ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ರಾಖಿ ಸಾವಂತ್ (Rakhi Savanth) ಆಗಾಗ ಮಾಧ್ಯಮಗಳಲ್ಲಿ ಸುದ್ದಿ ಆಗುವುದು ಇದ್ದೇ ಇದೆ. ಆದರೆ ಈ ಬಾರಿ ಆಕೆ ಸಿನಿಮಾ ಮತ್ತು ರಿಯಾಲಿಟಿ ಶೋಗಳ ಹೊರತಾಗಿ ಸಂಸಾರದ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಒಂದರ್ಥದಲ್ಲಿ ಪತಿ ಆದಿಲ್ (Adil) ವಿರುದ್ಧ ಮಾರುದ್ದದ ದೂರು ಹೇಳುತ್ತಾ ಸುದ್ದಿಯಾಗುತ್ತಿದ್ದಾರೆ ಎಂದೇ ಹೇಳಬಹುದು. ರಾಖಿ ಸಾವಂತ್ ಈಗಷ್ಟೇ ಮಾತೃ ವಿಯೋಗದ ದುಃಖದಲ್ಲಿದ್ದಾರೆ. ಆ ದುಃಖದಿಂದ ಹೊರಬರುವ ಮೊದಲೇ ಆಕೆ ಪತಿಯಿಂದ ಕೂಡ ನೋವನ್ನು ಅನುಭವಿಸುತ್ತಿದ್ದಾರೆ.
ರಾಖಿ ಸಾವಂತ್ ಮೈಸೂರಿನ ಆದಿಲ್ ಎನ್ನುವ ಯುವಕನನ್ನು ಮದುವೆ ಆಗಿದ್ದರು. ಅವರಿಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಅವರಿಬ್ಬರೂ ಒಟ್ಟೊಟ್ಟಿಗೆ ಓಡಾಡುವ ಸಮಯದಲ್ಲಿಯೇ ಮೀಡಿಯಾಗಳಲ್ಲಿ ಹರಿದಾಡಿತ್ತು, ಆದರೆ ಮದುವೆ ಆಗಿರುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈಗಷ್ಟೇ ಕೆಲ ದಿನಗಳ ಹಿಂದೆ ರಾಖಿ ಸಾವಂತ್ ತಾವು ಮತ್ತು ಆದಿಲ್ ಮದುವೆ ಆಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದಾರೆ. ಇದರಿಂದ ಇವರಿಬ್ಬರ ಮದುವೆ ಆಗಿರೋದು ಸ್ಪಷ್ಟ ಆಗಿದೆ.
ಆದರೆ ಇವರಿಬ್ಬರ ಮದುವೆ ಮಧ್ಯೆ ಹುಡುಗಿ ಒಬ್ಬಳು ಬಂದಿದ್ದಾಳಂತೆ, ಮರಾಠಿಯ ಬಿಗ್ ಬಾಸ್ ಸೀಸನ್ 4 ಅಲ್ಲಿ ರಾಕಿ ಸಾವಂತ್ ಇದ್ದ ಸಮಯವನ್ನು ಬಳಸಿಕೊಂಡ ಆ ಹುಡುಗಿ ಆದಿಲ್ ಅನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳಂತೆ. ಇದರಿಂದ ಆಗಿ ತನ್ನ ಮದುವೆ ವಿಷಯವನ್ನು ಗುಟ್ಟಾಗಿ ಇಡುವಂತೆ ಆದಿಲ್ ತಾಕೀತು ಮಾಡಿದ್ದನಂತೆ ಆದಿಲ್ ನ ಎಲ್ಲಾ ಮಾತುಗಳನ್ನು ನಂಬುತ್ತಿದ್ದ ರಾಖಿ ಸಾವಂತ್ ಅವನಿಗಾಗಿ ಮದುವೆಯಾಗಿ 10 ತಿಂಗಳು ಆಗಿದ್ದರು ಮದುವೆ ವಿಷಯವನ್ನು ಹೊರ ಹೇಳಿರಲಿಲ್ಲವಂತೆ.
ಆದರೆ ಮಾಧ್ಯಮ ಹಾಗೂ ತನ್ನ ಅಭಿಮಾನಿಗಳಿಗೆ ಹೆದರಿ ಈಗ ಬಹಿರಂಗ ಪಡಿಸುವುದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಈ ಬಾರಿ ಆದಿಲ್ ಹಾಗೂ ಆ ಹುಡುಗಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾಳೆ. ಆದಿಲ್ ನೀನು ನನಗೆ ಕುರಾನ್ ಮೇಲೆ ಪ್ರಮಾಣ ಮಾಡಿ ಹೇಳಿದ್ದೆ, ಅಲ್ಲಾ ಬಿಟ್ಟರೆ ನೀನು ದೇವರು ನನಗೆ ಎಂದು ಹೇಳಿದ್ದೆ. ಆದರೆ ನನಗೆ ದೇವರು ಆಗಲು ಇಷ್ಟವಿಲ್ಲ ನಿನ್ನ ಮಡಿದಿಯಾಗಬೇಕು, ನಿನ್ನ ಮಕ್ಕಳಿಗೆ ತಾಯಿ ಆಗಬೇಕು ಎನ್ನುವುದು ನನ್ನ ಆಸೆ.
ನೀನು ಹೇಳಿರುವ ಮಾತುಗಳನ್ನು ಉಳಿಸಿಕೊಳ್ಳುತ್ತಿಲ್ಲ. ನೀನು ಹೇಳುತ್ತಿದ್ದೀಯ ಮುಸ್ಲಿಂ ಧರ್ಮದಲ್ಲಿ ಎಲ್ಲವೂ ಬಾಗಿಲ ಒಳಗೆ ಆಗಬೇಕು ಎಂದು. ಆದರೆ ನಾನು ಎಲ್ಲವನ್ನು ಮುಚ್ಚಿಟ್ಟುಕೊಂಡು ಫ್ರಿಡ್ಜ್ ಒಳಗೆ ತುಂಡಾಗಿರಲು ಇಷ್ಟ ಪಡುವುದಿಲ್ಲ. ಹಾಗಾಗಿ ಎಲ್ಲರಂತೆ ನನ್ನನ್ನು ಭಾವಿಸಬೇಡ ಮದುವೆ ಆಗಿರುವ ಮಹಿಳೆಯಾಗಿ ನಾನು ನನ್ನ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾನೆ. ಅಲ್ಲದೇ ನನ್ನ ನಿನ್ನ ಮಧ್ಯೆ ಬರುತ್ತಿರುವ ನಿನ್ನ ಅಕ್ರಮ ಸಂಬಂಧದ ಹುಡುಗಿಯನ್ನು ಸುಮ್ಮನೆ ಬಿಡುವುದಿಲ್ಲ.
ಅವಳು ನನಗೆ ಕರೆ ಮಾಡಿ ಧಮ್ಕಿ ಹಾಕುತ್ತಿದ್ದಾಳೆ, ನಿನ್ನನ್ನು ಬಿಡುವಂತೆ ಹೇಳುತ್ತಿದ್ದಾಳೆ ಇದು ಹೇಗೆ ಸಾಧ್ಯ? ಅವಳಿಗೆ ಹೇಳು ನಾನು ಇನ್ನೂ ಅವಳ ಹೆಸರನ್ನು ಬಹಿರಂಗಪಡಿಸಿಲ್ಲ, ಅವಳ ವಿಡಿಯೋಗಳನ್ನು ಮೀಡಿಯಾಗೆ ಕೊಟ್ಟಿಲ್ಲ ಅದಕ್ಕಾಗಿ ಅವಳೇ ನನಗೆ ಚಿರಋಣಿಯಾಗಿ ಇರಬೇಕು ಎಂದು. ಸಮಯ ಬಂದಾಗ ನಾನು ಎಲ್ಲವನ್ನು ಬಹಿರಂಗ ಪಡಿಸುತ್ತೇನೆ.
ಮದುವೆ ಆಗಿರುವ ಪತ್ನಿಗೆ ಪ್ರಾಮಾಣಿಕನಾಗಿರದ ಪತಿಗೆ ಯಾವ ಹುಡುಗಿಯೂ ಕೂಡ ಪ್ರಾಮಾಣಿಕವಾಗಿ ಇರಲಾರಳು ಅದು ನಿನಗೆ ಅರ್ಥ ಆಗಬೇಕು. ಜನ ನನ್ನನ್ನು ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾಳೆ ಅಂದುಕೊಳ್ಳುತ್ತಾರೆ ಖಂಡಿತವಾಗಿಯೂ ಇಲ್ಲ ನಾನು ನನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದೇನೆ ಅಷ್ಟೇ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಆದಿಲ್ ಗಾಗಿ ಹಿಂದೂ ಧರ್ಮವನ್ನು ಬಿಟ್ಟು ಮುಸ್ಲಿಂ ಧರ್ಮಕ್ಕೆ ಹೋಗಿ ಆತನನ್ನು ಮದುವೆಯಾಗಿದ್ದಕ್ಕೆ ಈಗ ತಕ್ಕ ಶಾಸ್ತಿ ಆಗುತ್ತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.