Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಪುರುಷರೇ ಈ ವಿಷಯಗಳನ್ನು ನಿಮ್ಮ ಹೆಂಡತಿ ಜೊತೆ ತಪ್ಪಿಯೂ ಹೇಳಬಾರದು.!

Posted on May 3, 2024 By Kannada Trend News No Comments on ಪುರುಷರೇ ಈ ವಿಷಯಗಳನ್ನು ನಿಮ್ಮ ಹೆಂಡತಿ ಜೊತೆ ತಪ್ಪಿಯೂ ಹೇಳಬಾರದು.!

ಗಂಡ ಹೆಂಡತಿ ಸುಖಕರ ಜೀವನವನ್ನು ನಡೆಸಬೇಕಾದರೆ ಈ ವಿಚಾರ ಗಳನ್ನು ಗಮನದಲ್ಲಿಡುವುದು ಮುಖ್ಯ. ಹೆಂಡತಿಯಿಂದ ಮುಚ್ಚಿಡ ಬೇಕಾದ ವಿಷಯಗಳು. ನೀವು ವೈವಾಹಿಕ ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ನಿಮ್ಮ ಹೆಂಡತಿಯಿಂದ ಕೆಲವು ವಿಷಯಗಳನ್ನು ಮರೆಮಾಚಬೇಕು.

ಪ್ರತಿಯೊಬ್ಬ ಪತಿಯೂ ತಿಳಿದಿರಲೇಬೇಕಾದ ವಿಷಯಗಳು ಇವುಗಳನ್ನು ತನ್ನ ಹೆಂಡತಿಯೊಂದಿಗೆ ಹಂಚಿಕೊಳ್ಳುವ ತಪ್ಪನ್ನು ಮಾಡಬಾರದು. ಹಾಗಾದರೆ ಹೆಂಡತಿಯಿಂದ ಮುಚ್ಚಿಡಬೇಕಾದ ಆ ವಿಷಯಗಳು ಯಾವುವು ತಿಳಿಯೋಣ.

* ಆದಾಯದ ಬಗೆ ಸಂಪೂರ್ಣ ಮಾಹಿತಿ ನೀಡಬೇಡಿ :- ಚಾಣಕ್ಯ ನೀತಿಯ ಪ್ರಕಾರ ಪತಿ ತನ್ನ ಸಂಪಾದನೆಯ ಬಗ್ಗೆ ಎಲ್ಲವನ್ನೂ ಹೆಂಡತಿಗೆ ಹೇಳಬಾರದು. ಅನೇಕ ಬಾರಿ ತನ್ನ ಪತಿ ಹೆಚ್ಚು ಆದಾಯವನ್ನು ಹೊಂದಿರುವಾಗ ಅವಳು ಹೆಚ್ಚೆಚ್ಚು ಖರ್ಚು ಮಾಡಲು ಪ್ರಾರಂಭಿಸುತ್ತಾಳೆ ಅನಗತ್ಯ ಖರ್ಚುಗಳು ಹೆಚ್ಚಾಗತೊಡಗುತ್ತವೆ ಉಳಿತಾಯ ಮಾಡುವುದಿಲ್ಲ.

ಈ ಸುದ್ದಿ ಓದಿ:-ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!

ಹೀಗಿರುವಾಗ ಕಷ್ಟದ ಸಂದರ್ಭದಲ್ಲಿ ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗಂಡಂದಿರು ತಮ್ಮ ಆದಾಯದ ಬಗ್ಗೆ ಹೆಂಡತಿಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಬಾರದು ಅದು ಕೆಲವೊಮ್ಮೆ ಒಳ್ಳೆಯದಾಗುತ್ತದೆ ಹಾಗೂ ಮತ್ತೆ ಕೆಲವೊಮ್ಮೆ ನಿಮಗೆ ಕೆಡುಕನ್ನು ಉಂಟು ಮಾಡುತ್ತದೆ ಎಂದು ಹೇಳಬಹುದು.

* ಅವಮಾನದ ಬಗ್ಗೆ ಹೇಳಬೇಡಿ :- ಚಾಣಕ್ಯ ನೀತಿಯ ಪ್ರಕಾರ ಗಂಡನು ತನ್ನ ಹೆಂಡತಿಗೆ ತನ್ನ ಅವಮಾನದ ಬಗ್ಗೆ ತಪ್ಪಿಯೂ ಹೇಳಬಾರದು. ಯಾಕೆಂದರೆ ಗಂಡನಿಗೆ ಆಗುವ ಅವಮಾನವನ್ನು ಯಾವ ಹೆಂಡತಿಯೂ ಸಹಿಸಲಾರಳು. ಆಗ ಅವಳು ಸೇಡು ತೀರಿಸಿಕೊಳ್ಳದೆ ಶಾಂತಿಯನ್ನು ಕಾಣುವುದಿಲ್ಲ. ಇದರಿಂದಾಗಿ ವಿವಾದಗಳು ಹೆಚ್ಚಾಗುತ್ತವೆ ಆದ್ದರಿಂದ ಅವಮಾನಗಳು ಅಥವಾ ಜಗಳಗಳ ಬಗ್ಗೆ ನಿಮ್ಮ ಹೆಂಡತಿಗೆ ಹೇಳದಿರಲು ಪ್ರಯತ್ನಿಸಿ.

ಇದರಿಂದ ನಿಮ್ಮಿಬ್ಬರ ನಡುವೆ ಒಳ್ಳೆಯ ಭಾಂದವ್ಯ ಹಾಗೆ ಇರುತ್ತದೆ ಹಾಗೆ ಏನಾದರೂ ನೀವು ನಿಮ್ಮ ಅವಮಾನದ ಬಗ್ಗೆ ಹೆಂಡತಿಯ ಮುಂದೆ ಹೇಳಿದ್ದೆ ಆದರೆ ಕೆಲವೊಂದು ಸಂದರ್ಭದಲ್ಲಿ ಅವಳು ಆ ಒಂದು ವಿಷ ಯದ ಬಗ್ಗೆ ಬಹಳಷ್ಟು ಅವಮಾನವನ್ನು ನಿಮ್ಮ ಮೇಲೆ ಮಾಡುತ್ತಾಳೆ ಆದ್ದರಿಂದ ಯಾರೇ ಆಗಿರಲಿ ತಮ್ಮ ಅವಮಾನದ ಬಗ್ಗೆ ತಮ್ಮ ಹೆಂಡತಿ ಯ ಬಗ್ಗೆ ಹೇಳಿಕೊಳ್ಳುವುದು ಅಷ್ಟು ಸೂಕ್ತವಲ್ಲ.

ಈ ಸುದ್ದಿ ಓದಿ:-ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!

* ನಿಮ್ಮ ದೌರ್ಬಲ್ಯವನ್ನು ಮರೆಮಾಡಿ :- ಪತಿ ತನ್ನ ದೌರ್ಬಲ್ಯಗಳನ್ನು ಹೆಂಡತಿಯಿಂದ ಯಾವಾಗಲೂ ಮರೆಮಾಡಬೇಕು ಎಂದು ಆಚಾರ್ಯ ಚಾಣಕ್ಯನ ನೀತಿ ಹೇಳುತ್ತದೆ. ಭಾವನೆಗಳಿಂದ ಒಯ್ಯಲ್ಪಟ್ಟಾಗಲೂ ಒಬ್ಬರ ದೌರ್ಬಲ್ಯವನ್ನು ಎಂದಿಗೂ ಉಲ್ಲೇಖಿಸಬಾರದು. ಏಕೆಂದರೆ ಕೆಲವೊಮ್ಮೆ ಹೆಂಡತಿಯೂ ಗಂಡನ ದೌರ್ಬಲ್ಯದ ಲಾಭ ಪಡೆದು ತನ್ನ ಕೆಲಸವನ್ನು ಮುಗಿಸಬಹುದು.

ಇದರಿಂದ ಮನೆಯಲ್ಲಿ ಮತ್ತು ಸಮಾಜದಲ್ಲಿ ಅವಮಾನವನ್ನು ಎದುರಿಸಬೇಕಾಗಬಹುದು. ಯಾವುದೇ ದೌರ್ಬಲ್ಯವಾಗಿರಬಹುದು ಅದನ್ನು ಯಾರ ಮುಂದೆಯೂ ಸಹ ಹೇಳಿಕೊಳ್ಳಬಾರದು. ನಾವೇನಾದರೂ ಹೇಳಿಕೊಂಡರೆ ನಾವೇ ನಮ್ಮ ಕೈಯಾರೆ ಅವಮಾನ ಮಾಡಿಕೊಂಡಂತೆ ಆಗುತ್ತದೆ. ಆದ್ದರಿಂದ ನಿಮ್ಮ ದೌರ್ಬಲ್ಯಗಳನ್ನು ಮರೆಮಾಡುವುದು ಉತ್ತಮ.

* ನಿಮ್ಮ ಹೆಂಡತಿಯಿಂದಲೂ ದೇಣಿಗೆಗಳನ್ನು ರಹಸ್ಯವಾಗಿಡಿ :- ರಹಸ್ಯ ದಾನ ಮಹಾದಾನ ಎಂದು ಹೇಳಲಾಗುತ್ತದೆ. ಒಂದು ಕೈಯಿಂದ ದಾನ ಮಾಡಿದರೆ ಇನ್ನೊಂದು ಕೈಗೆ ತಿಳಿಯಬಾರದು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುತ್ತಾರೆ. ಹೀಗಿರುವಾಗ ಆಚಾರ್ಯ ಚಾಣಕ್ಯ ದಾನದ ಮಾಹಿತಿಯನ್ನು ಪತ್ನಿಯಿಂದಲೂ ಮುಚ್ಚಿಡುವಂತೆ ಸಲಹೆ ನೀಡಿದ್ದಾರೆ.

ಈ ಸುದ್ದಿ ಓದಿ:-ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!

ಏಕೆಂದರೆ ದಾನದ ಬಗ್ಗೆ ನಿಮ್ಮ ಹೆಂಡತಿಗೆ ಹೇಳಿದರೂ ಅದರ ಪ್ರಾಮುಖ್ಯತೆಯನ್ನು ಕಳೆದುಕೊಳ್ಳ ಬಹುದು. ಕೆಲವೊಮ್ಮೆ ಹೆಂಡತಿಯರು ಈ ವಿಚಾರವಾಗಿ ಇಲ್ಲಸಲ್ಲದ ಜನಗಳಿಗೆ ಯಾವ ಒಂದು ಕಾರಣಕ್ಕಾಗಿ ಹಣ ಕೊಡುತ್ತಿದ್ದೀರಿ ಎಂದು ಅದರ ಬಗ್ಗೆ ಹೀಯಾಳಿಸಿ ಮಾತನಾಡುತ್ತಿರುತ್ತಾರೆ ಆದ್ದರಿಂದ ಯಾವುದೇ ಕಾರಣಕ್ಕೂ ನೀವು ದೇಣಿಗೆಯನ್ನು ಕೊಡುತ್ತಿದ್ದರೆ ನಿಮ್ಮ ಹೆಂಡತಿಯಿಂದ ಅದನ್ನು ರಹಸ್ಯವಾಗಿದೆ.

Useful Information

Post navigation

Previous Post: ಮನೆಯಲ್ಲಿ ಸಾಲದ ಬಾಧೆಯಿಂದ, ಹಣಕಾಸು ತೊಂದರೆಯಿಂದ ಬಳಲುತ್ತಿದ್ದರೆ ಲಕ್ಷ್ಮೀಅಷ್ಟೋತ್ತರದಿಂದ ಈ ರೀತಿ ಪರಿಹಾರಮಾಡಿ ಸಾಕು.!
Next Post: ಅಕ್ಷಯ ತೃತೀಯ ಹಬ್ಬಕ್ಕೂ ಮುಂಚೆ ಈ ಕೆಲಸ ಮಾಡಿದರೆ ಲಕ್ಷ್ಮೀ ಮನೆಗೆ ಬರ್ತಾಳೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore