Home Useful Information ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!

ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!

0
ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!

 

ಈ ಒಂದು ಶಕ್ತಿಶಾಲಿ ಮಂತ್ರವನ್ನು ಮೂರು ಬಾರಿ ಪಠಿಸಿದರೆ ಸಾಕು ನೀವು ಅಂದುಕೊಂಡಿದ್ದೆಲ್ಲ ನೆರವೇರುತ್ತದೆ. ಸಾಕ್ಷಾತ್ ಮಂಜುನಾಥನು ಶಿವನು ಈಶ್ವರನು ಪಾರ್ವತಿಗೆ ಹೇಳಿದ ರಹಸ್ಯ ಏನು ಎನ್ನುವುದರ ಬಗ್ಗೆಯೂ ಸಹ ಈ ದಿನ ತಿಳಿಯೋಣ ಹೌದು ಸಾಕ್ಷಾತ್ ಮಹಾಶಿವನೆ ಪಾರ್ವತಿಗೆ ಈ ಒಂದು ಮಂತ್ರ ರಹಸ್ಯವನ್ನು ತಿಳಿಸಿದ್ದಾರೆ.

ಈ ಮಂತ್ರ ವನ್ನು ಯಾರು ಜಪಿಸುತ್ತಾರೋ ಅವರಿಗೆ ಯಾವುದೇ ಕಷ್ಟಗಳು ಕೂಡ ಬರುವುದಿಲ್ಲ ಅಂದುಕೊಂಡಂತಹ ಕೆಲಸದಲ್ಲಿ ವಿಜಯವನ್ನು ಸಾಧಿಸು ತ್ತಾರೆ. ಎಲ್ಲ ಕಷ್ಟಗಳಿಂದ ಮುಕ್ತಿ ಹೊಂದುತ್ತಾರೆ ಎಂದು ಸಾಕ್ಷಾತ್ ಶಿವನು ಪಾರ್ವತಿ ದೇವಿಗೆ ಹೇಳಿದ್ದಾರೆ. ಹಾಗಾದರೆ ಈ ಮಂತ್ರ ಯಾವುದು.

ಯಾವ ಸಮಯದಲ್ಲಿ ಈ ಮಂತ್ರವನ್ನು ಪಠಿಸಬೇಕು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ. ಇಷ್ಟೆಲ್ಲ ಸಮಸ್ಯೆಗಳನ್ನು ದೂರ ಮಾಡುವಂತಹ ಶಕ್ತಿ ಹೊಂದಿರುವಂತಹ ಆ ಒಂದು ಮಂತ್ರ ಯಾವುದು ಎಂದರೆ ವಿಷ್ಣು ಸಹಸ್ರನಾಮ ಸ್ತೋತ್ರ ಹೌದು ಈ ಒಂದು ಸ್ತೋತ್ರವನ್ನು ಎಲ್ಲರೂ ಕೂಡ ಸುಲಭವಾಗಿ ಪಠಿಸಲು ಸಾಧ್ಯವಿಲ್ಲ.

ನಿಮ್ಮ ಜಾತಕವನ್ನು ಮೊಬೈಲ್ ನಲ್ಲಿ ನೋಡುವ ವಿಧಾನ.!

ಹೀಗಾಗಿ ಸಾಕ್ಷಾತ್ ವಿಷ್ಣುವಿನ ಆರಾಧನೆಯನ್ನು ಮಾಡಲು ವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗಲು ಬೇರೆ ಮಾರ್ಗವನ್ನು ಹುಡುಕ ಬೇಕು ಎಂದು ಪಾರ್ವತಿ ದೇವಿಯು ಅಂದುಕೊಳ್ಳುತ್ತಾರೆ. ನೇರವಾಗಿ ಪರಶಿವನ ಬಳಿ ಈ ವಿಷಯವನ್ನು ಹೇಳಿಕೊಂಡಾಗ ವಿಷ್ಣು ಸಹಸ್ರ ನಾಮದ ಬದಲು ಬಹಳ ಸೂಕ್ಷ್ಮವಾದಂತಹ ಹಾಗೂ ಬಹಳ ಸುಲಭವಾದಂತ ಮಾರ್ಗ ಯಾವುದಾದರೂ ಇದಿಯಾ ಎಂದು ಶಿವನನ್ನು ಪ್ರಶ್ನಿಸಿದಾಗ ಶಿವನು ಬಹಳ ಸಮಾಧಾನವಾಗಿ ಪಾರ್ವತಿಗೆ ಈ ರೀತಿ ಉತ್ತರಿಸುತ್ತಾನೆ.

ನಾನು ಯಾವಾಗಲು ಶ್ರೀ ರಾಮನ ಮಂತ್ರವನ್ನು ಮೂರು ಬಾರಿ ಪಠಿಸಿ ಆನಂದವನ್ನು ಹೊಂದುತ್ತೇನೆ. ವಿಷ್ಣು ಸಹಸ್ರನಾಮ ಪಠಿಸಲು ಸಾಧ್ಯ ವಾಗದಿದ್ದರೆ ನಾನು ಹೇಳುವಂತಹ ಮಂತ್ರವನ್ನು ಮೂರು ಬಾರಿ ಜಪಿಸಿದರೆ ಸಾಕು ಸಾಕ್ಷಾತ್ ವಿಷ್ಣು ಮಂತ್ರವನ್ನು ಜಪಿಸಿದಂತೆ ಹಾಗೂ ಜೀವನದ ಕಷ್ಟಗಳು ಕಳೆಯುವುದಕ್ಕೆ ಇದೇ ಮಾರ್ಗ ಎಂದು ಶಿವ ಹೇಳುತ್ತಾನೆ.

ಹಾಗಾಗಿ ಯಾರು ಭಕ್ತಿಯಿಂದ ಈ ಒಂದು ಮಂತ್ರವನ್ನು ದಿನಕ್ಕೆ ಮೂರು ಬಾರಿ ಪಠಿಸುತ್ತಾರೋ ಅವರಿಗೆ ವಿಷ್ಣುವಿನ ಅನುಗ್ರಹದ ಜೊತೆ ನನ್ನ ಅನುಗ್ರಹ ಸಿಗುತ್ತದೆ ಎಂದು ಸಾಕ್ಷಾತ್ ಶಿವನು ಪಾರ್ವತಿ ದೇವಿಗೆ ಹೇಳಿದ್ದಾನೆ. ಹಾಗಾದರೆ ಆ ಒಂದು ಮಂತ್ರ ಯಾವುದು ಎಂದು ನೋಡುವುದಾದರೆ “ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ”

ಸ್ವಂತ ಮನೆ ಕನಸು ಇದ್ದವರು ಈ ಕೆಲಸ ಮಾಡಿ ಸಾಕು.! ವರ್ಷದೊಳಗೆ ಮನೆ ಕಟ್ಟುತ್ತಿರಾ.!

ಈ ಒಂದು ಮಂತ್ರವನ್ನು ಮೂರು ಬಾರಿ ಪಠಿಸಿದರೆ ಜನ್ಮ ಧನ್ಯವಾದಂತೆ ಎಂದು ಶಿವನು ನುಡಿದಿದ್ದಾನೆ. ಯಾರು ಈ ಮಂತ್ರವನ್ನು ಪ್ರತಿನಿತ್ಯ ಪಠಿಸುತ್ತಾರೋ ಅವರಿಗೆ ಮಹಾಶಿವನ ಅನುಗ್ರಹದ ಜೊತೆಗೆ ವಿಷ್ಣುವಿನ ಅನುಗ್ರಹ ಸಿಗುತ್ತದೆ.

ಈ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೆ ಶ್ರೀ ವಿಷ್ಣು ಸಹಸ್ರನಾಮ ಹಾಗೂ ಶ್ರೀ ಶಿವ ಸಹಸ್ರನಾಮ ಪಠಿಸಿದ ಪುಣ್ಯ ಒಂದೇ ಬಾರಿಗೆ ಲಭಿಸುತ್ತದೆ ಎಂದು ಸಾಕ್ಷಾತ್ ಆ ಪರ ಶಿವನೇ ಹೇಳಿದ್ದಾನೆ. ಪದ್ಮಪುರಾಣದಲ್ಲಿ ಪಾರ್ವತಿ ದೇವಿಗೆ ಪರಮೇಶ್ವರ ಹೇಳಿದ ಆ ಒಂದು ರಹಸ್ಯ ಅಕ್ಷರ ಶಾಸ್ತ್ರದಲ್ಲಿಯೂ ಸಹ ಉಲ್ಲೇಖವಾಗಿದೆ.

ಶ್ರೀರಾಮನಾಮ ಎಷ್ಟು ಮಧುರವಾದದ್ದು ಶ್ರೀ ರಾಮ ನಾಮವನ್ನು ಪಠಿಸಿದರೆ ಎಲ್ಲ ಪಾಪಗಳು ಕಳೆದು ಪುಣ್ಯ ಲಭಿಸುತ್ತದೆ ಎಂದು ನಮ್ಮ ಶಾಸ್ತ್ರ ಪುರಾಣ ಗಳು ಸಹ ಹೇಳುತ್ತದೆ. ಶ್ರೀರಾಮ ಎಂಬ ಶಬ್ದ ಎಷ್ಟು ಮಂಗಳಕರವಾದ ಶಬ್ದವೆಂದು ಆ ಮಹಾಕವಿ ಕಾಳಿದಾಸರೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here