ಭಾರತ ದೇಶದ ಒಂದೊಂದು ದೇವಸ್ಥಾನದಲ್ಲೂ ಕೂಡ ಒಂದೊಂದು ರೀತಿಯ ವಿಶೇಷತೆ ಇದೆ. ಕರ್ನಾಟಕದಲ್ಲಿ ಆ ರೀತಿ ಅಚ್ಚರಿ ಉಂಟು ಮಾಡುವ ಅನೇಕ ದೇವಾಲಯಗಳು ಇದ್ದೂ ಆ ದೇವಾಲಯಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಸವಿ ಎಂಬ ಗ್ರಾಮದ ಬಳಿಯ ದಟ್ಟ ಅರಣ್ಯದ ಮಧ್ಯೆ ನೆಲೆಸಿರುವಂತಹ ಕಮಂಡಲ ಗಣಪತಿ ದೇವಸ್ಥಾನ ಕೂಡ ಒಂದು. ಕೊಪ್ಪ ಬಸ್ ನಿಲ್ದಾಣದಿಂದ ಮೃದ ಒದೆ ಮಾರ್ಗವಾಗಿ ನಾಲ್ಕು ಕಿಲೋಮೀಟರ್ ದೂರ ಸಾಗಿದರೆ ಈ ಕಮಂಡಲ ಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸಿಗುತ್ತದೆ.
ಕಾಡಿನ ಮಧ್ಯೆ ಇರುವ ಈ ಗಣಪತಿಯು ನಾನಾ ರೀತಿಯ ಚಮತ್ಕಾರಕ್ಕೆ ಸಾಕ್ಷಿಯಾಗಿದ್ದಾರೆ. ದೇವಸ್ಥಾನದ ಹತ್ತಿರದಲ್ಲಿ ಹೊಂದಿಕೊಂಡಂತೆ ಭದ್ರ ಅಭಯಾರಣ್ಯ ಇರುವುದರಿಂದ ಅಲ್ಲಿಗೆ ಬರುವ ಪ್ರವಾಸಿಗರೆಲ್ಲರೂ ಕೂಡ ತಪ್ಪದೇ ಈ ಕಮಂಡಲ ಗಣಪತಿಯ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.
ಈ ದೇವಸ್ಥಾನವು ಸ್ಥಾಪಿತವಾಗಿರುವ ಕಥೆಯನ್ನು ನೋಡುವುದಾದರೆ ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲು ಪಾರ್ವತಿ ಮಾತೆಯು ಭೂಲೋಕಕ್ಕೆ ಬಂದು ಈಗ ಗಣಪತಿಯ ದೇವಸ್ಥಾನ ಸೃಷ್ಟಿ ಆಗಿರುವ ಈ ಸ್ಥಳದಲ್ಲಿಯೇ ತಪಸ್ಸನಾಚರಿಸಿ ಬಳಿಕ ತನ್ನ ಕೈಯಾರೆ ಇಲ್ಲಿರುವ ಗಣಪತಿ ವಿಗ್ರಹವನ್ನು ಸ್ಥಾಪಿಸಿ ಹೋದರು ಎಂದು ಕಮಂಡಲ ಗಣಪತಿ ಪುರಾಣವು ಹೇಳುತ್ತದೆ.
ಸುಮಾರು ಸಾವಿರಕ್ಕೂ ಹೆಚ್ಚು ವರ್ಷಕಾಲದಿಂದಲೂ ಕೂಡ ಭಕ್ತಾದಿಗಳಿಗೆ ಈ ಗಣಪತಿಯ ದರ್ಶನವಾಗುತ್ತಿದೆ. ಈ ದೇವಸ್ಥಾನದಲ್ಲಿರುವ ಆಶ್ಚರ್ಯಕರ ವಿಷಯವೆಂದರೆ ಗಣಪತಿ ವಿಗ್ರಹದ ಮುಂದೆ ಇರುವ ಹೊಳಲುಕಲ್ಲಿನಂತಹ ಆಕಾರದ ಕಲ್ಲಿನಿಂದ ನೀರು ಚಿಮ್ಮುತ್ತಿರುವುದು. ದೇವಸ್ಥಾನ ತೆರೆದಿರುವಾಗ ಮಾತ್ರ ಆಗಾಗ ಈ ರೀತಿ ನೀರು ಚಮ್ಮುತ್ತದೆ. ಒಂದು ವೇಳೆ ದೇವಸ್ಥಾನ ಮುಚ್ಚಿದ ಸಂದರ್ಭದಲ್ಲಿ ಈ ರೀತಿ ನೀರು ಚಿಮ್ಮಿದರೆ ಪ್ರಪಂಚದಲ್ಲಿ ಯಾವುದೋ ಆಗಂತುಕ ಘಟನೆ ನಡೆಯುತ್ತದೆ ಎನ್ನುವುದರ ಸೂಚನೆ ಎಂದು ದೇವಾಲಯದ ಬಗ್ಗೆ ಸೂಕ್ಷ್ಮವಾಗಿ ಅರಿತ ಸ್ಥಳೀಯರು ಹೇಳುತ್ತಾರೆ.
ಈ ನೀರು ಚಿಮ್ಮುತ್ತಿರುವಾಗ ಭಕ್ತಾದಿಗಳು ಏನೇ ಕೋರಿಕೆ ಕೇಳಿಕೊಂಡು ಒಂದು ನಾಣ್ಯವನ್ನು ಅದರೊಳಗೆ ಹಾಕಿದಾಗ ಆ ನೀರಿನ ಚಿಮ್ಮುವಿಕೆ ಅಥವಾ ಹರಿವು ಹೆಚ್ಚಾದರೆ ಆ ಕೋರಿಕೆ ನೆರವೇರುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯನ್ನು ಕೂಡ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ನಾವೇ ಇದನ್ನು ಕಾಣಬಹುದು. ಈ ರೀತಿ ನೀರು ಚಿಮ್ಮುವ ಅಥವಾ ಹರಿಯುವ ಮೂಲಕ ಸೂಚನೆ ಕೊಟ್ಟು ಭಕ್ತಾದಿಗಳ ಕೋರಿಕೆ ನೆರವೇರುತ್ತದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡುವ ಸಲುವಾಗಿಯೇ ಇಲ್ಲಿಗೆ ಸಹಸ್ರಾರು ಮಂದಿ ರಾಜ್ಯದ ವಿವಿಧ ಭಾಗಗಳಿಂದ ಭೇಟಿ ಕೊಡುತ್ತಾರೆ.
ಈ ದೇವಸ್ಥಾನದಲ್ಲಿ ಈ ರೀತಿ ಚಿಮ್ಮುವ ನೀರು ಹರಿದು ಬಂದು ದೇವಸ್ಥಾನದ ಮುಂಭಾಗದಲ್ಲಿರುವ ಸಣ್ಣ ಕೊಳದಲ್ಲಿ ಸೇರುತ್ತದೆ. ಆ ಕೊಳದ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಂತಹ ಚರ್ಮರೋಗಗಳಿದ್ದರೂ ಕೂಡ ನಿವಾರಣೆ ಆಗುತ್ತದೆ. ಇದು ವೈದ್ಯ ಲೋಕಕ್ಕೆ ಸವಾಲಾಗಿದ್ದು ಇಂದಿಗೂ ಸಹ ಇದನ್ನು ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲ.
ಅಷ್ಟೇ ಅಲ್ಲದೆ ದೇವಾಲಯದಲ್ಲಿ ಗಣಪತಿಯ ಮುಂದೆ ಚಿಮ್ಮುವ ಈ ನೀರು ಸಾಮಾನ್ಯ ನೀರಿನ ಹಾಗಿರದೇ ತುಳಸಿ ನೀರಿನ ರುಚಿಯನ್ನು ಹೊಂದಿದೆ. ಅಕ್ಕಪಕ್ಕದಲ್ಲಿ ತುಳಸಿಯ ಮೆದೆಗಳು ಹೆಚ್ಚಾಗಿರುವುದರಿಂದ ಆ ಗುಣಗಳು ನೀರಿಗೆ ಬಂದಿದೆ ಎಂದು ಹೇಳಲಾಗುತ್ತದೆ. ಇದು ಬ್ರಾಹ್ಮಿ ನದಿಯ ನೀರು ಎಂದು ಹೇಳಲಾಗುತ್ತಿತ್ತು, ಈ ನೀರನ್ನು ಕುಡಿಯುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎನ್ನುವುದನ್ನು ಕೂಡ ಈ ಭಾಗದ ಜನರು ನಂಬುತ್ತಾರೆ ಮತ್ತು ಪಾಲಿಸುತ್ತಾರೆ. ಇಂತಹ ಹೆಸರಾಂತ ದೇವಸ್ಥಾನಕ್ಕೆ ನೀವು ಕೂಡ ಭೇಟಿ ಕೊಟ್ಟು ಈ ಪವಾಡವನ್ನು ಕಣ್ಣಾರೆ ಕಾಣಿ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845688854*