ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಕ’ಷ್ಟ ಇದ್ದೇ ಇರುತ್ತದೆ. ಕೆಲವರ ಮನೆಯಲ್ಲಿ ಹಣಕಾಸಿಗೆ ತುಂಬಾ ಕ’ಷ್ಟ ಇದ್ದರೆ ಕೆಲವರ ಮನೆಯಲ್ಲಿ ಎಲ್ಲವೂ ಇರುತ್ತದೆ ಆದರೆ ನೆಮ್ಮದಿ ಇಡುವುದಿಲ್ಲ. ಮನೆಯಲ್ಲಿ ಪತಿ ಪತ್ನಿ ನಡುವೆ ವಿರಸ ಉಂಟಾಗಿ ಜೀವನವೇ ನರಕ ಮನೆಗೆ ಹೋಗುವುದೇ ಬೇಡ ಎನಿಸುತ್ತಿರುತ್ತದೆ.
ಚೆನ್ನಾಗಿ ನಡೆಯುತ್ತಿದ್ದ ವ್ಯವಹಾರ ಇದ್ದಕಿದ್ದಂತೆ ನ’ಷ್ಟವಾಗುತ್ತದೆ, ಮನೆಯಲ್ಲಿ ಮಕ್ಕಳು ಕಾರಣ ಇಲ್ಲದೆ ಹುಷಾರ ತಪ್ಪುತ್ತಾರೆ, ಆಕ್ಟಿವ್ ಆಗಿರುತ್ತಿದ್ದ ಮಕ್ಕಳು ವಿದ್ಯಾಭ್ಯಾಸದ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ. ಇದರಲ್ಲಿ ಬಹುತೇಕ ಸಮಸ್ಯೆಗಳು ನಮಗೆ ದೃಷ್ಟಿ ದೋಷದಿಂದಲೇ ಉಂಟಾಗಿರುತ್ತದೆ. ಮನುಷ್ಯನ ಕೆ’ಟ್ಟ ದೃಷ್ಟಿಗೆ ಮರವು ಕೂಡ ಉರುಳುತ್ತದೆ ಎಂದು ಹೇಳುತ್ತಾರೆ ಇನ್ನು ಮನೆ ಯಾವ ಲೆಕ್ಕ ಅಲ್ಲವೇ?
ದೃಷ್ಟಿ ದೋಷದ ಕಾರಣದಿಂದಾಗಿ ಈ ರೀತಿ ನಿಮ್ಮ ಮನೆಯಲ್ಲಿ ಜ’ಗ’ಳ ಆಗುತ್ತಿದ್ದರೆ ನಿಮ್ಮ ಮಕ್ಕಳಿಗೆ ದೃಷ್ಟಿ ದೋಷವಾಗಿ ಅವರು ಡಲ್ ಆಗುತ್ತಿದ್ದರೆ ಅಥವಾ ಹಣಕಾಸಿನಲ್ಲಿ ಸಮಸ್ಯೆ ಉಂಟಾಗಿದ್ದರೆ ಇದನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳುವುದಕ್ಕೆ ಒಂದು ಉಪಾಯವನ್ನು ಈ ಅಂಕಣದಲ್ಲಿ ತಿಳಿಸುತಿದ್ದೇವೆ ಇದು ಎಷ್ಟು ಸರಳವಾಗಿದೆ ಎಂದರೆ ಇದನ್ನು ಯಾರು ಬೇಕಾದರೂ ಮಾಡಬಹುದು.
ಯಾವುದೇ ಹೆಚ್ಚಿನ ಕಟ್ಟಪಾಡುಗಳು ಇಲ್ಲದೇ, ಯಾವುದೇ ಅಡ್ಡ ಪರಿಣಾಮವು ಇಲ್ಲದೇ ಮತ್ತು ಖರ್ಚು ಕೂಡ ಇಲ್ಲದೇ ಮನೆಯಲ್ಲಿ ಕುಳಿತು ಈ ಉಪಾಯ ಮಾಡಿಕೊಳ್ಳಬಹುದು. ಈ ಪೂಜೆಯ ಫಲದಿಂದಾಗಿ ನೀವು ಎಲ್ಲಾ ಸಮಸ್ಯೆಗಳನ್ನು ಜಯಸಿ ಮೊದಲನೆಯ ರೀತಿಯೇ ಸುಖ ಶಾಂತಿ ನೆಮ್ಮದಿ ಸಂಪತ್ತು ಎಲ್ಲವನ್ನು ಕೂಡ ಪಡೆಯುತ್ತೀರಿ.
ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ, ಅಮಾವಾಸ್ಯೆ ದಿನ ನಾವು ಹೇಳುವ ವಿಧಾನದಲ್ಲಿ ದೀಪಾರಾಧನೆ ಮಾಡಿ. ಒಂದು ವೇಳೆ ಅಮಾವಾಸ್ಯೆ ಬಹಳ ದೂರವಿದೆ ಕಾಯಲಾಗುವುದಿಲ್ಲ ಈಗಲೇ ಶುರು ಮಾಡುತ್ತೇವೆ ಎನ್ನುವ ಆಸಕ್ತಿ ಇರುವವರು ಶನಿವಾರದ ದಿನದಂದು ಮಾತ್ರ ಈ ಆಚರಣೆ ಮಾಡಿ ನೀವು ಪ್ರತಿ ಶನಿವಾರ ರಾತ್ರಿ ಮತ್ತು ಪ್ರತಿ ಅಮಾವಾಸ್ಯೆ ಕೂಡ ಇದನ್ನು ಮಾಡಬಹುದು.
ಸಂಜೆ ಸಮಯ ಮಾಡಿದರೆ ಈ ತಂತ್ರ ಇನ್ನು ಹೆಚ್ಚಿನ ಫಲ ಕೊಡುತ್ತದೆ. ಶನಿವಾರ ಅಥವಾ ಅಮಾವಾಸ್ಯೆ ದಿನ ಮನೆ ಸ್ವಚ್ಛ ಮಾಡಿರುತ್ತೀರಿ ದೇವರಿಗೆ ದೀಪ ಹಚ್ಚಿರುತ್ತೀರಿ, ಸಂಜೆ ಸಮಯ ಕೂಡ ದೇವರ ಮುಂದೆ ದೀಪ ಹಚ್ಚಿ ನಂತರ ನಿಮ್ಮ ಮನೆಯ ಹಾಲ್ ಗೆ ಬನ್ನಿ. ಬಹಳ ನಂಬಿಕೆ ಇಟ್ಟು ಈ ಉಪಾಯ ಮಾಡಬೇಕು.
ಒಂದು ಮಣ್ಣಿನ ದೀಪ ತೆಗೆದುಕೊಳ್ಳಿ, ಮಣ್ಣಿನ ದೀಪ ಇಲ್ಲ ಎಂದರೆ ಗೋಧಿ ಹಿಟ್ಟಿನಲ್ಲಿ ದೀಪ ಮಾಡಿಕೊಳ್ಳಿ ಈಗ ಅದಕ್ಕೆ ಸಾಸಿವೆ ಎಣ್ಣೆಯನ್ನು ಹಾಕಿ ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಸಿವೆ ಇಲ್ಲ ಎಂದರೆ ಇರುವ ಯಾವುದೇ ಎಣ್ಣೆ ಹಾಕಿ ಆದರೆ ಅದಕ್ಕೆ ತಪ್ಪದೇ ನಾಲ್ಕೈದು ಕಾಳು ಸಾಸಿವೆಯನ್ನು ಹಾಕಿ.
ಬತ್ತಿ ಇಟ್ಟು ಅಲಂಕಾರ ಮಾಡಿ ದೀಪ ಹಚ್ಚಿ ಒಂದು ನಿಮಿಷ ದೀಪದ ಮುಂದೆ ಕುಳಿತು ನಿಮ್ಮ ಕ’ಷ್ಟಗಳನ್ನು ಹೇಳಿಕೊಂಡು ಪ್ರಾರ್ಥನೆ ಮಾಡಿ. ಒಂದು ನಿಮಿಷ ಆದ ನಂತರ ನಿಮ್ಮ ಮನೆಯಲ್ಲಿರುವ ಯಾವುದಾದರೂ ಪ್ಲೇಟ್ ತೆಗೆದುಕೊಂಡು ದೀಪದಿಂದ ಸ್ವಲ್ಪ ಮೇಲೆ ದೀಪಾ ಉರಿಯುತ್ತಿರುವಾಗ ಬರುವ ಕಪ್ಪು ಆ ತಟ್ಟೆಯಲ್ಲಿ ಶೇಖರಣೆ ಆಗಬೇಕು ಆ ರೀತಿ ಹಿಡಿಯಿರಿ.
ಈಗ ಆ ಕಪ್ಪನ್ನು ತೆಗೆದುಕೊಂಡು ಮನೆಯ ಹೊಸ್ತಿಲಿನ ಎರಡು ಕಡೆ ಹಚ್ಚಿ, ದೃಷ್ಟಿ ದೋಷ ಬಹಳ ಬೇಗ ನಿವಾರಣೆ ಆಗುತ್ತಿದೆ ಯಾವುದೇ ನಕಾರಾತ್ಮಕ ಶಕ್ತಿಯು ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ. ನಿಮ್ಮ ಮಕ್ಕಳಿಗೆ ದೃಷ್ಟಿ ದೋಷ ಉಂಟಾಗಿದ್ದರೆ ಅವರಿಗೆ ಕೂಡ ಹಣೆಗೆ ಕೆನ್ನೆಗೆ ಮತ್ತು ಕಿವಿ ಹಿಂದೆ ಹಚ್ಚಬೇಕು.
ನಿಮ್ಮ ಕುಟುಂಬದ ಎಲ್ಲರೂ ಕೂಡ ಬೇರೆ ಯಾರಿಗೂ ಕಾಣದಂತೆ ಕಿವಿಯ ಹಿಂದೆ ಇದನ್ನು ಹಚ್ಚಿಕೊಳ್ಳಬಹುದು. ಪತಿ ಪತ್ನಿ ನಡುವೆ ಮ’ನ’ಸ್ತಾ’ಪವಿದ್ದರೆ ನಿಮ್ಮ ಬೆಡ್ರೂಮ್ ಮಂಚಕ್ಕೂ ಕೂಡ ಹಚ್ಚಿ. 24 ಗಂಟೆಯಲ್ಲಿ ನಿಮಗೆ ಇದರ ಫಲಿತಾಂಶದ ಪರಿಚಯ ಖಂಡಿತ ಆಗುತ್ತದೆ ದೀಪ ಶಾಂತವಾದ ನಂತರ ಮಣ್ಣಿನ ದೀಪವಾಗಿದ್ದರೆ ಇದನ್ನು ಮರಳಿ ಮುಂದಿನ ಶನಿವಾರ ಬಳಸಬಹುದು.
ಗೋಧಿ ಹಿಟ್ಟಿನ ದೀಪವಾಗಿದ್ದರೆ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಯಾವುದಾದರೂ ಗಿಡದ ಬುಡಕ್ಕೆ ಹಾಕಿ. ನಂಬಿಕೆಯಿಂದ ಪ್ರತಿ ವಾರ ಇದನ್ನು ಮಾಡಿ ನಿಮಗೆ ಎಲ್ಲ ಸಮಸ್ಯೆಗಳು ಪರಿಹಾರವಾಗುವುದು ಗ್ಯಾರಂಟಿ.