೋವಿನಲ್ಲೂ ಕೂಡ ನನ್ನ ಮಗುವಿನ ಆರೈಕೆಯ ಕಡೆ ನಾನು ಗಮನ ಕೊಡಬೇಕಾದ ಪರಿಸ್ಥಿತಿ ನನಗಿತ್ತು. ನನ್ನ ಮಗ ರಾಯನ್ ಸಂತೋಷಕ್ಕಾಗಿ ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಸಂದರ್ಶನದಲ್ಲಿ ನಟಿ ಮೇಘನಾ ರಾಜ್ ಹೇಳಿದ್ದಾರೆ.

ಚಿರು ಅಗಲಿದ ನಂತರ ನಾನು ಯಾವುದೇ ಯಾವ ಕೆಲಸಕ್ಕೂ ನಕಾರಾತ್ಮಕತೆಯನ್ನ ಅನುಭವಿಸಲಿಲ್ಲ, ಚಿರು ಮಾಂತ್ರಿಕ ರೀತಿಯಲ್ಲಿ ನನ್ನನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಮೇಘನಾ ರಾಜ್. ಒಂದು ವೇಳೆ ರಾಯನ್ ಇಲ್ಲದೆ ಇದ್ದಿದ್ದರೆ ಬಹುಷಃ ನಾನು ಪ್ರಪಂಚದ ಎಲ್ಲಾ ನಕಾರಾತ್ಮಕತೆಯನ್ನ ನಾವು ಪಡೆದುಕೊಳ್ಳುತ್ತಿದ್ದೆನೇನೋ ಎಂದು ಮೇಘನಾ ರಾಜ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ನಾನು ಹಾಕುವ ಪೋಸ್ಟ್ ಕಂಡು ನೀವು ಚಿರುವನ್ನ ಮರೆತಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ನಾನು ನನ್ನ ಪೋಸ್ಟ್ ಮೂಲಕ ಅದನ್ನ ಸಾಭೀತು ಮಾಡಬೇಕಾದ ಅವಶ್ಯಕತೆ ಇಲ್ಲ ಆತ ನನ್ನ ಮನದಲ್ಲಿ ಇರುವವರು ಅದನ್ನ ಹೇಳುವುದು ಬಿಡುವುದು ನನಗೆ ಬಿಟ್ಟ ವಿಚಾರ ಎಂದು ನಟಿ ಮೇಘನಾ ರಾಜ್ ಕೆಲವರ ಪ್ರಶ್ನೆಗೆ ಖಡಕ್ ಉತ್ತರವನ್ನ ನೀಡಿದ್ದಾರೆ.

ಚಿರು ಅವರನ್ನು ನಾನು ನೆನಪು ಇಟ್ಟುಕೊಂಡಿದ್ದೇನೆ ಅಥವಾ ಸಂಪೂರ್ಣವಾಗಿ ಮರೆತಿದ್ದೇನೆ ಎಂಬುದು ನನ್ನ ವಯಕ್ತಿಕ ವಿಚಾರಕ್ಕೆ ಬಿಟ್ಟದ್ದು ಅದನ್ನು ನಾನು ಪಬ್ಲಿಕ್ ಸಿಟಿ ಮಾಡುವಂತಹ ಅವಶ್ಯಕತೆ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯವೂ ಕೂಡ ಚಿರು ಫೋಟೋವನ್ನು ಹಾಕಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುವುದಕ್ಕೆ ನನಗೆ ಇಷ್ಟ ಇಲ್ಲ. ಚಿರು ನನ್ನ ಹೃದಯದಲ್ಲಿ ಸದಾ ವಾಸವಾಗಿರುತ್ತಾನೆ ನನ್ನ ಅಂತರಂಗಕ್ಕೆ ಅದು ತಿಳಿದಿದೆ ಬೇರೆಯವರನ್ನು ಮೆಚ್ಚಿಸುವುದಕ್ಕಾಗಿ ಅಥವಾ ಪ್ರತಿನಿತ್ಯವೂ ಕೂಡ ಬೇರೆ ಅವರಿಗೆ ನಾನು ಚಿರು ಅವರನ್ನು ಮರೆತಿಲ್ಲ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿ ನಾನು ಈ ಕೆಲಸವನ್ನು ಮಾಡುವುದಕ್ಕೆ ಸಿದ್ಧವಿಲ್ಲ. ನಾನು ನನ್ನ ಮಗನ ಕಡೆಗೆ ಗಮನವನ್ನು ನೀಡಬೇಕು ಜೊತೆಗೆ ಆತನ ಭವಿಷ್ಯವನ್ನು ರೂಪಿಸುವುದಕ್ಕಾಗಿ ನಾನು ಕೆಲಸ ಮಾಡಲೇಬೇಕು ಇದು ಅನಿವಾರ್ಯ.

ಹಾಗಾಗಿ ನಾನು ನನ್ನ ಮಗನಿಗಾಗಿ ಮತ್ತು ನನ್ನ ಜೀವನಕ್ಕಾಗಿ ಕೆಲಸ ಮಾಡುತ್ತೇನೋ ಹೊರತು ಬೇರೆ ಯಾರಿಗೂ ಕೂಡ ಬೇರೆ ಯಾರನ್ನು ಕೂಡ ಮೆಚ್ಚಿಸುವುದಕ್ಕೆ ನಾನು ಕೆಲಸ ಮಾಡುವುದಿಲ್ಲ ಎಂದು ಮೇಘನಾ ರಾಜ್ ಅವರು ಹೇಳಿದ್ದಾರೆ. ಇದರ ಜೊತೆಗೆ ಮೇಘನಾ ರಾಜ್ ಅವರು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ ಒಂದು ಹೆಣ್ಣನ್ನು ಈ ರೀತಿಯಾಗಿ ಟ್ರೋಲ್ ಮಾಡುವುದು ಎಷ್ಟು ಸರಿ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಚಿರು ನನ್ನನ್ನು ಬಿಟ್ಟು ಹೋದಾಗ ನಾನು ಐದು ತಿಂಗಳ ಗರ್ಭಿಣಿ ಆಗ ನಾನು ಎಷ್ಟು ಕಷ್ಟಪಟ್ಟಿದ್ದೇನೆ ಎಂಬುದನ್ನು ನೀವು ನೋಡೇ ಇದ್ದೀರಾ, ಮಗ ಹುಟ್ಟಿದ ಮೇಲೆ ಆತನನ್ನು ಬೆಳೆಸುವುದಕ್ಕೆ ನಾನು ಏನೆಲ್ಲಾ ಕಷ್ಟವನ್ನು ಅನುಭವಿಸಿದ್ದೇನೆ ಎಂಬುದು ನನಗೆ ತಿಳಿದಿದೆ.

ನನ್ನ ಬಳಿ ಸಿರಿ ಸಂಪತ್ತು ಆಸ್ತಿ ಐಶ್ವರ್ಯ ಎಲ್ಲವೂ ಇರಬಹುದು ಆದರೆ ನನ್ನ ಮಗನಿಗೆ ತಂದೆಯ ಪ್ರೀತಿಯನ್ನು ಕೊಡುವುದಕ್ಕೆ ನನ್ನಿಂದ ಸಾಧ್ಯವಿಲ್ಲ. ಆಗಿದ್ದರು ಕೂಡ ನನ್ನ ಮಗನಿಗೆ ತಂದೆ ತಾಯಿ ಎರಡು ಸ್ಥಾನದಲ್ಲಿ ನಿಂತುಕೊಂಡು ನಾನೊಬ್ಬಳೇ ಮುನ್ನಡೆಸಿಕೊಂಡು ಹೋಗಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಇದನ್ನು ನೆಟ್ಟಿಗರು ಅರ್ಥಮಾಡಿಕೊಳ್ಳಬೇಕು ಸುಮ್ಮನೆ ಟ್ರೋಲ್ ಮಾಡುವುದು ಅಥವಾ ಚಿರು ಅವರನ್ನು ನಾನು ಮರೆತಿದ್ದೇನೆ ಹೊಸ ಜೀವನವನ್ನು ಪ್ರಾರಂಭಿಸಿದ್ದೇನೆ ಎಂದು ದಯವಿಟ್ಟು ಹೇಳಬೇಡಿ. ನಾನು ಸಾ.ಯು.ವವರೆಗೂ ಕೂಡ ಚಿರು ನನ್ನ ಹೃದಯದಲ್ಲಿ ಇರುತ್ತಾರೆ ಅವರನ್ನು ಬಿಟ್ಟು ಮತ್ತೆ ಯಾರಿಗೂ ಆ ಸ್ಥಾನವನ್ನು ನೀಡುವುದಿಲ್ಲ ಎಂದು ಮೇಘನಾ ರಾಜ್ ಅವರು ಭಾವುಕರಾಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Chiru sarja, Meghanaraj, Raayan Raj Sarja
WhatsApp Group Join Now
Telegram Group Join Now

Post navigation

Previous Post: ದರ್ಶನ್ ಹೆಸರನ್ನು ಹೇಳದೆ ಮಾಧ್ಯಮಗಳಿಗೆ ಉರಿಸಿದ ಅಭಿಷೇಕ್ ಅಂಬರೀಶ್ ಮತ್ತು ವಿನೋದ್ ಪ್ರಭಾಕರ್ ಈ ವೈರಲ್ ವಿಡಿಯೋ ನೋಡಿ.
Next Post: ರವಿಚಂದ್ರನ್ ತಮ್ಮ ಮಗನ ಮದುವೆಗೆ ಒಟ್ಟು ಎಷ್ಟು ಹಣ ಖರ್ಚು ಮಾಡಿದ್ದಾರೆ ಗೊತ್ತಾ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗುತ್ತೀರಾ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore