Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕೊಟ್ಟ ಡೇಟ್ ನಾ ಇದ್ದಕ್ಕಿದ್ದಂತೆ ಸುದೀಪ್ ಕ್ಯಾನ್ಸಲ್ ಮಾಡ್ತಾರೆ, ನನ್ಗೆ ಬಂದಿದ್ದ ಕೋಪದಲ್ಲಿ ಸುದೀಪ್ ಗೆ ಹಿಗ್ಗಾ ಮುಗ್ಗ ಬೈದಿದ್ದಿನಿ.

Posted on January 18, 2023 By Kannada Trend News No Comments on ಕೊಟ್ಟ ಡೇಟ್ ನಾ ಇದ್ದಕ್ಕಿದ್ದಂತೆ ಸುದೀಪ್ ಕ್ಯಾನ್ಸಲ್ ಮಾಡ್ತಾರೆ, ನನ್ಗೆ ಬಂದಿದ್ದ ಕೋಪದಲ್ಲಿ ಸುದೀಪ್ ಗೆ ಹಿಗ್ಗಾ ಮುಗ್ಗ ಬೈದಿದ್ದಿನಿ.

 

ಹುಚ್ಚ ಸಿನಿಮಾ ನಂತರ ಕೊಟ್ಟಿದ್ದ ಡೇಟ್ ಕ್ಯಾನ್ಸಲ್ ಮಾಡಿಕೊಂಡಿದ್ದಕ್ಕಾಗಿ ಸುದೀಪ್ ಅವರಿಗೆ ಬಾಯಿಗೆ ಬಂದ ಹಾಗೆ ಅಂದಿದ್ದ ಡೇವಿಡ್. ಸುದೀಪ್ ಅವರು ಇನ್ನು ಕನ್ನಡ ಚಿತ್ರರಂಗದಲ್ಲಿ ಸ್ಟ್ರಗಲ್ ಮಾಡುತ್ತಿದ್ದ ದಿನಗಳು ಅವು. ಅದಾಗಲೇ ಪೊಲೀಸ್ ಸ್ಟೋರಿ ಅಂತಹ ಸಿನಿಮಾಗಳನ್ನು ಮಾಡಿ ನಿರ್ದೇಶಕರಾಗಿ ಹೆಸರು ಮಾಡಿದ್ದರು ಡೇವಿಡ್ ಅವರು. ಅವರಿಗೆ ಶೋಭರಾಜ್ ಅವರಿಂದ ಸುದೀಪ್ ರ ಪರಿಚಯ ಆಗುತ್ತದೆ.

ಸುದೀಪ್ ಅವರ ತಂದೆಯ ಸರೋವರ ಹೋಟೆಲ್ ಅಲ್ಲಿ ಅದೆಷ್ಟೋ ದಿನಗಳು ಒಟ್ಟಿಗೆ ಕೂತು ಎಲ್ಲಾ ಭಾಷೆಗಳ ಸಿನಿಮಾ ಕುರಿತು ಚರ್ಚೆ ಮಾಡಿರುತ್ತಾರೆ. ಸಿನಿಮಾ ಬಗ್ಗೆ ಇಬ್ಬರಿಗೂ ಆಕರ್ಷಣೆ ಆಸಕ್ತಿ ಇದ್ದ ಕಾರಣ ಅದೇ ಇವರಿಬ್ಬರ ಫ್ರೆಂಡ್ ಶಿಪ್ ಅನ್ನು ಅದು ಗಟ್ಟಿಗೊಳಿಸಿರುತ್ತದೆ. ಚಂದನ್ ಫಿಲಂ ಸುರೇಶ್ ಎನ್ನುವವರನ್ನು ಒಪ್ಪಿಸಿ ಸುದೀಪ್ ಅವರಿಗಾಗಿ ಒಂದು ಕಥೆಯನ್ನು ಸಹ ಎಸ್ ಎಸ್ ಡೇವಿಡ್ ಅವರು ರೆಡಿ ಮಾಡಿರುತ್ತಾರೆ.

ಆದರೆ ಅದರ ಬಜೆಟ್ ವಿಷಯದಲ್ಲಿ ಕಾಂಪ್ರಮೈಟ್ ಆಗದ ಕಾರಣ ಚಂದನ್ ಫಿಲಂ ಸುರೇಶ್ ಅವರು ಒಪ್ಪಿಕೊಳ್ಳುವುದಿಲ್ಲ. ಆ ಸಮಯದಲ್ಲಿ 80 ರಿಂದ ಒಂದು ಕೋಟಿ ಅಷ್ಟು ಸಿನಿಮಾಗೆ ಬಜೆಟ್ ಬಿದ್ದಿರುತ್ತದೆ. ಅವರನ್ನು ಕನ್ವೆನ್ಸ್ ಮಾಡುವ ಕಾರಣದಿಂದ ಸುದೀಪ್ ಅವರು ನನ್ನ ತಂದೆಯ ಜೊತೆ ಮಾತನಾಡಿ 25 ಲಕ್ಷ ಇನ್ವೆಸ್ಟ್ ಮಾಡುತ್ತೇನೆ ಎಂದರು ಸಹ ಆ ಪ್ರಾಜೆಕ್ಟ್ ಓಕೆ ಆಗುವುದೇ ಇಲ್ಲ. ನಂತರ ಸುದೀಪ್ ಅವರು ಹುಚ್ಚ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗುತ್ತಾರೆ.

ಆ ಸಿನಿಮಾ ಶೂಟಿಂಗ್ ಅರ್ಧ ಆಗಿರುತ್ತದೆ ಆ ಸಮಯದಲ್ಲಿ ಮತ್ತೊಮ್ಮೆ ಪ್ರೊಡ್ಯೂಸರನ್ನು ಹಿಡಿದುಕೊಂಡು ಸುದೀಪ್ ಅವರಿಗಾಗಿ ಮತ್ತೊಂದು ಕಥೆ ರೆಡಿ ಮಾಡಿಕೊಂಡು ಅವರ ಬಳಿ ಹೋಗುತ್ತಾರೆ ಡೇವಿಡ್. ಅಂದು ಸುದೀಪ್ ಅವರ ಎಂಗೇಜ್ಮೆಂಟ್ ಇರುತ್ತದೆ, ಅದೇ ದಿನ ಕಥೆ ಕೇಳಿದ ಸುದೀಪ್ ಅವರು ಸಿನಿಮಾ ಮಾಡುವುದಾಗಿ ಒಪ್ಪಿಕೊಳ್ಳುತ್ತಾರೆ ಆ ಸಮಯದಲ್ಲಿ ಹುಚ್ಚ ಹಿಟ್ ಆಗುತ್ತದೆ ಎನ್ನುವ ಭರವಸೆ ಎಲ್ಲರಲ್ಲೂ ಇರುತ್ತದೆ.

ಹೀಗಾಗಿ ಆದಷ್ಟು ಬೇಗ ಸಿನಿಮಾ ಶುರು ಮಾಡಬೇಕು ಎನ್ನುವ ನಿರ್ಮಾಪಕರ ಒತ್ತಾಯದ ಮೇರೆಗೆ ಅಡ್ವಾನ್ಸ್ ಸಹ ಕೊಟ್ಟು ಡೇಟ್ಸ್ ಬಗ್ಗೆ ಮಾತನಾಡಲು ಸುದೀಪ್ ಅವರ ಬಳಿಗೆ ಸಹಾಯಕರನ್ನು ಕಳುಹಿಸುತ್ತಾರೆ. ಆದರೆ ಸುದೀಪ್ ಅವರು ಶೂಟಿಂಗ್ ಅಲ್ಲಿ ಬ್ಯುಸಿ ಇದ್ದ ಕಾರಣ ಅವರ ತಂದೆ ಅಡ್ವಾನ್ಸ್ ತೆಗೆದುಕೊಳ್ಳದೆ ಸುದೀಪ್ ಅವರು ನಿಮ್ಮ ಜೊತೆ ಮಾತನಾಡಬೇಕು ಎಂದು ಹೇಳಿ ಕಳುಹಿಸಿರುತ್ತಾರೆ.

ಶೂಟಿಂಗ್ ನಲ್ಲಿದ್ದ ಸುದೀಪ್ ಅವರನ್ನು ಸಂಪರ್ಕಿಸಲು ಎಸ್ಎಸ್ ಡೇವಿಡ್ ಅವರು ಕರೆ ಮಾಡಿ ಪ್ರಯತ್ನ ಪಟ್ಟರು ಶಾರ್ಟ್ ಅಲ್ಲಿ ಇದ್ದ ಕಾರಣ ಸುದೀಪ್ ಅವರು ಮಾತನಾಡಿರುವುದಿಲ್ಲ. ನಂತರ ಅವರೇ ಬಂದು ಕರೆ ಮಾಡಿ ಹುಚ್ಚ ಆದ ನಂತರ ಹೋಂ ಬ್ಯಾನರ್ ಅಲ್ಲಿ ಸಿನಿಮಾ ಸ್ಟಾರ್ಟ್ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ನೀವು ನನ್ನ ಹಿತೈಷಿಗಳು ದಯವಿಟ್ಟು ಯಾವುದೇ ಕಾರಣಕ್ಕೂ ಬೇಸರ ಮಾಡಿಕೊಳ್ಳಬೇಡಿ ಮುಂದೊಂದು ದಿನ ಈ ಸ್ಕ್ರಿಪ್ ಮಾಡೋಣ ಅಥವಾ ನಮ್ಮ ಸಿನಿಮಾ ಆದಮೇಲೆ ಮಾಡೋಣ ಈಗ ನನಗೆ ಡೇಟ್ಸ್ ಕೊಡಲು ಆಗುವುದಿಲ್ಲ ಎಂದು ಬಿಡುತ್ತಾರೆ.

ಆ ಕೋಪದಲ್ಲಿ ಸುದೀಪ್ ಅವರನ್ನು ಬಾಯಿಗೆ ಬಂದ ಹಾಗೆ ಡೇವಿಡ್ ಅವರು ಬೈದಿರುತ್ತಾರಂತೆ. ಆ ಬಗ್ಗೆ ಇಂದು ಪಶ್ಚತ್ತಾಪ ಪಟ್ಟುಕೊಳ್ಳುತ್ತಿರುವ ಡೇವಿಡ್ ಅವರು ಸುದೀಪ್ ಅವರು ನಿಜವಾಗಲೂ ವಿಶೇಷ ವ್ಯಕ್ತಿತ್ವದವರು ಅಂದು ನಾನು ಆ ಕೋಪದಲ್ಲಿ ಅಷ್ಟು ಮಾತನಾಡಿದರು ಸಹ ಇಂದಿಗೂ ಅದನ್ನು ಸ್ವಲ್ಪವೂ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ ಅದಾದ ಬಳಿಕವೂ ಸಹ ನನ್ನ ಜೊತೆ ಏನು ಆಗಿಲ್ಲ ಎನ್ನುವಂತೆ ಸಹಜವಾಗಿದ್ದಾರೆ.

ಮತ್ತು ಅವರ ತಿರುಪತಿ ಸಿನಿಮಾಗೆ ಸ್ಕ್ರಿಪ್ಟ್ ರೆಡಿ ಮಾಡಿದ್ದೆ ನಾನು ಆದರೆ ರೆಡಿ ಮಾಡುವ ವೇಳೆ ನನಗೆ ಸುದೀಪ್ ಅವರು ಹೀರೋ ಎನ್ನುವುದು ಗೊತ್ತಿರಲಿಲ್ಲ. ಕಥೆ ಹೇಳುವ ಸಮಯದಲ್ಲಿ ನಿರ್ದೇಶಕರು ಹಾಗೂ ನಿರ್ವಾಕಪಕರು ನೀವೇ ಬಂದು ಕಥೆ ಹೇಳಬೇಕು ಎಂದು ಹೇಳಿದಾಗ ಸುದೀಪ್ ಅವರಿಗೆ ಬೇಸರ ಮಾಡಿದ್ದೇನೆ ನಾನು ಬರುವುದಿಲ್ಲ ಎಂದರು ಸುದೀಪ್ ಅವರೇ ನನಗೆ ಹೇಳಿ ಕಳುಹಿಸಿ ಕರೆಸಿಕೊಂಡಿದ್ದರು ಎಂದು ಇತ್ತೀಚೆಗೆ ಪಿ ಗಣಪತಿ ಅವರ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ ಡೇವಿಡ್ ಅವರು.

Entertainment Tags:David, Huccha cinema, Kiccha sudeep
WhatsApp Group Join Now
Telegram Group Join Now

Post navigation

Previous Post: ಫಿಲ್ಮ್ ಚೇಂಬರ್ ನಲ್ಲಿ ವಿಷ್ಣು ಬಯೋಡೇಟಾನೇ ಇಲ್ಲ ಅದ್ಕೆ ಪದ್ಮಶ್ರೀ ಅವಾರ್ಡ್ ಗೆ ಶಿಫಾರಸ್ಸು ಮಾಡಲ್ಲ. ಶಾ-ಕಿಂಗ್ ಹೇಳಿಕೆ ನೀಡಿದ ನಟಿ ಜಯಮಾಲ
Next Post: ಇಂಡಸ್ಟ್ರಿಯಲ್ಲಿ ಒಂದೇ ಒಂದೂ ದುಶ್ಚಟ ಇಲ್ದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಇವರೊಬ್ರು ಮಾತ್ರ ಎಂದು ಹೇಳಿದ ಸಾಧುಕೋಕಿಲ. ಆ ವ್ಯಕ್ತಿ ಯಾರು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore