ಈ ದಶಕದ ಹಿರಿಯ ಜನರಿಗೆ ಪೂಲನ್ ದೇವಿಯ ಹೆಸರು ಹೇಳಿದರೆ ‘ಕೇಳಿಲ್ಲ’ ಎನ್ನಲಾರರು. ಚಂಬಲ್ ಕಣಿವೆಯನ್ನು ಭಯಭೀತಗೊಳಿಸಿದ ದರೋಡೆ ಕೋರರ ಗ್ಯಾಂಗ್ ನಲ್ಲಿ ಪೂಲನ್ ದೇವಿ ಕೂಡ ಇದ್ದರು. 1981 ಫೆಬ್ರುವರಿ 14ರಂದು ಉತ್ತರ ಪ್ರದೇಶದ ಬೇಹಮಾಯಿ ಗ್ರಾಮದಲ್ಲಿ ಹತ್ಯಾಕಾಂಡ ಒಂದು ನಡೆದಿದ್ದು, ದೇಶಮಟ್ಟದಲ್ಲಿ ಜನರನ್ನು ಕಂಗಾಲುಗೊಳಿಸಿತ್ತು. ಪೂಲನ್ ದೇವಿ ಹಾಗೂ ಆಕೆಯ ಗ್ಯಾಂಗ್ ಸೇರಿ ಮೇಲ್ವರ್ಗಕ್ಕೆ ಸೇರಿದ 20 ಜನರನ್ನು ಗುಂಡಿಕ್ಕಿ ಕೊಂ.ದಿದ್ದರು.
ಪ್ರಕರಣವು ಈ ರೀತಿಯಾಗಿತ್ತು. 1963 ರಲ್ಲಿ ಜನಿಸಿದ ಪೂಲನ್ ದೇವಿ ಮೇಲ್ವರ್ಗದ ಜನರಿಂದ ತುಳಿತಕ್ಕೆ ಒಳಗಾದರಂತೆ. ಆ ವೇಳೆಯಲ್ಲಿ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಕಣಿವೆ ಭಾಗದಲ್ಲಿ ದರೋಡೆಕೋರರ ಕಾರ್ಯವು ಭರದಿಂದಲೇ ಸಾಗುತ್ತಿತ್ತು. ಮೇಲ್ಜಾತಿಯ ಕೆಲವರಿಂದ ದೌರ್ಜನ್ಯಕ್ಕೆ ಒಳಗಾದ ಪೂಲನ್ ದೇವಿಯು ಜೀವನದಲ್ಲಿ ಅನುಭವಿಸಿದ ನೋವಿನ ಕಾರಣದಿಂದಾಗಿ ದರೋಡೆಕೋರರ ಗುಂಪನ್ನು ಸೇರಲು ನಿರ್ಧರಿಸಿದರಂತೆ. ಬಡತನದಲ್ಲಿ ನೊಂದವರು ಆ ಗುಂಪಿನಲ್ಲಿ ಇದ್ದರು.
ಬಾಬು ಗುಜ್ಜರ್ ನೇತೃತ್ವದ ಡಕಾಯಿತರ ತಂಡವು ಪೂಲನ್ ದೇವಿ ಅವರ ಕುಟುಂಬವನ್ನು ವಶಪಡಿಸಿಕೊಳ್ಳಲು ಬಂದಿತ್ತಂತೆ. ಆ ಸಮಯದಲ್ಲಿ ಎದುರು ಕಂಡ ಪೂಲನ್ ದೇವಿ ಅವರನ್ನು ಗುಜ್ಜರ್ ಅವರು ಆಸ್ತಿಯಂತೆ ಪೂಲನ್ ಅವರನ್ನು ವಶಕ್ಕೆ ಪಡೆದು, ಬಳಸಿಕೊಂಡು ಪ್ರತಿ ರಾತ್ರಿಯೂ ಅ.ತ್ಯಾ.ಚಾ.ರ.ವನ್ನು ಮಾಡುತ್ತಿದ್ದಾರಂತೆ. ದರೋಡೆಕೋರರ ಗುಂಪನ್ನು ಸೇರಿದ ಬಳಿಕ ಪೂಲನ್ ಅವರು ಮೇಲ್ಜಾತಿಯ ವಿಕ್ರಂ ಮಲ್ಲ ಎಂಬುವವರ ಪ್ರೀತಿಯಲ್ಲಿ ಬೀಳುತ್ತಾರೆ.
ಇವರೇ ದೇವಿಗೆ ರೈಫಲ್ ಬಳಸಲು ಹೇಳಿಕೊಟ್ಟದ್ದು ಇದರಿಂದಾಗಿ ರೈಲನ್ನು ಹಾಗೂ ಉನ್ನತ ಜಾತಿಯ ಹಳ್ಳಿಗಳನ್ನು ಲೂಟಿ ಮಾಡಲು ಸಹಾಯವಾಯಿತು. ಕದ್ದ ಪೊಲೀಸ ಸಮವಸ್ತ್ರವನ್ನು ಮಾರುವೇಷಕ್ಕಾಗಿ ಬಳಸುತ್ತಿದ್ದರಂತೆ. ಆದರೆ ಮೇಲ್ವರ್ಗದ ಜನರನ್ನು ಸಹಿಸದ ಉಳಿದ ಗ್ಯಾಂಗ್ ನವರು ಕೆರಳುವಂತೆ ಮಾಡುತ್ತದೆ. ಅದೇ ರೀತಿ ವಿಕ್ರಂ ಮಲ್ಲ ಅವರನ್ನು ಕೊ.ಲೆ.ಗಯ್ಯುತ್ತಾರೆ.
ಅಲ್ಲಿಗೆ ದರೋಡೆಕೋರರ ಗುಂಪಿನ ಸಿಟ್ಟು ಮುಗಿಯದೆ, ಲಾಲಾ ರಾಮ್ ಮತ್ತು ಶ್ರೀರಾಮ್ ಎಂಬ ಅದೇ ಗುಂಪಿನ ಇಬ್ಬರು ಸದಸ್ಯರು ಪೂಲನ್ ದೇವಿ ಅವರನ್ನು ಅಪಹರಿಸಿ ನಿರಂತರವಾದ ಅ.ತ್ಯಾ.ಚಾ.ರವನ್ನು ಎಸಗುತ್ತಾರೆ. ಬಳಿಕ ಪೂಲನ್ ದೇವಿಯು ತನ್ನ ಪ್ರೇಮಿಯ ಕೊ.ಲೆ.ಯಿಂದಾಗಿ ಮತ್ತು ದೌರ್ಜನ್ಯಕ್ಕೆ ಒಳಪಟ್ಟಿದ್ದರಿಂದ ಸೇಡನ್ನು ತೀರಿಸಿಕೊಳ್ಳಲು ತೀರ್ಮಾನಿಸುತ್ತಾಳೆ.
ಡಕಾಯಿತ ರಾಣಿ ಎಂದೇ ಜನಪ್ರಿಯತೆಯನ್ನು ಪಡೆದ ಪೂಲನ್ ದೇವಿಯು ಪ್ರೇಮಿಗಳ ದಿನದಂದು ತನ್ನ ಗ್ಯಾಂಗ್ನೊಂದಿಗೆ ಸಿದ್ಧಗೊಂಡು ಹೋಗಿ ಬೇಹ ಮಾಯಿ ಗ್ರಾಮದ ಮೇಲೆ ಲೂಟಿ ಮಾಡಿ ಠಾಕೂರ್ ಸಮಾಜದ ಮೇಲೆ ದಾಳಿ ಮಾಡಿದರು. 20 ಮಂದಿಯನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಂ.ದಿದ್ದರು. ಹ.ತ್ಯಾ.ಕಾಂಡವು ನಡೆದ ಕೆಲವು ವರ್ಷಗಳ ಒಳಗೆ ದೇವಿಯು ಶರಣಾಗತಳಾಗಿ ಸೆರೆವಾಸವನ್ನು ಅನುಭವಿಸುತ್ತಾಳೆ.
ಕಿತ್ತು ತಿನ್ನುವ ಬಡತನ ಹಾಗೂ ಲೈಂ.ಗಿಕ ಕಿರುಕುಳ ಆಕೆಯನ್ನು ಗುಂಡೆದೆಯ ಗಂಡಂತೆ ಸೇಡು ತುಂಬಿದ ಮಹಿಳೆಯನ್ನಾಗಿ ಮಾಡಿತ್ತು ಎಂದರೆ ತಪ್ಪಾಗಲಾರದು. ಸೆರೆಮನೆ ವಾಸವನ್ನು ಅನುಭವಿಸಿದ ಬಳಿಕ ಅಂದರೆ 15 ವರ್ಷಗಳ ಬಳಿಕ ಫೂಲನ್ ದೇವಿಯು ರಾಜಕೀಯ ರಂಗಕ್ಕೆ ಇಳಿದು, ಎರಡು ಬಾರಿ ಸಂಸದೆ ಕೂಡ ಆಗಿದ್ದಾರೆ. 1996ರಲ್ಲಿ ಮತ್ತು 1999 ರಲ್ಲಿ.
ಬೆಹಮಾಯಿ ಹ.ತ್ಯಾ.ಕಾಂಡದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಆಗುತ್ತಲೇ ಇದೆ. ಪ್ರಕರಣದಲ್ಲಿ ದಾಖಲಾಗಿರುವ 23 ಆರೋಪಿಗಳ ಪೈಕಿ 16 ಮಂದಿ ಸಾ.ವ.ನ್ನ.ಪ್ಪಿ.ದ್ದಾ.ರೆ.ಅದರಲ್ಲಿ ಫೂಲನ್ ದೇವಿ ಕೂಡ ಒಬ್ಬರು. ಹೌದು. ಕೊ.ಲೆಯಿಂದ ಶಿ.ಕ್ಷೆಗೊಳಗಾದ ಶೇರ್ ಸಿಂಗ್ ರಾಣಾ ಅವರು ಪೂಲನ್ ಅಧಿಕಾರದಲ್ಲಿ ಇರುವಾಗಲೇ ಮನೆಯ ಹೊರಗೆ ಹ.ತ್ಯೆ ಮಾಡುತ್ತಾರೆ.