ನಟಿ ಶ್ವೇತ ಪ್ರಸಾದ್ ಅವರು ಬಣ್ಣ ಹಚ್ಚುವ ಮುಂಚೆ ಆರ್ ಜೆ ಪ್ರದೀಪ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮೊದಲಿನಿಂದಲೂ ತುಂಬಾ ಆಕ್ಟಿವ್ ಆಗಿರುವ ನಟಿ ಶ್ವೇತ ಪ್ರಸಾದ್ ಅವರಿಗೆ ಅಭಿನಯಿಸಲು ಅವಕಾಶ ಸಿಕ್ಕಿದ್ದೇ ಸಾಮಾಜಿಕ ಜಾಲತಾಣದಿಂದ ಎನ್ನಬಹುದು. ಫೇಸ್ಬುಕ್ ನಲ್ಲಿ ಯಾವಾಗಲೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ಶ್ವೇತಾ ಪ್ರಸಾದ್ ಅವರ ಫೋಟೋವನ್ನು ಒಮ್ಮೆ ಕಿರುತೆರೆ ಧಾರಾವಾಹಿ ನಿರ್ದೇಶಕಿ ಶೃತಿ ನಾಯ್ಡು ಅವರು ನೋಡಿದರು. ಆ ದಿನವೇ ತಮ್ಮ ಮುಂದಿನ ಧಾರಾವಾಹಿಗೆ ಈಕೆಯನ್ನೇ ನಾಯಕಿಯನ್ನಾಗಿ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡರು. ಮೊದಮೊದಲು ಅಭಿನಯದಲ್ಲಿ ಏನು ತಿಳಿದಿಲ್ಲ ಎನ್ನುವ ಕಾರಣಕ್ಕೆ ನಟಿಸಲು ಹಿಂದೇಟು ಹಾಕಿದ ಶ್ವೇತ ಅವರಿಗೆ ಅವರ ಪತಿಯೇ ನಟಿಸಲು ತುಂಬಾ ಪ್ರೋತ್ಸಾಹ ನೀಡಿ ಅವರು ಕಿರುತೆರೆಯಲ್ಲಿ ಇಷ್ಟೊಂದು ಫೇಮಸ್ ಆಗಲು ಕಾರಣರಾದರು.
ಶೃತಿ ನಾಯ್ಡು ಅವರ ನಿರ್ದೇಶನದ ಹಾಗೂ ನಿರ್ಮಾಣದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರು ಅತ್ತೆಯರ ಮುದ್ದಿನ ಸೊಸೆಯ ಕಥೆಯಾದ ಶ್ರೀರಸ್ತು ಶುಭಮಸ್ತು ಎನ್ನುವ ಧಾರಾವಾಹಿಯಲ್ಲಿ ಜಾಹ್ನವಿ ಎನ್ನುವ ಪಾತ್ರವನ್ನು ತುಂಬಾ ಮುಗ್ಧವಾಗಿ ಅಭಿನಯಿಸಿದ್ದರು ಶ್ವೇತ ಅವರು. ಇದಾದ ಬಳಿಕ ಅವರು ಕಿರುತೆರೆ ಜನರಿಗೆ ರಾಧಾ ಟೀಚರ್ ಆಗಿ ಚಿರಪರಿತರು. ರಾಧಾ ರಮಣ ಎನ್ನುವ ಹೆಸರಿನಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿಯಲ್ಲಿ ರಾಧಾ ಎನ್ನುವ ಟೀಚರ್ ಪಾತ್ರದಲ್ಲಿ ಶ್ವೇತ ಅವರು ಕಾಣಿಸಿಕೊಂಡಿದ್ದರು. ಇದರ ಜೊತೆ ಹಲವಾರು ಬಾರಿ ಕನ್ನಡದ ಕಿರುತರೆ ಕಾರ್ಯಕ್ರಮಗಳಲ್ಲಿ ಮತ್ತು ರಿಯಾಲಿಟಿ ಶೋ ಗಳಲ್ಲಿ ಕೂಡ ಶ್ವೇತ ಪ್ರಸಾದ್ ಅವರು ಭಾಗವಹಿಸಿದ್ದಾರೆ. ಮತ್ತು 2017ರ ಬೆಂಗಳೂರು ಟೈಮ್ಸ್ ನ ಮೋಸ್ಟ್ ಡಿಸೈಬಲ್ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಷ್ಟೆಲ್ಲಾ ಬಿಝಿ ನಡುವೆಯೂ ಈಗಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ.
ಮೊನ್ನೆ ಅಷ್ಟೇ ಕಡಲ ತೀರದಲ್ಲಿ ಕುಳಿತು ತೆಗೆಸಿಕೊಂಡಿದ್ದ ಹಾಟ್ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಚ್ಚಿಕೊಂಡು ನೆಟ್ಟಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದರು ಶ್ವೇತಾ ಅವರು. ಯಾವಾಗಲೂ ಇವರು ಮಾಡುವ ಪೋಸ್ಟ್ಗಳಿಗೆ ಅಭಿಮಾನಿಗಳು ಮಾಡುವ ಕಾಮೆಂಟ್ ಗಳ ಜೊತೆ ಒಂದು ಪ್ರಶ್ನೆಯು ಕೂಡ ಇರುತ್ತದೆ. ಶ್ವೇತಾ ಅವರಿಗೆ ಅಭಿಮಾನಿಗಳು ಮಗು ಯಾವಾಗ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನೆಸುತ್ತಲೇ ಇರುತ್ತಾರೆ. ಆದರೂ ಕೂಡ ಇದುವರೆಗೆ ಶ್ವೇತಪ್ರಸಾದ್ ಅವರು ಯಾರಿಗೂ ಕೂಡ ಈ ವಿಷಯವಾಗಿ ಉತ್ತರ ನೀಡಲಿಲ್ಲ. ಆದರೆ ಪದೇ ಪದೇ ಇದೇ ವಿಷಯದ ಬಗ್ಗೆ ಪ್ರಶ್ನೆಗಳು ಹೆಚ್ಚಾಗಿರುವುದರಿಂದ ಈ ಬಾರಿ ಈ ಪ್ರಶ್ನೆಗಳ ಬಗ್ಗೆ ಬೇಸರಿಸಿಕೊಂಡಿರುವ ಶ್ವೇತ ಅವರು ಪ್ರಶ್ನೆ ಕೇಳಿದವರಿಗೆ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟಿದ್ದಾರೆ. ಹಾಗೂ ಈ ಬಾರಿ ಅವರು ಕೊಟ್ಟಿರುವ ತಿರುಗೇಟು ನಿಜವಾಗಿಯೂ ಅರ್ಥಪೂರ್ಣವಾಗಿದೆ ಎಂದು ಕೂಡ ಅನಿಸುತ್ತದೆ.
ಮಗು ಬಗ್ಗೆ ಪ್ರಶ್ನೆ ಕೇಳುತ್ತಿದ್ದ ಕಾಮೆಂಟ್ ಗಳಿಗೆ ಶ್ವೇತ ಅವರು ಕೊಟ್ಟ ಉತ್ತರವೂ ಹೀಗಿತ್ತು. ಮಗು ಮಾಡಿಕೊಳ್ಳುವುದು ಸಂಪೂರ್ಣವಾಗಿ ಮಹಿಳೆ ಹಾಗೂ ಆ ದಂಪತಿಗಳ ನಿರ್ಧಾರ. ಅದು ಯಾವಾಗ ಎಲ್ಲಿ ಹೇಗೆ ಆಗಬೇಕು ಎನ್ನುವುದು ಅವರೇ ನಿರ್ಧರಿಸಿಕೊಳ್ಳುತ್ತಾರೆ. ಮೂರನೇ ಅವರಿಗೆ ಯಾರಿಗೆ ಆದರೂ ಈ ವಿಷಯದಲ್ಲಿ ಮಾತನಾಡುವ ಹಕ್ಕು ಇರುವುದಿಲ್ಲ. ಇನ್ನು ಈಗಿನ ಕಾಲದಲ್ಲಿ ಜನ ಕೇಳುತ್ತಾರೆ, ಅಮ್ಮ ಅತ್ತೆ ಹೇಳಿದ್ದಾರೆ, ಸ್ನೇಹಿತರು ಮಾತನಾಡಿಕೊಳ್ಳುತ್ತಾರೆ ಈ ಬಗ್ಗೆ ತಲೆಕೆಡಿಸಿಕೊಂಡು ಹೆಚ್ಚು ಜನ ಮಗು ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ ಆದರೆ ನನ್ನ ವಿಷಯದಲ್ಲಿ ಇದು ಸಂಪೂರ್ಣ ನನ್ನದೇ ನಿರ್ಧಾರವಾಗಿರುತ್ತದೆ ಎಂದು ಹೇಳಿದ್ದಾರೆ. ಶ್ವೇತಾ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.