Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಿಚ್ಚನ ವಿರುದ್ಧ ತಿರುಗಿದ ಬಿದ್ದ ರಶ್ಮಿಕಾ, ನಾಯಿ ಬಾಲ ಯಾವತ್ತಿದ್ರು ಡೊಂಕು ರಶ್ಮಿಕಾ ಎಂದಿಗೂ ಕೂಡ ಬದಲಾಗಲ್ಲ ಅನ್ನುತ್ತಿರುವ ನೆಟ್ಟಿಗರು, ಅಷ್ಟಕ್ಕೂ ಸುದೀಪ್ ಮೇಲೆ ರಶ್ಮಿಕಾಗೆ ಯಾಕಿಷ್ಟು ಕೋಪ

Posted on January 22, 2023January 22, 2023 By Kannada Trend News No Comments on ಕಿಚ್ಚನ ವಿರುದ್ಧ ತಿರುಗಿದ ಬಿದ್ದ ರಶ್ಮಿಕಾ, ನಾಯಿ ಬಾಲ ಯಾವತ್ತಿದ್ರು ಡೊಂಕು ರಶ್ಮಿಕಾ ಎಂದಿಗೂ ಕೂಡ ಬದಲಾಗಲ್ಲ ಅನ್ನುತ್ತಿರುವ ನೆಟ್ಟಿಗರು, ಅಷ್ಟಕ್ಕೂ ಸುದೀಪ್ ಮೇಲೆ ರಶ್ಮಿಕಾಗೆ ಯಾಕಿಷ್ಟು ಕೋಪ

ರಶ್ಮಿಕ ಮಂದಣ್ಣ ನ್ಯಾಷನಲ್ ಕ್ರಶ್ ಆಗಿದ್ದರೂ ಕನ್ನಡಿಗರ ಪಾಲಿಗೆ ಈಕೆ ಟ್ರೋಲಿಂಗ್ ಸ್ಟಾರ್ ಏಕೆಂದರೆ ಈಕೆ ಆಡುವ ಪ್ರತಿ ಮಾತು ಕೂಡ ಟ್ರೋಲ್ ಆಗುತ್ತದೆ. ಪದೇ ಪದೇ ಎಡವಟ್ಟು ಹೇಳಿಕೆಗಳನ್ನು ಕೊಟ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಇದುವರೆಗೆ ಕನ್ನಡದ ಬಗ್ಗೆ ಗೌರವ ಇಲ್ಲದೆ ಅಭಿಮಾನ ಇಲ್ಲದವರಂತೆ ಕನ್ನಡ ಸಿನಿಮಾಗಳಿಗೆ ಸಂಬಂಧ ಇಲ್ಲದಂತೆ ನಡೆದುಕೊಂಡು ಟ್ರೋಲ್ ಆಗುತ್ತಿದ್ದವರು ಮತ್ತೊಮ್ಮೆ ಈಗ ಕನ್ನಡದ ಸ್ಟಾರ್ ಹೀರೋ ಮಾತಿಗೆ ತಿರುಗೇಟು ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ.

ರಶ್ಮಿಕ ಮಂದಣ್ಣ ಅವರು ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಹೀಗೆ ಎಲ್ಲಾ ಭಾಷೆಯಲ್ಲಿ ಕೂಡ ಬಳಕೆಯಲ್ಲಿರುವ ನಟಿ ಇಷ್ಟೊಂದು ಬಿಝಿ ಆಗಿರುವ ಇವರು ಆಗಾಗ ಸಂದರ್ಶನಗಳಲ್ಲೂ ಪಾಲ್ಗೊಳ್ಳುತ್ತಿರುತ್ತಾರೆ. ಈಗ ಪ್ರೇಮ ದಿ ಜರ್ನಲಿಸ್ಟ್ ಎನ್ನುವ ಯೂಟ್ಯೂಬ್ ಚಾನೆಲ್ ಅವರಿಗೆ ಕೊಟ್ಟಿರುವ ಸಂದರ್ಶನದಲ್ಲಿ ಸುದೀಪ್ ಅವರು ಹೇಳಿರುವ ಹೇಳಿಕೆ ಒಂದಕ್ಕೆ ತಿರುಗೇಟು ನೀಡಿದ್ದಾರೆ.

ಅಷ್ಟಕ್ಕೂ ಸುದೀಪ್ ಅವರು ಏನು ಹೇಳಿದ್ದರು ಎಂದರೆ ಸಂದರ್ಶನ ಒಂದರಲ್ಲಿ ಸುದೀಪ್ ಅವರು ಪಬ್ಲಿಕ್ ಫಿಗರ್ ಆದಮೇಲೆ ನಾವು ಎಲ್ಲವನ್ನು ಸಂಭಾಳಿಸುವುದನ್ನು ಕಲಿತುಕೊಳ್ಳಬೇಕು. ಯಾಕೆಂದರೆ ಹಿಂದೆ ಎಲ್ಲಾ ರಾಜಕುಮಾರ್ ಕಾಲದಲ್ಲಿ ಮಾಧ್ಯಮದವರು ಮತ್ತು ಪತ್ರಿಕೋದ್ಯಮದವರು ಮಾತ್ರ ಬಂದು ನಮ್ಮ ಬಳಿ ಸುದ್ದಿಗೋಷ್ಠಿ ನಡೆಸಿ ಹೋಗುತ್ತಿದ್ದರು.

ಆದರೆ ಈಗ ಕಾಲ ಅಂಗಿಲ್ಲವಲ್ಲ 15 20 ವರ್ಷಗಳಿಂದ ಸಾಕಷ್ಟು ಬದಲಾಗಿದೆ ಈಗ ನಾವು ಈ ಕಾಲಕ್ಕೆ ತಕ್ಕಂತೆ ಹೊಂದುಕೊಂಡು ಬದುಕಬೇಕು ಆ ಜವಾಬ್ದಾರಿ ನಮಗೆ ಬರಬೇಕು ಎಂದಿದ್ದಾರೆ. ಮುಂದುವರೆದು ಹೂವಿನ ಮಾಲೆ ಹಾಕಿಸಿಕೊಳ್ಳುವಾಗ ಅದರ ಜೊತೆ ಮೊಟ್ಟೆ ಟೊಮ್ಯಾಟೋ ಕಲ್ಲುಗಳು ಬರುತ್ತವೆ ಅದನ್ನು ಸಹ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.

ಅದಕ್ಕೆ ಮಾತುಗಳಿಗೆ ರಶ್ಮಿಕ ಮಂದಣ್ಣ ಈಗ ಕೊಟ್ಟಿರುವ ಪ್ರೇಮ ದಿ ಜರ್ನಲಿಸ್ಟ್ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಕೌಂಟರ್ ಕೊಟ್ಟಿದ್ದಾರೆ. ನನ್ನ ಫೇವರೆಟ್ ಹೀರೋ ಒಬ್ಬರು ಈ ರೀತಿ ಮಾಲೆ ಜೊತೆ ಕಲ್ಲು ಟೊಮೆಟೊ ಮೊಟ್ಟೆ ಬಂದರೆ ಸ್ವೀಕರಿಸಬೇಕು ಎಂದಿದ್ದಾರೆ ಆದರೆ ಹೊಡೆದ ಕಲ್ಲುಗಳಿಂದ ರಕ್ತ ಬರುತ್ತಿದ್ದರೆ ನೋವಾಗುತ್ತಿದ್ದರೆ ಹೇಗೆ ಸಹಿಸಲು ಸಾಧ್ಯ ಎಂದು ಆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಒಂದೊಂದು ಬಾರಿ ರಶ್ಮಿಕಾ ಅವರು ಬಹಳ ಮೆಚೂರ್ ಆಗಿ ಮಾತನಾಡುತ್ತಾರೆ ಎನಿಸಿದರೂ ಕೂಡ ಒಂದೊಂದು ಬಾರಿ ಅದು ಅತಿರೇಕ ಅನಿಸಿಬಿಡುತ್ತದೆ. ಯಾಕೆಂದರೆ ಸುದೀಪ್ ಅವರು ಸಹ ಯಾವುದಾದರೂ ಹೇಳಿಕೆ ಕೊಟ್ಟರೆ ಸುಖಾ ಸಮನೆ ಬಾಯಿಗೆ ಬಂದದ್ದನ್ನೆಲ್ಲಾ ಹೇಳಿ ಬಿಡುವುದಿಲ್ಲ. ನೂರು ಬಾರಿ ಯೋಚನೆ ಮಾಡಿ ಅಳೆದು ತೂಗಿ ತೂಕವಾದ ಮಾತನ್ನು ಆಡುತ್ತಾರೆ. ಅಂತಹ ಮಾತುಗಳಿಗೆ ಎದುರು ಮಾತು ಬಂದಾಗ ಅದನ್ನು ಅಭಿಮಾನಿಗಳಿಗೆ ಸಹಿಸಲು ಆಗುವುದಿಲ್ಲ.

ರಶ್ಮಿಕ ಈಗ ಕೊಟ್ಟಿರುವ ಈ ಹೇಳಿಕೆ ಮೂಲಕ ಇನ್ನೆಷ್ಟು ಟ್ರೋಲ್ ಆಗುತ್ತಾರೆ ಗೊತ್ತಿಲ್ಲ. ಈ ಇಂಟರ್ವ್ಯೂ ಅಲ್ಲಿ ರಶ್ಮಿಕ ಕಡೆಯಿಂದ ಆದ ಮತ್ತೊಂದು ಆಶ್ಚರ್ಯಕರ ಬದಲಾವಣೆ ಎಂದರೆ ಹಿಂದೊಮ್ಮೆ ತನಗೆ ಮೊದಲ ಚಾನ್ಸ್ ಕೊಟ್ಟ ಪ್ರೊಡಕ್ಷನ್ ಹೌಸ್ ಹೆಸರು ಹೇಳಲು ಇಷ್ಟ ಪಡದೆ ಸನ್ನೆ ಮಾಡಿ ತೋರಿಸಿದ್ದ ಈಕೆ ಈ ಬಾರಿ ರಿಷಭ್ ಹಾಗೂ ರಕ್ಷಿತ್ ಅವರೇ ನನಗೆ ಇಂಡಸ್ಟ್ರಿಯ ದಾರಿ ತೋರಿಸಿದ್ದು. ಮೊದಲ ಎರಡು ಸಿನಿಮಾಗಳಿಂದ ನಾನು ಬಹಳ ಕಲಿತೆ ಎಂದು ಕನ್ನಡ ನೆನೆದಿದ್ದಾರೆ ಇದನ್ನು ನೋಡಿದ ಜನ ಈಗ ರಶ್ಮಿಕಾ ಈಗ ಬುದ್ಧಿ ಕಲಿತಿದ್ದಾಳೆ ಎನ್ನುತ್ತಿದ್ದಾರೆ.

Entertainment Tags:Kiccha Sudeepa, Rashmika Maddanna
WhatsApp Group Join Now
Telegram Group Join Now

Post navigation

Previous Post: ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಮಾಡ್ತ ಇದಿನಿ ಅದು ಯಾವ ಲೆವೆಲ್ ಗೆ ಇರುತ್ತೆ ಗೊತ್ತ.?
Next Post: ಏನ್ ಬೇಕಾದ್ರೂ ತೋರಿಸ್ತಿನಿ ಆದ್ರೆ ಅವಕಾಶಕ್ಕಾಗಿ ಆ ಒಂದು ಜಾಗ ಮಾತ್ರ ತೋರಿಸೋಕೆ ಆಗಲ್ಲ ಎಂದ ನಟಿ ರಾಶಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore