Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕೊರಗಜ್ಜನಿಗೆ ಹರಕೆ ಮಾಡುವ ವಿಧಾನ.! ಕೇವಲ ಒಂದು ರೂಪಾಯಿ ನಾಣ್ಯ ಇದ್ದರೆ ಸಾಕು ತಿಂಗಳ ಒಳಗೆ ನಿಮ್ಮ ಆಸೆ ನೆರವೇರುತ್ತದೆ.!

Posted on March 1, 2024 By Kannada Trend News No Comments on ಕೊರಗಜ್ಜನಿಗೆ ಹರಕೆ ಮಾಡುವ ವಿಧಾನ.! ಕೇವಲ ಒಂದು ರೂಪಾಯಿ ನಾಣ್ಯ ಇದ್ದರೆ ಸಾಕು ತಿಂಗಳ ಒಳಗೆ ನಿಮ್ಮ ಆಸೆ ನೆರವೇರುತ್ತದೆ.!

 

ತುಳುನಾಡಿನ ನಂಬಿಕೆಯ ದೈವ ಕೊರಗಜ್ಜ. ಕೊರಗಜ್ಜ ಎಂದರೆ ಸತ್ಯವಾದ ದೇವರು, ಧರ್ಮವಾದ ದೇವರು, ನ್ಯಾಯದ ದೇವರು. ಒಮ್ಮೆ ಕೊರಗಜ್ಜನಲ್ಲಿ ಪ್ರಾಮಾಣಿಕವಾಗಿ ನಮ್ಮ ಕಷ್ಟವನ್ನು ಹೇಳಿಕೊಂಡರೆ ಆತ ಖಂಡಿತವಾಗಲೂ ಪರಿಹರಿಸುತ್ತಾನೆ ಎನ್ನುವ ನಂಬಿಕೆ ತುಳುನಾಡು ಮತ್ತು ಈಗ ಕರ್ನಾಟಕದ ಮನೆಮನೆಗಳಲ್ಲಿ ಕೂಡ ಇದೆ.

ದಿನದಿಂದ ದಿನಕ್ಕೆ ತುಳುನಾಡಿನ ದೈವವಾಗಿದ್ದ ಕೊರಗಜ್ಜನ ಮಹಿಮೆಯು ಲೋಕ ವಿಖ್ಯಾತಿಗೊಂಡಿದ್ದು, ಈಗ ಮನೆ ಮನೆಗಳಲ್ಲಿ ಕೂಡ ಕೊರಗಜ್ಜನ ಹೆಸರು ಹೇಳುತ್ತಾರೆ, ತಮ್ಮ ಕಷ್ಟಕಾರ್ಪಣ್ಯ ಬಗೆಹರಿಸುವಂತೆ ಹರಕೆ ಕಟ್ಟುತ್ತಾರೆ ಮತ್ತು ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ಕೊಡಲು ಕೂಡ ಕಾಯುತ್ತಿರುತ್ತಾರೆ.

ಇಷ್ಟು ಶಕ್ತಿಶಾಲಿ ದೇವತೆಯಾದ ಕೊರಗಜ್ಜನ ಮಹಾತ್ಮೆ ಬಗ್ಗೆ ಒಂದೆರಡು ಮಾತುಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇನೆ ಕೊರಗಜ್ಜ ಜೀವನದಲ್ಲಿ ನೊಂ’ದಿರುವವರ ನೆರವಿಗೆ ಯಾವಾಗಲೂ ಇರುತ್ತಾರೆ. ಇದಕ್ಕೆ ಕಾರಣ ಕೊರಗಜ್ಜನೂ ಕೂಡ ಇಂತಹ ದುಃ’ಖ ದ ಜೀವನವನ್ನು ಕಳೆದಿದ್ದಾರೆ.

ಈ ಸುದ್ದಿ ಓದಿ:-ಮದುವೆ ವಿಳಂಬ ಎದುರಿಸುತ್ತಿದ್ದೀರಾ.? ಒಳ್ಳೆಯ ಸಂಬಂಧ ಬರುತ್ತಿಲ್ಲವೇ.? ಒಂದು ಏಲಕ್ಕಿಯಿಂದ ಹೀಗೆ ಮಾಡಿ ತಿಂಗಳೊಳಗೆ ರಾಜ ರಾಣಿಯಂತಹ ಸಂಬಂಧ ಸಿಗೋದು ಖಚಿತ.!

ಹುಟ್ಟಿದ 30 ದಿನಕ್ಕೆ ತಾಯಿಯನ್ನು ಕಳೆದುಕೊಂಡ ಕೊರಗಜ್ಜ ಬೆಳೆಯುತ್ತ ತಂದೆಯನ್ನು ಕೂಡ ಕಳೆದುಕೊಂಡು ತನ್ನವರಿಂದ ದೂರವಾಗಿ ಬದುಕಿನಲ್ಲಿ ಬಹಳ ಕಷ್ಟ ಪಡುತ್ತಾರೆ. ಆಡುವ ವಯಸ್ಸಿನಲ್ಲಿ ಅನಾಥನಾದ ಇವರಿಗೆ ಸೇಂದಿ ಮಾರುವವರು ಒಬ್ಬ ಮಹಿಳೆಯಿಂದ ರಕ್ಷಣೆ ಸಿಗುತ್ತದೆ.

ಸೇಂದಿ ಮಾರುವ ಒಬ್ಬ ಮಹಿಳೆಯು ಸಾಕಿದ ಕೊರಗಜ್ಜ ದೈವಾಂಶ ಸಂಭೂತನಾಗಿದ್ದ ಎನ್ನುವುದು ಆಕೆಗೆ ಕೂಡ ಗೊತ್ತಿರಲಿಲ್ಲ. ನಿಧಾನವಾಗಿ ಭಗವಂತನ ಆಶೀರ್ವಾದ ಪಡೆದಿದ್ದ ಕೊರಗಜ್ಜನು ತನ್ನ ಈ ಶಕ್ತಿಯಿಂದ ಪವಾಡಗಳನ್ನು ನಡೆಸಿ ತನ್ನ ಸುತ್ತಮುತ್ತಲಿನವರ ಸಮಸ್ಯೆಗಳನ್ನು ಪರಿಹರಿಸುತ್ತಾ ಬೆಳೆದರು.

ಇಂದು ಈ 21ನೇ ಶತಮಾನದಲ್ಲೂ ಕೂಡ ಕೊರಗಜ್ಜನ ಶಕ್ತಿ ಪವಾಡಗಳಿಗೆ ಕಡಿಮೆ ಇಲ್ಲ ಕೊರಗಜ್ಜನನ್ನು ಪ್ರಾರ್ಥಿಸಿಕೊಂಡವರಿಗೆ ಕೊರಗು ಇರುವುದಿಲ್ಲ ನೂರಕ್ಕೆ ನೂರರಷ್ಟು ಅವರ ಸಮಸ್ಯೆ ಪರಿಹಾರವಾಗುವುದು ಗ್ಯಾರಂಟಿ ಆದರೆ ನಾವು ಕೇಳಿಕೊಳ್ಳುವುದಕ್ಕೂ ಕೂಡ ಒಂದು ಪದ್ಧತಿ ವಿಧಾನ ಇದ್ದೇ ಇರುತ್ತದೆ.

ಈ ಸುದ್ದಿ ಓದಿ:-ನಿಮ್ಮ ಮದುವೆಯ ನಂತರ ಗಂಡನ ಮನೆಯಲ್ಲಿ ಜೀವನ ಹೇಗಿರುತ್ತದೆ ಎಂದು ಕೈನಲ್ಲಿರುವ ಈ ಹಸ್ತ ರೇಖೆಯ ಮೂಲಕ ತಿಳಿದುಕೊಳ್ಳಬಹುದು.!

ಸರಿಯಾದ ರೀತಿಯಲ್ಲಿ ಆ ದೇವರುಗಳಿಗೆ ಇಷ್ಟ ಆಗುವ ರೀತಿ ಹಾಗೂ ಅದಕ್ಕೆ ನಡೆದುಕೊಂಡಿರುವ ಪದ್ಧತಿ ಪ್ರಕಾರವಾಗಿ ನಾವು ಏನನ್ನೇ ಕೇಳಿಕೊಂಡರು ಕೂಡ ಅದು ಖಂಡಿತವಾಗಿಯೂ ಭಗವಂತನಿಗೆ ಮುಟ್ಟಿ ಸಮಸ್ಯೆ ಬಗೆಹರಿಯುತ್ತದೆ. ಹೀಗೆ ಕೊರಗಜ್ಜನಿಗೆ ನಮ್ಮ ಕಷ್ಟ ತಿಳಿಯಬೇಕು ಎಂದರೆ ಅಥವಾ ಕೊರಗಜ್ಜನ ಸಹಾಯ ಬೇಕು ಎನ್ನುವುದಾದರೆ ನೀವು ಕೊರಗಜ್ಜನಲ್ಲಿ ನಾವು ಹೇಳುವ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳಬೇಕು.

ಕೊರಗಜ್ಜನಿಗೆ ಯಾವುದೇ ಮಂಗಳವಾರ ಅಥವಾ ಶುಕ್ರವಾರ ಹರಕೆ ಕಟ್ಟಿಕೊಳ್ಳಬೇಕು ಮುಂಜಾನೆ ಅಥವಾ ಮುಸ್ಸಂಜೆಯಲ್ಲಿ ಮನೆಯಲ್ಲಿ ದೀಪ ಹಚ್ಚಿ ಮನಸ್ಸಿನಲ್ಲಿ ನಿಮ್ಮ ಮನೆ ದೇವರನ್ನು ನೆನೆದು ನಂತರ ಕೊರಗಜ್ಜನನ್ನು ಮನಸ್ಪೂರ್ತಿಯಾಗಿ ಪ್ರಾರ್ಥನೆ ಮಾಡಿಕೊಳ್ಳಬೇಕು.

ಎದುರಿಗೆ ಒಂದು ಬಟ್ಟಲಿನಲ್ಲಿ ಅಕ್ಷತೆ ಹಾಗೂ ಒಂದು ರೂಪಾಯಿ ನಾಣ್ಯ ಇಟ್ಟುಕೊಳ್ಳಬೇಕು ಈಗ ನಾಣ್ಯವನ್ನು ತೆಗೆದುಕೊಂಡು ಎಡಗೈ ಮೇಲೆ ಇಟ್ಟು ಅದನ್ನು ಬಲಗೈಯಿಂದ ಮುಚ್ಚಿ ನಿಮ್ಮ ಕಣ್ಣನ್ನು ಮುಚ್ಚಿ ಎದೆ ಭಾಗದಲ್ಲಿ ಇಟ್ಟುಕೊಂಡು ಕೊರಗಜ್ಜನ ಬಳಿ ನಿಮ್ಮ ಕೋರಿಕೆ ಏನೆಂದು ಹೇಳಿಕೊಂಡು ಹರಕೆ ಕಟ್ಟಿಕೊಳ್ಳಬೇಕು.

ಈ ಸುದ್ದಿ ಓದಿ:-ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

ಈ ರೀತಿ ನೀವು ಮಾಡಿದ 30 ದಿನಗಳ ಒಳಗೆ ಖಂಡಿತವಾಗಿಯೂ ನೀವು ಯಾವ ಹರಕೆ ಮಾಡಿಕೊಂಡಿದ್ದೀರಿ ಅದು ನೆರವೇರುತ್ತದೆ ಆ ಹರಕೆ ನೆರವೇರಿದ ನಂತರ ಕೊಟ್ಟ ಮಾತಿನಂತೆ ತಪ್ಪದೆ ಕೊರಗಜ್ಜನ ಸನ್ನಿಧಾನಕ್ಕೆ ಹೋಗಿ ಕಾಣಿಕೆ ಅರ್ಪಿಸಿ ಹರಕೆ ಋಣ ತೀರಿಸಬೇಕು.

Devotional
WhatsApp Group Join Now
Telegram Group Join Now

Post navigation

Previous Post: ಬಾಡಿಗೆ ಮನೆ ಗೃಹ ಪ್ರವೇಶ ಮಾಡುವಾಗ ಪಾಲಿಸಬೇಕಾದ ನಿಯಮಗಳು.!
Next Post: ದೇಹದ ಉಷ್ಣತೆ ನಿಮಿಷಗಳಲ್ಲಿ ಕಡಿಮೆಯಾಗುತ್ತದೆ. ಕೈಕಾಲು ಉರಿ, ಕಣ್ಣು ಉರಿ, ಹೊಟ್ಟೆ ಉರಿ, ಸುಸ್ತು, ನಿಶಕ್ತಿ ತಕ್ಷಣ ಕಡಿಮೆಯಾಗಲು ಈ ಉಪಾಯ ಮಾಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore