ಏಪ್ರಿಲ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಅದ್ಭುತವಾದ ಶುಕ್ರ ಬಲ ಇರುತ್ತದೆ. ನಿಮ್ಮ ಕರ್ಮಾಧಿಪತಿ ಮತ್ತು ತೃತೀಯಾಧಿಪತಿ ಆದಂತಹ ಶುಕ್ರನು ಮಾರ್ಚ್ 31ರಂದು ಮೀನಾ ರಾಶಿಗೆ ಪ್ರವೇಶ ಮಾಡಿ ಮೀನಾ ರಾಶಿಯಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಇರುತ್ತಾರೆ. ಅಷ್ಟಮದಲ್ಲಿ ಇರುವುದರಿಂದ ನೇರವಾಗಿ ಶುಭಫಲ ನೀಡಲಾಗುತ್ತಿದ್ದರು ಪರೋಕ್ಷವಾಗಿ ಒಳ್ಳೆಯದನ್ನು ಮಾಡುತ್ತಾರೆ.
ಸಿಂಹ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ ಒಟ್ಟಾರೆಯಾಗಿ ಹೇಳುವಾಗ ಎಲ್ಲಾ ಗ್ರಹಗಳ ಪ್ರಭಾವ ಸೇರಿಸಿ ಎಲ್ಲ ಶುಭ ಮತ್ತು ಅಶುಭಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಇಂದು ನಾವು ಈ ಲೇಖನದಲ್ಲಿ ಏಪ್ರಿಲ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಶುಕ್ರನ ಸ್ಥಾನ ಬದಲಾವಣೆಯಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಮಾತ್ರ ಹೇಳುತ್ತಿದ್ದೇವೆ.
ಉದ್ಯೋಗಕ್ಕೆ ಸಂಬಂಧ ಪಟ್ಟ ಹಾಗೆ ಬಹಳ ಉತ್ತಮ ಪರಿಣಾಮಗಳು ಉಂಟಾಗಲಿದೆ. ನೀವು ಬಹಳ ದಿನದಿಂದ ಪ್ರಮೋಷನ್ ಬಯಸುತ್ತಿದ್ದರೆ ನಿಮಗೆ ಅದು ಪ್ರಾಪ್ತಿಯಾಗುವ ಅಥವಾ ನಿಮ್ಮ ವೇತನ ಹೆಚ್ಚಿಸುವಂತೆ ಮನವಿ ಸಲ್ಲಿಸಿದರೆ ಅದಕ್ಕೆ ಒಪ್ಪಿಗೆಯಾಗುವ ಅಥವಾ ನೀವು ಕೇಳಿದ ಸ್ಥಳಕ್ಕೆ ವರ್ಗಾವಣೆಯಾಗುವ ಶುಭಫಲಗಳು ಉಂಟಾಗುತ್ತವೆ.
ಈ ಸುದ್ದಿ ಓದಿ:- ಶಿವರಾತ್ರಿ ದಿನ ಹಣದ ಪೆಟ್ಟಿಗೆಯಲ್ಲಿ ಈ ವಸ್ತುಗಳ ಗಂಟು ಇಟ್ಟರೆ ಜೀವನದಲ್ಲಿ ಹಣದ ಸಮಸ್ಯೆಯೇ ಬರುವುದಿಲ್ಲ…
ಹಾಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಕೂಡ ಯಾವುದಾದರೂ ತೊಂದರೆಗಳು ಬಹಳ ದಿನದಿಂದ ಕಾಡುತ್ತಾ ಇದ್ದರೆ ಅದು ಇತ್ಯರ್ಥವಾಗುತ್ತದೆ. ಸಿಂಹ ರಾಶಿಯವರಿಗೆ ಯಾವಾಗಲೂ ಸಹೋದರಿಯರದ್ದೇ ಯೋಚನೆ ಇರುತ್ತದೆ. ಸಿಂಹ ರಾಶಿಯ ಮಹಿಳೆಯರಾಗಲಿ ಪುರುಷರಾಗಲಿ ತಮ್ಮ ಸಹೋದರಿಯರ ವಿಷಯದಲ್ಲಿ ಬಹಳ ನೋ’ವಲ್ಲಿ ಇರುತ್ತದೆ.
ಅವರು ಸೆಟಲ್ ಆಗಿಲ್ಲ ಅವರಿಗೆ ಮದುವೆ ಮಾಡಬೇಕು ಹಣ ಇಲ್ಲ ಅಥವಾ ಒಳ್ಳೆ ಸಂಬಂಧ ಕೂಡಿ ಬರುತ್ತಿಲ್ಲ ಈ ರೀತಿ ಯೋಚನೆಯಲ್ಲಿರುವ ಸಿಂಹ ರಾಶಿಯವರಿಗೆ ಮುಕ್ತಿ ಸಿಗುತ್ತದೆ. ಹಣ ಆಸ್ಥಿಗೆ ಸಂಬಂಧ ಪಟ್ಟ ಹಾಗೆ ಅಥವಾ ಮತ್ತೊಂದು ವಿಚಾರಕ್ಕೆ ನಿಮ್ಮ ಸಹೋದರಿಯರ ಜೊತೆ ಮನಸ್ತಾಪ ಆಗಿದ್ದರು ಕೂಡ ಅದು ಬಗೆಹರಿದು, ನೀವು ನೆಮ್ಮದಿಯಾಗಿರುವಂತಹ ಸಂದರ್ಭಗಳು ಈ ತಿಂಗಳಲ್ಲಿ ಉಂಟಾಗುತ್ತದೆ.
ಇದೇ ರೀತಿಯಾಗಿ ದಾಂಪತ್ಯದಲ್ಲಿ ಸಮಸ್ಯೆಗಳು ಇದ್ದರೆ, ಪತಿ ಪತ್ನಿ ನಡುವೆ ಜಗಳ ಮನಸ್ತಾಪ ಇದ್ದರೆ ನಿವಾರಣೆ ಅಥವಾ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರ ಮತ್ತು ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿ ಮನೆಯಲ್ಲಿ ಶುಭಸುದ್ಧಿ ಕೇಳುವ ಉತ್ತಮ ಫಲಿತಾಂಶಗಳು ಸಿಂಹ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಶುಕ್ರನ ಪ್ರಭಾವದಿಂದ ಉಂಟಾಗುತ್ತಿದೆ.
ಈ ಸುದ್ದಿ ಓದಿ:- ಈ ಕ್ಷೇತ್ರದಲ್ಲಿ 7 ವಾರ 7 ತೆಂಗಿನ ಕಾಯಿ ಕಟ್ಟಿದರೆ ಏನೇ ಕಷ್ಟ ಇದ್ದರು ಪರಿಹಾರ ಆಗುತ್ತೆ.!
ಇದನ್ನು ಇನ್ನಷ್ಟು ಹೆಚ್ಚಿಸಿಕೊಂಡು ಶುಕ್ರನ ಸಂಪೂರ್ಣ ಅನುಗ್ರಹ ಪಡೆಯಲು ನೀವು ಶುಕ್ರನ ಆರಾಧನೆಯನ್ನು ಮಾಡಬೇಕು ಪ್ರತಿದಿನ ಕೂಡ ಶುಕ್ರನ ಅಷ್ಟೋತ್ತರ ಪಠಿಸಬೇಕು. ಪ್ರತಿದಿನ ಲಕ್ಷ್ಮಿ ಮತ್ತು ದುರ್ಗಾ ಅಷ್ಟೋತ್ತರ ಪಠಿಸುವುದು ಈ ತಿಂಗಳಲ್ಲಿ ಪ್ರತಿದಿನವೂ ಕೂಡ ಲಲಿತಾ ಸಹಸ್ರ ನಾಮವನ್ನು ಕೇಳುವುದು ಶುಕ್ರಾನುಗ್ರಹವನ್ನು ಹೆಚ್ಚಿಗೆ ಮಾಡಲಿದೆ.
ಮನೆ ಹತ್ತಿರ ನವಗ್ರಹ ದೇವಸ್ಥಾನ ಇದ್ದರೆ, ಏಪ್ರಿಲ್ ತಿಂಗಳಿನಲ್ಲಿ ಬರುವ ಶುಕ್ರವಾರಗಳಂದು ಶುಕ್ರನ ವಿಗ್ರಹಕ್ಕೆ ಬಿಳಿ ಹೂವಿನಿಂದ ಅರ್ಚನೆ ಮಾಡಿಸಿ ಅಭಿಷೇಕಗಳನ್ನು ಮಾಡಿಸಿ ಇನ್ನು ಹೆಚ್ಚಿನ ಶುಭ ಫಲಗಳನ್ನು ಪಡೆಯುತ್ತೀರಿ ಬಿಳಿ ವಸ್ತ್ರದಲ್ಲಿ ಅವರೆ ಕಾಳು ಇಟ್ಟು ದಾನ ಮಾಡಿ.
ಮನೆಯಲ್ಲಿ ಸ್ಪಟಿಕ ಮಣಿ ಇದ್ದರೆ ಧಾರಣೆ ಮಾಡಿದರೆ ಇನ್ನು ಹೆಚ್ಚಿನ ಶುಭಫಲಗಳನ್ನು ಕಾಣಬಹುದು. ಈ ನಿಯಮಗಳನ್ನು ಅನುಸರಿಸಿ ಶುಕ್ರನ ಕೃಪೆಗೆ ಪಾತ್ರರಾಗಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.