Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಾನೇನು ಓಡೋಗಿ ಮದ್ವೆ ಆಗಲ್ಲ, ಎಲ್ರಿಗೂ ಹೇಳ್ಬಿಟ್ಟೆ ಮದ್ವೆ ಆಗೋದು ಎಂದು ಮಾಧ್ಯಮದವರ ಮೇಲೆ ಗರಂ ಆದ ನಟಿ ಪ್ರೇಮಾ.

Posted on January 24, 2023 By Kannada Trend News No Comments on ನಾನೇನು ಓಡೋಗಿ ಮದ್ವೆ ಆಗಲ್ಲ, ಎಲ್ರಿಗೂ ಹೇಳ್ಬಿಟ್ಟೆ ಮದ್ವೆ ಆಗೋದು ಎಂದು ಮಾಧ್ಯಮದವರ ಮೇಲೆ ಗರಂ ಆದ ನಟಿ ಪ್ರೇಮಾ.

ನಟಿ ಪ್ರೇಮ ಅವರ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಇವುಗಳಲ್ಲಿ ನಿಜವಾದ ಮಾಹಿತಿ ಗಿಂತ ಸುಳ್ಳು ಸುದ್ದಿಗಳೇ ಹೆಚ್ಚು, ಈ ಬಗ್ಗೆ ವಿಷಯಗಳು ಪ್ರೇಮ ಅವರ ವರೆಗೂ ತಲುಪಿದ್ದು ಇತ್ತೀಚೆಗೆ ಅದಕ್ಕೆ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಅವರು ಗಿರಿಜನ ಯೋಜನೆ ಅಡಿ ಬಡ ವಿದ್ಯಾರ್ಥಿಗಳಿಗೆ ಟ್ಯಾಬ್ ಹಂಚುವ ಕಾರ್ಯಕ್ರಮವನ್ನು ಆಯೋಜಿಸಿದರು ಅದಕ್ಕೆ ಮುಖ್ಯ ಅತಿಥಿಯಾಗಿ ಪ್ರೇಮ ಅವರನ್ನು ಆಹ್ವಾನಿಸಿದ್ದರು.

ಪ್ರೇಮ ಅವರು ಈ ರೀತಿ ಜನಸೇವೆಯ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವುದೇ ಇಲ್ಲ, ವೈಯಕ್ತಿಕವಾಗಿ ಎಷ್ಟೇ ಬಿಜಿ ಇದ್ದರೂ ಕೂಡ ಬಿಡುವು ಮಾಡಿಕೊಂಡು ಇಂತಹ ಸಮಾರಂಭಗಳಲ್ಲಿ ಭಾಗಿಯಾಗುತ್ತಾರೆ.ಈಗಲೂ ಸಹ ಕಾರ್ಯಕ್ರಮಕ್ಕೆ ಬಂದಿದ್ದ ಅವರಿಗೆ ಮಾಧ್ಯಮಗಳಿಂದ ಹಲವು ಪ್ರಶ್ನೆಗಳು ಎದುರಾಗಿವೆ.

ಮೊದಲಿಗೆ ಎಲ್ಲರಿಗೂ ಚೆನ್ನಾಗಿ ಉತ್ತರ ಹೇಳುತ್ತಿದ್ದ ಇವರಿಗೆ ಒಬ್ಬರು ಮೊನ್ನೆ ನೀವು ದೇವಸ್ಥಾನಕ್ಕೆ ಹೋಗಿದ್ದು ನಿಮ್ಮ ಮದುವೆ ವಿಚಾರ ಕೇಳುವುದಕ್ಕೆ ಎಂದು ಸುದ್ದಿ ಆಗುತ್ತಿದ್ದೆ ಅದು ನಿಜವಾ ಎಂದು ಪ್ರಶ್ನಿಸಿದ್ದಾರೆ. ತಕ್ಷಣವೇ ಈ ಪ್ರಶ್ನೆಗೆ ಕೋಪ ಮಾಡಿಕೊಂಡ ಪ್ರೇಮ ಅವರು ನನಗೆ ಈಗ ಮಾಧ್ಯಮಗಳ ಮೇಲೆ ನಂಬಿಕೆ ಹೊರಟುಹೋಗಿದೆ, ನಾವು ಯಾರ ಜೊತೆ ನಿಂತರು ಯಾರ ಜೊತೆ ಮಾತನಾಡಿದರು ಈ ರೀತಿ ಬಣ್ಣ ಕಟ್ಟಿ ಹಬ್ಬಿಸಿ ಬಿಡುತ್ತೀರಲ್ಲ ಅದಕ್ಕೆ ಇಷ್ಟು ಬೇಸರ ಆಗಿರುವುದು.

ನಾವು ದೇವಸ್ಥಾನಕ್ಕೆ ಹೋಗಬಾರದಾ ಹೇಳಿ ಇನ್ನು ಮುಂದೆ ಹೋಗುವುದನ್ನೇ ನಿಲ್ಲಿಸಿ ಬಿಡುತ್ತೇನೆ ಎಂದು ಬೇಸರದಿಂದ ಉತ್ತರಿಸಿದ್ದಾರೆ. ಜೊತೆಗೆ ಅಂದು ನಾನು ನಮ್ಮ ಸ್ನೇಹಿತರ ಮದುವೆ ಇತ್ತು ಎನ್ನುವ ಕಾರಣಕ್ಕೆ ಅಲ್ಲಿಗೆ ಹೋಗಿದ್ದೆ, ಹತ್ತಿರದಲ್ಲೇ ಕೊರಗಜ್ಜ ಅವರ ಸನ್ನಿಧಿ ಇದ್ದ ಕಾರಣ ಬಹಳ ದಿನಗಳಿಂದ ಭೇಟಿ ಕೊಟ್ಟಿರಲಿಲ್ಲ ಹಾಗಾಗಿ ದರ್ಶನ ಪಡೆದುಕೊಳ್ಳೋಣ ಎನ್ನುವ ಕಾರಣಕ್ಕೆ ಹೋಗಿದ್ದೆ ಅಷ್ಟೇ.

ಅಷ್ಟಕ್ಕೇ ನೀವೆಲ್ಲಾ ಬಾಯಿಗೆ ಬಂದ ಹಾಗೆ ಸುದ್ದಿ ಮಾಡಿದ್ದೀರಾ ಎಂದು ಕೋಪದಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಆ ರೀತಿ ಮದುವೆ ಆಗಬೇಕು ಎಂದರೆ ಎಲ್ಲೂ ಓಡಿ ಹೋಗಿ ಮದುವೆ ಆಗುವುದಿಲ್ಲ. ನನಗೆ ಕರ್ನಾಟಕದಲ್ಲಿ ಒಳ್ಳೆ ಹೆಸರಿದೆ, ಎಂದೂ ನಾನು ತಪ್ಪು ಮಾಡಿಲ್ಲ, ತಪ್ಪಿಸಿಕೊಂಡು ಓಡಾಡಿಲ್ಲ, ಹೀಗಿದ್ದಾಗ ನನ್ನ ಮದುವೆ ವಿಚಾರ ಬಂದರೆ ಖಂಡಿತವಾಗಿಯೂ ಅದನ್ನು ನಾನೇ ಹೇಳಿಕೊಳ್ಳುತ್ತೇನೆ ಅಲ್ಲಿಯವರೆಗೂ ಇಂತಹ ವಿಚಾರಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಬೇಡಿ.

ಜನ ನಿಮ್ಮ ಚಾನೆಲ್ ನೋಡುತ್ತಾರೆ ಎಂದರೆ ಒಳ್ಳೆ ವಿಷಯಗಳು ಸತ್ಯಂಶವೂ ಕೂಡಿರಬೇಕು, ಅಂತಹ ವಿಷಯಗಳನ್ನು ಪ್ರಸಾರ ಮಾಡಿ. ನಾನು ಇನ್ನೂ ಸಾಧಿಸುವುದಕ್ಕೆ ಬಹಳ ಇದೆ ಆ ಬಗ್ಗೆ ಯೋಚನೆ ಮಾಡುತ್ತೇನೆ. ನನ್ನ ಮದುವೆ ವಿಚಾರ ಬಂದರೆ ನಾನು ಯಾವ ಮಾಧ್ಯಮಗಳಿಗೂ ಸ್ಪಷ್ಟನೆ ಕೊಡು ಅಗತ್ಯವೇ ಇಲ್ಲ, ನನಗೂ ಮತ್ತು ಜನರಿಗೂ ಸಂಬಂಧ ಉಂಟು ಅವರು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ.

ಮುಂದೆಯೂ ಹಾಗೆ ನೋಡಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ ಹಾಗಾಗಿ ಅಂತಹ ಜನಗಳಿಗೋಸ್ಕರ ನಾನು ಏನಾದರೂ ಮಾಡಬೇಕು ಇದುವರೆಗೂ ನಾನು ಕಲಾವಿದೆ ಆಗಿದ್ದೇನೆ ಹೊರತು ಅದನ್ನು ಹೊರತುಪಡಿಸಿ ಬೇರೇನೂ ಮಾಡಿಲ್ಲ. ಇನ್ನು ಮುಂದೇನೆ ಆದರೂ ನನ್ನ ಜನರಿಗೋಸ್ಕರ ನಾನು ಏನಾದರೂ ಮಾಡಬೇಕು ಎನ್ನುವ ಯೋಚನೆಗಳು ಓಡುತ್ತಿದೆ. ಮದುವೆಯು ಕೂಡ ಜೀವನದ ಒಂದು ಭಾಗ ಆದರೆ ಅದಕ್ಕೆಲ್ಲಾ ಕಂಕಣ ಬಲ ಕೂಡಿ ಬರಬೇಕು ಸಮಯ ಬಂದಾಗ ಎಲ್ಲಾ ಆಗುತ್ತದೆ ಸದ್ಯಕ್ಕೆ ಅಂತದ್ದೇನು ಇಲ್ಲ ಎಂದು ಹೇಳಿದ್ದಾರೆ.

Entertainment
WhatsApp Group Join Now
Telegram Group Join Now

Post navigation

Previous Post: ಮೊದಲ ಬಾರಿಗೆ ತಮ್ಮ ಕ್ರಶ್ ಯಾರು ಎಂಬ ವಿವರವನ್ನು ರಿವೀಲ್ ಮಾಡಿದ ನಟಿ ನಿಶಾ
Next Post: ನಟ ಸಾಗರ್ & ಸಿರಿ ಮದುವೆಯ ಮೆಹಂದಿ ಶಾಸ್ತ್ರದ ಡ್ಯಾನ್ಸ್ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore