Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸಾಲ ಲಕ್ಷ ಇರಲಿ ಕೋಟಿ ಇರಲಿ, ಶತ್ರು ಕಾಟ ಇರಲಿ, ಲವಂಗದ ಈ ಪರಿಹಾರಗಳು ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ.!

Posted on December 22, 2023 By Kannada Trend News No Comments on ಸಾಲ ಲಕ್ಷ ಇರಲಿ ಕೋಟಿ ಇರಲಿ, ಶತ್ರು ಕಾಟ ಇರಲಿ, ಲವಂಗದ ಈ ಪರಿಹಾರಗಳು ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ.!

 

ಆಯುರ್ವೇದದಲ್ಲಿ ಲವಂಗಕ್ಕೆ ಮಹತ್ವದ ಸ್ಥಾನ ಇದೆ ಲವಂಗ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಲವಂಗದಿಂದ ಆರೋಗ್ಯ ಮಾತ್ರ ಅಲ್ಲದೆ ಲವಂಗದಿಂದ ಮಾಡುವ ಕೆಲವು ತಂತ್ರಗಳ ಮೂಲಕ ಜೀವನದ ಅನೇಕ ಕಷ್ಟಗಳಿಗೆ ಪರಿಹಾರ ಪಡೆಯಬಹುದು. ಅದರಲ್ಲಿ ನಿಮಗೆ ಉಪಯುಕ್ತವಾಗುವ ಕೆಲವು ಉಪಾಯಗಳು ಹೀಗಿವೆ ನೋಡಿ.

* ನೀವು ಯಾವುದಾದರೂ ಕೆಲಸ ಕಾರ್ಯವನ್ನು ಆರಂಭಿಸಿ ಅದು ಅರ್ಧಕ್ಕೆ ಸ್ಥಗಿತವಾಗಿದ್ದರೆ ಅಥವಾ ನಿಮ್ಮ ಆಲೋಚನೆ ಪ್ರಕಾರ ಆ ಕಾರ್ಯ ಜರುಗಲು ಅಡೆತಡೆಗಳು ಇವೆ ಎಂದು ನಿಮಗೆ ಅನಿಸುತ್ತಿದ್ದರೆ ಈ ರೀತಿಯ ತೊಂದರೆಗಳು ಪರಿಹಾರ ಆಗಲು ಬುಧವಾರದಂದು ವೀಳ್ಯದೆಲೆಗೆ ಲವಂಗ ಹಾಗೂ ಏಲಕ್ಕಿ ಹಾಕಿ ಪಾನ್ ರೀತಿ ಮಾಡಿ ಅದನ್ನು ಗಣಪತಿ ದೇವಸ್ಥಾನಕ್ಕೆ ಅರ್ಪಿಸಿ. ಇದರಿಂದ ವಿಘ್ನ ವಿನಾಶಕ ಸಂಕಷ್ಟಹರ ಗಣಪತಿಯು ನಿಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ಪರಿಹಾರ ಮಾಡಿ ದಾರಿ ತೋರಿಸುತ್ತಾರೆ.

* ಮನೆಯಲ್ಲಿ ಯಾವ ಕೆಲಸಗಳು ಕೈಗೂಡುತ್ತಿಲ್ಲ, ಮನೆ ವಾತಾವರಣ ಉತ್ತಮವಾಗಿಲ್ಲ. ಸದಾ ಕಿರಿಕಿರಿ ಬೇಸರ ಒಂದಲ್ಲ ಒಂದು ಕ’ಲ’ಹ ಮತ್ತು ಯಾವುದೇ ಕೆಲಸ ಮಾಡಲು ಹೊರಟರು ಕೂಡ ಪೂರ್ತಿಯಾಗುತ್ತಿಲ್ಲ ಬಹಳ ತಡವಾಗುತ್ತಿದೆ, ಈ ರೀತಿಯ ಸಮಸ್ಯೆಗಳು ಇದ್ದರೆ ಪ್ರತಿದಿನ ದೇವರಿಗೆ ಆರತಿ ಮಾಡುವಾಗ ಎರಡು ಲವಂಗವನ್ನು ಇಟ್ಟು ಆರತಿ ಮಾಡಿ ಪೂಜೆ ಆದ ಬಳಿಕ ಆ ಲವಂಗವನ್ನು ಯಾವುದಾದರೂ ಗಿಡದ ಬುಡದಲ್ಲಿ ಹಾಕಿ. ಆ ಲವಂಗವನ್ನು ಯಾರು ತುಳಿಯಬಾರದು. ಈ ರೀತಿ ಮಾಡುವುದರಿಂದ ಕೂಡ ಸಮಸ್ಯೆ ಬಗ್ಗೆ ಹರಿಯುತ್ತದೆ.

* ನಿಮ್ಮ ಮನೆಯಲ್ಲಿ ನ’ಕಾ’ರಾ’ತ್ಮ’ ಕ ಶಕ್ತಿಗಳ ಪ್ರಭಾವವಾಗಿದ್ದರೆ ಅದನ್ನು ತಡೆಯಲು 7-8 ಮೆಣಸು ತೆಗೆದುಕೊಂಡು ಅದನ್ನು ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟು ಪೂರ್ತಿ ಬೂದಿ ಆಗುವವರೆಗೂ ಕೂಡ ಕರ್ಪೂರ ಅಥವಾ ಸಾಂಬ್ರಾಣಿಯೊಂದಿಗೆ ದಹಿಸಿ. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳ ಪ್ರಭಾವ ನಾಶವಾಗುತ್ತದೆ ಮತ್ತು ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ.

ಈ ರೀತಿ ಮಾಡುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳಿಗೆ ಮನೆ ಒಳಗಡೆ ಪ್ರವೇಶ ಆಗುವುದಿಲ್ಲ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ಉಂಟಾಗುತ್ತದೆ ಮತ್ತು ಅಕ್ಕ ಪಕ್ಕದ ಮನೆಯವರು ಸಂಬಂಧಿಕರು ಹಾಗೂ ಸ್ನೇಹಿತರ ನಡುವೆ ವೈ’ಷ’ಮ್ಯಗಳು ಉಂಟಾಗಿದ್ದರೆ ಅವು ಕೂಡ ನಿವಾರಣೆ ಆಗುತ್ತವೆ.

* ಹಣಕಾಸಿನ ತೊಂದರೆ ವಿಪರೀತವಾಗಿದ್ದರೆ ಯಾರು ಕಾಣದ ಜಾಗಕ್ಕೆ ಹೋಗಿ ಅದರಲ್ಲೂ ಮೂರು ಅಥವಾ ನಾಲ್ಕು ದಾರಿಗಳು ಕೂಡುವ ಸ್ಥಳಕ್ಕೆ ಹೋದರೆ ಇನ್ನೂ ಒಳ್ಳೆಯದು. ಒಂದೆರಡು ಲವಂಗ ಹಾಗೂ ಒಂದೆರಡು ಕಾಳು ಮೆಣಸು ತೆಗೆದುಕೊಂಡು ಎರಡನ್ನು ತಲೆಯಿಂದ ಪಾದದವರೆಗೆ ದೃಷ್ಟಿ ತೆಗೆದು ದೂರ ಹೋಗಿ ಬೀಳುವಂತೆ ಎಸೆದು ತಿರುಗಿ ನೋಡದೆ ನೀವು ಮನೆಗೆ ಬನ್ನಿ . ಮನೆಗೆ ಬಂದು ಕೈ ಕಾಲು ಮುಖ ತೊಳೆದುಕೊಂಡು ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಿ ನಿಮ್ಮ ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ.

* ನೀವು ಯಾವುದಾದರೂ ಒಳ್ಳೆಯ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುವಾಗ ಆ ಕಾರ್ಯ ಗೆಲ್ಲಬೇಕು ಎಂದರೆ ನಿಮ್ಮ ಇಷ್ಟ ದೇವರು ಹಾಗೂ ಕುಲ ದೇವರಿಗೆ ಮನಸಾರೆ ಪ್ರಾರ್ಥಿಸಿ 2 ಲವಂಗವನ್ನು ಬಾಯಿಗೆ ಹಾಕಿಕೊಂಡು ಹೋಗಿ ನೀವು ನಿರೀಕ್ಷೆ ಮಾಡುವ ಫಲಿತಾಂಶ ಸಿಗುತ್ತದೆ.

* ಒಂದು ವೇಳೆ ಇದು ಸಾಧ್ಯವಾಗಿಲ್ಲ ಎಂದರೆ ಮಂಗಳವಾರದಂದು ಆಂಜನೇಯನನ್ನು ಪ್ರಾರ್ಥಿಸಿ, ಆಂಜನೇಯನಿಗಾಗಿ ದೀಪ ಹಚ್ಚಿ ಆ ದೀಪದಲ್ಲಿ ಎರಡು ಲವಂಗ ಹಾಕಿ ಮತ್ತು ಹನುಮಾನ್ ಚಾಲೀಸ ವನ್ನು ಪಠಿಸಿ. 21 ಮಂಗಳವಾರಗಳ ಕಾಲ ಇದನ್ನು ಮಾಡಿದರೆ ಖಂಡಿತವಾಗಿಯೂ ನಿಮ್ಮ ಇಚ್ಛೆಯಂತೆ ಕಾರ್ಯ ಕೈಗೂಡುತ್ತದೆ. ಆದರೆ ನೀವು ಕೈಗೊಂಡಿರುವ ಕಾರ್ಯ ಒಳ್ಳೆಯ ಕಾರ್ಯ ವಾಗಿರಬೇಕು ಇದರಿಂದ ನಿಮಗೆ ಮತ್ತು ನಿಮ್ಮವರಿಗೆ ಹಾಗೂ ಇತರರಿಗೆ ಒಳ್ಳೆಯದಾಗುವ ರೀತಿ ಇರಬೇಕು.

* ನೀವು ಯಾರಿಗಾದರೂ ಕೊಟ್ಟ ಹಣ ವಾಪಸ್ ಬರದೇ ಇದ್ದರೆ ಅಥವಾ ನಿಮ್ಮ ಹಣ ನೀವೇ ಪಡೆದುಕೊಳ್ಳಲು ತೊಂದರೆ ಆಗುತ್ತಿದ್ದರೆ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು 11ರಿಂದ 21 ಲವಂಗಗಳನ್ನು ತೆಗೆದುಕೊಂಡು ತಾಯಿ ಮಹಾಲಕ್ಷ್ಮಿಯನ್ನು ಸಮಸ್ಯೆಯಿಂದ ಕಾಪಾಡುವಂತೆ, ಮನಸಾರೆ ಪ್ರಾರ್ಥಿಸಿ, ತಾಯಿ ಲಕ್ಷ್ಮಿ ಆಶೀರ್ವಾದದಿಂದ ನಿಮ್ಮ ಪಾಲಿನ ಹಣ ನಿಮಗೆ ಬಂದು ಸೇರುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ರಸ್ತೆಯಲ್ಲಿ ಬೆಳ್ಳಿ ಬಂಗಾರ ಸಿಕ್ಕಿದರೆ ಏನು ಫಲ? ನಂತರ ಅದನ್ನು ಏನು ಮಾಡಬೇಕು ಗೊತ್ತಾ.?
Next Post: ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡಬೇಕು? ಯಾವ ದಿನ ಸ್ನಾನ ಮಾಡಿದರೆ ಏನು ಫಲ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore