Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇದ್ದಕ್ಕಿದ್ದ ಹಾಗೇ ಶುರುವಾಯ್ತು ರೇಷನ್ ಕಾರ್ಡ್ ರದ್ದು ಕಾರ್ಯಕ್ರಮ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ.

Posted on April 26, 2023 By Kannada Trend News No Comments on ಇದ್ದಕ್ಕಿದ್ದ ಹಾಗೇ ಶುರುವಾಯ್ತು ರೇಷನ್ ಕಾರ್ಡ್ ರದ್ದು ಕಾರ್ಯಕ್ರಮ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ.

 

ರೇಷನ್ ಕಾರ್ಡ್ ಎನ್ನುವುದು ಭಾರತದಲ್ಲಿ ಒಂದು ಪ್ರಮುಖ ಗುರುತಿನ ಚೀಟಿ. ಅದರಲ್ಲಿ ಮುಖ್ಯವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಣೆ ಮಾಡುವ ಉಚಿತ ಪಡಿತರವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಬೇಕೇ ಬೇಕು. ಅವರ ಕುಟುಂಬದ ಪರಿಸ್ಥಿತಿಯನ್ನು ಆಧರಿಸಿ ಆ ಬಗೆಯಾದ ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇಂದು ಭಾರತದಲ್ಲಿರುವ ಪ್ರತಿಯೊಂದು ಕುಟುಂಬವು ಕೂಡ ತನ್ನ ಸ್ಥಿತಿಗೆ ಅನುಗುಣವಾದ ಒಂದೊಂದು ರೇಷನ್ ಕಾರ್ಡ್ ಹೊಂದಿದೆ.

APL, BPL ಅಂತ್ಯೋದಯ ಈ ರೀತಿ ಭಿನ್ನ ಬಗೆಯ ರೇಷನ್ ಕಾರ್ಡ್ ಗಳು ಇರಬಹುದು ಆದರೆ ಪ್ರತಿಯೊಂದು ಕುಟುಂಬವು ಕೂಡ ಮುಖ್ಯವಾಗಿ ಪಡಿತರ ಕಾರಣಕ್ಕೆ ಹಾಗೂ ಇನ್ನಿತರ ಕಾರಣಕ್ಕೆ ರೇಷನ್ ಕಾರ್ಡನ್ನು ಹೊಂದಿದೆ. ರೇಷನ್ ಕಾರ್ಡ್ ಮೂಲಕ ಪಡಿತರ ಕೊಡುವ ವ್ಯವಸ್ಥೆ ಜಾರಿಗೆ ಬಂದು ಸಾಕಷ್ಟು ವರ್ಷಗಳೇ ಕಳೆದಿವೆ ಆಗಿಲಿಂದಲೂ ಸಹಾ ಇದರಲ್ಲಿ ಅಕ್ರಮಗಳು ವ್ಯವಹಾರಗಳು ನಡೆಯುತ್ತಲೇ ಇವೆ.

ಸಧ್ಯಕ್ಕೆ ಈಗ ಇದಕ್ಕೆ ಪರಿಹಾರ ಎಂದರೆ ಆಧಾರ್ ಕಾರ್ಡ್. ಒಬ್ಬ ವ್ಯಕ್ತಿಗೆ ಒಂದೇ ಸಂಖ್ಯೆ ಎನ್ನುವ ಈ ಕ್ರಮದಿಂದ ಮತ್ತು ಬಯೋಮೆಟ್ರಿಕ್ ಮಾಹಿತಿಗಳನ್ನು ಆದರಿಸಿ ಪಡಿತರ ಕೊಡುವುದರಿಂದ ತಕ್ಕಮಟ್ಟಿಗೆ ಇದನ್ನು ಕಂಟ್ರೋಲಿಗೆ ತರಬಹುದು. ಅದರ ಬಗ್ಗೆ ಈಗ ಸರ್ಕಾರ ಚಿಂತನೆ ನಡೆಸುತ್ತಿದೆ. ಯಾಕೆಂದರೆ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗೆ, ಕಡು ಬಡವರಿಗೆ ಉಚಿತ ಪಡಿತರ ಕೊಡಬೇಕು.

ಅಂತಹ ಕುಟುಂಬಕ್ಕೆ ಅಗತ್ಯವಾದ ಆಹಾರ ಧಾನ್ಯ ಪದಾರ್ಥಗಳನ್ನು ಕಡಿಮೆ ಬೆಲೆಗೆ ಅಥವಾ ಸಂಪೂರ್ಣ ಉಚಿತವಾಗಿ ನೀಡಬೇಕು ಎನ್ನುವ ಧ್ಯೇಯವನ್ನು ಇಟ್ಟುಕೊಂಡಿದೆ. ರಾಜ್ಯದಲ್ಲೂ ಅನ್ನಭಾಗ್ಯ ಯೋಜನೆ ಜಾರಿಗೆ ಬಂದು ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಒಂದಕ್ಕಿಂತ ಹೆಚ್ಚಿನ ಕಾರ್ಡುಗಳಲ್ಲಿ ಹೆಸರು ಹೊಂದಿರುವುದು ಅಥವಾ ನಕಲಿ ರೇಷನ್ ಕಾರ್ಡ್ ಗಳನ್ನು ಹೊಂದಿರುವುದು ಅಥವಾ ಅವರು ಉತ್ತಮ ವ್ಯವಸ್ಥೆಯಲ್ಲಿ ಇದ್ದರೂ ಕೂಡ ಬಡತನ ಹೊಂದಿರುವ ಕುಟುಂಬಗಳಿಗೆ ಕೊಡಲಾಗುವಂತಹ ಕಾರ್ಡುಗಳನ್ನು ಹೊಂದಿರುವುದರಿಂದ ನಿಜವಾಗಿಯೂ ಸಮಸ್ಯೆಯಲ್ಲಿ ಕಷ್ಟದಲ್ಲಿ ಇರುವವರಿಗೆ ವಂಚನೆ ಆಗುತ್ತಿದೆ.

ಈ ರೀತಿ ಮೋಸದಿಂದ ಪಡೆದ ಪಡಿತರಗಳು ಕಾಳಸಂತೆಯಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಿ ಸರ್ಕಾರ ಮತ್ತು ಬಡವರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸರ್ಕಾರಗಳು ರೇಷನ್ ಕಾರ್ಡ್ ವಿಷಯದಲ್ಲಿ ಇನ್ನು ಕಟ್ಟುನಿಟ್ಟಿನ ನಿಯಮಗಳ ಜಾರಿಗೆ ತರಲು ಚಿಂತಿಸಿದೆ. ಈಗಾಗಲೇ ಕರ್ನಾಟಕದಲ್ಲಿ ಆದಷ್ಟು ಶೀಘ್ರವಾಗಿ ರೇಷನ್ ಕಾರ್ಡ್ ಜೊತೆ ರೇಷನ್ ಕಾರ್ಡ್ ಅಲ್ಲಿ ಇರುವ ಎಲ್ಲಾ ಸದಸ್ಯರು ಕೂಡ ತಮ್ಮ ಆಧಾರ್ ಕಾರ್ಡ್ ಕೊಟ್ಟು ಮತ್ತು ಬಯೋಮೆಟ್ರಿಕ್ ಮಾಹಿತಿ ಕೊಟ್ಟು ಲಿಂಕ್ ಮಾಡಬೇಕು ಎನ್ನುವ ಆದೇಶವನ್ನು ಹೊರಡಿಸಲಾಗಿದೆ.

ಇದೇ ರೀತಿ ಮಹಾರಾಷ್ಟ್ರ ಸರ್ಕಾರವು ಕೂಡ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಮಹತ್ವಪೂರ್ಣವಾದ ನಿರ್ಧಾರವೊಂದಕ್ಕೆ ಬಂದಿದೆ ಮಹಾರಾಷ್ಟ್ರ ಸರ್ಕಾರವು ಮಹಾರಾಷ್ಟ್ರ ರಾಜ್ಯದಲ್ಲಿರುವ ರೇಷನ್ ಕಾರ್ಡ್ ಗಳ ಪರಿಶೀಲನೆ ನಡೆಸಿ, ಅಕ್ರಮವಾಗಿ ರೇಷನ್ ಕಾರ್ಡ್ ಹೊಂದಿರುವವರು ಹಾಗೂ ಅನರ್ಹರಾಗಿದ್ದರೂ ಕೂಡ ಸವಲತ್ತುಗಳ ಆಸೆಯಿಂದ ನಕಲಿ ದಾಖಲೆ ಸೃಷ್ಟಿ ಕಾರ್ಡು ಪಡೆದಿರುವವರನ್ನು ಕಂಡುಹಿಡಿದು ಅದನ್ನು ರದ್ದುಗೊಳಿಸಿ ರೇಷನ್ ಕಾರ್ಡ್ ಕಸಿಕೊಳ್ಳುವ ಮೂಲಕ ಶಿಕ್ಷೆ ನೀಡಲು ನಿರ್ಧರಿಸಿದೆ. ರೇಷನ್ ಕಾರ್ಡ್ ಗಳ ಮೇಲೆ ಈ ರೀತಿ ಕಟ್ಟುನಿಟ್ಟಿನ ನಿಯಮ, ಅಕ್ರಮ ಕಾಡುಗಳ ರದ್ದುಗೊಳಿಸುವಿಕೆ ಕ್ರಮಗಳು ರಾಜ್ಯದಲ್ಲೂ ಜಾರಿಗೆ ಬರುವ ದಿನಗಳು ಹತ್ತಿರದಲ್ಲಿದೆ.

Useful Information
WhatsApp Group Join Now
Telegram Group Join Now

Post navigation

Previous Post: ಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 2 ಲಕ್ಷ ಸಾಲ ಕೇವಲ 5 ನಿಮಿಷದಲ್ಲಿ ದೊರೆಯಲಿದೆ ಹೇಗೆ ಅಂತ ನೋಡಿ.!
Next Post: ಈ ಶ್ರಮ ಕಾರ್ಡ್ ಮಾಡಿಸಿ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ 3000 ಸಾವಿರ ಹಣ ಪಡೆಯಿರಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore