Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಲ್ಲಾ ಮಹಿಳೆಯರಿಗಾಗಿ ಕೆಲವು ಅಡಿಕೆ ಮನೆ ಟಿಪ್ಸ್, ಇವುಗಳನ್ನು ಫಾಲೋ ಮಾಡಿ ಕೆಲಸ ಕಡಿಮೆ ಆಗುತ್ತೆ.!

Posted on December 19, 2023 By Kannada Trend News No Comments on ಎಲ್ಲಾ ಮಹಿಳೆಯರಿಗಾಗಿ ಕೆಲವು ಅಡಿಕೆ ಮನೆ ಟಿಪ್ಸ್, ಇವುಗಳನ್ನು ಫಾಲೋ ಮಾಡಿ ಕೆಲಸ ಕಡಿಮೆ ಆಗುತ್ತೆ.!

ಮನೆಯಲ್ಲಿರುವ ಗೃಹಿಣಿ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ ಅಡುಗೆ ಮನೆಯನ್ನು ಸರಿಯಾಗಿ ನಿರ್ವಹಿಸುವ ಮನೆ ಮಂದಿಯ ಆರೋಗ್ಯ ಕಾಳಜಿ ಮಾಡುವ, ಮನೆಯನ್ನು ಕ್ಲೀನ್ ಆಗಿ ಆಕರ್ಷಕವಾಗಿ ಇಟ್ಟುಕೊಳ್ಳುವ ಹೀಗೆ ಈ ಪಟ್ಟಿ ಬೆಳೆಯುತ್ತದೆ. ಇದರ ಗಡಿಬಿಡಿಯಲ್ಲಿ ಅನೇಕ ಬಾರಿ ಸಣ್ಣ ಪುಟ್ಟ ಎಡಗಟ್ಟಿನಿಂದ ಅನೇಕ ನ’ಷ್ಟಗಳನ್ನು ಮಾಡಿಕೊಳ್ಳುತ್ತೇವೆ.

ಅದರಲ್ಲೂ ಅಡುಗೆ ಮನೆ ವಿಷಯದಲ್ಲಿ ಕೆಲಸ ಕಡಿಮೆ ಮಾಡಿ, ಪದಾರ್ಥಗಳು ಹಾಳಾಗುವುದನ್ನು ತಪ್ಪಿಸಲು ಎಷ್ಟು ಉಪಾಯ ಮಾಡಿದರೂ ಸಾಲದು. ಹಾಗಾಗಿ ಈ ಅಂಕಣದಲ್ಲಿಯೂ ಕೂಡ ಕೆಲ ಪ್ರಮುಖ ಟಿಪ್ಸ್ ಗಳನ್ನು ನೀಡುತ್ತಿದ್ದೇವೆ, ಇನ್ನು ಮುಂದೆ ಇವುಗಳನ್ನು ಕೂಡ ಪಾಲಿಸಿ.

* ಅಕ್ಕಿಯನ್ನು ತಂದು ಕ್ಲೀನ್ ಮಾಡಿ ಇಡುತ್ತೇವೆ, ಆದರೆ ಕೆಲ ದಿನಗಳಾದ ಮೇಲೆ ಬೂಸ್ಟ್ ಬಂದಿರುತ್ತದೆ ಹೀಗಾಗಬಾರದೆಂದರೆ ಅಕ್ಕಿ ಡಬ್ಬದಲ್ಲಿ ಕರಿಬೇವಿನ ಎಲೆಗಳನ್ನು ಹಾಕಿ ಇಡಿ
* ಸಕ್ಕರೆ ಡಬ್ಬಕ್ಕೆ ಇರುವೆಗಳು ಮುತ್ತಿಗೆ ಹಾಕದಿರುವಂತೆ ಮಾಡಲು ಏನೆಲ್ಲ ಟ್ರಿಕ್ಸ್ ಮಾಡಿ ಸೋತಿರುತ್ತೇವೆ, ಇನ್ನು ಮುಂದೆ ನಾಲ್ಕೈದು ಲವಂಗಗಳನ್ನು ಸಕ್ಕರೆ ಡಬ್ಬಕ್ಕೆ ಹಾಕಿ ಇಡಿ ಈ ಸಮಸ್ಯೆ ತಪ್ಪುತ್ತದೆ

* ಹಸಿಮೆಣಸಿನಕಾಯಿ ಹಚ್ಚಿದಾಗ ಕೈ ಉರಿ ಬರುತ್ತದೆ. ಆ ಕೈ ಉರಿ ವಾಸಿ ಮಾಡಿಕೊಳ್ಳುವುದಕ್ಕೆ ನಮಗೆ ಹೆಚ್ಚು ಸಮಯ ಬೇಕು ಮತ್ತು ಅದಕ್ಕಾಗಿ ಏನೇನೋ ಮುಲಾಮು ಕೂಡ ಹಚ್ಚಬೇಕು. ಈ ಕಷ್ಟ ತಪ್ಪಿಸಿಕೊಳ್ಳಲು ಇನ್ನು ಮುಂದೆ ಹಸಿಮೆಣಸಿಕಾಯಿಯನ್ನು ಕತ್ತರಿಸಲು ಚಾಕುವಿನ ಬದಲು ಕತ್ತರಿಯನ್ನು ಬಳಸಿ

* ಕರಿಬೇವಿನ ಎಲೆಗಳನ್ನು ಬಿಡಿಸಿ ಒಂದು ಗಾಜಿನ ಕಂಟೈನರ್ ನಲ್ಲಿ ಹಾಕಿ ಫ್ರಿಡ್ಜ್ ಗೆ ಇಡಿ ಈ ರೀತಿ ಮಾಡಿದರೆ ತಿಂಗಳಾದರೂ ಅವು ಫ್ರೆಶ್ ಆಗಿರುತ್ತವೆ.
* ಏಲಕ್ಕಿ ಬಿಡಿಸಿದ ಮೇಲೆ ಅದರ ಸಿಪ್ಪೆಗಳನ್ನು ಬಿಸಾಕಬೇಡಿ. ಇದನ್ನು ಒಣಗಿಸಿ ಪುಡಿ ಮಾಡಿ ಚಹಾ ಪುಡಿಗೆ ಹಾಕಿ ಇಡಿ ಇದರಿಂದ ಚಹಾ ಮಾಡಿದಾಗ ಅದರ ರುಚಿ ಹೆಚ್ಚಾಗುತ್ತದೆ, ಪರಿಮಳದಿಂದ ಕೂಡಿರುತ್ತದೆ.

* ಅನ್ನ ಉದುರುದುರಾಗಿ ಬೆಳ್ಳಗೆ ಬರಬೇಕು ಎಂದರೆ ಅನ್ನ ಬೇಯುವಾಗ ಒಂದೆರಡು ಹನಿ ನಿಂಬೆರಸ ಹಾಕಿದರೆ ಅನ್ನ ಬೆಳ್ಳಗಾಗುತ್ತದೆ ಮತ್ತು ಹೆಚ್ಚು ರುಚಿಯಿಂದ ಕೂಡಿರುತ್ತದೆ ಹಾಗೂ ಬೇಗ ಬೇಯುತ್ತದೆ
* ಉಪ್ಪಿನ ಡಬ್ಬದಲ್ಲಿ ಉಪ್ಪು ಕಂದು ಹೋಗಿ ನೀರು ಬಿಟ್ಟುಕೊಳ್ಳುವುದನ್ನು ನಾವೆಲ್ಲ ನೋಡಿ ಸುಮ್ಮನಾಗಿರುತ್ತೇವೆ, ಇದನ್ನು ತಪ್ಪಿಸಲು ಆ ಉಪ್ಪಿನ ಡಬ್ಬಕ್ಕೆ ಎರಡು ಒಣ ಮೆಣಸಿನಕಾಯಿ ಹಾಕಿ ಇಡಿ

* ತೆಂಗಿನಕಾಯಿ ಒಡೆದ ಮೇಲೆ ಅದು ಹೆಚ್ಚಿಗೆ ದಿನ ಬಾಳಿಕೆ ಬರಬೇಕು ಎಂದರೆ ಅವುಗಳಿಗೆ ಸ್ವಲ್ಪ ಉಪ್ಪು ಸವರಿ ಇಡಿ ಆಗ ಬೇಗ ಕೆಡುವುದಿಲ್ಲ
* ನೀರನ್ನು ಕುಡಿಸಬೇಕಾದಾಗ ಪ್ಲೇಟ್ ಮುಚ್ಚಿಟ್ಟರೆ ನೀರು ಬೇಗ ಬಿಸಿಯಾಗುತ್ತದೆ
* ಮಾವಿನಕಾಯಿ ಉಪ್ಪಿನಕಾಯಿ ಬೇಗ ಕೆಡುತ್ತದೆ ಮತ್ತು ಅದರ ರುಚಿ ಹೋಗುತ್ತದೆ ಹಾಗೆ ಆಗಬಾರದು ಎಂದರೆ ಅದಕ್ಕೆ ಚೂರು ಬೇಕಿಂಗ್ ಸೋಡಾ ಹಾಕಿ ಇಡಿ

* ಓಂ ಕಾಳು ಹಾಗೆ ತಿನ್ನುವ ಅಭ್ಯಾಸ ಇರುವವರು ಅದರ ಘಾಟಿನಿಂದ ಸಮಸ್ಯೆಪಡುತ್ತಿದ್ದರೆ ಮೊದಲಿಗೆ ಅದನ್ನು ನೀರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ, ಈ ರೀತಿ ಮಾಡಿ ಬಳಸಿದರೆ ಘಾಟಾಗುವುದಿಲ್ಲ. ಓಂ ಕಾಳು ಬೇಯಿಸಲು ಬಹಳ ಸಮಯ ಬೇಕು ಅವುಗಳನ್ನು ನೆನೆಸಿಟ್ಟು ಬೇಯಿಸಿದರೆ ಬೇಗ ಬೇಯುತ್ತದೆ.

* ಮೆಣಸಿಕಾಯಿಗೆ ಎಣ್ಣೆ ಮತ್ತು ಉಪ್ಪನ್ನು ಸವರಿ ಇಟ್ಟರೆ ಹೆಚ್ಚು ದಿನ ಬಾಳಿಕೆ ಬರುತ್ತದೆ
* ಬಿಸ್ಕೆಟ್, ಚಕ್ಕುಲಿ ನಿಪ್ಪಟ್ಟು ಇವುಗಳನ್ನು ಇಡುವ ಡಬ್ಬದಲ್ಲಿ ಹೀರುವ ಕಾಗದ ಹಾಕಿ ಇಟ್ಟರೆ, ಇವು ಬೇಗ ಮೆತ್ತಗೆ ಆಗುವುದಿಲ್ಲ
* ಅಡುಗೆಗೆ ಬಳಸುವ ಇಂಗು ಬಹಳ ಬೇಗ ಗಟ್ಟಿಯಾಗಿ ಬಿಡುತ್ತದೆ. ಹಾಗಾಗಿ ಒಂದು ಒಣಮೆಣಸಿನ ಕಾಯಿಯನ್ನು ಹಾಕಿ ಇಟ್ಟರೆ ಅದು ಮೆತ್ತಗಾಗುವುದಿಲ್ಲ ಮತ್ತು ಹೊಸದರಂತೆ ಇರುತ್ತದೆ.

* ಮಾಂಸವನ್ನು ಬೇಯಿಸುವಾಗ ಸ್ವಲ್ಪ ಅರಿಶಿನ ಹಾಕಿ ಬೇಯಿಸಿದರೆ, ಮಾಂಸದ ಹಸಿವಾಸನೆ ಹೋಗುತ್ತದೆ.
* ತೆಂಗಿನಕಾಯಿ ಸ್ವಲ್ಪ ಚೂರನ್ನು ಮೊಸರಿಗೆ ಹಾಕಿ ಇಟ್ಟರೆ ಮೊಸರು ಬೇಗ ಕೆಡುವುದಿಲ್ಲ.

Useful Information
WhatsApp Group Join Now
Telegram Group Join Now

Post navigation

Previous Post: ಹೊಸ ವರ್ಷ 2024ರಲ್ಲಿ ಇವುಗಳನ್ನು ಮನೆಗೆ ತಂದರೆ ವರ್ಷಪೂರ್ತಿ ಹಣ, ಸಂಪತ್ತಿನ ಸುರಿಮಳೆ.!
Next Post: ಹುಟ್ಟಿದ ದಿನಾಂಕದ ಆಧಾರದ ಮೇಲೆ ಅದೃಷ್ಟದ ಸಂಖ್ಯೆ ಕಂಡು ಹಿಡಿಯುವುದು ಹೇಗೆ ಅಂತ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore