Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!

Posted on September 3, 2023 By Kannada Trend News No Comments on ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!

● ಯಾರಿಗಾದರೂ ಎರಡಕ್ಕಿಂತ ಹೆಚ್ಚು ಬಾರಿ ಫೋನ್ ಕರೆ ಮಾಡಬೇಡಿ. ನಿಮ್ಮ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲ ಎಂದರೆ ಯಾವುದೋ ಮುಖ್ಯ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರ್ಥ.
● ನೀವು ಯಾರಿಂದಲಾದರೂ ಹಣವನ್ನು ಪಡೆದಿದ್ದರೆ ನೀವು ಹೇಳಿದ ಸಮಯಕ್ಕೆ ಹಿಂತಿರುಗಿಸಲು ಪ್ರಯತ್ನಿಸಿ ಅಥವಾ ಅವರು ಕೇಳುವ ಮುಂಚೆ ಅದನ್ನು ವಾಪಸ್ ಕೊಡಲು ಪ್ರಯತ್ನಿಸಿ. ಇದು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ.

● ಬೇರೆಯವರ ಪೆನ್ನು, ಕೊಡೆ ಅಥವಾ ಊಟದ ಡಬ್ಬಿಗಳನ್ನು ಪಡೆದಿದ್ದರೆ ತಪ್ಪದೆ ಹಿಂದಿರುಗಿಸಿ. ಅವುಗಳನ್ನು ನಿಮ್ಮ ಬಳಿಗೆ ಇಟ್ಟು ಕೊಂಡಿದ್ದರೆ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯಗಳು ಮೂಡುವುದಿಲ್ಲ.
● ಯಾರಾದರೂ ನಿಮ್ಮನ್ನು ಹೋಟೆಲ್ ನಲ್ಲಿ ಊಟಕ್ಕೆ ಆಹ್ವಾನಿಸಿದ್ದರೆ ದುಬಾರಿ ಬೆಲೆಯ ಫುಡ್ ಗಳನ್ನು ಆರ್ಡರ್ ಮಾಡಬೇಡಿ.

ಮದುವೆಯಾದ ನಂತರ ಮಹಿಳೆಯರು ಈ 6 ತಪ್ಪುಗಳನ್ನು ಮಾಡಲೇಬಾರದು.!

● ಬೇರೆಯವರ ಮಾತನಾಡುವಾಗ ಅಪ್ಪಿ ತಪ್ಪಿಯೂ ಕೂಡ ಅವರು ಮದುವೆಯಾಗುವ ಬಗ್ಗೆ ಅಥವಾ ಮಕ್ಕಳನ್ನು ಹೊಂದಿಲ್ಲದಿದ್ದರೆ ಅದರ ಪ್ಲಾನಿಂಗ್ ಬಗ್ಗೆ ಪ್ರಶ್ನೆ ಮಾಡಬೇಡಿ ಅಥವಾ ಸುಮ್ಮಸುಮ್ಮನೆ ನೀವಾಗಿಯೇ ಮನೆ ಖರೀಸುವ ಬಗ್ಗೆ ಅಥವಾ ವಾಹನಗಳನ್ನು ಖರೀದಿಸುವ ಬಗ್ಗೆ ಪ್ರಶ್ನೆ ಕೇಳಿ ಅವರನ್ನು ಪೇಚಿಗೆ ಸಿಲುಕಿಸಬೇಡಿ.
● ಯಾವಾಗಲು ನಿಮ್ಮ ಜೊತೆ ಉತ್ತಮ ಸ್ನೇಹ ಬಯಸುವ ವ್ಯಕ್ತಿಗಳು ಹಿರಿಯರಾಗಿದ್ದರು, ಕಿರಿಯರಾಗಿದ್ದರು ಅವರಿಗೆ ಬೆಲೆ ಕೊಟ್ಟು ಅವರ ಭಾವನೆಗಳಿಗೆ ಸ್ಪಂದಿಸಿ.

● ನಿಮ್ಮ ಸ್ನೇಹಿತರ ಜೊತೆಗೆ ಆಟೋ / ಟ್ಯಾಕ್ಸಿ ಇವುಗಳಲ್ಲಿ ಪ್ರಯಾಣ ಮಾಡಿದಾಗ ಅದರ ಚಾರ್ಜ್ ಅವರೇ ಕೊಟ್ಟರೆ ಮುಂದಿನ ಬಾರಿ ಆ ಚಾರ್ಜ್ ನೀವು ಪಾವತಿಸಿ.
● ಅಭಿಪ್ರಾಯ ಬೇಧಗಳನ್ನು ಗೌರವಿಸಿ. ಯಾವುದೇ ವಿಚಾರದ ಬಗ್ಗೆ ಎರಡನೇ ಅಭಿಪ್ರಾಯ ಮೂಡಿದಾಗ ಪರ್ಯಾಯ ಅಭಿಪ್ರಾಯದ ಬಗ್ಗೆ ಕೂಡ ಚಿಂತೆ ಮಾಡಿ ನೋಡಿ. ನಿಮಗೆ 6 ಆಗಿ ಕಾಣುತ್ತಿರುವುದು ಅವರಿಗೆ 9 ಆಗಿ ಕಾಣುತ್ತಿರಬಹುದು. ಅವರ ವಿಷನ್ ಕೂಡ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ಸಿವಿಲ್ ಇಂಜಿನಿಯರಿಂಗ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಶುರು ಮಾಡಿ ತಿಂಗಳಿಗೆ 3 ಲಕ್ಷ ದುಡಿಯುತ್ತಿದ್ದಾರೆ ಈ ಮಹಿಳೆ.!

● ಯಾರಾದರೂ ಅವರ ಅನಿಸಿಕೆಗಳನ್ನು ಅಥವಾ ಅಭಿಪ್ರಾಯಗಳನ್ನು ಅಥವಾ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರೆ ಅಥವಾ ಯಾವುದೇ ವಿಷಯದ ಬಗ್ಗೆ ಮಾತನಾಡುತ್ತಿದ್ದರು ಅದರ ಬಗ್ಗೆ ಪೂರ್ತಿ ಮಾತನಾಡಲು ಬಿಡಿ. ಮಧ್ಯವೇ ಅಡ್ಡಿಪಡಿಸಿ ನಿಮ್ಮ ಅಭಿಪ್ರಾಯಗಳನ್ನು ಹೇಳಲು ಹೋಗಬೇಡಿ.
● ನೀವು ಯಾರ ಮೇಲಾದರೂ ಕೀಟಲೆ ಮಾಡಿದಾಗ ಜೋಕ್ ಮಾಡಿದಾಗ ಅವರು ಅದನ್ನು ಸ್ವೀಕರಿಸುತ್ತಿಲ್ಲ ಎಂದರೆ ಅದನ್ನು ಅಲ್ಲಿಗೆ ನಿಲ್ಲಿಸಿ ಹಾಗೂ ಮುಂದೆ ಎಂದೂ ಕೂಡ ಆ ರೀತಿ ಮಾಡಲು ಹೋಗಬೇಡಿ.

● ಯಾರಾದರೂ ನಿಮಗೆ ಸಹಾಯ ಮಾಡಿದ್ದರೆ ತಪ್ಪದೇ ಅವರಿಗೆ ಧನ್ಯವಾದಗಳನ್ನು ತಿಳಿಸಿ.
● ಯಾರನ್ನಾದರೂ ಹೊಗಳಬೇಕೆಂದಿದ್ದರೆ ಅದನ್ನು ಸಾರ್ವಜನಿಕವಾಗಿ ಮಾಡಿ, ಯಾರ ಬಗ್ಗೆಯಾದರೂ ವಿಮರ್ಶೆ ಮಾಡಬೇಕಿದ್ದರೆ ಅದು ಖಾಸಗಿಯಾಗಿರಲಿ.

ಅಗರ್ಭ ಶ್ರೀಮಂತರಾಗಲು ಪ್ರತಿದಿನ ನೀವು ಇದನ್ನು ಕೇವಲ ಹತ್ತು ನಿಮಿಷ ಮಾಡಿ ಸಾಕು.!

● ಮತ್ತೊಬ್ಬರ ದೇಹದ ಬಣ್ಣ, ಆಕಾರ, ಗಾತ್ರಗಳ ಬಗ್ಗೆ ನಿಂದಿಸಿ ಮಾತನಾಡಬೇಡಿ ಮತ್ತು ಅವುಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ತಜ್ಞರಂತೆ ಟಿಪ್ಸ್ ಗಳನ್ನು ಹೇಳಬೇಡಿ. ಅವಶ್ಯಕತೆ ಇದ್ದರೆ ಅವರೇ ಬಂದು ಕೇಳುತ್ತಾರೆ ಆಗ ಮಾತ್ರ ನಿಮಗೆ ತಿಳಿದಿದ್ದನ್ನು ತಿಳಿಸಿ.

● ಯಾರಾದರೂ ಮೊಬೈಲ್ ಫೋನ್ನಲ್ಲಿ ಫೋಟೋ ತೋರಿಸಿದಾಗ ಅದನ್ನು ಮಾತ್ರ ನೋಡಿ. ಹಿಂದಿನದ್ದು ಅಥವಾ ನೆಕ್ಸ್ಟ್ ಇರುವುದನ್ನು ನೋಡುವ ಕುತೂಹಲ ತೋರಬೇಡಿ.
● ಸಹೋದ್ಯೋಗಿಗಳು ಆಸ್ಪತ್ರೆಗೆ ಹೋಗಬೇಕು ಎಂದು ಕೇಳಿದಾಗ ಆರೋಗ್ಯವಾಗಿದ್ದೀರಾ ಎಂದಷ್ಟೇ ಕೇಳಿ. ತೀರಾ ಡಿಟೇಲ್ ಆಗಿ ಕುತೂಹಲದಿಂದ ವಿಚಾರಿಸಲು ಹೋಗಬೇಡಿ, ಹೇಳುವಂಥದ್ದಾಗಿದ್ದರೆ ಅವರೇ ವಿವರಿಸುತ್ತಾರೆ.

ಗಂಡನಿಗೆ ಹೆಂಡತಿ ಈ 3 ಕೆಲಸಗಳನ್ನು ನಾಚಿಕೆ ಪಡೆದೆ ಮಾಡಬೇಕು.!

● ನಿಮಗಿಂತ ಮೇಲ್ದರ್ಜೆಯ ಅಧಿಕಾರಿಗಳಿಗೆ ಕೊಡುವ ಗೌರವವನ್ನೇ ಪ್ರತಿಯೊಬ್ಬ ಕೆಲಸಗಾರನಿಗೂ ಕೂಡ ಕೊಡಿ. ನಿಮ್ಮ ಕಠೋರತೆಯನ್ನು ಯಾರು ಗಮನಿಸುವುದಿಲ್ಲ ಆದರೆ ಎಷ್ಟು ನೀವು ಗೌರವದಿಂದ ನಡೆಸಿಕೊಂಡಿರಿ ಎನ್ನುವುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಂಡಿರುತ್ತಾರೆ.
● ಎದುರಿಗಿರುವ ವ್ಯಕ್ತಿ ನಿಮ್ಮ ಜೊತೆ ಮಾತನಾಡುತ್ತಿದ್ದರು ನೀವು ಫೋನ್ ನೋಡುವುದು ದುರ್ನಡತೆ.

● ತುಂಬಾ ದಿನಗಳ ಬಳಿಕ ಸ್ನೇಹಿತರನ್ನು ಭೇಟಿಯಾಗಿದ್ದರೆ ಅವರೇ ಹೇಳುವ ಸಂಬಳದ ಬಗ್ಗೆ ಕೇಳಬೇಡಿ.
● ರಸ್ತೆಯಲ್ಲಿ ಯಾರ ಜೊತೆಯಾದರೂ ಮಾತನಾಡುವಾಗ ಸನ್ ಗ್ಲಾಸ್ ತೆಗೆದು ಮಾತನಾಡಿ, ಇದು ನೀವು ಅವರಿಗೆ ಕೊಡುವ ಗೌರವವನ್ನು ಸೂಚಿಸುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಮದುವೆಯಾದ ನಂತರ ಮಹಿಳೆಯರು ಈ 6 ತಪ್ಪುಗಳನ್ನು ಮಾಡಲೇಬಾರದು.!
Next Post: ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore