
ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಹಣಕಾಸಿನ ಸಮಸ್ಯೆ ಇದ್ದೇ ಇರುತ್ತದೆ. ಹೌದು ತಮ್ಮ ವ್ಯಾಪಾರ ವ್ಯವಹಾರದಲ್ಲಾಗಿರ ಬಹುದು ಮನೆಯಲ್ಲಾಗಿರಬಹುದು ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಕೆಲವೊಂದಷ್ಟು ಜನರಿಗೆ ಹಣಕಾಸಿನ ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ.
ಆದ್ದರಿಂದ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ನಾವು ಯಾವ ಕೆಲಸ ಮಾಡುವುದರಿಂದ ಯಾವ ಉಪಾಯ ಮಾಡುವುದ ರಿಂದ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವಂತಹ ಬೇರೆ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ.
ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ಮಾಡಿದ್ದೆ ಆದಲ್ಲಿ ನಿಮ್ಮ ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತದೆ. ಹಾಗಾದಈ ಈ ಒಂದು ಪೂಜಾ ವಿಧಾನವನ್ನು ಯಾವ ದಿನ ಮಾಡ ಬೇಕು ಯಾವ ರೀತಿಯಾಗಿ ಮಾಡಬೇಕು ಹಾಗೂ ಯಾವುದೆಲ್ಲ ವಸ್ತು ಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಮನೆಯವರು ಈ ತಂತ್ರ ಮಾಡುವುದರಿಂದ 100 % ಸುಖ ಶಾಂತಿ ನೆಮ್ಮದಿ ಸಿಗುತ್ತದೆ.!
ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಪೂಜಾ ವಿಧಾನವನ್ನು ಲಕ್ಷ್ಮಿ ದೇವಿಗೆ ಪ್ರಿಯವಾದಂತಹ ದಿನದಂದು ಮಾಡಬಹುದು. ಹೌದು ಬೆಳಗ್ಗೆ ಎದ್ದ ತಕ್ಷಣ ಸ್ವಚ್ಛವಾಗಿ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ತಾಯಿ ಲಕ್ಷ್ಮಿ ದೇವಿಯ ಫೋಟೋ ಮುಂದೆ ನಿಂತು ಪೂಜೆಯನ್ನು ಮಾಡಿ ಶ್ರದ್ಧೆ ಭಕ್ತಿಯಿಂದ ದೇವಿಯನ್ನು ಆರಾಧನೆ ಮಾಡಬೇಕು.
ಆನಂತರ ಒಂದು ಸಂಪೂರ್ಣ ವಾದ ಬಿಳಿ ಹಾಳೆಯನ್ನು ತೆಗೆದುಕೊಂಡು ಆ ಬಿಳಿ ಹಾಳೆಯ ಮೇಲೆ ನಿಮ್ಮ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳಿದ್ದರೂ ಹಣಕಾಸಿನ ಸಮಸ್ಯೆಗಳಿದ್ದರೂ ಅವೆಲ್ಲವನ್ನು ಸಹ ಆ ಒಂದು ಬಿಳಿ ಹಾಳೆಯ ಮೇಲೆ ಬರೆಯಬೇಕು.
ಹಾಗೂ ಕೆಲವೊಂದಷ್ಟು ಜನ ತಮ್ಮ ಸಮಸ್ಯೆಗಳಿಗೆ ಬೇರೆಯವರಿಂದ ಸಾಲವನ್ನು ಪಡೆದಿರುತ್ತಾರೆ ಆ ವಿಷಯವನ್ನು ಸಹ ಆ ಒಂದು ಬಿಳಿ ಹಾಳೆಯ ಮೇಲೆ ಬರೆಯಬೇಕು. ಅದು ಹೇಗೆ ಎಂದರೆ ನಾನು ಇಂತಹ ವ್ಯಕ್ತಿಯಿಂದ ಸಾಲವನ್ನು ಪಡೆದಿದ್ದೇನೆ ಈ ಸಲ ಆದಷ್ಟು ಬೇಗ ತೀರು ವಂತೆ ನನಗೆ ಅನುಗ್ರಹಿಸು ತಾಯಿ ಎನ್ನುವುದನ್ನು ಸ್ಪಷ್ಟವಾಗಿ ಬಿಳಿ ಹಾಳೆಯ ಮೇಲೆ ಬರೆಯಬೇಕು.
ನಾಳೆ ಮನೆಯಲ್ಲಿ ಅಯೋಧ್ಯ ರಾಮನ ಪೂಜೆ ಎಲ್ಲರೂ ಈ ರೀತಿ ಸುಲಭವಾಗಿ ಮಾಡಿಕೊಳ್ಳಿ.!
ಅದೇ ರೀತಿಯಾಗಿ ನಿಮ್ಮ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಇದ್ದರೆ ಅವರ ಆರೋಗ್ಯ ಸಮಸ್ಯೆ ಸಂಪೂರ್ಣವಾಗಿ ದೂರ ವಾಗಬೇಕು ನಮಗೆ ಅನುಗ್ರಹಿಸು ತಾಯಿ ಎನ್ನುವುದನ್ನು ಸಹ ಆ ಬಿಳಿ ಹಳೆಯ ಮೇಲೆ ಬರೆಯಬೇಕು. ಆನಂತರ ಈ ಎಲ್ಲಾ ಮಾಹಿತಿಗಳನ್ನು ಬರೆದ ಮೇಲೆ ಅದರ ಕೆಳಭಾಗ ದಲ್ಲಿ ಈಗ ನಾವು ಹೇಳುವ ಈ ಒಂದು ಮಂತ್ರವನ್ನು ಬರೆಯಬೇಕು.
ಅದು ಯಾವ ಮಂತ್ರ ಎಂದು ನೋಡುವುದಾದರೆ ” ಓಂ ಶ್ರೀಂ ರೀo ಕ್ಲೀo ಶ್ರೀ ಸಿದ್ದಲಕ್ಷ್ಮಿಯೇ ನಮಃ ” . ಈ ಮಂತ್ರ ಬರೆದ ತಕ್ಷಣ ಆ ಒಂದು ಕಾಗದವನ್ನು ದೇವರ ಕೋಣೆಗೆ ತೆಗೆದುಕೊಂಡು ಹೋಗಿ ಲಕ್ಷ್ಮೀದೇವಿಯ ಫೋಟೋದ ಮುಂದೆ ಇಡಬೇಕು. ಆನಂತರ ಮೊದಲನೆಯದಾಗಿ ದೇವರ ಮನೆಯಲ್ಲಿ ವಿಜ್ಞ ವಿನಾಯಕನ ವಿಗ್ರಹ ಅಥವಾ ಫೋಟೋ ಇದ್ದರೆ ಅದಕ್ಕೆ ಪೂಜೆಯನ್ನು ಮಾಡಿದ ಮೇಲೆ ದೀಪ ಹಚ್ಚಿ.
ಒಂದು ಪೂಜೆಯನ್ನು ಮಾಡಬೇಕು ನಂತರ ಆ ಕಾಗದದ ಮೇಲೆ ಅರಿಶಿನ ಕುಂಕುಮ ಇಟ್ಟು ಕೈ ಮುಗಿದು ಆ ಒಂದು ಕಾಗದವನ್ನು ಅದೇ ದೀಪದಿಂದ ಸುಡ ಬೇಕು. ಸುಡುವ ಮುನ್ನ ಇದರಲ್ಲಿ ಬರೆದಿರುವಂತಹ ಎಲ್ಲಾ ಸಮಸ್ಯೆಗಳು ದೂರವಾಗಬೇಕು ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಇದನ್ನು ಸುಡ ಬೇಕು ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಸಹ ನಿಮಗೆ ತಿಳಿಯದ ಹಾಗೆ ದೂರವಾಗುತ್ತಾ ಹೋಗುತ್ತದೆ.
https://youtu.be/UuUgyXuRyhc?si=OFiSdlFgq3dKLg2x